ಈ ಜಾಗದಲ್ಲಿ ಯಾವುದೇ ಸರ್ಕಾರಿ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಾಣ ಮಾಡಬಾರದೆಂದು ಗ್ರಾಮಸ್ಥರು ಹೋರಾಟ, ವಿರೋಧ ಮಾಡಿದ್ರು ಮತ್ತೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕಟ್ಟಡ ನಿರ್ಮಾಣ ಮಾಡಲು ಮುಂದಾಗುತ್ತಿರುವುದು ಮತ್ತು ಜಾಗ ಗುರುತಿಸುವುದು ನಕಾಶೆಗಳನ್ನು ಬಿಡುತ್ತಿರುವುದು ಅಲ್ಲದೇ ಬಾಡಿಗೆ ಪಡೆಯುವ ರೂಪದಲ್ಲಿ ಪ್ರಯತ್ನ ಮಾಡುತ್ತಿರುವುದಕ್ಕೆ ಗ್ರಾಮಸ್ಥರ ಆಕ್ರೋಶಗೊಂಡಿದ್ದಾರೆ. ಸರ್ವೇ ನಂ 78 ರ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದನ್ನು ತಡೆಯಬೇಕು ಮತ್ತು ಭೂ ನ್ಯಾಯ ಮಂಡಳಿ ರಾಯಚೂರು ಇವರ ಆದೇಶದಂತೆ 18 ಕುಟುಂಬಗಳ ಸೇವಾದಾರರಿಗೆ ಜಮೀನು ಬಿಟ್ಟು ಕೊಡಬೇಕು ಎಂದು ಗುದ್ನೇಶ್ವರಮಠ (ಗುದ್ನೇಪ್ಪನಮಠ) ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ವೀರೇಶ ಧೂಪದಮಠ
