ಮೂಲ ಕಾಂಗ್ರೆಸ್ಸಿಗ ಡಿ.ಕೆ ಶಿವಕುಮಾರ ಮುಖ್ಯಮಂತ್ರಿ ಆದ್ರೆ ತಪ್ಪೇನಿಲ್ಲ
ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದರೇ ಅದು ಕರ್ನಾಟಕದಲ್ಲಿದೆ ಎಂದು ದೇಶದ ಜನ ಇವತ್ತಿಗೂ ಪುನರುಚ್ಚರಿಸುತ್ತಾರೆ. ದೇಶದಲ್ಲಿ ಎಂತಹ ಭಯಂಕರ ಅಲೆ ಬಂದ್ರು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಲೆ ಇದ್ದೆ ಇದೆ. 138 ಶಾಸಕರು ಆಯ್ಕೆಯಾಗಿದ್ದರಲ್ಲಿ ಬಹುತೇಕ ಕಾಂಗ್ರೆಸ್ ಮಹಿಳಾ ಆಭ್ಯರ್ಥಿಗಳು ಸೋತು ಬಿಟ್ಟರು. ಒಂದುವೇಳೆ ಮಹಿಳಾ ಕಾಂಗ್ರೆಸ್ ಆಭ್ಯರ್ಥಿಗಳು ಗೆದ್ದಿದ್ದರೆ. 138 ರ ಸಂಖ್ಯೆ 150 ಕ್ಕೂ ಅಧಿಕ ಶಾಸಕರ ಸಂಖ್ಯೆಯನ್ನು ದಾಟುವ ಸಾಧ್ಯತೆ ಇತ್ತು. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದರಿಂದ ವರ್ಷದಿಂದ ವರ್ಷಕ್ಕೆ ಕೆಲ ಜನರ ಮನಸ್ಸಿನ ಮನಸ್ಥಿತಿಗಳು ಬದಲಾಗಬಹುದು ಇಲ್ಲವೇ ಹೊಸ ಮತದಾರ ಒಲವು ಬೇರೆ ಕಡೆ ವಾಲಬಹುದು ಇಲ್ಲವೇ ಮತದಾರ ಸ್ಥಳಾಂತರ, ಮತದಾನದಿಂದ ದೂರ,
ಗೈರಾಗಿ ಸಂಖ್ಯೆಯಲ್ಲಿ ಹೆಚ್ಚು-ಕಡಿಮೆ ವ್ಯತ್ಯಾಸ ಕಂಡುಬರುತ್ತದೆ. ಆದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಕಡಿಮೆ ಎಂದರೂ 85-95 ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಸಾಗಿ ಗೆಲ್ಲಬಹುದಾಗಿದೆ. ದೇಶದ ಯಾವುದೇ ಮೂಲದ ವ್ಯಕ್ತಿಯೊಬ್ಬರನ್ನು ಕೇಳಿದ್ದರು ಕಾಂಗ್ರೆಸ್ ಇರೋದೇ ಕರ್ನಾಟಕದಲ್ಲಿ ಎಂದು ಉತ್ತರ ಸಿಗುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಎಸ್.ಎಂ ಕೃಷ್ಣ ನಂತರ ಮೂಲ ಕಾಂಗ್ರೆಸ್ಸಿಗರು ಮುಖ್ಯಮಂತ್ರಿಯಾಗಿಲ್ಲ. ಡಿ.ಕೆ ಶಿವಕುಮಾರ ಮೂಲ ಕಾಂಗ್ರೆಸ್ಸಿಗರಾಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ಸಿನಿಂದ ಗುರುತಿಸಿಕೊಂಡವರು ಡಿ.ಕೆ ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂಬ ಕಾಂಗ್ರೆಸ್ ಕಾರ್ಯಕರ್ತರ ಆಶಯವೂ ಇದೆ.
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಖ್ಯಮಂತ್ರಿ ಹುದ್ದೆ ಡಿ.ಕೆ ಶಿವಕುಮಾರ್ ಭವಿಷ್ಯ. ಅಲ್ಲಿಯವರೆಗೂ ರಾಜಕೀಯ ತಲ್ಲಣ, ಬಣ ರಾಜಕೀಯ, ಗುಪ್ತ ವಿಚಾರಗಳು, ಗುಪ್ತ ಸಭೆ ಸಮಾರಂಭಗಳನ್ನು ಪಕ್ಕಕ್ಕೆ ಸರಿಸುವುದು ಉತ್ತಮ. ಈಗ ಏನಿದ್ದರೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬ ಉತ್ತರ, ಐದು ವರ್ಷ ನಮ್ಮದೇ ಸರ್ಕಾರ ಎಂಬ ಧ್ಯೇಯವಾಕ್ಯ ಇರಲಿ.
ವೀರೇಶ ಧೂಪದಮಠ
