ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಅಥವಾ ದರ ನಿಗದಿಪಡಿಸಲು ಎಪಿಎಂಸಿ ಮಾರುಕಟ್ಟೆ ಇದೆ. ಆದರೆ ಗದಗ ಎಪಿಎಂಸಿ ಮಾರುಕಟ್ಟೆ ಮಾತ್ರ ಕೃಷಿ ಉತ್ಪನ್ನಗಳ ದರ ಹೊರರಾಜ್ಯದ ಖರೀದಿದಾರರು ಇಲ್ಲದೇ, ಹಳೆ ದಲ್ಲಾಳಿಗಳು 10 ರಲ್ಲಿ 9 ಇಳಿಸಿ, 1 ಏರಿಸಿ ಕೈ ತೊಳೆದು ಬಿಡ್ತಿದ್ದಾರೋ?. ಸರ್ಕಾರ ಬೆಂಬಲ ಬೆಲೆ ಘೋಷಿಸಿ ತಿಂಗಳು ಕಳೆದರೂ ಕಡಲೆ ಖರೀದಿ ಆರಂಭವಾಗಿಲ್ಲ. ಇವತ್ತು ಶುರುವಾಗುತ್ತೆ, ನಾಳೆ ಶುರುವಾಗುತ್ತೆ ಅಂತ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಇತ್ತ ಎಪಿಎಂಸಿ ಮಾರುಕಟ್ಟೆಗೆ ಹೊರರಾಜ್ಯದ ಖರೀದಿದಾರರನ್ನು ಎಪಿಎಂಸಿ ಒಳಗೆ ಬಿಡದೆ, ಹಳೆ ದಲ್ಲಾಳಿಗಳು ತಾವೇ ಕಡಿಮೆ ರೇಟ್ ಗೆ ರೈತರ ಉತ್ಪನ್ನಗಳನ್ನು ಖರೀದಿಸಿ, ಹೊರರಾಜ್ಯ ಖರೀದಿದಾರರಿಗೆ ದೊಡ್ಡ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರೆದರೆ ಎಪಿಎಂಸಿಗಳು ಮುಚ್ಚಿ ಹೋಗಬೇಕಾಗುತ್ತದೆ. ಹೊರರಾಜ್ಯದ ಖರೀದಿದಾರರಿಗೆ ಎಪಿಎಂಸಿ ಮಾರುಕಟ್ಟೆಗೆ ಪ್ರವೇಶ ನೀಡಬೇಕು. ದೊಡ್ಡ ಮೊತ್ತಕ್ಕೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದ್ದರಿಂದ ರೈತರಿಗೆ ಲಾಭವಾಗಲಿದೆ ಇಲ್ಲದ್ದಿದ್ದರೆ ಹಳೆ ದಲ್ಲಾಳಿಗೆ/ಖರೀದಿದಾರರಿಗೆ ಲಾಭವಾಗಲಿದೆ. ಎರಡು ವರ್ಷದ ಹಿಂದೆ ಹೊರರಾಜ್ಯದ ಕೃಷಿ ಉತ್ಪನ್ನಗಳ ಖರೀದಿದಾರರು ಗದಗ ಎಪಿಎಂಸಿ ಸೇರಿದಂತೆ ಅನೇಕ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದರು. ಈಗ ಏಕೆ ಬರುತ್ತಿಲ್ಲ, ರೈತರ ಮಾಲ್ ಬಂದಾಗ ಮುದಾಮು ರೇಟ್ ಇಳುಸ್ತಾರ ಅಂತ ಗದಗ ಎಪಿಎಂಸಿ ಮಾರುಕಟ್ಟೆಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನ್ಯಾಯಯುತವಾಗಿ ಬೆಲೆ ಸಿಗಬೇಕು ಎಂದರೆ ಎಂಪಿಎಂಸಿ ಮಾರುಕಟ್ಟೆ ಕೈ ಸುದ್ದು ಬಾಯಿ ಸುದ್ದು ಇರಬೇಕು ಇಲ್ಲದಿದ್ದರೆ ರೈತರಿಗೆ ಎಪಿಎಂಸಿ ಮಾರುಕಟ್ಟೆ ಬಗ್ಗೆ ಒಳ್ಳೆಯ ಅಭಿಪ್ರಾಯ ಕಣ್ಮಾರೆಯಾಗಿ, ಎಪಿಎಂಸಿಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಬೇರೆ ಎಪಿಎಂಸಿ ಮಾರುಕಟ್ಟೆಗೆ ಅಥವಾ ಉತ್ತಮ ಬೆಲೆ ಇರುವ ಕಡೆ ಮುಖಮಾಡಿ ಹೋಗುವುದು ಖಚಿತ. ಸರ್ಕಾರ ಅಂದ್ರೆ, ರೈತರ ಗೋಳು ಕೇಳುವವರಿಲ್ಲ ಅಷ್ಟೇ ರಾಜ್ಯ ಕೇಂದ್ರ ಸರ್ಕಾರ ಎಂದರೆ.