ಕೂಡಿ ಬಾಳಿದರೆ ಜೀವನ, ಆದರೆ ಗ್ಯಾರಂಟಿ ಇಲ್ಲದ ಸರ್ಕಾರಗಳು












ಅಲ್ಪಸಂಖ್ಯಾತರು ಅಂದ್ರೆ ಯಾರು? ಹಿಂದೂ ಧರ್ಮ ಹೊರತುಪಡಿಸಿ, ಇನ್ನುಳಿದ ಎಲ್ಲ ಧರ್ಮಗಳು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೇ 10 ಜನರಲ್ಲಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಕಂಡುಬಂದರೆ ಅಲ್ಪಸಂಖ್ಯಾತರು. ಯಾವ ಜಾತಿ, ಧರ್ಮಗಳು ಕಡಿಮೆ ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು. ಯಾವ ಜಾತಿ, ಧರ್ಮ ಹೆಚ್ಚು ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಬಹುಸಂಖ್ಯಾತರು ಎಂದು ಪರಿಗಣಿಸಬಹುದು. ಇಲ್ಲಿ ಜಾತಿ, ಧರ್ಮಗಳು ವ್ಯಕ್ತಿಯನ್ನು ಬೇರ್ಪಡಿಸಬಹುದು. ಆದರೆ ವೃತ್ತಿ ಅಂತ ಬಂದಾಗ ಎಲ್ಲ ಜಾತಿ, ಧರ್ಮಗಳು ಒಗ್ಗೂಡಿ ಕೆಲಸ ಮಾಡಲೇಬೇಕು.

ಉದಾ: ಪತ್ರಕರ್ತರು, ವಕೀಲರು, ಪೋಲಿಸರು, ವೈದ್ಯರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ. ಒಂದು ವೇಳೆ ಒಟ್ಟಿಗೆ ಕೆಲಸ ಮಾಡುವ ಸಂದರ್ಭ ಬಂದರೆ ಹೇಗೆ ಮಾಡ್ತೀರಿ?, ಆಗ ಕೂಡಿ ಮಾಡಲೇಬೇಕು. ಅದು ಬೇಡ ಆರೋಗ್ಯ ತುರ್ತು ಸಂದರ್ಭ ಬಂದಾಗ ಮನುಷ್ಯನ ಅಂಗಾಂಗಗಳು ಸೇರಿದಂತೆ ರಕ್ತ ಸಹ ಅವಶ್ಯಕತೆ ಬಿಳುತ್ತದೆ ಆಗ ಸಹ ಬೇಕೆ ಬೇಕು. ಯಾರು ಕೊನೆಯವರೆಗೆ ತಂದೆ-ತಾಯಿ ಒಡಹುಟ್ಟಿದವರ ಜೊತೆ ಬೆರೆತು ಜೀವನ ಸಾಗಿಸುತ್ತಾರೆ ಅವರೇ ನಿಜವಾದ ಒಗ್ಗಟ್ಟಿನ ವ್ಯಕ್ತಿ. ತಮ್ಮ ಮನೆಯಲ್ಲಿ ಎಲ್ಲರನ್ನೂ ಬೇರ್ಪಡಿಸಿ, ಸಮಾಜದ ಮುಂದೆ ಜಾತಿ, ಧರ್ಮ ಒಗ್ಗೂಡಿಸುವ ಕರೆ ನೀಡುವುದು ಹಾಸ್ಯಾಸ್ಪದ.

ಇಲ್ಲಿ ಜನರ ಬದುಕು ಇರುವುದೇ ಹೊಟ್ಟೆಪಾಡಿಗಾಗಿ, ವೃತ್ತಿ ಜೀವನ ಸಾಗಿಸುವುದಕ್ಕಾಗಿ ಎಲ್ಲೋ ನಡೆದ ಘಟನೆ ಎಲ್ಲೋ ನಡೆದಂತಹ ಘಟನೆಗೆ ಯಾರು ಹೊಣೆಗಾರರಲ್ಲ. ಆ ಘಟನೆಗೆ ಕಾರಣರಾದವರೇ, ಹೊಣೆಗಾರರು. ಯಾರು, ಯಾರಿಗೂ ಸಂಬಂಧವೇ ಇಲ್ಲ. ಯಾರು ತಮ್ಮ ವೃತ್ತಿ, ಕೆಲಸ ಬಿಟ್ಟು ಬರುವುದಿಲ್ಲ ಭಾಗಿಯಾಗಲ್ಲ ಇದೇ ಜೀವನದ ಸತ್ಯ ದರ್ಶನ.

ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?

ಪಂಚ ಗ್ಯಾರಂಟಿ ನೀಡಿ, ಬಡ, ಮಧ್ಯಮ ವರ್ಗದ ಜನರಿಗೆ ಸರ್ಕಾರ ಆಸರೆವಾಯಿತು, ಈ ಹಿಂದೆ ಬಂದಂತಹ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡಿರಲಿಲ್ಲ. ಅಂದಮೇಲೆ ಎಲ್ಲ ಗ್ರಾಮಗಳ ರಸ್ತೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದಬೇಕಿತ್ತು. ಆದರೂ ಏಕೆ ಅಭಿವೃದ್ಧಿ ಆಗಲಿಲ್ಲ. ಈ ಹಿಂದಿನ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡದೇ ಅಭಿವೃದ್ಧಿ ಮಾಡಿಲ್ಲ. ಈಗಿನ ಸರ್ಕಾರ ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುವುದು ಅಂದ್ರೇ ಸಾಮಾನ್ಯ ಕೆಲಸವಲ್ಲ. ಸಂಪನ್ಮೂಲ ಕ್ರೋಢೀಕರಿಸುವುದು ಸವಾಲಿನ ಕೆಲಸವಾಗಲಿದೆ. ಹಿಂದಿನ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿ, ಸರ್ಕಾರ ಕೆಡವಿ, ಹೊಸ ಸರ್ಕಾರ ರಚನೆ ಮಾಡುವ ಹುಮ್ಮಸ್ಸು ಬರುತ್ತದೆ.

ಅಭಿವೃದ್ಧಿ ವಿಷಯದಲ್ಲಿ ನಿರಾಸಕ್ತಿ ಬರುತ್ತದೆ. ಇಂತಹ ವಿಚಾರ ಬಿಟ್ಟರೇ, ಅಭಿವೃದ್ಧಿ ಆಗುತ್ತಿಲ್ಲ ಅನ್ನುವುದಕ್ಕೆ ಯಾವ ರಾಜಕಾರಣಿಗಳಿಗೆ ನೈತಿಕತೆ ಇದೆ. ಯಾವುದೇ ಗ್ಯಾರಂಟಿ ಇಲ್ಲದೇ ಸರ್ಕಾರ ನಡೆಸಿದರು, ಸಾಕಷ್ಟು ಗ್ರಾಮಗಳು ಅಭಿವೃದ್ಧಿ ಆಗಿಲ್ಲ. ಈಗ ಗ್ಯಾರಂಟಿ ಮುಂದೆ ಬಜೆಟ್ ಬಗ್ಗೆ ವರ್ಣನೆ ಪದಗಳು ಇಲ್ಲ. ಗ್ಯಾರಂಟಿಯಿಂದ ಜನರ ಜೀವನ ಅಲ್ಪ ಸ್ವಲ್ಪ ಸುಧಾರಣೆಯಾಗಿದೆ, ಗ್ಯಾರಂಟಿ ಯೋಜನೆ ಮುಂದೆ ಬಜೆಟ್ ಶೂನ್ಯ. ಗ್ಯಾರಂಟಿಗಳು ಜನರ ಕಷ್ಟಕ್ಕೆ ಆಸರೆಯಾಗಿದೆ. ಅರ್ಹರಿಗೆ ಗ್ಯಾರಂಟಿ ತಲುಪಿದರೇ ಇನ್ನು ಚಂದ. ಗ್ಯಾರಂಟಿ ನೆಪ ಹೇಳುವ ಮೂಲಕ ಅಭಿವೃದ್ಧಿ ಆಗಿಲ್ಲ ಅನ್ನುವ ರಾಜಕಾರಣಿ ನೈತಿಕತೆ ಮೌಲ್ಯ ಕುಸಿದಿದೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords