ಡಿಜೆ ಬದಲು ಪರ್ಯಾಯ ವ್ಯವಸ್ಥೆ ಇದೆ. ದೇವರ ಕಾರ್ಯಕ್ರಮಕ್ಕೆ ಭಜನೆ ಇಲ್ಲವೇ ಕರಡಿ ಮಜಲು ಒಳ್ಳೆಯದು ಗಣೇಶೋತ್ಸವ ವಿಸರ್ಜನೆಗೆ ಕಾರ್ಯಕ್ರಮಕ್ಕೆ ಭಜನೆ, ಇಲ್ಲವೇ ಕರಡಿ ಮಜಲು ಬಾರಿಸುವವರು, ಹಾಡುವರನ್ನು ಕರೆದು, ಮೆರವಣಿಗೆ ಮಾಡಬಹುದಲ್ಲ. ಮಾನವಿಯತೆ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದ ಡಿಜೆ ಬೇಡ ಎಂಬ ಅಭಿಪ್ರಾಯವಿದೆ. ಈಗ ಮೊಬೈಲ್ ಫೋನ್ ನಲ್ಲಿ ಬಹಳಷ್ಟು ಡಿಜೆ ಸಾಂಗ್ ಬರುತ್ತಿದೆ.
ಹೆಡ್ ಫೋನ್ ಅಥವಾ ಇಯರ್ ಫೋನ್ ಹಾಕಿಕೊಂಡು ಸಾಂಗ್ ಕೇಳಬಹುದು. ಕೆಲವರಿಗೆ ಡಿಜೆ ಸಾಂಗ್ ಕೇಳಲು ಕಿರಿಕಿರಿ ಆಗುತ್ತದೆ. ಡಿಜೆ ಎಫೆಕ್ಟ್ ಹಲವು ಕಾರಣ ಇರಬಹುದು ಹುಡುಕಬೇಕು ಹಾಗಾಂತ ಪರ್ಯಾಯ ವ್ಯವಸ್ಥೆ ಇದೆ. ಡಿಜೆ ಬದಲು ಭಜನೆ ಪದ, ಇಲ್ಲವೇ ಕರಡಿ ಮಜಲು ಬಾರಿಸುವವರು ಹಾಡುವವರು ಕರೆದು ಮೆರವಣಿಗೆ ಮಾಡಿ ದೇವರ ಕೃಪೆಗೆ ಪಾತ್ರರಾಗಬಹುದು. ಈ ಬಗ್ಗೆ ಸಾರ್ವಜನಿಕರು ಸಲಹೆ ಸೂಚನೆ ನೀಡಬಹುದು ಅಷ್ಟೇ ಅದನ್ನು ನಿರ್ಧಾರ ಮಾಡಬೇಕಿರುವುದು ಕಾರ್ಯಕ್ರಮ ಆಯೋಜಕರಿಗೆ ಬಿಟ್ಟ ವಿಚಾರ.
ವೀರೇಶ ಧೂಪದಮಠ
