
ಸಿಎಂ ಸೇರಿದಂತೆ ಪ್ರತಿಯೊಬ್ಬರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ
ಎಲ್ ನಿನೊ (El Nino) ಎಂಬ ಜಿಜ್ಞಾಸೆ ಅಥವಾ ಹುಚ್ಚು ಕಲ್ಪನೆ ಹುಟ್ಟಿಕೊಂಡಿರುವುದರಿಂದ ಮಳೆ ಬರುವುದಿಲ್ಲ ಮಳೆ ಅಭಾವ ಎಂಬ ಭಾವನೆ ಹೋಗಬೇಕಾದರೆ ನಾಡಿನ ದೊರೆ ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಯೊಬ್ಬರು ಮಳೆಗಾಗಿ ಪ್ರಾರ್ಥಿಸಬೇಕು. ಬಹುತೇಕ ರೈತರು ಮಳೆಯಾಶ್ರಿತ ಕೃಷಿ ಭೂಮಿಯನ್ನು ನೆಚ್ಚಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಒಂದು ರಾಜ್ಯ, ಒಂದು ದೇಶ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಮಳೆ ಎಂಬ ಬಲ ಬೇಕೇ ಬೇಕು. ಈಗ ಒಂದು ಕ್ರಿಕೇಟ್ ಮ್ಯಾಚ್ ತಂಡ ಗೆಲ್ಲಬೇಕಾದರೆ ಹೇಗೆ ದೇವರಲ್ಲಿ ಹೋಮ ಹವನ ಯಜ್ಞ, ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೇ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ವಾಡಿಕೆಯಂತೆ ಮಳೆ ನೀರು ಸುರಿದರೆ ರೈತರಿಗೆ ಅನುಕೂಲ ಮಾತ್ರವಲ್ಲ. ಹೆಚ್ಚಾಗಿ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ. ಕರ್ನಾಟಕದ ರಾಜ್ಯದ ಎಲ್ಲ ನದಿಗಳು ತುಂಬಿ ಹರಿಯಬೇಕು. ಕರ್ನಾಟಕ ಮಲೆನಾಡು ಪ್ರದೇಶವಾಗಬೇಕು. ಬಹುತೇಕ ತಾಲ್ಲೂಕು, ನಗರಗಳಿಗೆ ಕುಡಿಯುವ ನೀರಿನ ಕೊರತೆ ನೀಗಬೇಕು ಮತ್ತು ರಾಜ್ಯದ ಆರ್ಥಿಕ ಶಕ್ತಿ ಬಲ. ರೈತರು ಖುಷಿಯಾಗಿ ಇರಬೇಕು ಎಂದರೆ ಕರ್ನಾಟಕ ರಾಜ್ಯದ ನಾಡಿನ ದೊರೆ ಮುಖ್ಯಮಂತ್ರಿ ಸೇರಿದಂತೆ ನಾಡಿನ ಜನ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಅದೊಂದು ಎಲ್ಲ ಸಮಸ್ಯೆಗಳಿಗೆ ದೊಡ್ಡ ಪರಿಹಾರ. ಹಾಗಾಗಿ ಎಲ್ ನಿನೊ (El Nino) ಓಡಿಸೋಣ. ನಾಡಿನ ದೊರೆ ಮುಖ್ಯಮಂತ್ರಿಗಳು ಸೇರಿದಂತೆ ನಾಡಿನ ಪ್ರತಿಯೊಬ್ಬರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ.
ವೀರೇಶ ಧೂಪದಮಠ