ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ತಾತ್ಕಾಲಿಕ
ಕ್ಷೇಮಾಪಣೆಯ ಲಿಖಿತ ಪತ್ರ ಇಲ್ಲ. ಹೀಗೆ ತಿಂಗಳಗಟ್ಟಲೆ ಬೆಳೆಸಿಕೊಂಡು ಹೋಗಿ ಬಿಡುವುದು. ಒಟ್ಟಿನಲ್ಲಿ ಇಂತಹ ಸನ್ನಿವೇಶ ದಿನನಿತ್ಯ ನೋಡಿ ತಲೆನೋವಿನ ಮಾತ್ರೆ ತಗೊಳ್ಳುವ ಹಂತಕ್ಕೆ ಬರುತ್ತದೆ. ರಾಜಕಾರಣಿಗಳು ಎನಿಸಿಕೊಂಡವರಿಗೆ ಬೇಕಾದಷ್ಟು ಕೆಲಸ ಕಾರ್ಯಗಳಿವೆ. ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು ದಕ್ಷಿಣ ಕರ್ನಾಟಕ ಮಗ/ಮಗಳು ಉತ್ತರ ಕರ್ನಾಟಕದ ಸೊಸೆ/ಅಳಿಯ ಆಗಿರುತ್ತಾರೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನದೇ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಸಮಗ್ರ ಕರ್ನಾಟಕದಲ್ಲಿ ಕಿತ್ತೂರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದೆ ರಸ್ತೆ, ಸೇತುವೆ, ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದೆ.
ಕಲ್ಯಾಣ ಕರ್ನಾಟಕ ಮಾದರಿ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಇಲ್ಲವೇ ಕಿತ್ತೂರ ಕರ್ನಾಟಕ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅಗತ್ಯವಿದೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತು ರಾಜ್ಯ ಕೇಂದ್ರ ಸಚಿವರು ರಾಜ್ಯ ಸಂಸದರು ಪ್ರಯತ್ನಿಸುವ ಒತ್ತಡ ತರುವ ಕೆಲಸವಾಗಲಿ.
ಮಹಾತ್ಮ ಗಾಂಧೀಜಿ ಪ್ರತಿಮೆ ನಿರ್ಮಾಣ?
ಇದೇ ಡಿ. 26, 27 ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಮಹಾತ್ಮ ಗಾಂಧೀಜಿ ಸವಿನೆನಪಿಗಾಗಿ ರಾಜ್ಯದ ಎಲ್ಲ ಬೃಹತ್ ಮಹಾನಗರ ಪಾಲಿಕೆ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಕಚೇರಿ ಮುಂಭಾಗ ಗಾಂಧಿ ಪ್ರತಿಮೆ ನಿರ್ಮಾಣವಾದರೇ ಚಂದ. ದೇಶಕ್ಕೆ ಸ್ವಾತಂತ್ರ್ಯ ತಂದ ಮಹಾತ್ಮನ ಕೊಡುಗೆಗಾಗಿ ಮಹಾತ್ಮ ಗಾಂಧಿ ಸವಿನೆನಪಿಗಾಗಿ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿಯ ವಿಶೇಷ ಅನುದಾನದಲ್ಲಿ ಗಾಂಧಿ ಪ್ರತಿಮೆ ಅರು-ಏಳು ತಿಂಗಳೊಳಗೆ ಕಚೇರಿ ಮುಂಭಾಗ ನಿರ್ಮಾಣವಾದರೇ, ನೋಡುಗರ ಗಮನ ಸೆಳೆಯುತ್ತದೆ. ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ನಮ್ಮ ಸಣ್ಣ ಅಳಿಲುಸೇವೆ ಸಲ್ಲಿಸಿದಂತಾಗುತ್ತದೆ.
ವೀರೇಶ ಧೂಪದಮಠ
