6 Jun 2026

// //

ಹು-ಧಾ ಪಾಲಿಕೆ ಆಡಳಿತ ಮಂಡಳಿ ವಿಸರ್ಜಿಸಿಯಾದರೂ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಲಿ?

ಹು-ಧಾ ಪಾಲಿಕೆ ಆಡಳಿತ ಮಂಡಳಿ ವಿಸರ್ಜಿಸಿಯಾದರೂ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಲಿ?

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಮಾಡಲು ಘನವೆತ್ತ ರಾಜ್ಯಪಾಲರು ಎರಡು ಷರತ್ತು ಬದ್ಧ ಅನುಮೋದನೆ ನೀಡಿದ್ದಾರೆ. ಈ ಶ್ರೇಯಸ್ಸು ಧಾರವಾಡಿಗರ ಗಟ್ಟಿ ನಿಲುವು ಮತ್ತು ಹುಬ್ಬಳ್ಳಿಗರ ಪರೋಕ್ಷ ಬೆಂಬಲ. ಜೊತೆಗೆ 99.98% ಜನರ ಭರ್ಜರಿ ಬೆಂಬಲವೇ ಕಾರಣ. ಆ ಎರಡು ಅಣಿ ಒತ್ತಡಕ್ಕೆ ಮಣಿದು 100ಕ್ಕೆ 100 ರಷ್ಟ್ರು ಬೆಂಬಲ ಆಗಿದೆ. ಘನವೆತ್ತ ರಾಜ್ಯಪಾಲರು ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಪಾಲಿಕೆ ಗಡಿ ಗುರುತಿಸಬೇಕು ಮತ್ತು ಪ್ರಸ್ತುತ ಬಾಕಿಯಿರುವ ಹಾಲಿ ಪಾಲಿಕೆ ಸದಸ್ಯರ ಅವಧಿ ಮುಗಿದ ಮೇಲೆ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಒಂದೇ ಷರತ್ತು ಏನೆಂದರೆ, ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಡಿ.31, 2025 ರೊಳಗೆ ಗಡಿ ವಿಭಜಿಸುವ ಪ್ರಕ್ರಿಯೆ ಮುಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಗಿ ಪ್ರತ್ಯೇಕ ಪಾಲಿಕೆ ವಿಭಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಜನಗಣತಿ ಆದೇಶ ಮಾಡುವ ಮೊದಲೇ ಅಂದರೆ 11 ತಿಂಗಳಿಗಿಂತ ಹೆಚ್ಚು ಕಾಲ ರಾಜ್ಯಪಾಲರ ಕಚೇರಿಗೆ ಕಳಿಸಲಾಗಿದೆ. ಹಾಗಾಗಿ ಒಂದು ಷರತ್ತು ಅನ್ವಯಿಸುವುದಿಲ್ಲ. ಮತ್ತೊಂದು ಷರತ್ತು ಏನೆಂದರೆ ಪಾಲಿಕೆ ಸದಸ್ಯರ ಅಧಿಕಾರದ ಅವಧಿ ಮುಗಿದ ನಂತರ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಅಲ್ಲಿಯವರೆಗೆ ಕಾಯುವ ಬದಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ವಿಶೇಷಾಧಿಕಾರ ಬಳಸಿ, ಪಾಲಿಕೆ ವಿಸರ್ಜಿಸಿ ಪ್ರತ್ಯೇಕ ಪಾಲಿಕೆ ಮುಖಾಂತರ ಹೊಸ ಚುನಾವಣೆ ನಡೆಸಬೇಕು. ಇಲ್ಲವೇ ಪಾಲಿಕೆ ಸದಸ್ಯರನ್ನು ಪಾಲಿಕೆ ಗಡಿರೇಖೆಯನ್ವಯ ಹಸ್ತಾಂತರಿಸಿ, ಹೊಸ ಪಾಲಿಕೆಗೆ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಒಟ್ಟಿನಲ್ಲಿ ಹೇಗಾದರೂ ಪ್ರತ್ಯೇಕ ಧಾರವಾಡ ಪಾಲಿಕೆ ಅಸ್ತಿತ್ವಕ್ಕೆ ಬರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

ವೀರೇಶ ಧೂಪದಮಠ
Read More
// //

ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು

ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು

ಶಾಸಕರಾದವರು ತಮ್ಮ ಕ್ಷೇತ್ರವನ್ನೇ ಸಲ್ಲಿಸಾಗಿ ಗೆಲ್ಲದವರು. ಇನ್ನು 8-10 ಶಾಸಕರನ್ನು ಗೆಲ್ಲಿಸಲು ಸಾಧ್ಯವೇ?. ಸುಮ್ನೆ ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು, ಇಲ್ಲದಿದ್ದರೇ ಅದು ಸಿಗಲ್ಲ. ಅಷ್ಟು ಕಿರಿಕಿರಿಯಾದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರಲಿ. ಮಂತ್ರಿ ಸ್ಥಾನ 136 ಶಾಸಕರಲ್ಲಿ ಯಾರಿಗಾದರೂ ಒಬ್ಬರ ಪಾಲಾಗುವುದು ಖಚಿತ ಬಿಟ್ರೆ ಮತ್ತೆ ಏನೇನು ಇಲ್ಲ. 31 ಜಿಲ್ಲೆಗಳನ್ನು ಓಡಾಡುವ ವ್ಯಕ್ತಿ ಮಂತ್ರಿಯಾಗಲಿ. ಮಾಜಿ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆ ಬಗೆಹರಿಸಬೇಕು. ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ. ಹೀಗೆ ಮೈಸೂರು ಮಗ, ಮೈಸೂರು ಅಳಿಯನ ಬಗ್ಗೆ ಖುಷಿಯಿದೆ, ಇಬ್ಬರು ಒಂದೇ ಭಾಗದವರು. ಒಬ್ಬರು ಕಾಂಗ್ರೆಸ್ ಹೈಕಮಾಂಡ್ ಮೆಂಬರ್ ಆಗಿದ್ದಾರೆ. ಇನ್ನೊಬ್ಬರು ಕರ್ನಾಟಕದ ಸಿಎಂ ಆಗಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದೇ ಎಟ್ಟಿಗೆ 6 ಯುವ ಗ್ಯಾರಂಟಿ ಮತ್ತು ಕರ್ನಾಟಕದಲ್ಲಿ ಜನಸಾಮಾನ್ಯರ ಅಹವಾಲು ಆಲಿಕೆಗೆ, ಎನ್‌ಆರ್‌ಐಗೆ 2 ಹೊಸ ಸಚಿವಾಲಯ ಘೋಷಣೆಯಾಗಿದ್ದು ಖುಷಿ ವಿಚಾರ ಶೀಘ್ರ ಜನರ ಸಮಸ್ಯೆ ಬಗೆಹರಿದರೆ ಸಾಕು ಅದೇ ದೊಡ್ಡ ಸಾಧನೆ. ಮತ್ತೆ ಇದೇ ವಿಷಯ ಇಟ್ಟುಕೊಂಡು ಆಗಾಗ ಪ್ರಧಾನಮಂತ್ರಿಗಳು ಕಾಂಗ್ರೆಸ್, ಕರ್ನಾಟಕ, ಕರ್ನಾಟಕ ಸರ್ಕಾರ ಎಂಬ ಪದವನ್ನು ಎತ್ತಿ ಕಾಮಿಡಿ ಮಾಡುವುದು ಸಹಜ. ಅದನ್ನು ಯಾರೂ ಸಿರಿಯಸ್ ಆಗಿ ತಗೊಳ್ಳಲ್ಲ. ಬದಲಾಗಿ ನಗಬಹುದು ಹೊರತು ಗಂಭೀರತೆ ಕಾಣಸಿಗದು.

ವೀರೇಶ ಧೂಪದಮಠ
Read More

28 May 2026

// //

ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯ ರಾಜಕಾರಣಿ ಅವಶ್ಯಕ



ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯ ರಾಜಕಾರಣಿ ಅವಶ್ಯಕ

ಅನುಭವಿ ಹಿರಿಯ ರಾಜಕಾರಣಿ ಅದರಲ್ಲಿ ಮಾಜಿ ಮುಖ್ಯಮಂತ್ರಿಗಳ ಕೊಡುಗೆ ರಾಷ್ಟ್ರ ರಾಜಕಾರಣಕ್ಕೆ ಅವಶ್ಯಕತೆ ಇದೆ. ಮುಖ್ಯಮಂತ್ರಿ ಆದವರು ರಾಜ್ಯದ ಮಂತ್ರಿ ಸ್ಥಾನ ಸೇರಿದಂತೆ ಇನ್ನಿತರ ಮುಖ್ಯಮಂತ್ರಿ ಸ್ಥಾನಕ್ಕಿಂತ ಸಣ್ಣ ಹುದ್ದೆ ಪಡೆಯಲು ಬರುವುದಿಲ್ಲ ಅಥವಾ ಒಂದೇ ವೇಳೆ ಪಡೆದರು ಆ ಮುಖ್ಯಮಂತ್ರಿ ಹುದ್ದೆಗೆ ಗೌರವ ತಕ್ಕುದಲ್ಲ. ಬದಲಾಗಿ ಕೇಂದ್ರ ಮಂತ್ರಿಯಾಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಸತತ ಅಧಿಕಾರಕ್ಕೆ ಬರಲು ಕಾರಣ ಒಳ್ಳೆ ವ್ಯಕ್ತಿ ನೋಡಿ, ಜನ ವೋಟು ಹಾಕಿದ್ದಾರೆ. ಮುಂದೊಂದು ದಿನ ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಮಹಾ ವಲಸೆ ಹೋದವರು ವಾಪಾಸ್ ಮಾತೃ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ. ಆಗ ಮತ್ತೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದೊಂದು ದಿನ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಬಹುದು. ಹಾಗಾಗಿ ಹಿರಿಯ ಅನುಭವಿ, ಮಾಜಿ ಮುಖ್ಯಮಂತ್ರಿಗಳು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ಒಮ್ಮೆ ಮುಖ್ಯಮಂತ್ರಿಯಾದರೆ ಮುಗಿಯಿತು. ವಾಪಾಸ್ ಮುಖ್ಯಮಂತ್ರಿ ಆಗಬೇಕು. ಆದರೆ ಅದು ಅವಶ್ಯಕತೆ ಇರುವುದಿಲ್ಲ. ಪದೇ ಪದೇ ಒಂದೇ ಹುದ್ದೆಯಲ್ಲಿ ಮುಂದುವರಿದರೆ ಜನರಿಂದ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ. ಆದ್ದರಿಂದ ರಾಷ್ಟ್ರ ರಾಜಕಾರಣ ಕಡೆ ಮುಖ ಮಾಡಬೇಕು ಅದೇ ಸರಿಯಾದ ನಿರ್ಧಾರ. ಇದೇಕೆ ಎಂದರೆ ರಾಹುಲ್ ಗಾಂಧಿಯವರು ರಾಜ್ಯಸಭೆ ಮೂಲಕ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚಿಸಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ರಾಜ್ಯ ರಾಜಕಾರಣ ಸಾಕು. ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಹೋಗುವುದು ಒಳ್ಳೆಯದು. ಅದರ ಜೊತೆಗೆ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ರಾಜ್ಯಸಭೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಮನವೊಲಿಸಬೇಕು. ಅನುಭವಿ ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಆಲೋಚನೆ ಅಥವಾ ಚಿಂತನೆಗಳಗಿಂತ. ರಾಷ್ಟ್ರ ರಾಜಕಾರಣದತ್ತ ಗಮನಹರಿಸಬೇಕು ಅದೇ ಒಳ್ಳೆಯ ಬೆಳವಣಿಗೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು.

ವೀರೇಶ ಧೂಪದಮಠ
Read More

2 May 2026

// //

ಬೆಂಗಳೂರು ನಗರ ಕರ್ನಾಟಕದ ಉತ್ತರ ಭಾಗಕ್ಕೆ ಆಸರೆ



ಬೆಂಗಳೂರು ನಗರ ಕರ್ನಾಟಕದ ಉತ್ತರ ಭಾಗಕ್ಕೆ ಆಸರೆ

ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಸರಿ ಸಮಾನಾಗಿ ರಾಜ್ಯದ ಯಾವುದೇ ನಗರಗಳು ಇಲ್ಲ. ರಾಜ್ಯದ ಯಾವುದೇ ನಗರವನ್ನು ಬೆಂಗಳೂರು ನಗರಕ್ಕೆ ಹೋಲಿಕೆ ಮಾಡುವುದು ತಪ್ಪು. ಏಕೆಂದರೆ ಬೆಂಗಳೂರು ಒಂದರಲ್ಲಿ 32 ವಿಧಾನಸಭಾ ಕ್ಷೇತ್ರಗಳು 4 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 5 ಮಹಾನಗರ ಪಾಲಿಕೆಯನ್ನೊಳಗೊಂಡ ಗ್ರೇಟರ್ ಬೆಂಗಳೂರು ಇದೆ. ಅಲ್ಲದೇ 1.5 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಕರ್ನಾಟಕದ ಉತ್ತರ ಭಾಗದ ಬಹಳಷ್ಟು ಜನಕ್ಕೆ ಉದ್ಯೋಗ ಒದಗಿಸಿದ ಕೀರ್ತಿ ಬೆಂಗಳೂರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಬೆಂಗಳೂರು ನಗರ ನಿರ್ವಹಣೆ ಮಾಡುವುದು ಕಷ್ಟವಾದರೂ ತ್ವರಿತ ರೀತಿಯಲ್ಲಿ ವ್ಯವಸ್ಥೆ ಸರಿ ಪಡಿಸಲಾಗುತ್ತಿದೆ. ಬೃಹತ್ ಮಹಾನಗರ ಪಾಲಿಕೆಯಾಗಲು 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರಬೇಕು. ಎರಡು ವರ್ಷದ ಹಿಂದೆಯಷ್ಟೇ ಹುಬ್ಬಳ್ಳಿ - ಧಾರವಾಡ ಬೇರ್ಪಡಿಸಿ, ಎರಡು ನಗರಗಳನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಸರ್ಕಾರ ನಿರ್ಣಯ ತೆಗೆದುಕೊಂಡಿತು. ಆ ಪ್ರಕ್ರಿಯೆ ರಾಜ್ಯಪಾಲರ ಬಳಿ ಬಾಕಿ ಇದೆ. ಮೊನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಹುಬ್ಬಳ್ಳಿ ಧಾರವಾಡ ಬೃಹತ್ ಮಹಾನಗರ ಪಾಲಿಕೆ ಮಾಡಲು ಏಕಪಕ್ಷೀಯವಾಗಿ ಠರಾವು ಪಾಸು ಮಾಡಿದ್ದಾರೆ. ರಾಜ್ಯಪಾಲರ ಬಳಿಯಿರುವ ಪೈಲ್ ವಿಲೇವಾರಿಯಾಗದೆ ಬಾಕಿ‌ ಇದೆ. ಇಂತಹ ಸನ್ನಿವೇಶದಲ್ಲಿ ಠರಾವು ಬೇಕಾ. ಇದರಿಂದ ಎರಡು ನಗರಗಳ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಗೆ ಆಗಾಗ ಸಮಸ್ಯೆಯಾಗುವುದು ಪಕ್ಕ. ಧಾರವಾಡ ಅಥವಾ ಹುಬ್ಬಳ್ಳಿಯವರು ಮೇಯರ್ ಆಗಬೇಕಿತ್ತು ಆಗಿಲ್ಲ ಮತ್ತು ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಅಭಿವೃದ್ಧಿ ಬಗ್ಗೆ ಆಕ್ಷೇಪಣೆ ದಿನನಿತ್ಯ ನೋಡುವುದು ಕಟ್ಟಿಟ್ಟ ಬುತ್ತಿ. ಅದು ಹೋಗ್ಲಿ ಬೆಂಗಳೂರು ನಗರಕ್ಕೆ ಯಾವುದೇ ನಗರವನ್ನು ಹೋಲಿಕೆ ಮಾಡಬೇಡಿ. 32 ವಿಧಾನಸಭಾ ಕ್ಷೇತ್ರ ಎಲ್ಲಿ 4 ವಿಧಾನಸಭಾ ಕ್ಷೇತ್ರ ಎಲ್ಲಿ ಎಂಬುದನ್ನು ಗಮನಿಸಬೇಕು ಅಷ್ಟೇ.

ವೀರೇಶ ಧೂಪದಮಠ
Read More

21 Apr 2026

// //

ಅಧಿಕಾರಕ್ಕಿಂತ ಜನರಿಗೆ ನೆಮ್ಮದಿ ಸಿಗಬೇಕು



ಅಧಿಕಾರಕ್ಕಿಂತ ಜನರಿಗೆ ನೆಮ್ಮದಿ ಸಿಗಬೇಕು

ಮನುಷ್ಯನಲ್ಲಿ ಎರಡು ಮನಸ್ಥಿತಿ ಇರುತ್ತೆ, ಒಂದು ಕಾಂಗ್ರೆಸ್ ಮನಸ್ಥಿತಿ ಇನ್ನೊಂದು ಬಿಜೆಪಿ ಮನಸ್ಥಿತಿ. ಕಾಂಗ್ರೆಸ್ ಅಥವಾ ಬಿಜೆಪಿ ಏನೇ ಮಾಡಿದರೂ ಆ ಮನಸ್ಥಿತಿಗಳಿಗೆ ಹಿತ ಎನ್ನಿಸುತ್ತದೆ. ಅದು ಸರಿ ಇರಲಿ ತಪ್ಪು ಇರಲಿ ಒಟ್ಟಿನಲ್ಲಿ ಅಂತಹ ಮನಸ್ಥಿತಿಗಳನ್ನು ನಿಯಂತ್ರಣ ಮಾಡುವುದು ಕಷ್ಟವೇ ಸರಿ. ಯಾವಾಗ ಮನಸ್ಥಿತಿಗಳು ಬದಲಾಗುತ್ತದೆ ಎಂದರೆ ಬೇಸತ್ತು ಹೋದಾಗ ಉದಾ: 2008 ರಿಂದ 2013 ರಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ಐದು ವರ್ಷಗಳಲ್ಲಿ 3 ಜನ ಮುಖ್ಯಮಂತ್ರಿಯಾದರು. ಈ ಐದು ವರ್ಷಗಳಲ್ಲಿ ಒಳ ಜಗಳ, ಕಿತ್ತಾಟ, ದಿನಕ್ಕೊಂದು ಹೇಳಿಕೆಗಳು ಒಂದು ರೀತಿಯಲ್ಲಿ ಹುಚ್ಚಾಟವನ್ನು ದಿನನಿತ್ಯ ನೋಡಿದ ಸಾರ್ವಜನಿಕರು ಬೇಸತ್ತು ಸರ್ಕಾರ ಬದಲಾವಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ ಎನ್ನಿಸುತ್ತದೆ. ಈ ರಾಜಕಾರಣಿಗಳಿಗೆ ಅಧಿಕಾರ ಬೇಕಾಗಿರುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ಬೇಕಾಗಿರುತ್ತದೆ. ರಾಜಕಾರಣಿಗೆ ಅಧಿಕಾರ ಸಿಗಲ್ಲ, ಸಾರ್ವಜನಿಕರಿಗೆ ನೆಮ್ಮದಿ ಸಿಗಲ್ಲ ಜೊತೆಗೆ ಉತ್ತಮ ಆಡಳಿತ ಮತ್ತು ಅಧಿಕಾರಿಗಳ ಸ್ಪಂದನೆ ಸಿಗಲ್ಲ. ಈ ರೀತಿ ಸನ್ನಿವೇಶ ನಡೆದಾಗ ಪಕ್ಷದ ಮನಸ್ಥಿತಿ ಬದಲಾಯಿಸಿ, ಮೊದಲು ಮಂತ್ರಿಗಳನ್ನು ಸೋಲಿಸಿ, ನಂತರ ಕೆಲಸದ ಮಾಡದ ಶಾಸಕರನ ಮನೆಯ ಹಾದಿ ಹಿಡಿಸುತ್ತಾರೆ. ಹಾಗಾಗಿ ಎಷ್ಟು ದಿನ ಅಧಿಕಾರ ಸಿಗುತ್ತೋ ಅಷ್ಟು ದಿನ ಅಧಿಕಾರ ಅನುಭವಿ ಹಿಂದೆ ಸರಿಯಬೇಕು. ಅದನ್ನು ಬಿಟ್ಟು ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಕೊನೆವರೆಗೆ ಮಂತ್ರಿ ಸ್ಥಾನ ಕೊಡದಿದ್ದವನನ್ನು ಟೀಕಿಸುವುದು ಯಾವುದೇ ಅರ್ಥವಿರುವುದಿಲ್ಲ. ಎಲ್ಲೋ ಒಂದು ಕಡೆ ಮಂತ್ರಿ ಮಹಾಶಯರು ಸೋಲುತ್ತಾರೆ ಎಂಬ ಜಿಜ್ಞಾಸೆ ಹುಟ್ಟಿದೆ. ಸ್ವ ಇಚ್ಛೆಯಿಂದ ಮಂತ್ರಿ ಪದವಿ ತ್ಯಜಿಸಬೇಕು. ರಾಜಕಾರಣಿಗೆ ಅಧಿಕಾರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಜನರಿಗೆ ನೆಮ್ಮದಿ ಸಿಗಬೇಕು.

ವೀರೇಶ ಧೂಪದಮಠ
Read More

17 Apr 2026

// //

10-12 ವಿಧಾನಸಭೆಗೆ ಒಂದು ಲೋಕಸಭಾ ಕ್ಷೇತ್ರವಾಗಲಿ




10-12 ವಿಧಾನಸಭೆಗೆ ಒಂದು ಲೋಕಸಭಾ ಕ್ಷೇತ್ರವಾಗಲಿ

ಪ್ರತಿಯೊಂದು ಲೋಕಸಭಾ ಕ್ಷೇತ್ರವು ಸದ್ಯ 8 ವಿಧಾನಸಭಾ ಕ್ಷೇತ್ರ ಒಳಗೊಂಡು ರಚನೆಯಾಗಿದೆ. ಅದು ಜನಸಂಖ್ಯೆ ಆಧಾರದ ಮೇಲೆ ಅಲ್ಲ. ಮತದಾರರ ಸಂಖ್ಯೆ ಆಧಾರದ ಮೇಲೆ. ಇಲ್ಲಿ ಜನಸಂಖ್ಯೆ ಬೇರೆ, ಮತದಾರರ ಸಂಖ್ಯೆ ಬೇರೆ. ಅಂದರೆ 18 ವರ್ಷ ಮೇಲ್ಪಟ್ಟವರು ಮತದಾರರ ಸಂಖ್ಯೆಯಾಗಲಿದೆ. ಸಣ್ಣ ಮಗವಿನಿಂದ ಹಿಡಿದು ವ್ಯಕ್ತಿ ಇರುವವರಿಗೆ ಜನಸಂಖ್ಯೆಯಾಗಲಿದೆ. ಆದ್ದರಿಂದ ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು. ಅಲ್ಲದೇ ಲೋಕಸಭಾ ಸಂಸದರಿಗೆ ಶಾಸಕರಿಗೆ ನೀಡುವಷ್ಟು ಬೆಲೆ ಇರುವುದಿಲ್ಲ. ವಿಧಾನಸಭಾ ಚುನಾವಣೆಗೆ ಇರುವಷ್ಟು ಹುಮ್ಮಸ್ಸು ಲೋಕಸಭಾ ಚುನಾವಣೆಗೆ ಇರುವುದಿಲ್ಲ. ವಿಧಾನಸಭಾ ಕ್ಷೇತ್ರಗಳು 2-3 ಲಕ್ಷ ಮತದಾರ ಸಂಖ್ಯೆಯನ್ನು ಆಧಾರಿಸಿ, ರಚನೆಯಾಗಿದೆ. ವಿಧಾನಸಭಾ ಕ್ಷೇತ್ರಗಳು ಹೆಚ್ಚಾಗಲಿ ಆದರೆ ಸದ್ಯ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರ ಬದಲಾಗಿ 10-12 ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರವಾಗಬೇಕು. 850 ಲೋಕಸಭಾ ಕ್ಷೇತ್ರವಾದರೆ ಲೋಕಸಭಾದ ಸಂಸತ್ ಅಧಿವೇಶನ ಕೋಲಾಹಲ, ಗದ್ದಲ, ವಿಪರೀತ ಶಬ್ದವಾಗಲಿದೆ. ಲೋಕಸಭಾ ಸ್ಪೀಕರ್ ಗೆ ತಲೆನೋವು ಕಟ್ಟಿಟ್ಟ ಬುತ್ತಿ. ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು ವಿನಃ ಹೆಚ್ಚಾಗಬಾರದು.

ರಾಜ್ಯ ಮಂತ್ರಿ ಮಂಡಲ ಸಂಪೂರ್ಣ ಬದಲಾಗಬೇಕು

ಎಲ್ಲರೂ ಯುದ್ಧ ಕ್ಕಿಂತ ಹಾರ್ಮುಜ್ ಜಲಸಂಧಿ ಗುಂಗಿನಲ್ಲಿ ಇದ್ದಾರೆ. ಜಲಸಂಧಿ ಓಪನ್ ಆಗುತ್ತೋ ಖಾಯಂ ಮುಚ್ಚುತೋ ಗೊತ್ತಿಲ್ಲ. ಆದರೆ ತುಂಬಿದ ಹಡಗು ಬಂತೋ ಖಾಲಿ ಹಡಗು ಬಂತೋ ಅನ್ನೋದು ಯಾರು ಗಮನಿಸಿರುವುದಿಲ್ಲ. ಬೇಡಿಕೆ ತಕ್ಕಂತೆ ಪೂರೈಕೆ ಯಾವಾಗ ಬರುತ್ತೋ ಆವಾಗ ಸಮಸ್ಯೆಗೆ ಮುಕ್ತಿ. ಅಷ್ಟರಲ್ಲಿ ಕಚ್ಚಾತೈಲ ಬದಲಾಗಿ ಪರ್ಯಾಯ ಮಾರ್ಗ ಕಂಡು ಹಿಡಿಯಲು ಪ್ರಯತ್ನಿಸಬೇಕು. ನಮ್ಮದೊಂದು ಇರಲಿ. ಸಿಎಂ. ಡಿಸಿಎಂ ಸೇರಿದಂತೆ ಸಂಪೂರ್ಣ ಮಂತ್ರಿಮಂಡಲ ಸಂಪೂರ್ಣ ಬದಲಾಗಬೇಕು. ಈಗಿನ ಡಿಸಿಎಂ ಸಿಎಂ ಆಗಬೇಕು, ಈಗಿನ ಸಿಎಂ ಮಗ ಡಿಸಿಎಂ ಆಗಬೇಕು. 6-8 ಈಗಿನ ಹಳೆ ಸಚಿವರು ಸೇರಿದಂತೆ ಉಳಿದ ಹೊಸ ಮುಖಗಳು ಮಂತ್ರಿಗಳಾಗಬೇಕು. ಅದಕ್ಕೆ ಕಾಲವು ಕೂಡಿ ಬರಲಿದೆಯಾ ಎಂಬುದು ಕಾದು ನೋಡಬೇಕು. ಏಕೆಂದರೆ ದಿನನಿತ್ಯ ಎಚ್.ಓ.ಡಿ ಕುರ್ಚಿಗಾಗಿ ಕುಸ್ತಿ ಆಡುವುದನ್ನು ಸ್ನಾತಕೋತ್ತರ ಪದವಿ ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರಲ್ಲಿ ನೋಡಿದ್ದೀನಿ. ನಂತರ ಕುರ್ಚಿ ಅದಲು ಬದಲು ಆಗಿ ಇಬ್ಬರು ಒಂದೇ ಎಳೆನೀರು ಸೇವಿಸಿ ಖುಷಿಪಟ್ಟರು. ಪ್ರತಿಯೊಂದಕ್ಕೂ ಕುರ್ಚಿಗೆ ಬೆಲೆ ಇದೆ. ಆ ಯೋಗ್ಯ ಕೂಡಿ ಬರುವರಿಗೆ ಬಂದೆ ಬರುತ್ತದೆ. ಅದಕ್ಕೆ ತಾಳ್ಮೆ ಸಮಾಧಾನ ಬೇಕು. ಎಲ್ಲರೂ ಮಂತ್ರಿ ಆಗಬೇಕು ಅನ್ನುವರು ಆಗೋಕೆ ಆಗುತ್ತಾ 34 ರಾಜ್ಯ ಮಂತ್ರಿಗಳಾಗಬಹುದು ಅಷ್ಟೇ. ಕೇಂದ್ರ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ರಾಜ್ಯ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ಜಿಲ್ಲಾ ಉಸ್ತುವಾರಿ ಯಾಕೆ? ರಾಜ್ಯ ಮಂತ್ರಿ ಎಂದಮೇಲೆ ಎಲ್ಲಾ ಜಿಲ್ಲೆಗೆ ಸಂಬಂಧ ಇರುತ್ತದೆ. 2020 ರಲ್ಲಿ ಮುಖ್ಯಮಂತ್ರಿ, ಸಚಿವರಾಗಿದ್ದವರು ಉತ್ತಮ ಕೆಲಸ ನಿರ್ವಹಿಸಿದರು. ಆಗ ಮುಖ್ಯಮಂತ್ರಿ ಸಚಿವಾಲಯ ಸೇರಿದಂತೆ ಎಲ್ಲ ಸಚಿವರು ಸಾರ್ವಜನಿಕ ಅರ್ಜಿಗೆ ಸ್ಪಂದಿಸುತ್ತಿದ್ದರು. ನಂತರ ಮತ್ತೆ ಬದಲಾಗಿ ಬಂದ ಮುಖ್ಯಮಂತ್ರಿಗಳ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಈಗ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಸರ್ಕಾರಿ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡುವುದಿಲ್ಲ. ಟೈಮ್ ಪಾಸ್ ಮಾಡುತ್ತಾ ಕಾಲಹರಣ ಮಾಡುತ್ತಾ ಸಾರ್ವಜನಿಕ ಅರ್ಜಿ ವಿಲೇವಾರಿ ಮಾಡದೇ ಫೇಲ್ ಆಗಿದ್ದಾರೆ. ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳಲ್ಲಿ ಎಕ್ಸಾಂ ಪ್ಯಾಟರ್ನ್ ಬಿಟ್ಟರೆ, ಸಾಮಾಜಿಕ ಕಳಕಳಿಯಿಂದ ಬಂದವರಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಅಧಿಕಾರ ಸಿಗಬೇಕು ಎಂದರೆ ಸಮಯ ಕೂಡಿ ಬರಬೇಕು. ಎಲ್ಲರಿಗೂ ಹೊಸ ಮುಖ ಆಡಳಿತ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇರುತ್ತದೆ.

ವೀರೇಶ ಧೂಪದಮಠ
Read More

1 Apr 2026

// //

ಮಾತೃ ಭಾಷೆ ಸಹಾಯವಿಲ್ಲದೆ ಇನ್ನೊಂದು ಭಾಷೆ ಕಲಿಯುವುದು ಅಸಾಧ್ಯ












ಮಾತೃಭಾಷೆಯ ಸಹಾಯವಿಲ್ಲದೆ ಯಾವುದೇ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ. ಕನಸುಗಳು ಬೀಳುತ್ತವೆ ಅದು ಮಾತೃಭಾಷೆಯಲ್ಲಿ ಮಾತ್ರ. ಜಗತ್ತಿನ ಯಾವುದೇ ಭಾಷೆ ಕಲಿಯಿರಿ ಅದು ಮಾತೃ ಭಾಷೆಯಿಂದ ಮಾತ್ರ ಇಲ್ಲದಿದ್ದರೆ ಭಾಷೆಯನ್ನು ಕಲಿಯುವುದು ಕಷ್ಟವಾಗಲಿದೆ. ಅದಕ್ಕಾಗಿ ಆಯಾ ಪ್ರದೇಶದ ಸರ್ಕಾರಗಳು ಮಾತೃ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಆಮೇಲೆ ಬೇರೊಂದು ಭಾಷೆಗೆ ಒತ್ತು ನೀಡಬೇಕು. ಜನ್ಮ ನೀಡಿದ ತಾಯಿ ಭಾಷೆಯೋ ಮಾತೃ ಭಾಷೆಯಾಗಲಿದೆ. ಆ ಮಾತೃ ಭಾಷೆಯಿಂದ ಇನ್ನಿತರ ಭಾಷೆಯನ್ನು ಕಲಿಯಲು ರಹದಾರಿ ಅಂತಾನೇ ಹೇಳಬಹುದು. ಕನ್ನಡ ಭಾಷೆಯ ಶಬ್ದಗಳು ಗೊತ್ತಿದ್ರೆ ಮಾತ್ರ ಇನ್ನೊಂದು ಭಾಷೆಯ ಶಬ್ದಗಳು ಅರ್ಥ ಮಾಡಿಕೊಳ್ಳಲು ಸಾಧ್ಯ. ಮಾತೃ ಭಾಷೆಯ ಶಬ್ದಗಳು ಗೊತ್ತಿಲ್ಲ ಎಂದಾಗ ಇನ್ನೊಂದು ಭಾಷೆ ಹೇಗೆ ಕಲಿಯುತ್ತಾರೆ. ಅದಕ್ಕಾಗಿ ಮಾತೃ ಭಾಷೆಗೆ ಒತ್ತು ನೀಡುವುದಲ್ಲದೇ, ಇನ್ನೊಂದು ಭಾಷೆಯನ್ನು ಕಲಿಯಲು ಸಹ ಮಾತೃ ಭಾಷೆ ಅತ್ಯಗತ್ಯ.

ನೀವು ಶಿಕ್ಷಣವನ್ನು ಪ್ರೀತಿಸಬೇಕು

ಶಿಕ್ಷಣವನ್ನು ಕಷ್ಟಪಟ್ಟು ಅಧ್ಯಯನ ಮಾಡುವ ಮೂಲಕ ಕಲಿಯಬಾರದು, ಬದಲಿಗೆ ಪ್ರೀತಿಯಿಂದ ಕಲಿಯುವ ಮೂಲಕ ಕಲಿಯಬೇಕು. ಅದು ಮನಸ್ಸಿನ ಆಳದಿಂದ ಬರಬೇಕು. ಒಂದು ಶಾಲೆಯಲ್ಲಿ 68 ವಿದ್ಯಾರ್ಥಿಗಳಿದ್ದರು. ಆ 68 ವಿದ್ಯಾರ್ಥಿಗಳಲ್ಲಿ, ಕೇವಲ 5 ಹುಡುಗರು ಮತ್ತು 5 ಹುಡುಗಿಯರು ಬುದ್ಧಿವಂತರಾಗಿ ಎದ್ದು ಕಾಣುತ್ತಿದ್ದರು. ಆದರೆ ಅವರು ತಮ್ಮ ಶಿಕ್ಷಣವನ್ನು ಮುಗಿಸಿದ ತಕ್ಷಣ, ಆ 10 ವಿದ್ಯಾರ್ಥಿಗಳು ಮೂರ್ಖರಂತೆ ಕಣ್ಮರೆಯಾದರು. ಉಳಿದ 58 ವಿದ್ಯಾರ್ಥಿಗಳು ಏನನ್ನೂ ಸಾಧಿಸದಿದ್ದರೂ, ಜನರ ಮುಂದೆ ಆರಾಮವಾಗಿ ಓಡಾಡುತ್ತಿದ್ದಾರೆ. ನಾನು ಇಲ್ಲಿ ಹೇಳುವುದೇನೆಂದರೆ, ಯಾರೂ ತಾವು ಎಷ್ಟು ಬುದ್ಧಿವಂತರು ಎಂದು ತೋರಿಸಿಕೊಳ್ಳಬಾರದು, ಏಕೆಂದರೆ ಇದು ಹೆಚ್ಚಿನ ನಷ್ಟಗಳಿಗೆ ಕಾರಣವಾಗುತ್ತದೆ. ಶಿಕ್ಷಣ ಯಾರೊಬ್ಬರ ಆಸ್ತಿಯಲ್ಲ, ಕಷ್ಟಪಟ್ಟು ಓದುವ ಬದಲು, ಒಬ್ಬರು ಸಂತೋಷದಿಂದ ಅಧ್ಯಯನ ಮಾಡಬೇಕು. ಆಗ ಶಿಕ್ಷಣದ ಉದ್ದೇಶ ಸುಲಭವಾಗಿ ಈಡೇರುತ್ತದೆ.

ವೀರೇಶ ಧೂಪದಮಠ
Read More