ಗೌರಿ ಹುಣ್ಣಿಮೆ ಚಂದ, ಭಕ್ತಿ ಮತ್ತು ಪ್ರಕೃತಿಯ ಮಾಯಾಜಾಲ

ಸಂಜೆ 7 ಗಂಟೆ ನಂತರ ಗ್ರಾಮದ ಮಹಿಳೆಯರು ಸಿಂಗಾರಗೊಂಡು "ಗೌರಿ ಗೌರಿ ಎಂತಾ ಗಣಪತಿ ಎಂತಾ ಮುತ್ತಿಮೋರ ಎಂತಾ ಚತ್ರು ಗೊಂಬೆ ಅಂತಾ ಹೋಗಿ ಬಾ ಗೌರಿ ಸಾಗಿ ಬಾ ಗೌರಿ" "ಸಾಗ ಸಾಗ ಅಂದ್ರೆ ಎಂದರೆ ನಾಯಂಗ ಸಾಗ್ಲಿ ಸಾಗು ಚಿತ್ರ ಅಲ್ಲ ಉಳಿವಿ ಬಸವಣ್ಣ ಅಲ್ಲ ದಡಮ್ಮ ದಡಕಿ ಪಾವೈರ ಅಡಕಿ" "ಒಂದ ಸೇರು ಎಣ್ಣೆಯ ತಂದು ಒಂದ ದಿನ್ನದ ಹೋಳಿಗೆ ಮಾಡಿ ನಮ್ಮ ರಾಯರಾಡುದು ಹಾದಿಬಿದಿಯ್ಯಾಗಾ ನಾವ್ ಆಡುದು ಗಂಗಿ ಪೋಳ್ಯಾಗಾ ಏಕದಾರುತೆ ಗೌರಿ ಬೆಳಗದಾರುತೆ" ಎಂಬ ಗೌರಿ ಹಾಡುಗಳನ್ನು ಹಾಡುತ್ತಾ ಗ್ರಾಮದ ರುದ್ರಯ್ಯ ಶೇಖರಯ್ಯ ಧೂಪದಮಠ ಅವರ ವಸತಿಗೃಹಕ್ಕೆ ಮಹಿಳೆಯರು ಆಗಮಿಸಿ, ಗೌರಿದೇವಿ ಹಾಡುಗಳನ್ನು ಹಾಡುತ್ತಾ ದರ್ಶನ ಪಡೆದು ತೆರಳುತ್ತಾರೆ.
ಅದ್ಧೂರಿಯಾಗಿ ಹುಣ್ಣಿಮೆಯನ್ನು ಆಚರಿಸುವ ಮೂಲಕ ಹಬ್ಬಕ್ಕೆ ಕಪ್ಪು ಚುಕ್ಕೆ ಬರದ ಹಾಗೇ ಆಚರಿಸುತ್ತಾರೆ. ಗೌರಿ ಮಾತೆ ದರ್ಶನ ಪಡೆಯುತ್ತಾರೆ.
ವೀರೇಶ ಧೂಪದಮಠ