17 Jun 2026

// //

ಮಳೆಯೆಂಬ ಚಿಂಚನ ಮೂಡುವಂತಾಗಲಿ



ಮಳೆಯೆಂಬ ಚಿಂಚನ ಮೂಡುವಂತಾಗಲಿ

ಬಿಸಿಲಿನ ಝಳಕ್ಕೆ ಅಕ್ಷರಶಃ ಜನರು ಹೈರಾಣರಾಗಿದ್ದಾರೆ, ಅಂತ ಹೇಳಬಹುದು. ಮಳೆ ಎಂಬ ಹನಿ ಹನಿ ನೀರಿಗಾಗಿ ಪ್ರತಿಯೊಬ್ಬರು ಹಂಬಲಿಸಿದ್ದಾರೆ. ಒಂದು ವರ್ಷಕ್ಕೆ ಸುರಿಯಬೇಕಿದ್ದ ಮಳೆ. ಒಂದೇ ದಿನದಲ್ಲಿ ಸುರಿದು ಬಿಡುತ್ತಂತೆ. ಆದರೆ ಮಳೆಯ ಆಗಮಾನ ನಿರ್ಗಮನ ಬಗ್ಗೆ ವಿಜ್ಞಾನಿಗಳಿಗೂ ಮಂಡೆ ಬಿಸಿಯಾಗಿದೆ. ಎಲ್ಲೆಲ್ಲೂ ಮಳೆ ಮಾಪನ ಸ್ಯಾಟಲೈಟ್ ಅಳವಡಿಸಿದ್ದಾರೆ. ಆ ಎಲ್ಲ ಮಳೆ ಮುನ್ಸೂಚನೆ ಹುಸಿಯಾಗಿದೆ. ಆದರೆ ಒಂದು ಮಾತ್ರ ನಿಜ ಮಳೆ ಬಂದೇ ಬರುತ್ತದೆ. ಮನುಷ್ಯನ ಮನಸ್ಥಿತಿ ಈಗ ಬಿಸಿಲಿನ ಬೇಗೆ ಸಾಕು ಮಳೆ ಬೇಕು ಎಂಬಂತಿದೆ. ಪ್ರಕೃತಿ ಕಾಲಕಾಲಕ್ಕೆ ಅಂದ್ರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಏನೋ ಪ್ರಭಾವ ಬೀರಬೇಕು. ಅದನ್ನು ಖಂಡಿತ ಬಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ತಡವಾಗಿ ಬೀರಬಹುದು. ಪ್ರಕೃತಿ ಮತ್ತು ಧಾರ್ಮಿಕ ನಂಬಿಕೆಗೆ ಸ್ಪಷ್ಟವಾದ ಸಂಪರ್ಕ ಕೊಂಡಿಯಿದೆ. ಮಳೆ ತಡವಾಗಿದ್ದರೂ ತನ್ನ ಪ್ರಭಾವ ಬೀರುವುದು ಖಚಿತ. ಹೀಗೆ ಸುಮಾರು 4-5 ತಿಂಗಳಿಂದ ಬಿಸಿಲಿನ ಝಳಕ್ಕೆ ಅಕ್ಷರಶಃ ಬಸವಳಿದಿರುವ ಜನರ ಕೂಗಿಗೆ ವರುಣ ಕೃಪೆ ತೋರುವಂತಾಗಲಿ. ಭೂಮಿ, ಅಗ್ನಿ, ವಾಯು, ಜಲ, ಆಕಾಶ ಎಂಬ ಐದು ಪಂಚಭೂತಗಳು ದೇವರೆಂದು ಪೂಜಿಸುತ್ತಾರೆ. ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ಎಷ್ಟು ಮಹತ್ವವಿದೆ. ಅಷ್ಟೇ ಮಹತ್ವ ಪಂಚಭೂತಗಳಿಗೂ ಇದೆ. ಬಿಸಿಲಿನ ಝಳಕ್ಕೆ ಬಸವಳಿದ ನಾಡಿನ ಜನಕ್ಕೆ ಮಳೆಯೆಂಬ ಚಿಂಚನ ಮೂಡುವಂತಾಗಲಿ.

ವೀರೇಶ ಧೂಪದಮಠ
Read More

12 Jun 2026

// //

ಸಿಎಂ ಸೇರಿದಂತೆ ಪ್ರತಿಯೊಬ್ಬರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ



ಸಿಎಂ ಸೇರಿದಂತೆ ಪ್ರತಿಯೊಬ್ಬರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ

ಎಲ್ ನಿನೊ (El Nino) ಎಂಬ ಜಿಜ್ಞಾಸೆ ಅಥವಾ ಹುಚ್ಚು ಕಲ್ಪನೆ ಹುಟ್ಟಿಕೊಂಡಿರುವುದರಿಂದ ಮಳೆ ಬರುವುದಿಲ್ಲ ಮಳೆ ಅಭಾವ ಎಂಬ ಭಾವನೆ ಹೋಗಬೇಕಾದರೆ ನಾಡಿನ ದೊರೆ ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಯೊಬ್ಬರು ಮಳೆಗಾಗಿ ಪ್ರಾರ್ಥಿಸಬೇಕು. ಬಹುತೇಕ ರೈತರು ಮಳೆಯಾಶ್ರಿತ ಕೃಷಿ ಭೂಮಿಯನ್ನು ನೆಚ್ಚಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಒಂದು ರಾಜ್ಯ, ಒಂದು ದೇಶ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಮಳೆ ಎಂಬ ಬಲ ಬೇಕೇ ಬೇಕು. ಈಗ ಒಂದು ಕ್ರಿಕೇಟ್ ಮ್ಯಾಚ್ ತಂಡ ಗೆಲ್ಲಬೇಕಾದರೆ ಹೇಗೆ ದೇವರಲ್ಲಿ ಹೋಮ ಹವನ ಯಜ್ಞ, ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೇ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ವಾಡಿಕೆಯಂತೆ ಮಳೆ ನೀರು ಸುರಿದರೆ ರೈತರಿಗೆ ಅನುಕೂಲ ಮಾತ್ರವಲ್ಲ. ಹೆಚ್ಚಾಗಿ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ. ಕರ್ನಾಟಕದ ರಾಜ್ಯದ ಎಲ್ಲ ನದಿಗಳು ತುಂಬಿ ಹರಿಯಬೇಕು. ಕರ್ನಾಟಕ ಮಲೆನಾಡು ಪ್ರದೇಶವಾಗಬೇಕು. ಬಹುತೇಕ ತಾಲ್ಲೂಕು, ನಗರಗಳಿಗೆ ಕುಡಿಯುವ ನೀರಿನ ಕೊರತೆ ನೀಗಬೇಕು ಮತ್ತು ರಾಜ್ಯದ ಆರ್ಥಿಕ ಶಕ್ತಿ ಬಲ. ರೈತರು ಖುಷಿಯಾಗಿ ಇರಬೇಕು ಎಂದರೆ ಕರ್ನಾಟಕ ರಾಜ್ಯದ ನಾಡಿನ ದೊರೆ ಮುಖ್ಯಮಂತ್ರಿ ಸೇರಿದಂತೆ ನಾಡಿನ ಜನ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಅದೊಂದು ಎಲ್ಲ ಸಮಸ್ಯೆಗಳಿಗೆ ದೊಡ್ಡ ಪರಿಹಾರ. ಹಾಗಾಗಿ ಎಲ್ ನಿನೊ (El Nino) ಓಡಿಸೋಣ. ನಾಡಿನ ದೊರೆ ಮುಖ್ಯಮಂತ್ರಿಗಳು ಸೇರಿದಂತೆ ನಾಡಿನ ಪ್ರತಿಯೊಬ್ಬರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ.

ವೀರೇಶ ಧೂಪದಮಠ
Read More

11 Jun 2026

// //

ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು



ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು

ಶಾಸಕರಾದವರು ತಮ್ಮ ಕ್ಷೇತ್ರವನ್ನೇ ಸಲೀಸಾಗಿ ಗೆಲ್ಲದವರು. ಇನ್ನು 8-10 ಶಾಸಕರನ್ನು ಗೆಲ್ಲಿಸಲು ಸಾಧ್ಯವೇ?. ಸುಮ್ನೆ ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು, ಇಲ್ಲದಿದ್ದರೇ ಅದು ಸಿಗಲ್ಲ. ಅಷ್ಟು ಕಿರಿಕಿರಿಯಾದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರಲಿ. ಮಂತ್ರಿ ಸ್ಥಾನ 136 ಶಾಸಕರಲ್ಲಿ ಯಾರಿಗಾದರೂ ಒಬ್ಬರ ಪಾಲಾಗುವುದು ಖಚಿತ ಬಿಟ್ರೆ ಮತ್ತೆ ಏನೇನು ಇಲ್ಲ. 31 ಜಿಲ್ಲೆಗಳನ್ನು ಓಡಾಡುವ ವ್ಯಕ್ತಿ ಮಂತ್ರಿಯಾಗಲಿ. ಮಾಜಿ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆ ಬಗೆಹರಿಸಬೇಕು. ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ. ಹೀಗೆ ಮೈಸೂರು ಮಗ, ಮೈಸೂರು ಅಳಿಯನ ಬಗ್ಗೆ ಖುಷಿಯಿದೆ, ಇಬ್ಬರು ಒಂದೇ ಭಾಗದವರು. ಒಬ್ಬರು ಕಾಂಗ್ರೆಸ್ ಹೈಕಮಾಂಡ್ ಮೆಂಬರ್ ಆಗಿದ್ದಾರೆ. ಇನ್ನೊಬ್ಬರು ಕರ್ನಾಟಕದ ಸಿಎಂ ಆಗಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದೇ ಎಟ್ಟಿಗೆ 6 ಯುವ ಗ್ಯಾರಂಟಿ ಮತ್ತು ಕರ್ನಾಟಕದಲ್ಲಿ ಜನಸಾಮಾನ್ಯರ ಅಹವಾಲು ಆಲಿಕೆಗೆ, ಎನ್‌ಆರ್‌ಐಗೆ 2 ಹೊಸ ಸಚಿವಾಲಯ ಘೋಷಣೆಯಾಗಿದ್ದು ಖುಷಿ ವಿಚಾರ ಶೀಘ್ರ ಜನರ ಸಮಸ್ಯೆ ಬಗೆಹರಿದರೆ ಸಾಕು ಅದೇ ದೊಡ್ಡ ಸಾಧನೆ. ಮತ್ತೆ ಇದೇ ವಿಷಯ ಇಟ್ಟುಕೊಂಡು ಆಗಾಗ ಪ್ರಧಾನಮಂತ್ರಿಗಳು ಕಾಂಗ್ರೆಸ್, ಕರ್ನಾಟಕ, ಕರ್ನಾಟಕ ಸರ್ಕಾರ ಎಂಬ ಪದವನ್ನು ಎತ್ತಿ ಕಾಮಿಡಿ ಮಾಡುವುದು ಸಹಜ. ಅದನ್ನು ಯಾರೂ ಸಿರಿಯಸ್ ಆಗಿ ತಗೊಳ್ಳಲ್ಲ. ಬದಲಾಗಿ ನಗಬಹುದು ಹೊರತು ಗಂಭೀರತೆ ಕಾಣಸಿಗದು.

ವೀರೇಶ ಧೂಪದಮಠ
Read More

6 Jun 2026

// //

ಹು-ಧಾ ಪಾಲಿಕೆ ಆಡಳಿತ ಮಂಡಳಿ ವಿಸರ್ಜಿಸಿಯಾದರೂ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಲಿ?



ಹು-ಧಾ ಪಾಲಿಕೆ ಆಡಳಿತ ಮಂಡಳಿ ವಿಸರ್ಜಿಸಿಯಾದರೂ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಲಿ?

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಮಾಡಲು ಘನವೆತ್ತ ರಾಜ್ಯಪಾಲರು ಎರಡು ಷರತ್ತು ಬದ್ಧ ಅನುಮೋದನೆ ನೀಡಿದ್ದಾರೆ. ಈ ಶ್ರೇಯಸ್ಸು ಧಾರವಾಡಿಗರ ಗಟ್ಟಿ ನಿಲುವು ಮತ್ತು ಹುಬ್ಬಳ್ಳಿಗರ ಪರೋಕ್ಷ ಬೆಂಬಲ. ಜೊತೆಗೆ 99.98% ಜನರ ಭರ್ಜರಿ ಬೆಂಬಲವೇ ಕಾರಣ. ಆ ಎರಡು ಅಣಿ ಒತ್ತಡಕ್ಕೆ ಮಣಿದು 100ಕ್ಕೆ 100 ರಷ್ಟ್ರು ಬೆಂಬಲ ಆಗಿದೆ. ಘನವೆತ್ತ ರಾಜ್ಯಪಾಲರು ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಪಾಲಿಕೆ ಗಡಿ ಗುರುತಿಸಬೇಕು ಮತ್ತು ಪ್ರಸ್ತುತ ಬಾಕಿಯಿರುವ ಹಾಲಿ ಪಾಲಿಕೆ ಸದಸ್ಯರ ಅವಧಿ ಮುಗಿದ ಮೇಲೆ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಒಂದೇ ಷರತ್ತು ಏನೆಂದರೆ, ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಡಿ.31, 2025 ರೊಳಗೆ ಗಡಿ ವಿಭಜಿಸುವ ಪ್ರಕ್ರಿಯೆ ಮುಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಗಿ ಪ್ರತ್ಯೇಕ ಪಾಲಿಕೆ ವಿಭಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಜನಗಣತಿ ಆದೇಶ ಮಾಡುವ ಮೊದಲೇ ಅಂದರೆ 11 ತಿಂಗಳಿಗಿಂತ ಹೆಚ್ಚು ಕಾಲ ರಾಜ್ಯಪಾಲರ ಕಚೇರಿಗೆ ಕಳಿಸಲಾಗಿದೆ. ಹಾಗಾಗಿ ಒಂದು ಷರತ್ತು ಅನ್ವಯಿಸುವುದಿಲ್ಲ. ಮತ್ತೊಂದು ಷರತ್ತು ಏನೆಂದರೆ ಪಾಲಿಕೆ ಸದಸ್ಯರ ಅಧಿಕಾರದ ಅವಧಿ ಮುಗಿದ ನಂತರ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಅಲ್ಲಿಯವರೆಗೆ ಕಾಯುವ ಬದಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ವಿಶೇಷಾಧಿಕಾರ ಬಳಸಿ, ಪಾಲಿಕೆ ವಿಸರ್ಜಿಸಿ ಪ್ರತ್ಯೇಕ ಪಾಲಿಕೆ ಮುಖಾಂತರ ಹೊಸ ಚುನಾವಣೆ ನಡೆಸಬೇಕು. ಇಲ್ಲವೇ ಪಾಲಿಕೆ ಸದಸ್ಯರನ್ನು ಪಾಲಿಕೆ ಗಡಿರೇಖೆಯನ್ವಯ ಹಸ್ತಾಂತರಿಸಿ, ಹೊಸ ಪಾಲಿಕೆಗೆ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಒಟ್ಟಿನಲ್ಲಿ ಹೇಗಾದರೂ ಪ್ರತ್ಯೇಕ ಧಾರವಾಡ ಪಾಲಿಕೆ ಅಸ್ತಿತ್ವಕ್ಕೆ ಬರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

ವೀರೇಶ ಧೂಪದಮಠ
Read More

28 May 2026

// //

ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯ ರಾಜಕಾರಣಿ ಅವಶ್ಯಕ



ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯ ರಾಜಕಾರಣಿ ಅವಶ್ಯಕ

ಅನುಭವಿ ಹಿರಿಯ ರಾಜಕಾರಣಿ ಅದರಲ್ಲಿ ಮಾಜಿ ಮುಖ್ಯಮಂತ್ರಿಗಳ ಕೊಡುಗೆ ರಾಷ್ಟ್ರ ರಾಜಕಾರಣಕ್ಕೆ ಅವಶ್ಯಕತೆ ಇದೆ. ಮುಖ್ಯಮಂತ್ರಿ ಆದವರು ರಾಜ್ಯದ ಮಂತ್ರಿ ಸ್ಥಾನ ಸೇರಿದಂತೆ ಇನ್ನಿತರ ಮುಖ್ಯಮಂತ್ರಿ ಸ್ಥಾನಕ್ಕಿಂತ ಸಣ್ಣ ಹುದ್ದೆ ಪಡೆಯಲು ಬರುವುದಿಲ್ಲ ಅಥವಾ ಒಂದೇ ವೇಳೆ ಪಡೆದರು ಆ ಮುಖ್ಯಮಂತ್ರಿ ಹುದ್ದೆಗೆ ಗೌರವ ತಕ್ಕುದಲ್ಲ. ಬದಲಾಗಿ ಕೇಂದ್ರ ಮಂತ್ರಿಯಾಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಸತತ ಅಧಿಕಾರಕ್ಕೆ ಬರಲು ಕಾರಣ ಒಳ್ಳೆ ವ್ಯಕ್ತಿ ನೋಡಿ, ಜನ ವೋಟು ಹಾಕಿದ್ದಾರೆ. ಮುಂದೊಂದು ದಿನ ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಮಹಾ ವಲಸೆ ಹೋದವರು ವಾಪಾಸ್ ಮಾತೃ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ. ಆಗ ಮತ್ತೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದೊಂದು ದಿನ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಬಹುದು. ಹಾಗಾಗಿ ಹಿರಿಯ ಅನುಭವಿ, ಮಾಜಿ ಮುಖ್ಯಮಂತ್ರಿಗಳು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ಒಮ್ಮೆ ಮುಖ್ಯಮಂತ್ರಿಯಾದರೆ ಮುಗಿಯಿತು. ವಾಪಾಸ್ ಮುಖ್ಯಮಂತ್ರಿ ಆಗಬೇಕು. ಆದರೆ ಅದು ಅವಶ್ಯಕತೆ ಇರುವುದಿಲ್ಲ. ಪದೇ ಪದೇ ಒಂದೇ ಹುದ್ದೆಯಲ್ಲಿ ಮುಂದುವರಿದರೆ ಜನರಿಂದ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ. ಆದ್ದರಿಂದ ರಾಷ್ಟ್ರ ರಾಜಕಾರಣ ಕಡೆ ಮುಖ ಮಾಡಬೇಕು ಅದೇ ಸರಿಯಾದ ನಿರ್ಧಾರ. ಇದೇಕೆ ಎಂದರೆ ರಾಹುಲ್ ಗಾಂಧಿಯವರು ರಾಜ್ಯಸಭೆ ಮೂಲಕ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚಿಸಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ರಾಜ್ಯ ರಾಜಕಾರಣ ಸಾಕು. ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಹೋಗುವುದು ಒಳ್ಳೆಯದು. ಅದರ ಜೊತೆಗೆ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ರಾಜ್ಯಸಭೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಮನವೊಲಿಸಬೇಕು. ಅನುಭವಿ ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಆಲೋಚನೆ ಅಥವಾ ಚಿಂತನೆಗಳಗಿಂತ. ರಾಷ್ಟ್ರ ರಾಜಕಾರಣದತ್ತ ಗಮನಹರಿಸಬೇಕು ಅದೇ ಒಳ್ಳೆಯ ಬೆಳವಣಿಗೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು.

ವೀರೇಶ ಧೂಪದಮಠ
Read More

2 May 2026

// //

ಬೆಂಗಳೂರು ನಗರ ಕರ್ನಾಟಕದ ಉತ್ತರ ಭಾಗಕ್ಕೆ ಆಸರೆ



ಬೆಂಗಳೂರು ನಗರ ಕರ್ನಾಟಕದ ಉತ್ತರ ಭಾಗಕ್ಕೆ ಆಸರೆ

ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಸರಿ ಸಮಾನಾಗಿ ರಾಜ್ಯದ ಯಾವುದೇ ನಗರಗಳು ಇಲ್ಲ. ರಾಜ್ಯದ ಯಾವುದೇ ನಗರವನ್ನು ಬೆಂಗಳೂರು ನಗರಕ್ಕೆ ಹೋಲಿಕೆ ಮಾಡುವುದು ತಪ್ಪು. ಏಕೆಂದರೆ ಬೆಂಗಳೂರು ಒಂದರಲ್ಲಿ 32 ವಿಧಾನಸಭಾ ಕ್ಷೇತ್ರಗಳು 4 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 5 ಮಹಾನಗರ ಪಾಲಿಕೆಯನ್ನೊಳಗೊಂಡ ಗ್ರೇಟರ್ ಬೆಂಗಳೂರು ಇದೆ. ಅಲ್ಲದೇ 1.5 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಕರ್ನಾಟಕದ ಉತ್ತರ ಭಾಗದ ಬಹಳಷ್ಟು ಜನಕ್ಕೆ ಉದ್ಯೋಗ ಒದಗಿಸಿದ ಕೀರ್ತಿ ಬೆಂಗಳೂರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಬೆಂಗಳೂರು ನಗರ ನಿರ್ವಹಣೆ ಮಾಡುವುದು ಕಷ್ಟವಾದರೂ ತ್ವರಿತ ರೀತಿಯಲ್ಲಿ ವ್ಯವಸ್ಥೆ ಸರಿ ಪಡಿಸಲಾಗುತ್ತಿದೆ. ಬೃಹತ್ ಮಹಾನಗರ ಪಾಲಿಕೆಯಾಗಲು 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರಬೇಕು. ಎರಡು ವರ್ಷದ ಹಿಂದೆಯಷ್ಟೇ ಹುಬ್ಬಳ್ಳಿ - ಧಾರವಾಡ ಬೇರ್ಪಡಿಸಿ, ಎರಡು ನಗರಗಳನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಸರ್ಕಾರ ನಿರ್ಣಯ ತೆಗೆದುಕೊಂಡಿತು. ಆ ಪ್ರಕ್ರಿಯೆ ರಾಜ್ಯಪಾಲರ ಬಳಿ ಬಾಕಿ ಇದೆ. ಮೊನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಹುಬ್ಬಳ್ಳಿ ಧಾರವಾಡ ಬೃಹತ್ ಮಹಾನಗರ ಪಾಲಿಕೆ ಮಾಡಲು ಏಕಪಕ್ಷೀಯವಾಗಿ ಠರಾವು ಪಾಸು ಮಾಡಿದ್ದಾರೆ. ರಾಜ್ಯಪಾಲರ ಬಳಿಯಿರುವ ಪೈಲ್ ವಿಲೇವಾರಿಯಾಗದೆ ಬಾಕಿ‌ ಇದೆ. ಇಂತಹ ಸನ್ನಿವೇಶದಲ್ಲಿ ಠರಾವು ಬೇಕಾ. ಇದರಿಂದ ಎರಡು ನಗರಗಳ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಗೆ ಆಗಾಗ ಸಮಸ್ಯೆಯಾಗುವುದು ಪಕ್ಕ. ಧಾರವಾಡ ಅಥವಾ ಹುಬ್ಬಳ್ಳಿಯವರು ಮೇಯರ್ ಆಗಬೇಕಿತ್ತು ಆಗಿಲ್ಲ ಮತ್ತು ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಅಭಿವೃದ್ಧಿ ಬಗ್ಗೆ ಆಕ್ಷೇಪಣೆ ದಿನನಿತ್ಯ ನೋಡುವುದು ಕಟ್ಟಿಟ್ಟ ಬುತ್ತಿ. ಅದು ಹೋಗ್ಲಿ ಬೆಂಗಳೂರು ನಗರಕ್ಕೆ ಯಾವುದೇ ನಗರವನ್ನು ಹೋಲಿಕೆ ಮಾಡಬೇಡಿ. 32 ವಿಧಾನಸಭಾ ಕ್ಷೇತ್ರ ಎಲ್ಲಿ 4 ವಿಧಾನಸಭಾ ಕ್ಷೇತ್ರ ಎಲ್ಲಿ ಎಂಬುದನ್ನು ಗಮನಿಸಬೇಕು ಅಷ್ಟೇ.

ವೀರೇಶ ಧೂಪದಮಠ
Read More

21 Apr 2026

// //

ಅಧಿಕಾರಕ್ಕಿಂತ ಜನರಿಗೆ ನೆಮ್ಮದಿ ಸಿಗಬೇಕು



ಅಧಿಕಾರಕ್ಕಿಂತ ಜನರಿಗೆ ನೆಮ್ಮದಿ ಸಿಗಬೇಕು

ಮನುಷ್ಯನಲ್ಲಿ ಎರಡು ಮನಸ್ಥಿತಿ ಇರುತ್ತೆ, ಒಂದು ಕಾಂಗ್ರೆಸ್ ಮನಸ್ಥಿತಿ ಇನ್ನೊಂದು ಬಿಜೆಪಿ ಮನಸ್ಥಿತಿ. ಕಾಂಗ್ರೆಸ್ ಅಥವಾ ಬಿಜೆಪಿ ಏನೇ ಮಾಡಿದರೂ ಆ ಮನಸ್ಥಿತಿಗಳಿಗೆ ಹಿತ ಎನ್ನಿಸುತ್ತದೆ. ಅದು ಸರಿ ಇರಲಿ ತಪ್ಪು ಇರಲಿ ಒಟ್ಟಿನಲ್ಲಿ ಅಂತಹ ಮನಸ್ಥಿತಿಗಳನ್ನು ನಿಯಂತ್ರಣ ಮಾಡುವುದು ಕಷ್ಟವೇ ಸರಿ. ಯಾವಾಗ ಮನಸ್ಥಿತಿಗಳು ಬದಲಾಗುತ್ತದೆ ಎಂದರೆ ಬೇಸತ್ತು ಹೋದಾಗ ಉದಾ: 2008 ರಿಂದ 2013 ರಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ಐದು ವರ್ಷಗಳಲ್ಲಿ 3 ಜನ ಮುಖ್ಯಮಂತ್ರಿಯಾದರು. ಈ ಐದು ವರ್ಷಗಳಲ್ಲಿ ಒಳ ಜಗಳ, ಕಿತ್ತಾಟ, ದಿನಕ್ಕೊಂದು ಹೇಳಿಕೆಗಳು ಒಂದು ರೀತಿಯಲ್ಲಿ ಹುಚ್ಚಾಟವನ್ನು ದಿನನಿತ್ಯ ನೋಡಿದ ಸಾರ್ವಜನಿಕರು ಬೇಸತ್ತು ಸರ್ಕಾರ ಬದಲಾವಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ ಎನ್ನಿಸುತ್ತದೆ. ಈ ರಾಜಕಾರಣಿಗಳಿಗೆ ಅಧಿಕಾರ ಬೇಕಾಗಿರುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ಬೇಕಾಗಿರುತ್ತದೆ. ರಾಜಕಾರಣಿಗೆ ಅಧಿಕಾರ ಸಿಗಲ್ಲ, ಸಾರ್ವಜನಿಕರಿಗೆ ನೆಮ್ಮದಿ ಸಿಗಲ್ಲ ಜೊತೆಗೆ ಉತ್ತಮ ಆಡಳಿತ ಮತ್ತು ಅಧಿಕಾರಿಗಳ ಸ್ಪಂದನೆ ಸಿಗಲ್ಲ. ಈ ರೀತಿ ಸನ್ನಿವೇಶ ನಡೆದಾಗ ಪಕ್ಷದ ಮನಸ್ಥಿತಿ ಬದಲಾಯಿಸಿ, ಮೊದಲು ಮಂತ್ರಿಗಳನ್ನು ಸೋಲಿಸಿ, ನಂತರ ಕೆಲಸದ ಮಾಡದ ಶಾಸಕರನ ಮನೆಯ ಹಾದಿ ಹಿಡಿಸುತ್ತಾರೆ. ಹಾಗಾಗಿ ಎಷ್ಟು ದಿನ ಅಧಿಕಾರ ಸಿಗುತ್ತೋ ಅಷ್ಟು ದಿನ ಅಧಿಕಾರ ಅನುಭವಿ ಹಿಂದೆ ಸರಿಯಬೇಕು. ಅದನ್ನು ಬಿಟ್ಟು ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಕೊನೆವರೆಗೆ ಮಂತ್ರಿ ಸ್ಥಾನ ಕೊಡದಿದ್ದವನನ್ನು ಟೀಕಿಸುವುದು ಯಾವುದೇ ಅರ್ಥವಿರುವುದಿಲ್ಲ. ಎಲ್ಲೋ ಒಂದು ಕಡೆ ಮಂತ್ರಿ ಮಹಾಶಯರು ಸೋಲುತ್ತಾರೆ ಎಂಬ ಜಿಜ್ಞಾಸೆ ಹುಟ್ಟಿದೆ. ಸ್ವ ಇಚ್ಛೆಯಿಂದ ಮಂತ್ರಿ ಪದವಿ ತ್ಯಜಿಸಬೇಕು. ರಾಜಕಾರಣಿಗೆ ಅಧಿಕಾರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಜನರಿಗೆ ನೆಮ್ಮದಿ ಸಿಗಬೇಕು.

ವೀರೇಶ ಧೂಪದಮಠ
Read More