25 Mar 2026

// //

ಮನುಷ್ಯನಿಗೆ ರೋಗರುಜಿನಗಳು ಹೇಗೆಯೋ ಅದೇರೀತಿ ಜಗತ್ತಿಗೂ ಸಂಕಷ್ಟಗಳು ಸಹಜ












ಮನುಷ್ಯನಿಗೆ ರೋಗರುಜಿನಗಳು ಬರುವ ಹಾಗೆ ಜಗತ್ತು, ದೇಶ, ರಾಜ್ಯಕ್ಕೆ ಆಪತ್ತು, ಕಷ್ಟ, ಸಂಕಷ್ಟಗಳು ಬರುವುದು ಸಹಜ. ಕುಟುಂಬದ ವ್ಯಕ್ತಿಯಲ್ಲಿ ಯಾರಿಗಾದ್ರೂ ಆರೋಗ್ಯ ಸರಿ ಇಲ್ಲ ಎಂದಾಗ ಕುಟುಂಬಸ್ಥರಲ್ಲಿ ಆತಂಕ ಶುರುವಾಗುತ್ತದೆ. ಅದೇ ರೀತಿ ಜಗತ್ತು, ದೇಶ, ರಾಜ್ಯಕ್ಕೆ ಆಪತ್ತು, ಕಷ್ಟ, ಸಂಕಷ್ಟಗಳು ಬಂದಾಗ ಪ್ರಜೆಗಳಲ್ಲಿ ಆತಂಕ ಶುರುವಾಗುತ್ತದೆ. ಸಾಮಾನ್ಯವಾಗಿ ಜಗತ್ತಿನಲ್ಲಿ ಪಾಪ ಕರ್ಮಗಳು 90% ಮತ್ತು ಪ್ರೀತಿ ಪ್ರೇಮಗಳು 90% ನಡೆಯುವುದು ಕಂಡು ಬರುತ್ತದೆ. ಜನರ ಬಾಯಲ್ಲಿ ಕಲಿಯುಗ ಎಂದರೆ ಆಡುಭಾಷೆಯಲ್ಲಿ ಹೊಡಿಬಡಿ, ಮೋಸ, ವಂಚನೆ, ಕೊಲೆ, ದರೋಡೆ, ಅಧರ್ಮ, ಸುಳ್ಳು ಹೆಚ್ಚಾಗಿ ನಡೆಯುತ್ತಿದೆ ಎಂದು ಜನ ಹೀಗೂ ಆಡಿಕೊಳ್ಳುತ್ತಾರೆ. ಇದೇ ರೀತಿ ಮುಂದುವರಿದರೆ ಜಗತ್ತಿನ ಆಯಸ್ಸು ಕೇವಲ 5 ಸಾವಿರ ವರ್ಷಕ್ಕೆ ಸೀಮಿತವೇ? ಎನ್ನುವಂತಾಗಿದೆ.

ವ್ಯಕ್ತಿಯಲ್ಲಿ ಶ್ರೀಮಂತ, ಮದ್ಯಮ ವರ್ಗದವ, ಬಡವ ಎಂದು ಗುರುತಿಸಲಾಗುತ್ತದೆ. ಶ್ರೀಮಂತರು ಬದುಕಬೇಕಾದರೂ ಬಡವರು ಬೇಕು. ನನ್ನ ಬಳಿ ಹಣವಿದೆ, ಜಗತ್ತಿನಲ್ಲಿ ನನ್ನದೆ ಆಟ ಎಂದರೆ ಅದು ನಡೆಯುವುದಿಲ್ಲ. ಜನರೇ ಇಲ್ಲದೆ ಜಗತ್ತು ಸೃಷ್ಟಿಸಲು ಹೋದರೆ ಪ್ರತಿಯೊಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಜಗತ್ತಿಗೆ ಪ್ರತಿಯೊಬ್ಬ ವ್ಯಕ್ತಿಯೂ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಒಂದಲ್ಲಾ ಒಂದು ದಿನ ಆರಂಭದಂತೆ ಅಂತ್ಯವೂ ಆಗಲಿದೆ ಅದಕ್ಕಾಗಿ ನಿರ್ದಿಷ್ಟ ದಿನಾಂಕವಿಲ್ಲ, ಸಮಯವಿಲ್ಲ. ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕರೋನಂತಹ ಮಾರಕ ರೋಗ ಜಗತ್ತಿಗೆ ಹರಡಿದಾಗ ಪ್ರಕೃತಿ ತನ್ನ ಸೌಂದರ್ಯವನ್ನು ಸ್ವಚ್ಛಗೊಳಿಸಿಕೊಂಡಿತು‌. ಹಾಗಾಗಿ ವರ್ತಮಾನದ ವಿಚಾರಗಳನ್ನು ಭವಿಷ್ಯದ ಕಾಲಕ್ಕೆ ತೀರಿಗಿಸುವುದು ಅಪಾಯಕಾರಿ.

ಜಗತ್ತಿನ ಆಯಸ್ಸು 5 ಸಾವಿರ ವರ್ಷವೇ? ಇಲ್ಲವೇ ಜಗತ್ತಿನ ಆಯಸ್ಸಿನ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಮನುಷ್ಯನಿಗೆ ರೋಗರುಜಿನಗಳು ಹೇಗೆಯೋ ಅದೇರೀತಿ ಜಗತ್ತಿಗೂ ಸಂಕಷ್ಟಗಳು ಸಹಜ. ಆದರೂ ಇದ್ದಷ್ಟು ದಿನ ಜನರಿಗೆ ಒಳ್ಳೆಯದು ಮಾಡಬೇಕು, ಅದೇ ಜಗತ್ತಿನ ನಿಯಮವಾಗಿದೆ.

ವೀರೇಶ ಧೂಪದಮಠ