11 Jan 2026

// //

ಹಲವು ಬಜೆಟ್ ಮಂಡಿಸಿದರು ಜನರಿಗೆ ತಪ್ಪದ ಸಂಕಟ



ಕೇಂದ್ರ ಸರ್ಕಾರ ಪ್ರತಿ ಬಾರಿಯು ಬಜೆಟ್ ಮಂಡಿಸಿದಾಗ ಬಡವರಿಗೆ, ಮಧ್ಯಮ ವರ್ಗದವರಿಗೆ ಅಶ್ರಯವಾಗುವಂತಹ ಏನಾದರೂ ಹೊಸ ಯೋಜನೆ ಜಾರಿಗೆ ತರಬಹುದು ಎಂಬ ನಿರೀಕ್ಷೆ ಇತ್ತು. ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ. ಒಂದು ಏನಂದರೆ 12 ಲಕ್ಷ ರೂ.ವರೆಗೆ ಮಧ್ಯಮ ವರ್ಗದವರಿಗೆ ತೆರಿಗೆ ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ಅಷ್ಟು ಹಣ ಬಡವರು, ಮಧ್ಯಮ ವರ್ಗದ ಜನರ ಬಳಿ ಇದ್ರೇ ತಾನೇ ಖುಷಿಪಡಲು ಸಾದ್ಯ. ಬಡವರ, ಮಧ್ಯಮ ವರ್ಗದ ಜನರ ಬಳಿ ಬರೀ ಸಾಲವಿದೆ. ಬಡವರು, ಮಧ್ಯಮ ವರ್ಗದ ಜನ ಉದ್ಯೋಗವಿಲ್ಲದೇ ಸಾಲಶೂಲ ಮಾಡಿ ತರಕಾರಿ, ದಿನಸಿ, ಅಗತ್ಯ ವಸ್ತು ಖರೀದಿಸುವುದಲ್ಲದೇ, ನೀರಿನ ಬಿಲ್, ಕರೆಂಟ್ ಬಿಲ್, ಮೊಬೈಲ್, ಟಿವಿ ರೀಚಾರ್ಜ್ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಸಾಲದ ಹಣದಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಬರೀ ಸಾಲಶೂಲ ಮಾಡಿಯೇ ಜೀವನ ಸಾಗಿಸುವಂತಹ ವ್ಯವಸ್ಥೆ ಇದೆ. ಸಾಲ ಮಾಡಿದ್ದರಿಂದ ಬಡ್ಡಿ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ವಿಪರೀತ ಸಂಕಷ್ಟಕ್ಕೆ ಬಡವರು, ಮಧ್ಯಮ ವರ್ಗದ ಜನ ಸಿಲುಕಿಕೊಂಡಿದ್ದಾರೆ. ಈ ವ್ಯವಸ್ಥೆ ಹೀಗೆ ಮುಂದುವರಿದರೇ ಬಡವರು, ಮಧ್ಯಮ ವರ್ಗದವರು ಸರ್ಕಾರದ ವಿರುದ್ಧ ರೊಚ್ಚಿಗೆದ್ದು ದಂಗೆ ಏಳುವ ದಿನ ದೂರವಿಲ್ಲ. ಅದಕ್ಕಾಗಿ ಸರ್ಕಾರಗಳು ಬಡವರು, ಮಧ್ಯಮ ವರ್ಗದ ಜನರಿಗೆ ಉದ್ಯೋಗ ಸೃಷ್ಟಿಸುವುದಲ್ಲದೇ, ಕಾಲಕ್ಕೆ ತಕ್ಕಂತೆ ಸಂಬಳ ಏರಿಕೆ ಮಾಡಬೇಕು. ಈಗಿನ ದಿನಮಾನಗಳಲ್ಲಿ 50 ರೂ. 100 ರೂ.ಗಳಿಗೆ ಏನು ಬರುತ್ತಿಲ್ಲ. ಹಣದ ಮೌಲ್ಯ, ಕಿಮ್ಮತು ಕುಸಿದು ಬಿದ್ದು ಹೋಗಿದೆ. ಬಡವರು, ಮಧ್ಯಮ ವರ್ಗದ ಜನ ಸಾಲ ಮಾಡಿಯೇ ಜೀವನ ಸಾಗಿಸಬೇಕಿದೆ.

ದಿನದಿಂದ ದಿನಕ್ಕೆ ಸಾಲಗಾರ ಕಾಟ ತಾಳಲಾರದೆ ಆತ್ಮಹತ್ಯೆ, ಊರು ಬಿಟ್ಟು ಹೋಗುವಂತಾಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಉದ್ಯೋಗ ದೊರಕಿಸಿ ಕೊಡುವುದು, ತರಕಾರಿ, ದಿನಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವುದು, ಗ್ಯಾರಂಟಿ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮ ಮಾಡುವುದು ಸೇರಿದಂತೆ ಬಡವರು, ಮಧ್ಯಮ ವರ್ಗದ ಜನ ಸಂತೃಪ್ತಿಯಿಂದ ಜೀವನ ಸಾಗಿಸುವಂತಹ ವ್ಯವಸ್ಥೆ ಕೇಂದ್ರ ಸರ್ಕಾರ ಮಾಡುವಂತಹ ದಿಟ್ಟ ಹೆಜ್ಜೆ ಇಡಬೇಕು.

**ಜನರು ಇದನ್ನೂ ಕೇಳುತ್ತಾರೆ: ಬಜೆಟ್ ಮತ್ತು ಆರ್ಥಿಕ ಸಂಕಷ್ಟದ FAQ ಗಳು**
1. **ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಬದುಕುಳಿಯಲು ಸಾಲವನ್ನು ಏಕೆ ಅವಲಂಬಿಸುತ್ತಾರೆ?**
- ನಿಶ್ಚಲ ವೇತನ, ಏರುತ್ತಿರುವ ಹಣದುಬ್ಬರ ಮತ್ತು ಕೈಗೆಟುಕದ ಅಗತ್ಯ ವಸ್ತುಗಳು ಮನೆಗಳು ಆಹಾರ ಮತ್ತು ಉಪಯುಕ್ತತೆಗಳಂತಹ ಮೂಲಭೂತ ಅಗತ್ಯಗಳಿಗಾಗಿ ಸಾಲ ಪಡೆಯುವಂತೆ ಒತ್ತಾಯಿಸುತ್ತವೆ.

2. **ಇಂದು ಹಣದುಬ್ಬರವು ₹50 ಅಥವಾ ₹100 ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?**
- ತರಕಾರಿಗಳು, ಇಂಧನ ಮತ್ತು ದಿನಸಿ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಸಣ್ಣ ಮೌಲ್ಯದ ವಸ್ತುಗಳು ದೈನಂದಿನ ಖರೀದಿಗಳಿಗೆ ಬಹುತೇಕ ನಿಷ್ಪ್ರಯೋಜಕವಾಗಿವೆ.

3. **ಸಾಲದ ಹೊರೆಗಳು ನಿರ್ವಹಿಸಲಾಗದಿದ್ದಾಗ ಏನಾಗುತ್ತದೆ?**
- ಕುಟುಂಬಗಳು ಹೊರಹಾಕುವಿಕೆ, ಅಪೌಷ್ಟಿಕತೆ ಅಥವಾ ಇನ್ನೂ ಕೆಟ್ಟದ್ದನ್ನು ಎದುರಿಸುತ್ತವೆ - ಸಾಲಗಾರ ರೈತರು/ಕಾರ್ಮಿಕರಲ್ಲಿ ಆತ್ಮಹತ್ಯೆ ದರಗಳು ಬಿಕ್ಕಟ್ಟನ್ನು ಎತ್ತಿ ತೋರಿಸುತ್ತವೆ.

4. **ತೆರಿಗೆ ವಿನಾಯಿತಿಗಳು (ಉದಾ., ₹12 ಲಕ್ಷ ಮಿತಿ) ನಿಜವಾಗಿಯೂ ಮಧ್ಯಮ ವರ್ಗಕ್ಕೆ ಸಹಾಯ ಮಾಡಬಹುದೇ?**
- ಇಲ್ಲ. ವೇತನ ಹೆಚ್ಚಳ ಅಥವಾ ಬೆಲೆ ನಿಯಂತ್ರಣಗಳಿಲ್ಲದೆ, ತೆರಿಗೆ ಕಡಿತಗಳು ಜೀವನ ವೆಚ್ಚವನ್ನು ಸರಿದೂಗಿಸುವುದಿಲ್ಲ. ಸಾಲವು ಪ್ರಾಥಮಿಕ ಹೊರೆಯಾಗಿ ತೆರಿಗೆಗಳನ್ನು ಬದಲಾಯಿಸುತ್ತದೆ.

5. **ಸರ್ಕಾರ ಯಾವ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬಹುದು?**
- ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಗಿತಗೊಳಿಸುವುದು, ಉದ್ಯೋಗ ಖಾತರಿಗಳನ್ನು ವಿಸ್ತರಿಸುವುದು ಮತ್ತು ಅನೌಪಚಾರಿಕ ಸಾಲಗಳ ಮೇಲಿನ ಪರಭಕ್ಷಕ ಬಡ್ಡಿದರಗಳನ್ನು ಕಡಿತಗೊಳಿಸುವುದು.

**ಬೀಜ ಕೀವರ್ಡ್‌ಗಳು**: ಸಾಲ ಆರ್ಥಿಕತೆ, ಹಣದುಬ್ಬರ ಬಿಕ್ಕಟ್ಟು, ವೇತನ ನಿಶ್ಚಲತೆ, ಬದುಕುಳಿಯುವ ಸಾಲಗಳು, ಸರ್ಕಾರದ ಕಠಿಣ ಕ್ರಮಗಳು.