
ಇಂದಿನ ಜಗತ್ತು ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ನೀಡುತ್ತಿಲ್ಲ. ಅಂದರೆ ಡಾಕ್ಟರ್, ಲಾಯರ್, ಜರ್ನಲಿಸ್ಟ್ ಆಗಬೇಕಾದರೆ ಆಯಾ ಹುದ್ದೆಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಆದರೆ ಡಾಕ್ಟರ್ ಓದಿದೆ ಇರುವರು ಕ್ಲಿನಿಕ್ ಆರಂಭಿಸಿದ್ರೆ ರೋಗಿಯ ಕಥೆ ಏನಾಗಬಹುದು. ಒಬ್ಬ ವರದಿಗಾರ ಅಕ್ರಮ ಕ್ಲಿನಿಕ್ ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಆರಂಭಿಸಿದ್ದ ಆ ವರದಿಗಾರ ಆ ನಕಲಿ ವೈದ್ಯನ ಪ್ರಮಾಣಪತ್ರ ಕೇಳಿದ ಆದರೆ ಆ ನಕಲಿ ವೈದ್ಯ ವರದಿಗಾರನ ಪದವಿ ಪ್ರಮಾಣಪತ್ರ ಕೇಳಿದ ಅಲ್ಲಿಗೆ ಚಾಪ್ಟರ್ ಕ್ಲೋಸ್. ಇಂತಹ ಹತ್ತು ಹನ್ನೆರಡು ಘಟನೆಗಳು ಬೆಳಕಿಗೆ ಬರುತ್ತದೆ. ಆದರೂ ಏನೂ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಕಲಿಗಳ ಹಾವಳಿ ಹೆಚ್ಚಾಗಿದೆ ಅಥವಾ ನಡೆಯುತ್ತಿದೆ. ಆಯಾ ಹುದ್ದೆಗೆ ತಕ್ಕಂತೆ ಆಯಾ ಆಯಾ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಕೆಲಸ ಸಿಕ್ಕರು ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗ ಪಡೆಯಲು ರೋಸಿ ಹೋಗುವುದು ಶತಸಿದ್ಧ. ಖಾಸಗಿ ಕೆಲಸ ಬಿಡಿ ಇನ್ನು ರಾಜ್ಯ ಸರ್ಕಾರದ ಕೆಲಸದ ಕರೆಯೋಲೆ ಬಂದ್ ಆಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ಯಾವಾಗ ಅರ್ಜಿ ಆಹ್ವಾನಿಸಬಹುದೆಂದು ಒಟ್ಟಿನಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣ ಪಡೆಯುವವರು ಖಾಸಗಿ ಕೆಲಸ ಪಡೆಯಲು ಹರಸಾಹಸ ಪಡಬೇಕು ಅಷ್ಟೇ.
ದೇಶದ 22 ಭಾಷೆಗಳು ರಾಷ್ಟ್ರ ಭಾಷೆಗಳು
ಬಹಳ ಜನರಿಗೆ ಹಿಂದಿ ಭಾಷೆ ಎಂದರೆ ರಾಷ್ಟ್ರೀಯ ಭಾಷೆ ಎಂದುಕೊಂಡಿದ್ದಾರೆ. ಕನ್ನಡ ಸೇರಿದಂತೆ ದೇಶದ 22 ಭಾಷೆಗಳು ರಾಷ್ಟ್ರ ಭಾಷೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಕಚೇರಿಗಳು ಮಾತ್ರ ಹಿಂದಿ ಮತ್ತು ಇಂಗ್ಲೀಷ್ ಆಡಳಿತ ಭಾಷೆಯಾಗಿದೆ. ಹಿಂದಿ ಸರಳ ಭಾಷೆಯಾಗಿದ್ದು, ಕಲಿಯುವ ಆಸಕ್ತಿ ಇರುವವರು ಕಲಿತೆ ಕಲಿಯುತ್ತಾರೆ. ಆ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಅನೇಕ ಕಡೆ ಹಿಂದಿ ಕಲಿಯಲೇಬೇಕು ಎಂಬ ತಾಕೀತು ಮಾಡುವುದು ಅಥವಾ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿ ಭಾಷೆ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ಸರಿಯಾಗಿದೆ.
ವೀರೇಶ ಧೂಪದಮಠ

