ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಠರಾವುಗಳಿಗೆ ಸರ್ಕಾರ ಕಿಮ್ಮತ್ತು ನೀಡಬಾರದು ಏಕೆಂದರೆ ಅಭಿಪ್ರಾಯಗಳು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗಿಂತ ಸಾರ್ವಜನಿಕರ ಅಭಿಪ್ರಾಯ ಭಿನ್ನವಾಗಿರುತ್ತದೆ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಠರಾವುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ. ಜನಪ್ರತಿನಿಧಿ ವರ್ಸಸ್ ಸಾರ್ವಜನಿಕರ ಅಭಿಪ್ರಾಯಗಳು ಭಿನ್ನವಾಗಿರುವುದರಿಂದ ಅವುಗಳಿಗೆ ಮಾನ್ಯ ನೀಡುವುದು ತಪ್ಪಾಗುತ್ತದೆ. ಏನಿದ್ರೂ ಸಾರ್ವಜನಿಕರ ಅಭಿಪ್ರಾಯವೇ ಅಂತಿಮವಾಗಿರುತ್ತದೆ. ನಿಮ್ಮ ನಿಮ್ಮ ರಾಜಕೀಯ ತೆವಲಿಗೋಸ್ಕರ ಊರಿನ ಗತವೈಭವವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಆಡಳಿತಾತ್ಮಕ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು. ಸುಮ್ ಸುಮ್ನೆ ದಿನಕ್ಕೊಂದು ಗೊಂದಲ ಹುಟ್ಟುಹಾಕುವುದು ಸರಿಯಲ್ಲ. ಊರಿನ ಗತವೈಭವವನ್ನು ಹೆಚ್ಚಿಸಲು ತನ್ನದೇ ಆದ ಆಡಳಿತ ಸಂಸ್ಥೆ ಇದ್ದರೆ ಚಂದ ಅದು ಸಾರ್ವಜನಿಕರ ಇಚ್ಛೆ. ಹಾಗಾಗಿ ಊರಿನ ಗತವೈಭವವನ್ನು ಹೆಚ್ಚಿಸಲು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಅಗತ್ಯ. ಅನುದಾನ ಬೇಕಿದ್ರೆ ಸರ್ಕಾರಕ್ಕೆ ತಿವಿದು ಪಡೆದುಕೊಳ್ಳಿ ಅದು ಒಳ್ಳೆಯದು.