17 Apr 2026

// //

10-12 ವಿಧಾನಸಭೆಗೆ ಒಂದು ಲೋಕಸಭಾ ಕ್ಷೇತ್ರವಾಗಲಿ

10-12 ವಿಧಾನಸಭೆಗೆ ಒಂದು ಲೋಕಸಭಾ ಕ್ಷೇತ್ರವಾಗಲಿ

ಪ್ರತಿಯೊಂದು ಲೋಕಸಭಾ ಕ್ಷೇತ್ರವು ಸದ್ಯ 8 ವಿಧಾನಸಭಾ ಕ್ಷೇತ್ರ ಒಳಗೊಂಡು ರಚನೆಯಾಗಿದೆ. ಅದು ಜನಸಂಖ್ಯೆ ಆಧಾರದ ಮೇಲೆ ಅಲ್ಲ. ಮತದಾರರ ಸಂಖ್ಯೆ ಆಧಾರದ ಮೇಲೆ. ಇಲ್ಲಿ ಜನಸಂಖ್ಯೆ ಬೇರೆ, ಮತದಾರರ ಸಂಖ್ಯೆ ಬೇರೆ. ಅಂದರೆ 18 ವರ್ಷ ಮೇಲ್ಪಟ್ಟವರು ಮತದಾರರ ಸಂಖ್ಯೆಯಾಗಲಿದೆ. ಸಣ್ಣ ಮಗವಿನಿಂದ ಹಿಡಿದು ವ್ಯಕ್ತಿ ಇರುವವರಿಗೆ ಜನಸಂಖ್ಯೆಯಾಗಲಿದೆ. ಆದ್ದರಿಂದ ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು. ಅಲ್ಲದೇ ಲೋಕಸಭಾ ಸಂಸದರಿಗೆ ಶಾಸಕರಿಗೆ ನೀಡುವಷ್ಟು ಬೆಲೆ ಇರುವುದಿಲ್ಲ. ವಿಧಾನಸಭಾ ಚುನಾವಣೆಗೆ ಇರುವಷ್ಟು ಹುಮ್ಮಸ್ಸು ಲೋಕಸಭಾ ಚುನಾವಣೆಗೆ ಇರುವುದಿಲ್ಲ. ವಿಧಾನಸಭಾ ಕ್ಷೇತ್ರಗಳು 2-3 ಲಕ್ಷ ಮತದಾರ ಸಂಖ್ಯೆಯನ್ನು ಆಧಾರಿಸಿ, ರಚನೆಯಾಗಿದೆ. ವಿಧಾನಸಭಾ ಕ್ಷೇತ್ರಗಳು ಹೆಚ್ಚಾಗಲಿ ಆದರೆ ಸದ್ಯ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರ ಬದಲಾಗಿ 10-12 ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರವಾಗಬೇಕು. 850 ಲೋಕಸಭಾ ಕ್ಷೇತ್ರವಾದರೆ ಲೋಕಸಭಾದ ಸಂಸತ್ ಅಧಿವೇಶನ ಕೋಲಾಹಲ, ಗದ್ದಲ, ವಿಪರೀತ ಶಬ್ದವಾಗಲಿದೆ. ಲೋಕಸಭಾ ಸ್ಪೀಕರ್ ಗೆ ತಲೆನೋವು ಕಟ್ಟಿಟ್ಟ ಬುತ್ತಿ. ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು ವಿನಃ ಹೆಚ್ಚಾಗಬಾರದು.

ರಾಜ್ಯ ಮಂತ್ರಿ ಮಂಡಲ ಸಂಪೂರ್ಣ ಬದಲಾಗಬೇಕು

ಎಲ್ಲರೂ ಯುದ್ಧ ಕ್ಕಿಂತ ಹಾರ್ಮುಜ್ ಜಲಸಂಧಿ ಗುಂಗಿನಲ್ಲಿ ಇದ್ದಾರೆ. ಜಲಸಂಧಿ ಓಪನ್ ಆಗುತ್ತೋ ಖಾಯಂ ಮುಚ್ಚುತೋ ಗೊತ್ತಿಲ್ಲ. ಆದರೆ ತುಂಬಿದ ಹಡಗು ಬಂತೋ ಖಾಲಿ ಹಡಗು ಬಂತೋ ಅನ್ನೋದು ಯಾರು ಗಮನಿಸಿರುವುದಿಲ್ಲ. ಬೇಡಿಕೆ ತಕ್ಕಂತೆ ಪೂರೈಕೆ ಯಾವಾಗ ಬರುತ್ತೋ ಆವಾಗ ಸಮಸ್ಯೆಗೆ ಮುಕ್ತಿ. ಅಷ್ಟರಲ್ಲಿ ಕಚ್ಚಾತೈಲ ಬದಲಾಗಿ ಪರ್ಯಾಯ ಮಾರ್ಗ ಕಂಡು ಹಿಡಿಯಲು ಪ್ರಯತ್ನಿಸಬೇಕು. ನಮ್ಮದೊಂದು ಇರಲಿ. ಸಿಎಂ. ಡಿಸಿಎಂ ಸೇರಿದಂತೆ ಸಂಪೂರ್ಣ ಮಂತ್ರಿಮಂಡಲ ಸಂಪೂರ್ಣ ಬದಲಾಗಬೇಕು. ಈಗಿನ ಡಿಸಿಎಂ ಸಿಎಂ ಆಗಬೇಕು, ಈಗಿನ ಸಿಎಂ ಮಗ ಡಿಸಿಎಂ ಆಗಬೇಕು. 6-8 ಈಗಿನ ಹಳೆ ಸಚಿವರು ಸೇರಿದಂತೆ ಉಳಿದ ಹೊಸ ಮುಖಗಳು ಮಂತ್ರಿಗಳಾಗಬೇಕು. ಅದಕ್ಕೆ ಕಾಲವು ಕೂಡಿ ಬರಲಿದೆಯಾ ಎಂಬುದು ಕಾದು ನೋಡಬೇಕು. ಏಕೆಂದರೆ ದಿನನಿತ್ಯ ಎಚ್.ಓ.ಡಿ ಕುರ್ಚಿಗಾಗಿ ಕುಸ್ತಿ ಆಡುವುದನ್ನು ಸ್ನಾತಕೋತ್ತರ ಪದವಿ ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರಲ್ಲಿ ನೋಡಿದ್ದೀನಿ. ನಂತರ ಕುರ್ಚಿ ಅದಲು ಬದಲು ಆಗಿ ಇಬ್ಬರು ಒಂದೇ ಎಳೆನೀರು ಸೇವಿಸಿ ಖುಷಿಪಟ್ಟರು. ಪ್ರತಿಯೊಂದಕ್ಕೂ ಕುರ್ಚಿಗೆ ಬೆಲೆ ಇದೆ. ಆ ಯೋಗ್ಯ ಕೂಡಿ ಬರುವರಿಗೆ ಬಂದೆ ಬರುತ್ತದೆ. ಅದಕ್ಕೆ ತಾಳ್ಮೆ ಸಮಾಧಾನ ಬೇಕು. ಎಲ್ಲರೂ ಮಂತ್ರಿ ಆಗಬೇಕು ಅನ್ನುವರು ಆಗೋಕೆ ಆಗುತ್ತಾ 34 ರಾಜ್ಯ ಮಂತ್ರಿಗಳಾಗಬಹುದು ಅಷ್ಟೇ. ಕೇಂದ್ರ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ರಾಜ್ಯ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ಜಿಲ್ಲಾ ಉಸ್ತುವಾರಿ ಯಾಕೆ? ರಾಜ್ಯ ಮಂತ್ರಿ ಎಂದಮೇಲೆ ಎಲ್ಲಾ ಜಿಲ್ಲೆಗೆ ಸಂಬಂಧ ಇರುತ್ತದೆ. 2020 ರಲ್ಲಿ ಮುಖ್ಯಮಂತ್ರಿ, ಸಚಿವರಾಗಿದ್ದವರು ಉತ್ತಮ ಕೆಲಸ ನಿರ್ವಹಿಸಿದರು. ಆಗ ಮುಖ್ಯಮಂತ್ರಿ ಸಚಿವಾಲಯ ಸೇರಿದಂತೆ ಎಲ್ಲ ಸಚಿವರು ಸಾರ್ವಜನಿಕ ಅರ್ಜಿಗೆ ಸ್ಪಂದಿಸುತ್ತಿದ್ದರು. ನಂತರ ಮತ್ತೆ ಬದಲಾಗಿ ಬಂದ ಮುಖ್ಯಮಂತ್ರಿಗಳ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಈಗ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಸರ್ಕಾರಿ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡುವುದಿಲ್ಲ. ಟೈಮ್ ಪಾಸ್ ಮಾಡುತ್ತಾ ಕಾಲಹರಣ ಮಾಡುತ್ತಾ ಸಾರ್ವಜನಿಕ ಅರ್ಜಿ ವಿಲೇವಾರಿ ಮಾಡದೇ ಫೇಲ್ ಆಗಿದ್ದಾರೆ. ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳಲ್ಲಿ ಎಕ್ಸಾಂ ಪ್ಯಾಟರ್ನ್ ಬಿಟ್ಟರೆ, ಸಾಮಾಜಿಕ ಕಳಕಳಿಯಿಂದ ಬಂದವರಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಅಧಿಕಾರ ಸಿಗಬೇಕು ಎಂದರೆ ಸಮಯ ಕೂಡಿ ಬರಬೇಕು. ಎಲ್ಲರಿಗೂ ಹೊಸ ಮುಖ ಆಡಳಿತ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇರುತ್ತದೆ.

ವೀರೇಶ ಧೂಪದಮಠ
Read More

1 Apr 2026

// //

ಮಾತೃ ಭಾಷೆ ಸಹಾಯವಿಲ್ಲದೆ ಇನ್ನೊಂದು ಭಾಷೆ ಕಲಿಯುವುದು ಅಸಾಧ್ಯ












ಮಾತೃಭಾಷೆಯ ಸಹಾಯವಿಲ್ಲದೆ ಯಾವುದೇ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ. ಕನಸುಗಳು ಬೀಳುತ್ತವೆ ಅದು ಮಾತೃಭಾಷೆಯಲ್ಲಿ ಮಾತ್ರ. ಜಗತ್ತಿನ ಯಾವುದೇ ಭಾಷೆ ಕಲಿಯಿರಿ ಅದು ಮಾತೃ ಭಾಷೆಯಿಂದ ಮಾತ್ರ ಇಲ್ಲದಿದ್ದರೆ ಭಾಷೆಯನ್ನು ಕಲಿಯುವುದು ಕಷ್ಟವಾಗಲಿದೆ. ಅದಕ್ಕಾಗಿ ಆಯಾ ಪ್ರದೇಶದ ಸರ್ಕಾರಗಳು ಮಾತೃ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಆಮೇಲೆ ಬೇರೊಂದು ಭಾಷೆಗೆ ಒತ್ತು ನೀಡಬೇಕು. ಜನ್ಮ ನೀಡಿದ ತಾಯಿ ಭಾಷೆಯೋ ಮಾತೃ ಭಾಷೆಯಾಗಲಿದೆ. ಆ ಮಾತೃ ಭಾಷೆಯಿಂದ ಇನ್ನಿತರ ಭಾಷೆಯನ್ನು ಕಲಿಯಲು ರಹದಾರಿ ಅಂತಾನೇ ಹೇಳಬಹುದು. ಕನ್ನಡ ಭಾಷೆಯ ಶಬ್ದಗಳು ಗೊತ್ತಿದ್ರೆ ಮಾತ್ರ ಇನ್ನೊಂದು ಭಾಷೆಯ ಶಬ್ದಗಳು ಅರ್ಥ ಮಾಡಿಕೊಳ್ಳಲು ಸಾಧ್ಯ. ಮಾತೃ ಭಾಷೆಯ ಶಬ್ದಗಳು ಗೊತ್ತಿಲ್ಲ ಎಂದಾಗ ಇನ್ನೊಂದು ಭಾಷೆ ಹೇಗೆ ಕಲಿಯುತ್ತಾರೆ. ಅದಕ್ಕಾಗಿ ಮಾತೃ ಭಾಷೆಗೆ ಒತ್ತು ನೀಡುವುದಲ್ಲದೇ, ಇನ್ನೊಂದು ಭಾಷೆಯನ್ನು ಕಲಿಯಲು ಸಹ ಮಾತೃ ಭಾಷೆ ಅತ್ಯಗತ್ಯ.

ನೀವು ಶಿಕ್ಷಣವನ್ನು ಪ್ರೀತಿಸಬೇಕು

ಶಿಕ್ಷಣವನ್ನು ಕಷ್ಟಪಟ್ಟು ಅಧ್ಯಯನ ಮಾಡುವ ಮೂಲಕ ಕಲಿಯಬಾರದು, ಬದಲಿಗೆ ಪ್ರೀತಿಯಿಂದ ಕಲಿಯುವ ಮೂಲಕ ಕಲಿಯಬೇಕು. ಅದು ಮನಸ್ಸಿನ ಆಳದಿಂದ ಬರಬೇಕು. ಒಂದು ಶಾಲೆಯಲ್ಲಿ 68 ವಿದ್ಯಾರ್ಥಿಗಳಿದ್ದರು. ಆ 68 ವಿದ್ಯಾರ್ಥಿಗಳಲ್ಲಿ, ಕೇವಲ 5 ಹುಡುಗರು ಮತ್ತು 5 ಹುಡುಗಿಯರು ಬುದ್ಧಿವಂತರಾಗಿ ಎದ್ದು ಕಾಣುತ್ತಿದ್ದರು. ಆದರೆ ಅವರು ತಮ್ಮ ಶಿಕ್ಷಣವನ್ನು ಮುಗಿಸಿದ ತಕ್ಷಣ, ಆ 10 ವಿದ್ಯಾರ್ಥಿಗಳು ಮೂರ್ಖರಂತೆ ಕಣ್ಮರೆಯಾದರು. ಉಳಿದ 58 ವಿದ್ಯಾರ್ಥಿಗಳು ಏನನ್ನೂ ಸಾಧಿಸದಿದ್ದರೂ, ಜನರ ಮುಂದೆ ಆರಾಮವಾಗಿ ಓಡಾಡುತ್ತಿದ್ದಾರೆ. ನಾನು ಇಲ್ಲಿ ಹೇಳುವುದೇನೆಂದರೆ, ಯಾರೂ ತಾವು ಎಷ್ಟು ಬುದ್ಧಿವಂತರು ಎಂದು ತೋರಿಸಿಕೊಳ್ಳಬಾರದು, ಏಕೆಂದರೆ ಇದು ಹೆಚ್ಚಿನ ನಷ್ಟಗಳಿಗೆ ಕಾರಣವಾಗುತ್ತದೆ. ಶಿಕ್ಷಣ ಯಾರೊಬ್ಬರ ಆಸ್ತಿಯಲ್ಲ, ಕಷ್ಟಪಟ್ಟು ಓದುವ ಬದಲು, ಒಬ್ಬರು ಸಂತೋಷದಿಂದ ಅಧ್ಯಯನ ಮಾಡಬೇಕು. ಆಗ ಶಿಕ್ಷಣದ ಉದ್ದೇಶ ಸುಲಭವಾಗಿ ಈಡೇರುತ್ತದೆ.

ವೀರೇಶ ಧೂಪದಮಠ
Read More

29 Mar 2026

// //

ನೂರರಷ್ಟು ಶಿಕ್ಷಣಕ್ಕೆ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗಲಿ



ಬಿಸಿಲಿನ ತಾಪಮಾನಕ್ಕೆ ವಿದ್ಯಾರ್ಥಿಗಳು ಅಂಕ ಗಳಿಸುವುದು ಕಷ್ಟ

ಯಾವಾಗಲೂ ಬಿಸಿಲು ಹೆಚ್ಚು ಇರುವ ಪ್ರದೇಶಗಳು ಎಸ್.ಎಸ್‌ಎಲ್.ಸಿ ಮತ್ತು ಪಿಯುಸಿಯಲ್ಲಿ ಕೊನೆಯ ಸ್ಥಾನ ಬರುತ್ತದೆ. ಅದಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಕಾರಣ ಅಲ್ಲ. ಆ ಪ್ರದೇಶದ ಬಿಸಿಲಿನ ತಾಪಮಾನವೇ ಕಾರಣ. ಅದಕ್ಕೆ ಶಾಲಾ - ಕಾಲೇಜು ಶೈಕ್ಷಣಿಕ ಅವಧಿಯನ್ನು ಜನವರಿಯಿಂದ ಆರಂಬಿಸಿ, ಡಿಸೆಂಬರ್ ತಿಂಗಳಿಗೆ ಮುಕ್ತಾಯಗೊಳಿಸಬೇಕು. ಆಗ ಅತಿ ಹೆಚ್ಚು ಬಿಸಿಲು ಪ್ರದೇಶಗಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಮೊದಲ ಸ್ಥಾನ ಬರಲಿದೆ. ಒಂದು ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳು ಪಾಸ್ ಆದ್ರೆ ಅದು ನೂರಕ್ಕೆ ನೂರರಷ್ಟು ಫಲಿತಾಂಶ. ನೂರು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಫೇಲ್ ಆದ್ರೆ 99% ಫಲಿತಾಂಶ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯನ್ನು ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದಲ್ಲಿ ನಡೆಸಿದರೆ. ವಿಧ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ಎಲ್ಲರೂ ಎಲ್ಲ ವಿಷಯ ಪಾಸ್ ಆಗಬಹುದು ನೂರಕ್ಕೆ ನೂರರಷ್ಟು ಫಲಿತಾಂಶ ಬರಲಿದೆ.

ನೂರರಷ್ಟು ಶಿಕ್ಷಣಕ್ಕೆ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗಲಿ

ಇಂದಿನ ಜಗತ್ತು ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ನೀಡುತ್ತಿಲ್ಲ. ಅಂದರೆ ಡಾಕ್ಟರ್, ಲಾಯರ್, ಜರ್ನಲಿಸ್ಟ್ ಆಗಬೇಕಾದರೆ ಆಯಾ ಹುದ್ದೆಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಆದರೆ ಡಾಕ್ಟರ್ ಓದಿದೆ ಇರುವರು ಕ್ಲಿನಿಕ್ ಆರಂಭಿಸಿದ್ರೆ ರೋಗಿಯ ಕಥೆ ಏನಾಗಬಹುದು. ಒಬ್ಬ ವರದಿಗಾರ ಅಕ್ರಮ ಕ್ಲಿನಿಕ್, ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಆರಂಭಿಸಿದ್ದ ಆ ವರದಿಗಾರ ಆ ನಕಲಿ ವೈದ್ಯನ ಪ್ರಮಾಣಪತ್ರ ಕೇಳಿದ ಆದರೆ ಆ ನಕಲಿ ವೈದ್ಯ ವರದಿಗಾರನ ಪದವಿ ಪ್ರಮಾಣಪತ್ರ ಕೇಳಿದ ಅಲ್ಲಿಗೆ ಚಾಪ್ಟರ್ ಕ್ಲೋಸ್. ಇಂತಹ ಹತ್ತು ಹನ್ನೆರಡು ಘಟನೆಗಳು ಬೆಳಕಿಗೆ ಬರುತ್ತದೆ. ಆದರೂ ಏನೂ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಕಲಿಗಳ ಹಾವಳಿ ಹೆಚ್ಚಾಗಿದೆ ಅಥವಾ ನಡೆಯುತ್ತಿದೆ. ಆಯಾ ಹುದ್ದೆಗೆ ತಕ್ಕಂತೆ ಆಯಾ ಆಯಾ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಕೆಲಸ ಸಿಕ್ಕರು ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗ ಪಡೆಯಲು ರೋಸಿ ಹೋಗುವುದು ಶತಸಿದ್ಧ. ಖಾಸಗಿ ಕೆಲಸ ಬಿಡಿ ಇನ್ನು ರಾಜ್ಯ ಸರ್ಕಾರದ ಕೆಲಸದ ಕರೆಯೋಲೆ ಬಂದ್ ಆಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಇನ್ನೂ ಕಾಯುತ್ತಿದ್ದಾರೆ. ಸರ್ಕಾರ ಯಾವಾಗ ಅರ್ಜಿ ಆಹ್ವಾನಿಸಬಹುದೆಂದು ಒಟ್ಟಿನಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣ ಪಡೆಯುವವರು ಖಾಸಗಿ ಕೆಲಸ ಪಡೆಯಲು ಹರಸಾಹಸ ಪಡಬೇಕು ಅಷ್ಟೇ.

ದೇಶದ 22 ಭಾಷೆಗಳು ರಾಷ್ಟ್ರ ಭಾಷೆಗಳು

ಬಹಳ ಜನರಿಗೆ ಹಿಂದಿ ಭಾಷೆ ಎಂದರೆ ರಾಷ್ಟ್ರ ಭಾಷೆ ಎಂದುಕೊಂಡಿದ್ದಾರೆ. ಕನ್ನಡ ಸೇರಿದಂತೆ ದೇಶದ 22 ಭಾಷೆಗಳು ರಾಷ್ಟ್ರ ಅಥವಾ ಸಂವಿಧಾನದ ಅಧಿಕೃತ ಭಾಷೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಕಚೇರಿಗಳು ಮಾತ್ರ ಹಿಂದಿ ಮತ್ತು ಇಂಗ್ಲೀಷ್ ಆಡಳಿತ ಭಾಷೆಯಾಗಿದೆ. ಆದರೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವುದು ಕಡ್ಡಾಯ. ಹಿಂದಿ ಸರಳ ಭಾಷೆಯಾಗಿದ್ದು, ಅವಶ್ಯಕತೆ ಅಗತ್ಯ ಇರುವವರು ಮತ್ತು ಕಲಿಯುವ ಆಸಕ್ತಿ ಇರುವವರು ಕಲಿತೆ ಕಲಿಯುತ್ತಾರೆ. ಆ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಅನೇಕ ಕಡೆ ಹಿಂದಿ ಕಲಿಯಲೇಬೇಕು ಎಂಬ ತಾಕೀತು ಮಾಡುವುದು ಅಥವಾ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿ ಭಾಷೆ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ಸರಿಯಾಗಿದೆ.

ವೀರೇಶ ಧೂಪದಮಠ
Read More

25 Mar 2026

// //

ಮನುಷ್ಯನಿಗೆ ರೋಗರುಜಿನಗಳು ಹೇಗೆಯೋ ಅದೇರೀತಿ ಜಗತ್ತಿಗೂ ಸಂಕಷ್ಟಗಳು ಸಹಜ












ಮನುಷ್ಯನಿಗೆ ರೋಗರುಜಿನಗಳು ಬರುವ ಹಾಗೆ ಜಗತ್ತು, ದೇಶ, ರಾಜ್ಯಕ್ಕೆ ಆಪತ್ತು, ಕಷ್ಟ, ಸಂಕಷ್ಟಗಳು ಬರುವುದು ಸಹಜ. ಕುಟುಂಬದ ವ್ಯಕ್ತಿಯಲ್ಲಿ ಯಾರಿಗಾದ್ರೂ ಆರೋಗ್ಯ ಸರಿ ಇಲ್ಲ ಎಂದಾಗ ಕುಟುಂಬಸ್ಥರಲ್ಲಿ ಆತಂಕ ಶುರುವಾಗುತ್ತದೆ. ಅದೇ ರೀತಿ ಜಗತ್ತು, ದೇಶ, ರಾಜ್ಯಕ್ಕೆ ಆಪತ್ತು, ಕಷ್ಟ, ಸಂಕಷ್ಟಗಳು ಬಂದಾಗ ಪ್ರಜೆಗಳಲ್ಲಿ ಆತಂಕ ಶುರುವಾಗುತ್ತದೆ. ಸಾಮಾನ್ಯವಾಗಿ ಜಗತ್ತಿನಲ್ಲಿ ಪಾಪ ಕರ್ಮಗಳು 90% ಮತ್ತು ಪ್ರೀತಿ ಪ್ರೇಮಗಳು 90% ನಡೆಯುವುದು ಕಂಡು ಬರುತ್ತದೆ. ಜನರ ಬಾಯಲ್ಲಿ ಕಲಿಯುಗ ಎಂದರೆ ಆಡುಭಾಷೆಯಲ್ಲಿ ಹೊಡಿಬಡಿ, ಮೋಸ, ವಂಚನೆ, ಕೊಲೆ, ದರೋಡೆ, ಅಧರ್ಮ, ಸುಳ್ಳು ಹೆಚ್ಚಾಗಿ ನಡೆಯುತ್ತಿದೆ ಎಂದು ಜನ ಹೀಗೂ ಆಡಿಕೊಳ್ಳುತ್ತಾರೆ. ಇದೇ ರೀತಿ ಮುಂದುವರಿದರೆ ಜಗತ್ತಿನ ಆಯಸ್ಸು ಕೇವಲ 5 ಸಾವಿರ ವರ್ಷಕ್ಕೆ ಸೀಮಿತವೇ? ಎನ್ನುವಂತಾಗಿದೆ.

ವ್ಯಕ್ತಿಯಲ್ಲಿ ಶ್ರೀಮಂತ, ಮದ್ಯಮ ವರ್ಗದವ, ಬಡವ ಎಂದು ಗುರುತಿಸಲಾಗುತ್ತದೆ. ಶ್ರೀಮಂತರು ಬದುಕಬೇಕಾದರೂ ಬಡವರು ಬೇಕು. ನನ್ನ ಬಳಿ ಹಣವಿದೆ, ಜಗತ್ತಿನಲ್ಲಿ ನನ್ನದೆ ಆಟ ಎಂದರೆ ಅದು ನಡೆಯುವುದಿಲ್ಲ. ಜನರೇ ಇಲ್ಲದೆ ಜಗತ್ತು ಸೃಷ್ಟಿಸಲು ಹೋದರೆ ಪ್ರತಿಯೊಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಜಗತ್ತಿಗೆ ಪ್ರತಿಯೊಬ್ಬ ವ್ಯಕ್ತಿಯೂ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಒಂದಲ್ಲಾ ಒಂದು ದಿನ ಆರಂಭದಂತೆ ಅಂತ್ಯವೂ ಆಗಲಿದೆ ಅದಕ್ಕಾಗಿ ನಿರ್ದಿಷ್ಟ ದಿನಾಂಕವಿಲ್ಲ, ಸಮಯವಿಲ್ಲ. ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕರೋನಂತಹ ಮಾರಕ ರೋಗ ಜಗತ್ತಿಗೆ ಹರಡಿದಾಗ ಪ್ರಕೃತಿ ತನ್ನ ಸೌಂದರ್ಯವನ್ನು ಸ್ವಚ್ಛಗೊಳಿಸಿಕೊಂಡಿತು‌. ಹಾಗಾಗಿ ವರ್ತಮಾನದ ವಿಚಾರಗಳನ್ನು ಭವಿಷ್ಯದ ಕಾಲಕ್ಕೆ ತೀರಿಗಿಸುವುದು ಅಪಾಯಕಾರಿ.

ಜಗತ್ತಿನ ಆಯಸ್ಸು 5 ಸಾವಿರ ವರ್ಷವೇ? ಇಲ್ಲವೇ ಜಗತ್ತಿನ ಆಯಸ್ಸಿನ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಮನುಷ್ಯನಿಗೆ ರೋಗರುಜಿನಗಳು ಹೇಗೆಯೋ ಅದೇರೀತಿ ಜಗತ್ತಿಗೂ ಸಂಕಷ್ಟಗಳು ಸಹಜ. ಆದರೂ ಇದ್ದಷ್ಟು ದಿನ ಜನರಿಗೆ ಒಳ್ಳೆಯದು ಮಾಡಬೇಕು, ಅದೇ ಜಗತ್ತಿನ ನಿಯಮವಾಗಿದೆ.

ವೀರೇಶ ಧೂಪದಮಠ
Read More

7 Mar 2026

// //

ನಗರ, ಪಟ್ಟಣ ಸುಧಾರಿಸಬಹುದು ಆದರೆ ಗ್ರಾಮಗಳು ಸುಧಾರಿಸಲು ಇನ್ನು 50 ವರ್ಷ ಬೇಕು












ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರು ಅಷ್ಟೇ ಯಾವುದೇ ವ್ಯಕ್ತಿ ಶಾಸಕ, ಸಂಸದರಾದರೂ ಅಷ್ಟೇ ಇನ್ನು ಗ್ರಾಮಗಳು ಸುಧಾರಿಸಲು 50 ವರ್ಷ ಬೇಕೇ ಬೇಕು. ಏಕೆಂದರೆ ಶೇಕಡಾ 50 ರಿಂದ 80 ರಷ್ಟು ಗ್ರಾಮಗಳು ಮೂಲಭೂತ ಸೌಕರ್ಯಗಳ ವಂಚಿತದಿಂದ ನರಳುತ್ತಿವೆ. ಅದು ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡ, ಸಮರ್ಪಕ ರಸ್ತೆ, ಸಾರಿಗೆ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಇನ್ನೂ ಹುಡುಕಲು ಹೋದರೆ ದೊಡ್ಡದಾದ ಪಟ್ಟಿವೋ ಸಿಗಬಹುದು. ನಗರ, ಪಟ್ಟಣಗಳು ಕಾಲಕಾಲಕ್ಕೆ ಸುಧಾರಿಸಿ ಸುಂದರ ಪಟ್ಟಣ, ನಗರವಾಗಿ ಕಾಣಿಸಬಹುದು ಆದರೆ ಶೇಕಡಾ 50 ರಿಂದ 80 ರಷ್ಟು ಗ್ರಾಮಗಳು ಮೂಲಭೂತ ಸೌಕರ್ಯ ಅನುದಾನ ಕೊರತೆಯಿಂದ ನರಳುತ್ತಿವೆ. ಇದಕ್ಕೆ ತಾಲ್ಲೂಕು ಆಡಳಿತ ಸರಿಯಾಗಿ ಸ್ಪಂದಿಸದಿರುವುದು ಕಾಲಕಾಲಕ್ಕೆ ಗ್ರಾಮಗಳ ಬೇಕು ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದಿರುವುದು ಅಲ್ಲದೇ ಪ್ರಸ್ತಾವನೆ ಸಲ್ಲಿಸಿದ್ದರು ಸರ್ಕಾರ ಅನುಮೋದನೆ ನೀಡದಿರುವುದು ಇನ್ನಿತರ ಸಮಸ್ಯೆಗಳಿಂದ ಗ್ರಾಮಾಭಿವೃದ್ಧಿ ಕುಂಠಿತವಾಗಿದೆ. ಅಂದಾಜಿನ ಪ್ರಕಾರ ಸ್ವಾತಂತ್ರ್ಯ ಬಂದು 78 ವರ್ಷ ಜೊತೆಗೆ ಇನ್ನೂ 50 ವರ್ಷ ರಾಜ್ಯದ ಬಹುತೇಕ ಗ್ರಾಮಗಳು ಸುಧಾರಿಸಲು ಬೇಕಾದ ಸಮಯ. ಯಾವುದೇ ಬಜೆಟ್ ನೋಡಿ ನಗರ, ಪಟ್ಟಣಕ್ಕೆ ಸೀಮಿತವಾಗಿದೆ. ಹೀಗಾಗಿ ಇನ್ನು 50 ವರ್ಷ ಬೇಕೇ ಬೇಕು ಗ್ರಾಮಗಳು ಸುಧಾರಿಸಲು. ಅನುದಾನವಿಲ್ಲದೇ, ಮೂಲಭೂತ ಸೌಕರ್ಯವಿಲ್ಲದೇ ಅದೇಷ್ಟೋ ಗ್ರಾಮಗಳು ಉದಾಹರಣೆಯಾಗಿ ಸಿಗಬಹುದು ಇದ್ದರಿಂದ ನಗರ, ಪಟ್ಟಣ ವಲಸೆಗೆ ಕಾರಣವಾಗಿರಬಹುದು..

ಮಲ್ಲಿಗವಾಡ ಗ್ರಾಮಕ್ಕೂ ತಪ್ಪಿಲ್ಲ ಸಮಸ್ಯೆ

ಉದಾಹರಣೆಯಾಗಿ ತೆಗೆದುಕೊಂಡರೆ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮ ಇದುವರೆಗೂ ಸುಧಾರಿಸಿಲ್ಲ. ಮಲ್ಲಿಗವಾಡ ಗ್ರಾಮ ಪಂಚಾಯತ್ ಕಚೇರಿ ಇದೆ. ಕರ್ನಾಟಕ ಸರ್ಕಾರ ಧಾರವಾಡ ಉಚ್ಛ ನ್ಯಾಯಾಲಯದ ಆದೇಶದಂತೆ 2021 ರಿಂದ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತದೆ. ಆದರೆ ಹೇಳದೇ ಕೇಳದೇ ತಾಲ್ಲೂಕು, ಜಿಲ್ಲಾ ಆಡಳಿತ ಮೂರು ದಿನ ಮಾತ್ರ ಕಚೇರಿಗೆ ಅಧಿಕಾರಿ, ಸಿಬ್ಬಂದಿ ಬರುವುದು ಸೀಮಿತಗೊಳಿಸಿ, ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಗ್ರಾಪಂ ಪೀಠೋಪಕರಣ, ವಸ್ತುಗಳು ಇದುವರೆಗೂ ಹಸ್ತಾಂತರವಾಗಿಲ್ಲ. ಗ್ರಾಪಂ ಪಿಡಿಒ, ಇಲ್ಲ ತಲಾಠಿ ಇಲ್ಲ. ಸರ್ಕಾರಿ ಕಟ್ಟಡ ಇಲ್ಲ. ಅಭಿವೃದ್ಧಿ ಅಂತ್ರು ಮೊದಲೇ ಇಲ್ಲ. ತಾಲ್ಲೂಕು ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಯಾವುದೇ ಅಧಿಕಾರಿ, ಸಿಬ್ಬಂದಿ ಗ್ರಾಮಕ್ಕೆ ಪ್ರವೇಶಸಲ್ಲ. ಈ ಬಗ್ಗೆ ಸಾಕಾಷ್ಟು ಬಾರಿ ಧಾರವಾಡ ಡಿಸಿ, ಜಿಲ್ಲಾ ಪಂಚಾಯತ್ ಸಿಇಒ ಅರ್ಜಿ ಸಲ್ಲಿಸಿದ್ದರು ಅಸಹಾಯಕರುವುದು ದೂರದೃಷ್ಟಿ ಸರಿ. ಅಂದಾಜಿನ ಪ್ರಕಾರ ಎಲ್ಲ ಸಮಸ್ಯೆ ಮೂಲಭೂತ ಸೌಕರ್ಯ ಬಗೆಹರಿಸಲು 50 ವರ್ಷ ಬೇಕೇ ಬೇಕು. ಎಲ್ಲ ಗ್ರಾಮಗಳ ಹಣೆಬರಹವು ಅಷ್ಟೇ.
Read More

28 Feb 2026

// //

ಊರು ಅಂದಮೇಲೆ ಗತವೈಭವ ಇರಲೇಬೇಕು ಅದಕ್ಕೆ ಧಾರವಾಡಕ್ಕೆ ಪ್ರತ್ಯೇಕ ಡಿ.ಎಂ.ಸಿ ಬೇಕು

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಠರಾವುಗಳಿಗೆ ಸರ್ಕಾರ ಕಿಮ್ಮತ್ತು ನೀಡಬಾರದು ಏಕೆಂದರೆ ಅಭಿಪ್ರಾಯಗಳು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗಿಂತ ಸಾರ್ವಜನಿಕರ ಅಭಿಪ್ರಾಯ ಭಿನ್ನವಾಗಿರುತ್ತದೆ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಠರಾವುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ. ಜನಪ್ರತಿನಿಧಿ ವರ್ಸಸ್ ಸಾರ್ವಜನಿಕರ ಅಭಿಪ್ರಾಯಗಳು ಭಿನ್ನವಾಗಿರುವುದರಿಂದ ಅವುಗಳಿಗೆ ಮಾನ್ಯ ನೀಡುವುದು ತಪ್ಪಾಗುತ್ತದೆ. ಏನಿದ್ರೂ ಸಾರ್ವಜನಿಕರ ಅಭಿಪ್ರಾಯವೇ ಅಂತಿಮವಾಗಿರುತ್ತದೆ. ನಿಮ್ಮ ನಿಮ್ಮ ರಾಜಕೀಯ ತೆವಲಿಗೋಸ್ಕರ ಊರಿನ ಗತವೈಭವವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಆಡಳಿತಾತ್ಮಕ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು. ಸುಮ್ ಸುಮ್ನೆ ದಿನಕ್ಕೊಂದು ಗೊಂದಲ ಹುಟ್ಟುಹಾಕುವುದು ಸರಿಯಲ್ಲ. ಊರಿನ ಗತವೈಭವವನ್ನು ಹೆಚ್ಚಿಸಲು ತನ್ನದೇ ಆದ ಆಡಳಿತ ಸಂಸ್ಥೆ ಇದ್ದರೆ ಚಂದ ಅದು ಸಾರ್ವಜನಿಕರ ಇಚ್ಛೆ. ಹಾಗಾಗಿ ಊರಿನ ಗತವೈಭವವನ್ನು ಹೆಚ್ಚಿಸಲು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಅಗತ್ಯ. ಅನುದಾನ ಬೇಕಿದ್ರೆ ಸರ್ಕಾರಕ್ಕೆ ತಿವಿದು ಪಡೆದುಕೊಳ್ಳಿ ಅದು ಒಳ್ಳೆಯದು.

ವೀರೇಶ ಧೂಪದಮಠ

Read More

27 Feb 2026

// //

ಹೊರರಾಜ್ಯದ ಖರೀದಿದಾರರು ಇಲ್ಲದೇ, ಹಳೆ ದಲ್ಲಾಳಿಗಳು 10 ರಲ್ಲಿ 1 ಏರಿಸಿ, 9 ಇಳಿಸುವುದು?

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಅಥವಾ ದರ ನಿಗದಿಪಡಿಸಲು ಎಪಿಎಂಸಿ ಮಾರುಕಟ್ಟೆ ಇದೆ. ಆದರೆ ಗದಗ ಎಪಿಎಂಸಿ ಮಾರುಕಟ್ಟೆ ಮಾತ್ರ ಕೃಷಿ ಉತ್ಪನ್ನಗಳ ದರ ಹೊರರಾಜ್ಯದ ಖರೀದಿದಾರರು ಇಲ್ಲದೇ, ಹಳೆ ದಲ್ಲಾಳಿಗಳು 10 ರಲ್ಲಿ 9 ಇಳಿಸಿ, 1 ಏರಿಸಿ ಕೈ ತೊಳೆದು ಬಿಡ್ತಿದ್ದಾರೋ?. ಸರ್ಕಾರ ಬೆಂಬಲ ಬೆಲೆ ಘೋಷಿಸಿ ತಿಂಗಳು ಕಳೆದರೂ ಕಡಲೆ ಖರೀದಿ ಆರಂಭವಾಗಿಲ್ಲ. ಇವತ್ತು ಶುರುವಾಗುತ್ತೆ, ನಾಳೆ ಶುರುವಾಗುತ್ತೆ ಅಂತ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಇತ್ತ ಎಪಿಎಂಸಿ ಮಾರುಕಟ್ಟೆಗೆ ಹೊರರಾಜ್ಯದ ಖರೀದಿದಾರರನ್ನು ಎಪಿಎಂಸಿ ಒಳಗೆ ಬಿಡದೆ, ಹಳೆ ದಲ್ಲಾಳಿಗಳು ತಾವೇ ಕಡಿಮೆ ರೇಟ್ ಗೆ ರೈತರ ಉತ್ಪನ್ನಗಳನ್ನು ಖರೀದಿಸಿ, ಹೊರರಾಜ್ಯ ಖರೀದಿದಾರರಿಗೆ ದೊಡ್ಡ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರೆದರೆ ಎಪಿಎಂಸಿಗಳು ಮುಚ್ಚಿ ಹೋಗಬೇಕಾಗುತ್ತದೆ. ಹೊರರಾಜ್ಯದ ಖರೀದಿದಾರರಿಗೆ ಎಪಿಎಂಸಿ ಮಾರುಕಟ್ಟೆಗೆ ಪ್ರವೇಶ ನೀಡಬೇಕು. ದೊಡ್ಡ ಮೊತ್ತಕ್ಕೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದ್ದರಿಂದ ರೈತರಿಗೆ ಲಾಭವಾಗಲಿದೆ ಇಲ್ಲದ್ದಿದ್ದರೆ ಹಳೆ ದಲ್ಲಾಳಿಗೆ/ಖರೀದಿದಾರರಿಗೆ ಲಾಭವಾಗಲಿದೆ. ಎರಡು ವರ್ಷದ ಹಿಂದೆ ಹೊರರಾಜ್ಯದ ಕೃಷಿ ಉತ್ಪನ್ನಗಳ ಖರೀದಿದಾರರು ಗದಗ ಎಪಿಎಂಸಿ ಸೇರಿದಂತೆ ಅನೇಕ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದರು. ಈಗ ಏಕೆ ಬರುತ್ತಿಲ್ಲ, ರೈತರ ಮಾಲ್ ಬಂದಾಗ ಮುದಾಮು ರೇಟ್ ಇಳುಸ್ತಾರ ಅಂತ ಗದಗ ಎಪಿಎಂಸಿ ಮಾರುಕಟ್ಟೆಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನ್ಯಾಯಯುತವಾಗಿ ಬೆಲೆ ಸಿಗಬೇಕು ಎಂದರೆ ಎಂಪಿಎಂಸಿ ಮಾರುಕಟ್ಟೆ ಕೈ ಸುದ್ದು ಬಾಯಿ ಸುದ್ದು ಇರಬೇಕು ಇಲ್ಲದಿದ್ದರೆ ರೈತರಿಗೆ ಎಪಿಎಂಸಿ ಮಾರುಕಟ್ಟೆ ಬಗ್ಗೆ ಒಳ್ಳೆಯ ಅಭಿಪ್ರಾಯ ಕಣ್ಮಾರೆಯಾಗಿ, ಎಪಿಎಂಸಿಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಬೇರೆ ಎಪಿಎಂಸಿ ಮಾರುಕಟ್ಟೆಗೆ ಅಥವಾ ಉತ್ತಮ ಬೆಲೆ ಇರುವ ಕಡೆ ಮುಖಮಾಡಿ ಹೋಗುವುದು ಖಚಿತ. ಸರ್ಕಾರ ಅಂದ್ರೆ, ರೈತರ ಗೋಳು ಕೇಳುವವರಿಲ್ಲ ಅಷ್ಟೇ ರಾಜ್ಯ ಕೇಂದ್ರ ಸರ್ಕಾರ ಎಂದರೆ.

ವೀರೇಶ ಧೂಪದಮಠ

Read More