11 Jan 2026

// //

ಡ್ಯಾಂಗಳು ತುಂಬಿ ಹರಿಯಲಿ – ಮಳೆಯಿಗಾಗಿ ಪ್ರಾರ್ಥಿಸೋಣ!












ಕರ್ನಾಟಕ ರಾಜ್ಯದ ನದಿಗಳು ಮಳೆಯಿಂದಾಗಿ ತುಂಬಿ ಹರಿದಾಗ ರಾಜ್ಯದ ದೊರೆ ಮುಖ್ಯಮಂತ್ರಿಗಳು ಬಾಗಿನ ಅರ್ಪಣೆ ಮಾಡುವುದು ಒಂದು ಪದ್ದತಿ ಅದೇ ರೀತಿ ಮಳೆ ಬಾರದೇ ಹೋದಲ್ಲಿ ಮಳೆಗಾಗಿ ಪರ್ಜನ್ಯ ಹೋಮ ರಾಜ್ಯದ ಮುಖ್ಯಮಂತ್ರಿಗಳು ನೆರವೇರಿಸಬೇಕು. ಏಕೆಂದರೆ ದಿನದಿಂದ ದಿನಕ್ಕೆ ಕಾವೇರಿ ಕಿಚ್ಚು ಜೋರಾಗಿದ್ದು, ಎರಡು ರಾಜ್ಯಗಳಿಗೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಿಂದ ಕೇಸ್, ಕೋರ್ಟ್, ಬಂದ್, ಹೋರಾಟ ನಡೆಸಿದರು ಪ್ರಯೋಜನವಾಗುತ್ತಿಲ್ಲ. ಕೆಲವು ಸಮಸ್ಯೆಗಳು ಬಗೆಹರಿಯಲು ಅದು ದೇವರಿಂದ ಮಾತ್ರ ಸಾಧ್ಯ ಹಾಗಾಗಿ ರಾಜ್ಯದ ದೊರೆ ಮುಖ್ಯಮಂತ್ರಿಗಳು ಮುಂದೆ ನಿಂತು ಮಳೆಗಾಗಿ ಪರ್ಜನ್ಯ ಹೋಮ ಮಾಡಿಸಿ,

ದೇವರಲ್ಲಿ ಪ್ರಾರ್ಥಿಸಿದ್ರೆ ಕರ್ನಾಟಕ ರಾಜ್ಯಕ್ಕೆ ಮಳೆಯ ಭಾಗ್ಯ ಮುಖ್ಯಮಂತ್ರಿಗಳಿಂದ ಸಿಗಬಹುದೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತದೆ. ಕಾವೇರಿ ಕಿಚ್ಚು ಹೋರಾಟವಾಗಿ ಮಾರ್ಪಡುತ್ತಿದ್ದು, ಎಲ್ಲರೂ ಮಳೆಗಾಗಿ ಪ್ರಾರ್ಥಿಸಿದ್ರೆ, ದೇವರು ಕೃಪೆ ತೋರಿ ಕರ್ನಾಟಕ ರಾಜ್ಯ ಮಳೆನಾಡು ಅಗುವತ್ತ ವರ ನೀಡಬಹುದು. ಶತ ಶತಮಾನಗಳಿಂದ ನಡೆದುಕೊಂಡು ಬಂದಂತಹ ಪದ್ದತಿಗಳು ಆಚಾರ ವಿಚಾರಗಳು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಕೆಲವು ಸಮಸ್ಯೆಗಳು ದೇವರ ಕೃಪೆಯಿಂದ ಬಗೆಹರಿದ ಉದಾಹರಣೆಗಳು ಇತಿಹಾಸ ಪುಟದಲ್ಲಿ ಸಾಕಷ್ಟಿದೆ. ಮಳೆಗಾಗಿ ದೇವರಲ್ಲಿ ಪ್ರಾರ್ಥಿಸುವುದು ತಪ್ಪಿಲ್ಲ, ಮಳೆಗಾಗಿ ಹೋಮ ಹವನ ಮಾಡುವುದು ತಪ್ಪಿಲ್ಲ. ಹೋರಾಟದಿಂದ ಪ್ರಯೋಜನ ಸಿಗದಿರುವಾಗ ಮಳೆಗಾಗಿ ಪ್ರಾರ್ಥಿಸಬೇಕು.

ದಾಖಲೆ ಪ್ರಮಾಣದ ಮಳೆಯಾಗಿ ಕರ್ನಾಟಕ ರಾಜ್ಯದ ಎಲ್ಲ ನದಿಗಳು ತುಂಬಿ ಹರಿದಾಗ ರೈತರು ಕಣ್ತುಂಬಿಕೊಳ್ಳುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮಳೆಗಾಗಿ ಪರ್ಜನ್ಯ ಹೋಮ ಮಾಡಬೇಕು. ಹೋರಾಟಗಾರರು ಮಳೆಗಾಗಿ ಪ್ರಾರ್ಥಿಸಬೇಕು ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದರೇ, ಸರ್ಕಾರ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು, ಹೋಮ ಹವನ ಮಾಡಬೇಕು. ಗಂಗಾಮಾತೆ ಕರ್ನಾಟಕ ಮಳೆ ನಾಡು ಮಾಡುವತ್ತ ಕೃಪೆ ತೋರುವಂತಾಗಲಿ ಎನ್ನುವುದು ಪ್ರಾರ್ಥನೆ. ಗಂಗಾಮಾತೆ ನಮೋ ಸುತ್ತಿ.

ವೀರೇಶ ಧೂಪದಮಠ