Showing posts with label Article. Show all posts
Showing posts with label Article. Show all posts

9 Jun 2025

ಕೆಟ್ಟ ಘಳಿಗೆ ಇದೊಂದು ಸಲ ಕ್ಷಮಿಸಿಬಿಡಿ

By

 ಕೆಟ್ಟ ಘಳಿಗೆ ಇದೊಂದು ಸಲ ಕ್ಷಮಿಸಿಬಿಡಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆ ಮೀರಿ, ಕ್ರೀಡಾಂಗಣದ ಸಾಮರ್ಥ್ಯ ಮೀರಿ ಆರ್.ಸಿ.ಬಿ ಅಭಿಮಾನಿಗಳು ಧಾವಿಸಿದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕ್ರೀಡಾಂಗಣ ಭರ್ತಿಯಾಗಿದೆ. ಮನೆಗೆ ಹೋಗಿ ಎಂದರು. ಯಾರು ಕೇಳೋರು, ಯಾರು ಕ್ಯಾರೇ ಎನ್ನದ ಸನ್ನಿವೇಶ ಸೃಷ್ಟಿಯಾಗಿತು. ಒಟ್ಟಾರೆ ಬೆಂಗಳೂರಿನಲ್ಲಿ ಅಲ್ಲಿಲ್ಲಿ ನಿಂತ ಅಭಿಮಾನಿಗಳು, ಕಾರ್ಯಕ್ರಮ ಮಧ್ಯದಲ್ಲಿ ಮನೆಗೆ ಹೋದ ಅಭಿಮಾನಿಗಳು ಸೇರಿದಂತೆ ಅಂದಾಜು ಸುಮಾರು ೨ ಕೋಟಿಗೂ ಅಧಿಕ ಆರ್.ಸಿ.ಬಿ ಅಭಿಮಾನಿಗಳು ಬೆಂಗಳೂರಿನಲ್ಲಿ ಇರಬಹುದು ಎಂಬ ನಂಬಿಕೆ. ಟಿವಿ ನ್ಯೂಸ್ ವಿಡಿಯೋಗಳಲ್ಲಿ ಅಭಿಮಾನಿಗಳ ಸಂಖ್ಯೆ ಸ್ಪಷ್ಟವಾಗಿ ಕಾಣದಿದ್ದರೂ, ಅಂದಾಜು ಅಭಿಮಾನಿಗಳ ಸಂಖ್ಯೆ ೨ ಕೋಟಿ ಇರಬಹುದು. ಆರ್.ಸಿ.ಬಿಗೆ ೧೮ ಆವೃತ್ತಿಗೆ ಕಪ್ ಗೆದ್ದಿದ್ದರಿಂದ ಇದೊಂದು ನಾಡಹಬ್ಬದ ವಾತಾವರಣ ಸೃಷ್ಟಿಸಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬಂದಿದ್ದರು. ಕ್ರೀಡಾಂಗಣದ ಸಾಮರ್ಥ್ಯ ಮೀರಿ ಜನ ಆಗಮಿಸಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಯಾರು ಬೇಕಾತಲೇ ಮಾಡಲು ಸಾಧ್ಯವೇ. ಯಾರನ್ನು ಹೊಣೆ ಮಾಡಿ ಏನು ಪ್ರಯೋಜನ. ತೆಲಂಗಾಣದಲ್ಲಿ ಆದಂತೆ ಇದು ವೈಯಕ್ತಿಕ ಹಿತಾಸಕ್ತಿಯ ಕಾಲ್ತುಳಿತ ಅಲ್ಲ. ನಾಡಹಬ್ಬದ ವಾತಾವರಣದ ಕಾಲ್ತುಳಿತ. ಏನೋ ಕೆಟ್ಟ ಘಳಿಗೆ ತಪ್ಪು ಆಗಿದೆ. ಇದೊಂದು ಸಲ ಕ್ಷಮಿಸಿಬಿಡಿ. ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಅವಶ್ಯಕ.

ರಾಜ್ಯದ ಕಾಳಜಿ ರಾಜಕಾರಣಿಗಳೇ ಬೆಳೆಸಿಕೊಳ್ಳಿ

ರಾಜಕಾರಣಿ ಹೇಗಿರಬೇಕು ರಾಜ್ಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ರಾಜ್ಯದ ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ಪ್ರಧಾನಮಂತ್ರಿ ಮಾಡಬೇಕಾದ ದೇಶದ ಕೆಲಸವನ್ನು ಇಲ್ಲಿನ ವಿರೋಧ ಪಕ್ಷಗಳು ಮಾಡುತ್ತಿವೆ. ರಾಜ್ಯದ ವಿಧಾನಸಭಾ, ವಿಧಾನ ಪರಿಷತ್ತಿನಿಂದ ಆಯ್ಕೆಯಾದವರು ರಾಜ್ಯದ ಬಗ್ಗೆ ಹೇಳಿಕೆ ನೀಡಿ. ದೇಶದ ಬಗ್ಗೆ ಅಲ್ಲ. ಆರ್.ಸಿ.ಬಿ ರಾಜ್ಯದ ತಂಡ ಎಂದಮೇಲೆ ಶುಭಾ ಹಾರೈಸಿ ಬೇಕು ಹೊರತಾಗಿ ಲೇವಡಿ ಮಾಡಬಾರದು. ದೇಶದ ಬಗ್ಗೆ ಹೇಳಿಕೆ ನೀಡಲು ಲೋಕಸಭಾ, ರಾಜ್ಯಸಭಾ ಸದಸ್ಯರು ಇರಬೇಕಾದರೆ, ರಾಜ್ಯದ ರಾಜಕಾರಣಿಗಳು ರಾಜ್ಯ ಹಿತ ಬಿಟ್ಟು ರಾಷ್ಟ್ರದ ಹಿತ ಮಾತಾಡುತ್ತಿರುವುದು ಕೇಂದ್ರದ ರಾಜಕಾರಣಿಗಳಿಗೆ ಹೊಡೆತ ಕೊಟ್ಟಂತೆ. ರಾಜ್ಯ ರಾಜಕಾರಣ ರಾಜ್ಯಕ್ಕೆ ಸೀಮಿತವಾಗಿರಲಿ

27 May 2025

ವೀರಶೈವ ಜಂಗಮರೇ ಬೇಡ ಜಂಗಮರು

By
ವೀರಶೈವ ಜಂಗಮರೇ ಬೇಡ 1935 ರ ಮಧ್ಯಂತರ ಭಾರತ ಸರ್ಕಾರ ಕಾಲಾವಧಿಯಲ್ಲಿ ಅಥವಾ ಬ್ರಿಟಿಷ್ ಇಂಡಿಯಾ ಕಾಲಾವಧಿಯಲ್ಲಿ ನಿಗದಿಪಡಿಸಿದ ವೃತ್ತಿ ಆಧಾರಿತ 101 ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಒಂದು. ಬೇರೆ-ಬೇರೆ ರಾಜ್ಯಗಳಲ್ಲಿ ಇಲ್ಲದ ಬೇಡ ಜಂಗಮರ ಪ್ರಮಾಣ ಪತ್ರ ನೀಡುವ ಸಮಸ್ಯೆ ಇಲ್ಲಿ ಯಾಕೆ ಇದೆ ಅಂದರೆ 224 ವಿಧಾನ ಕ್ಷೇತ್ರದಲ್ಲಿ 36 ಎಸ್ಸಿ ಮೀಸಲು ಕ್ಷೇತ್ರವಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ 5 ಎಸ್ಸಿ ಮೀಸಲು ಕ್ಷೇತ್ರವಿದೆ. ಒಂದು ವೇಳೆ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಿದರೆ. ಬೇಡ ಜಂಗಮರು ಚುನಾವಣೆಗೆ ಸ್ಪರ್ಧಿಸಿ ವೀರಶೈವ ಲಿಂಗಾಯತ ಪಂಥದ ಜಾತಿಗಳ ಕೃಪೆಯಿಂದ ಸರಳವಾಗಿ ಗೆಲ್ಲಬಹುದು ಇದರಿಂದ ರಾಜಕಾರಣಿಗಳಿಗೆ ರಾಜಕೀಯ ಹಿನ್ನೆಡೆ ಆಗುವುದಲ್ಲದೇ, ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿ ಇದೆ ಎಂಬ ಸಂಶಯ ಕಾಡುತ್ತಿದೆ. ಆದರೆ ಈ ತರ ಸಂಶಯ ತಪ್ಪಾಗಿದೆ, ಚುನಾವಣೆಯಲ್ಲಿ ಗೆಲ್ಲಲು ಹಣ ಬಲಬೇಕು, ಜನ ಬಲ ಬೇಕು, ಅಲ್ಲದೇ ಅದೃಷ್ಟ ಸೇರಿದಂತೆ ಪಕ್ಷದ ಚಿಹ್ನೆಯ ವರ್ಚಸ್ಸು ಬೇಕು ಅಂದಾಗ ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯ. ಇದರಿಂದಾಗಿ ಬೇಡ ಜಂಗಮರಿಗೆ ಪ್ರಮಾಣ ನೀಡಿದರೇ ರಾಜಕೀಯ ನೆಲೆ ಕಳೆದುಕೊಳ್ಳುವ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮೇಲ್ನೋಟ ಕಂಡು ಬರುತ್ತಿದೆ. ಆದರೆ ಇದು ಸುಳ್ಳಾಗಿದ್ದು, ಹಣ, ಜನ ಬಲ ಅದೃಷ್ಟ ಪಕ್ಷದ ಚಿಹ್ನೆಯ ವರ್ಚಸ್ಸಿನ ಮೇಲೆ ಚುನಾವಣೆ ಗೆಲುವು ಸಾಧ್ಯವಿದೆ ಮತ್ತು ವೀರಶೈವ ಲಿಂಗಾಯತ ಎನ್ನುವುದು ಪಂಥವಾಗಿದ್ದು, ಜಾತಿ ಅಲ್ಲ. ವೀರಶೈವ ಜಂಗಮರೇ ಬೇಡ ಜಂಗಮರಾಗಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಂಗಮರ ನೆಲೆ ಇದೆ. ಅಲ್ಲದೇ ರಾಜ್ಯದ ವಿವಿಧ ಮಠಾಧೀಶರರು ಜಂಗಮರೇ ಆಗಿದ್ದಾರೆ.

ಜಂಗಮರ ವೃತಿ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು. ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು, ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ. ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತಿ" ಪತ್ರಿ ಹಂಚುವವರು "ಪತ್ರಿ ಮಠದವರು" ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವುದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು. ಬೇಡ ಜಂಗಮರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದು ಬರಲು ರಾಜಕಾರಣಿಗಳು ಸಹಕರಿಸಬೇಕಿದೆ.

8 May 2025

ಇಂದಿನ ಹೊಸ ಮುಖಗಳು ಇತಿಹಾಸ ಪುಟ ಸೇರಿರುವ ಘಟನೆಗೆ ಕಾರಣರಲ್ಲ.

By
ಜಗತ್ತಿನಲ್ಲಿ ನಡೆದುಹೋದ ಘಟನೆಗಳು ಇತಿಹಾಸ ಪುಟ ಸೇರಿದರು ಕೂಡಾ ಇನ್ನು ನಮ್ಮ ದೇಶದಲ್ಲಿ ಕೆಲವರ ಸಿಟ್ಟು, ಆಕ್ರೋಶ ಹಾಗೆಯೇ ಇದೆ. ಆ ಸಿಟ್ಟು ಧರ್ಮ ಆಧಾರದ ದೇಶ ವಿಭಜನೆ ಮಾಡಿದ್ದು ಇರಬಹುದು. ಸ್ವಾತಂತ್ರ‍್ಯ ಪೂರ್ವದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಹಿಂಸೆ, ಶೋಷಣೆಯೊಳಗಾಗಿದ್ದು ಇರಬಹುದು. ವ್ಯಾಪಾರ ವಹಿವಾಟಿನಲ್ಲಿ ಪೈಪೋಟಿ ಸಲುವಾಗಿ ಇರಬಹುದು. ಲವ್ ಜಿಹಾದ್, ಅಶಾಂತಿಯ ವಾತಾವರಣ, ಕೋಮು ಗಲಭೆ, ಹಿಂಸಾಚಾರ ಸೇರಿದಂತೆ ಸಿಟ್ಟು, ಆಕ್ರೋಶಗಳಿಗೆ ಅನೇಕ ಅನೇಕ ಕಾರಣಗಳಿರಬಹುದು. ಆ ಎಲ್ಲ ಆಕ್ರೋಶ ವ್ಯಕ್ತಪಡಿಸಲು ಈ ಹಿಂದೆ ಶೋಷಣೆ ಮಾಡಿದವರು, ಶೋಷಣೆಗೆ ಒಳಗಾದ ಮೂರು-ನಾಲ್ಕನೆಯ ತಲೆಮಾರಿನ ಜನ ಈಗಿಲ್ಲ, ಸತ್ತು ಹೋಗಿದ್ದಾರೆ.


ಸತ್ತು ಹೋದವರು ನಷ್ಟ ತುಂಬಿ ಕೊಡಲು ಸಾಧ್ಯವಿಲ್ಲ. ಈಗ ಸಿಟ್ಟು ವ್ಯಕ್ತಪಡಿಸಿದರು ಪ್ರಯೋಜನವಿಲ್ಲ. ಮನುಷ್ಯನ ಸಿಟ್ಟು ಅನ್ಯಾಯಕ್ಕೆ ಒಳಗಾದ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಇರುತ್ತದೆ. ಆ ಸಿಟ್ಟು ಪೂರ್ತಿ ಜಾತಿ, ಧರ್ಮ ಮೇಲೆ ಅಥವಾ ಜನ ಮೆಚ್ಚಿಗೆ ಪಡೆದ ನಿರ್ಜೀವ ವಸ್ತುವಿನ ಮೇಲೆ ರವಾನೆಯಾಗುತ್ತಿರುವುದು ತಪ್ಪು. ದ್ವೇಷ ಮಾಡಲು ಹಳೆ ತಲೆಮಾರಿನ ಜನ ಇಲ್ಲ. ಹಳೆ ತಲೆಮಾರಿನ ಬಹುತೇಕ ಜನರು ಸ್ವಾತಂತ್ರ‍್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನಡೆಯಿಂದಾಗಿ ಶೋಷಣೆಗೂ ಒಳಗಾಗಿರಬೇಕು. ಈಗಿರುವ ಜನ ಹೊಸ ಮುಖಗಳು ಇತಿಹಾಸ ಪುಟ ಓದಿ ತಿಳಿಯಬಹುದು ಹೊರತಾಗಿ ಅವುಗಳಿಗೆ ಕಾರಣರಲ್ಲ.


ಹಾಗಾಗಿ ಹಿಂದೆಲ್ಲ ನಡೆದ ಘಟನೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕಾರಣಗಳಿರಬಹುದು. ಮುಗಿದ ಹೋದ ಅಧ್ಯಾಯ ಭೂತಕಾಲವನ್ನು ಪದೇ ಪದೇ ಯೋಚಿಸುವ ಬದಲು ಭವಿಷ್ಯ, ವರ್ತಮಾನ ಕಾಲದ ಬಗ್ಗೆ ಚಿತ್ತ ಹರಿಸಬೇಕು. ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ದೇಶ, ರಾಜ್ಯಕ್ಕೆ ಶಾಂತಿ ವಾತಾವರಣ ನಿರ್ಮಾಣ ಮಾಡುವತ್ತ ಇಂದಿನ ಜನ ಸಮೂಹ ದಿಟ್ಟ ಹೆಜ್ಜೆ ಇಡುವತ್ತ ದಾಪುಗಾಲು ಇಡುವಂತಾಗಲಿ ಎನ್ನುವುದು ಆಶಯ.

29 Mar 2025

ಕೂಡಿ ಬಾಳಿದರೆ ಜೀವನ | ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?

By
Who are minorities? Except Hinduism, all other religions are considered minorities. Generally speaking, if there is one person of another religion in 10 people, then they are minorities. Which caste and religion has a small population and community, it can be considered a minority. 



Which caste and religion has a large population and community, it can be considered a majority. Here, caste and religion can separate a person. But when it comes to profession, all castes and religions must work together.


ಅಲ್ಪಸಂಖ್ಯಾತರು ಅಂದ್ರೆ ಯಾರು? ಹಿಂದೂ ಧರ್ಮ ಹೊರತುಪಡಿಸಿ, ಇನ್ನುಳಿದ ಎಲ್ಲ ಧರ್ಮಗಳು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೇ 10 ಜನರಲ್ಲಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಕಂಡುಬಂದರೆ ಅಲ್ಪಸಂಖ್ಯಾತರು. ಯಾವ ಜಾತಿ, ಧರ್ಮಗಳು ಕಡಿಮೆ ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು. ಯಾವ ಜಾತಿ, ಧರ್ಮ ಹೆಚ್ಚು ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಬಹುಸಂಖ್ಯಾತರು ಎಂದು ಪರಿಗಣಿಸಬಹುದು. ಇಲ್ಲಿ ಜಾತಿ, ಧರ್ಮಗಳು ವ್ಯಕ್ತಿಯನ್ನು ಬೇರ್ಪಡಿಸಬಹುದು. ಆದರೆ ವೃತ್ತಿ ಅಂತ ಬಂದಾಗ ಎಲ್ಲ ಜಾತಿ, ಧರ್ಮಗಳು ಒಗ್ಗೂಡಿ ಕೆಲಸ ಮಾಡಲೇಬೇಕು.


ಉದಾ: ಪತ್ರಕರ್ತರು, ವಕೀಲರು, ಪೋಲಿಸರು, ವೈದ್ಯರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ. ಒಂದು ವೇಳೆ ಒಟ್ಟಿಗೆ ಕೆಲಸ ಮಾಡುವ ಸಂದರ್ಭ ಬಂದರೆ ಹೇಗೆ ಮಾಡ್ತೀರಿ?, ಆಗ ಕೂಡಿ ಮಾಡಲೇಬೇಕು. ಅದು ಬೇಡ ಆರೋಗ್ಯ ತುರ್ತು ಸಂದರ್ಭ ಬಂದಾಗ ಮನುಷ್ಯನ ಅಂಗಾಂಗಗಳು ಸೇರಿದಂತೆ ರಕ್ತ ಸಹ ಅವಶ್ಯಕತೆ ಬಿಳುತ್ತದೆ ಆಗ ಸಹ ಬೇಕೆ ಬೇಕು. ಯಾರು ಕೊನೆಯವರೆಗೆ ತಂದೆ-ತಾಯಿ ಒಡಹುಟ್ಟಿದವರ ಜೊತೆ ಬೆರೆತು ಜೀವನ ಸಾಗಿಸುತ್ತಾರೆ ಅವರೇ ನಿಜವಾದ ಒಗ್ಗಟ್ಟಿನ ವ್ಯಕ್ತಿ. ತಮ್ಮ ಮನೆಯಲ್ಲಿ ಎಲ್ಲರನ್ನೂ ಬೇರ್ಪಡಿಸಿ, ಸಮಾಜದ ಮುಂದೆ ಜಾತಿ, ಧರ್ಮ ಒಗ್ಗೂಡಿಸುವ ಕರೆ ನೀಡುವುದು ಹಾಸ್ಯಾಸ್ಪದ.

ಇಲ್ಲಿ ಜನರ ಬದುಕು ಇರುವುದೇ ಹೊಟ್ಟೆಪಾಡಿಗಾಗಿ, ವೃತ್ತಿ ಜೀವನ ಸಾಗಿಸುವುದಕ್ಕಾಗಿ ಎಲ್ಲೋ ನಡೆದ ಘಟನೆ ಎಲ್ಲೋ ನಡೆದಂತಹ ಘಟನೆಗೆ ಯಾರು ಹೊಣೆಗಾರರಲ್ಲ. ಆ ಘಟನೆಗೆ ಕಾರಣರಾದವರೇ, ಹೊಣೆಗಾರರು. ಯಾರು, ಯಾರಿಗೂ ಸಂಬಂಧವೇ ಇಲ್ಲ. ಯಾರು ತಮ್ಮ ವೃತ್ತಿ, ಕೆಲಸ ಬಿಟ್ಟು ಬರುವುದಿಲ್ಲ ಭಾಗಿಯಾಗಲ್ಲ ಇದೇ ಜೀವನದ ಸತ್ಯ ದರ್ಶನ.


ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?


ಪಂಚ ಗ್ಯಾರಂಟಿ ನೀಡಿ, ಬಡ, ಮಧ್ಯಮ ವರ್ಗದ ಜನರಿಗೆ ಸರ್ಕಾರ ಆಸರೆವಾಯಿತು, ಈ ಹಿಂದೆ ಬಂದಂತಹ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡಿರಲಿಲ್ಲ. ಅಂದಮೇಲೆ ಎಲ್ಲ ಗ್ರಾಮಗಳ ರಸ್ತೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದಬೇಕಿತ್ತು. ಆದರೂ ಏಕೆ ಅಭಿವೃದ್ಧಿ ಆಗಲಿಲ್ಲ. ಈ ಹಿಂದಿನ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡದೇ ಅಭಿವೃದ್ಧಿ ಮಾಡಿಲ್ಲ. ಈಗಿನ ಸರ್ಕಾರ ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುವುದು ಅಂದ್ರೇ ಸಾಮಾನ್ಯ ಕೆಲಸವಲ್ಲ. ಸಂಪನ್ಮೂಲ ಕ್ರೋಢೀಕರಿಸುವುದು ಸವಾಲಿನ ಕೆಲಸವಾಗಲಿದೆ. ಹಿಂದಿನ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿ, ಸರ್ಕಾರ ಕೆಡವಿ, ಹೊಸ ಸರ್ಕಾರ ರಚನೆ ಮಾಡುವ ಹುಮ್ಮಸ್ಸು ಬರುತ್ತದೆ.


ಅಭಿವೃದ್ಧಿ ವಿಷಯದಲ್ಲಿ ನಿರಾಸಕ್ತಿ ಬರುತ್ತದೆ. ಇಂತಹ ವಿಚಾರ ಬಿಟ್ಟರೇ, ಅಭಿವೃದ್ಧಿ ಆಗುತ್ತಿಲ್ಲ ಅನ್ನುವುದಕ್ಕೆ ಯಾವ ರಾಜಕಾರಣಿಗಳಿಗೆ ನೈತಿಕತೆ ಇದೆ. ಯಾವುದೇ ಗ್ಯಾರಂಟಿ ಇಲ್ಲದೇ ಸರ್ಕಾರ ನಡೆಸಿದರು, ಸಾಕಷ್ಟು ಗ್ರಾಮಗಳು ಅಭಿವೃದ್ಧಿ ಆಗಿಲ್ಲ. ಈಗ ಗ್ಯಾರಂಟಿ ಮುಂದೆ ಬಜೆಟ್ ಬಗ್ಗೆ ವರ್ಣನೆ ಪದಗಳು ಇಲ್ಲ. ಗ್ಯಾರಂಟಿಯಿಂದ ಜನರ ಜೀವನ ಅಲ್ಪ ಸ್ವಲ್ಪ ಸುಧಾರಣೆಯಾಗಿದೆ, ಗ್ಯಾರಂಟಿ ಯೋಜನೆ ಮುಂದೆ ಬಜೆಟ್ ಶೂನ್ಯ. ಗ್ಯಾರಂಟಿಗಳು ಜನರ ಕಷ್ಟಕ್ಕೆ ಆಸರೆಯಾಗಿದೆ. ಅರ್ಹರಿಗೆ ಗ್ಯಾರಂಟಿ ತಲುಪಿದರೇ ಇನ್ನು ಚಂದ. ಗ್ಯಾರಂಟಿ ನೆಪ ಹೇಳುವ ಮೂಲಕ ಅಭಿವೃದ್ಧಿ ಆಗಿಲ್ಲ ಅನ್ನುವ ರಾಜಕಾರಣಿ ನೈತಿಕತೆ ಮೌಲ್ಯ ಕುಸಿದಿದೆ.

23 Mar 2025

ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸಿ, ಬುದ್ದಿ ಬರಲಿ

By
Image is not loaded The state government should do the work of running buses only to the last village of the state bordering Maharashtra. It is imperative to teach a lesson to the thugs who are creating trouble by keeping land, water and language issues in mind. There is no compromise on the issue of land, water and language in Karnataka. Let the buses run only to the last village of the state bordering Maharashtra and walk from there. If there are additional buses, arrangements should be made to run buses towards Telangana, Andhra Pradesh, Tamil Nadu, Kerala and Goa. The transport department should not bother about the profit and loss issue, they are the ones who want buses,

ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ನೆಲ, ಜಲ, ಭಾಷೆ ವಿಚಾರ ಇಟ್ಟುಕೊಂಡು ಜಗಳ ಜೊತೆ ರಗಳೆ ತೆಗೆಯುವ ಪುಂಡರಿಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ. ಕರ್ನಾಟಕ ರಾಜ್ಯ ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರು ರಾಜಿ ಇಲ್ಲ. ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿವರೆಗೆ ಮಾತ್ರ ಬಸ್ ಓಡಿಸಿ, ಅಲ್ಲಿಂದ ನಡೆದುಕೊಂಡು ಹೋಗಲಿ. ಹೆಚ್ಚುವರಿ ಬಸ್ ಇದ್ರೇ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯದ ಕಡೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಲಾಭ-ನಷ್ಟ ವಿಚಾರದಲ್ಲಿ ಸಾರಿಗೆ ಇಲಾಖೆ ತಲೆಕೆಡಿಸಿಕೊಳ್ಳಬಾರದು ಅವರಾಗಿವೆ ಬಸ್ ಬೇಕು,

ಬಸ್ ಬಿಡಿ ಅನ್ನುವರಿಗೂ ಮಹಾರಾಷ್ಟ್ರಕ್ಕೆ ಬಸ್ ಬಿಡಬಾರದು ಒಂದುವೇಳೆ ಬಸ್ ಬೇಕು ಅಂತ ಹೋರಾಟ ಮಾಡಲಿ ಆಗ ಬಸ್ ಬಿಡುವ ವಿಚಾರ ನೋಡೋಣ ಅನ್ನುವ ಮೂಲಕ ತಕ್ಕ ಪಾಠ ಕಲಿಸಬೇಕು. ಯಾವಾಗಲೂ ಬಸ್ ವಿಚಾರ ಇಟ್ಟಿಕೊಂಡೆ ರಗಳೆ ಎಬ್ಬಿಸುವ ಕೆಲಸವಾಗುತ್ತಿದೆ ಅದಕ್ಕೆ ಬಸ್ ಸಂಚಾರ ನಿಲ್ಲಿಸಿದ್ರೇ ಯಾವುದರ ಮೇಲೆ ರಗಳೆ ತೆಗೆಯಲು ಸಾಧ್ಯ. ಬಡಪಾಯಿ ಕಂಡಕ್ಟರ್ ಮೇಲೆ ಸುಳ್ಳು ಕೇಸ್ ಮತ್ತು ಹಲ್ಲೆ ಮಾಡಿದ್ದು ಖಂಡನೀಯ. ಮಹಾರಾಷ್ಟ್ರದ ಗಡಿ ಭಾಗದ ಅಭಿವೃದ್ಧಿ ನೋಡಿದ್ರೇ. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ವಿಷಯ ಇಟ್ಟುಕೊಂಡು ಅಲ್ಲಿನ ಗಡಿ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಇಂದಿಗೂ ಹಪಿಸುತ್ತಿವೆ. ಅಷ್ಟೇ ಯಾಕೆ ಕರ್ನಾಟಕ ಬಸ್ ಗಳು ಸೂಪರ್ ಸ್ಪೆಷಾಲಿಟಿ ಹೊಂದಿದೆ.

ಅಲ್ಲಿನ ಬಸ್ ಗಳನ್ನು ನೋಡಿದ್ರೆ ವಾಂತಿ, ವಾಕರಿಕೆ ಬರುತ್ತವು. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಒಮ್ಮೆ ಹೊರಡಿಸಿದ ಅಂತಿಮ ಆದೇಶ ಬದಲಾಗಲೂ ಸಾಧ್ಯವೇ ಇಲ್ಲ. ಮರಾಠಿ ಪುಂಡರು ಪದೇಪದೇ ಗಡಿ, ಭಾಷೆ ವಿವಾದ ಕೆಣಕುವ ಬದಲು ಯಾವುದಾದರು ಕೆಲಸ ಬಗಿಸು ಇದ್ರೇ ನೋಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡವೇ ಆಡಳಿತ ಭಾಷೆ. ಕನ್ನಡ ನೆಲದಲ್ಲಿ ಕನ್ನಡವೇ ಮಾತನಾಡಬೇಕು. ಭಾಷೆ ಗೊತ್ತಿಲ್ಲ ಅಂದ್ರೆ ಸೊನ್ನೆ ಮಾಡಿ, ಚಿತ್ರ ಬರೆದು ತೋರಿಸಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಕನ್ನಡಿಗರು ಮಾಡುತ್ತಾರೆ. ಒತ್ತಾಯಪೂರ್ವಕವಾಗಿ ಇದೆ, ಇಂಥದೇ ಭಾಷೆಯಲ್ಲಿ ಮಾತಾಡಿ ಎಂದು ತಾಕಿತ್ತು ಮಾಡುವ ಅಧಿಕಾರ ಯಾರಿಗೂ ಇಲ್ಲ.

ರಾಜ್ಯ ಸರ್ಕಾರ ಮಾತ್ರ ಅವರಾಗಿವೆ ಬಸ್ ಬೇಕು ಅಂತ ಹೋರಾಟ ಮಾಡುವವರಿಗೂ ಬಸ್ ಬಿಡಬಾರದು ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಅಂತರರಾಜ್ಯ ಸಂಪರ್ಕ ಕಡಿತಗೊಳಿಸಿದಾಗ ಮಾತ್ರ ಕೆಲ ಮರಾಠಿ ಪುಂಡರು ಇಂತಹ ಹೀನಕೃತ್ಯ ನಿಲ್ಲಿಸಲು, ಬುದ್ದಿ ಬರಲು ಸಾಧ್ಯ.

ಎರಡು ನೂತನ ಜಿಲ್ಲಾ ರಚನೆ ಅಗತ್ಯ
ಅಖಂಡ ಧಾರವಾಡ ಜಿಲ್ಲೆ (ಈಗಿನ ಹಾವೇರಿ, ಗದಗ ಜಿಲ್ಲೆ ಒಳಗೊಂಡಂತೆ) ಒಟ್ಟು 23 ತಾಲ್ಲೂಕು, 17 ವಿಧಾನಸಭಾ ಕ್ಷೇತ್ರ ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 1997 ರಲ್ಲಿ ಅಂದಿನ ಸರ್ಕಾರ ಎರಡು ನೂತನ ಗದಗ, ಹಾವೇರಿ ಜಿಲ್ಲೆ ರಚನೆ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿತು. ಇದೇ ರೀತಿ ಬೆಳಗಾವಿ ಜಿಲ್ಲೆ 15 ತಾಲ್ಲೂಕು, 18 ವಿಧಾನಸಭಾ ಕ್ಷೇತ್ರಗಳು, 2 ಲೋಕಸಭಾ ಕ್ಷೇತ್ರಗಳು ಇವೆ ಎರಡು ನೂತನ ಜಿಲ್ಲಾ ರಚನೆ ಮಾಡಲು ಸಾಧ್ಯವಿದೆ. ನಾಲ್ಕು-ನಾಲ್ಕು ಐದು-ಐದು ಜಿಲ್ಲಾ ರಚನೆ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಕೇಂದ್ರದಿಂದ 80-100 ಕಿ.ಮೀ ಅಂತರದಲ್ಲಿರುವ ಯಾವುದಾದರೂ ಎರಡು ನಗರ ಜಿಲ್ಲಾ ಕೇಂದ್ರ ಮಾಡಬಹುದು. ಬೆಳಗಾವಿ ಮಂದಿ ಒಗ್ಗಟ್ಟಿನಿಂದ ಕುಳಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸದೇ.

ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಸಭೆ ಮಾಡಿ ಒಂದು ಸ್ಪಷ್ಟ ನಿರ್ಣಯಕ್ಕೆ ಬಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೇ, ಹೊಸ ಎರಡು ನೂತನ ಜಿಲ್ಲಾ ರಚನೆ ಆಗಲಿದೆ ಇದರಿಂದ 150-200 ಕಿ.ಮೀ ದೂರದಲ್ಲಿರುವ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಅಲ್ಲದೇ ದೊಡ್ಡ ಜಿಲ್ಲೆ ನಿರ್ವಹಣೆ ಮಾಡುವುದು ಅಧಿಕಾರಿಗಳಿಗೂ ತಲೆನೋವಿನ ಕೆಲಸ ಹಾಗಾಗಿ ಎರಡು ಜಿಲ್ಲಾ ರಚನೆ ಮಾಡಿದ್ರೇ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ.

23 Feb 2025

ಕರ್ನಾಟಕ ರಾಜ್ಯದ ಜಿಲ್ಲಾ ತಾಲ್ಲೂಕು ಕೇಂದ್ರಗಳು ಯಾವುವು?

By
Bagalkot, Bagalkot, Jamkhandi, Mudhol, Badami, Bilagi, Hunagund, Rabakavi Banahatti, Ilakalla, Guledagudda, Bangalore City, Bangalore, Yelahanka, Anekal, Kengeri, Krishnarajapura, Bangalore Rural, Doddaballapur, Devanahalli, Hoskote, Nelamangala, Dabaspet, Dodda Belavangala, Ramanagara, Ramanagara, Channapatna, Kanakapura, Magadi, Kunigal, Harohalli, Belgaum, Belgaum, Athani, Bailhongal, Chikkodi, Gokak, Mudalagi, Hukkeri, Khanapur, Rayabhaga, Kagawada, Ramadurga, Savadatti, Nippani, Kittur, Yaragati, Harugeri, Sadalga,

ಬಾಗಲಕೋಟೆ, ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ, ಬೀಳಗಿ, ಹುನಗುಂದ, ರಬಕವಿ ಬನಹಟ್ಟಿ, ಇಳಕಲ್ಲ, ಗುಳೇದಗುಡ್ಡ, ಬೆಂಗಳೂರು ನಗರ, ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜ ಪುರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದಾಬಸ್ ಪೇಟೆ, ದೊಡ್ಡ ಬೆಳವಂಗಲ, ರಾಮನಗರ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಹಾರೋಹಳ್ಳಿ, ಬೆಳಗಾವಿ, ಬೆಳಗಾವಿ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಮೂಡಲಗಿ, ಹುಕ್ಕೇರಿ, ಖಾನಾಪುರ, ರಾಯಭಾಗ, ಕಾಗವಾಡ, ರಾಮದುರ್ಗ, ಸವದತ್ತಿ, ನಿಪ್ಪಾಣಿ, ಕಿತ್ತೂರ, ಯರಗಟ್ಟಿ, ಹಾರೂಗೇರಿ, ಸದಲಗಾ,

ಬಳ್ಳಾರಿ, ಬಳ್ಳಾರಿ, ಕಂಪ್ಲಿ, ಸಂಡೂರು, ಶಿರುಗುಪ್ಪ, ಕುರುಗೋಡ, ಬೀದರ, ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮ್ನಾಬಾದ್, ಔರಾದ, ಚಿಟಗುಪ್ಪಾ, ಹುಲಸೂರ, ಕಮಲಾ ನಗರ, ವಿಜಯಪುರ, ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ, ಬಬಲೇಶ್ವರ, ತಿಕೋಟಾ, ಕೊಲ್ಹಾರ, ನಿಡಗುಂದಿ, ದೇವರ ಹಿಪ್ಪರಗಿ, ಚಡಚಣ, ಆಲಮೇಲ, ಚಾಮರಾಜ ನಗರ, ಚಾಮರಾಜ ನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹನೂರು, ಚಿಕ್ಕಮಗಳೂರು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆ, ಕಳಸ, ಅಜ್ಜಂಪುರ,

ಚಿತ್ರದುರ್ಗ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಪರಶುರಾಂಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರ, ದಕ್ಷಿಣ ಕನ್ನಡ, ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಕಡಬ, ದಾವಣಗೆರೆ, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಧಾರವಾಡ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ, ಅಣ್ಣಿಗೇರಿ, ಹುಬ್ಬಳ್ಳಿ ನಗರ, ಗದಗ, ಗದಗ-ಬೆಟಗೇರಿ, ನರಗುಂದ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ, ಕಲಬುರಗಿ, ಕಲಬುರಗಿ, ಆಳಂದ, ಸೇಡಂ, ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಜೀವರ್ಗಿ, ಕಾಳಗಿ, ಯಡ್ರಾಮಿ, ಶಹಾಬಾದ, ಕಮಲಾಪುರ,

ಯಾದಗಿರಿ, ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರ, ಹಾಸನ, ಹಾಸನ, ಅರಸಿಕೆರೆ, ಚೆನ್ನರಾಯಪಟ್ಟಣ, ಹೊಳೇನರಸೀಪುರ, ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು, ಹಾವೇರಿ, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಸವಣೂರ, ಹಿರೇಕೇರೂರು, ಶಿಗ್ಗಾಂವ, ಕೊಡಗು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ, ಕೋಲಾರ, ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಚೇಲೂರು,

ಕೊಪ್ಪಳ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬರ್ಗಾ, ಕುಕನೂರ, ಕಾರಟಗಿ, ಕನಕಗಿರಿ, ಮಂಡ್ಯ, ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೃಷ್ಣರಾಜ ಪೇಟೆ, ನಾಗಮಂಗಲ, ಪಾಂಡವಪುರ, ಮೈಸೂರು, ಮೈಸೂರು, ಹುಣಸೂರು, ಕೃಷ್ಣರಾಜನಗರ, ನಂಜನಗೂಡು, ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ, ಟಿನರಸೀಪುರ, ಸರಗೂರು, ಸಾಲಿಗ್ರಾಮ, ರಾಯಚೂರು, ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿ೦ಗಸೂಗೂರು, ಮಸ್ಕಿ, ಶಿರವಾರ, ಶಿವಮೊಗ್ಗ, ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ,

ತುಮಕೂರು, ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ, ಕೊರಟಗೆರೆ, ಪಾವಗಡ, ತುರುವೆಕೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರ, ಉಡುಪಿ, ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಉತ್ತರ ಕನ್ನಡ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ, ದಾಂಡೇಲಿ, ಹೊಸಪೇಟೆ, ಹೊಸಪೇಟೆ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ,

20 Feb 2025

ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ

By
A few days ago, there was a news. In it, there was news under the title of Vajastra against unnecessary RTI applications, restraining order against further applications and others. Whatever the news, some small work is being done by social workers and RTI activists and has improved. What is VIP? A very important person, a VIP, can disguise himself as a common person, go to any of the 45 government departments, submit an application, and if he comes back with a simple work, he can be paraded and honored,

ಕೆಲವು ದಿನಗಳ ಹಿಂದಷ್ಟೇ, ಒಂದು ಸುದ್ದಿ ಬಂದಿತ್ತು. ಅದರಲ್ಲಿ ಅನಗತ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಅರ್ಜಿಗಳ ವಿರುದ್ಧ ವಜಾಸ್ತ್ರ, ಇನ್ನುಮುಂದೆ ಅರ್ಜಿ ಹಾಕದಂತೆ ನಿರ್ಬಂಧ ಆದೇಶ ಇನ್ನಿತರ ಶೀರ್ಷಿಕೆಯಡಿ ಸುದ್ದಿಯಾಗಿತ್ತು. ಸುದ್ದಿ ಏನೇ ಇರಲಿ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರಿಂದ ಕೆಲವು ಅಲ್ಪ ಸ್ವಲ್ಪ ಕೆಲಸ ಕಾರ್ಯಗಳು ನಡೆಯುತ್ತಿವೆ ಮತ್ತು ಸುಧಾರಿಸಿವೆ. ವಿಐಪಿ ಅಂತ ಏನು ಕರೆಯಲ್ಪಡುವ ಅಂದರೆ ಬಹಳ ಮುಖ್ಯ ವ್ಯಕ್ತಿ ವಿಐಪಿ ಎಂಬ ವ್ಯಕ್ತಿ ಸಾಮಾನ್ಯ ವ್ಯಕ್ತಿ ತರ ವೇಷ ಧರಿಸಿ, 45 ಸರ್ಕಾರಿ ಇಲಾಖೆಯಲ್ಲಿ ಯಾವುದಾದರೂ ಒಂದು ಸರ್ಕಾರಿ ಇಲಾಖೆಗೆ ತೆರಳಿ, ಅರ್ಜಿ ಸಲ್ಲಿಸಿ, ತಮ್ಮ ಕೆಲಸ ಕಾರ್ಯ ಸರಳವಾಗಿ ಮಾಡಿಕೊಂಡು ಬಂದರೇ, ಅವರನ್ನು ಮೆರವಣಿಗೆ ಮಾಡಿ,

ಸನ್ಮಾನ ಮಾಡಬಹುದು ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲ್ಲಿಸಾಗಿ ದಕ್ಕುವುದಿಲ್ಲ ಸುದೀರ್ಘ, ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತದೆ ಇಲ್ಲವೇ ಲಂಚ ನೀಡಬೇಕು ಇವರೆಡು ಸಮಸ್ಯೆಗಳು ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಗೊತ್ತಿದೆ. ಅಧಿಕಾರಿಗಳು ಯಾವ ಕೆಲಸ ಅಷ್ಟು ಸರಳವಾಗಿ ಮಾಡಿಕೊಡುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕು ಹಾಕಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಅನ್ನುವುದು ಅವರ ಉದ್ದೇಶವಾಗಿರುತ್ತದೆ. ಅಧಿಕಾರಿಗಳು 30 ದಿನದಲ್ಲಿ ಮಾಹಿತಿ ಕೊಡಲು ಏನು ಸಮಸ್ಯೆ?. ಮಾಹಿತಿ ಕೇಳುವ ಹಕ್ಕು ಸಾರ್ವಜನಿಕರದ್ದು, ಮಾಹಿತಿ ಕೊಡುವ ಹಕ್ಕು ಅಧಿಕಾರಿಗಳದ್ದು ಅಲ್ಲವೇ. ಸರಿಯಾದ ಮಾಹಿತಿ ಒದಗಿಸಿದರೇ ಪ್ರಥಮ ಮೇಲ್ಮನವಿ,

ದ್ವಿತೀಯ ಮೇಲ್ಮನವಿ ಎಂಬ ಪ್ರಶ್ನೆಯೇ ಉದ್ಬವವಾಗಲ್ಲ. ಸಾರ್ವಜನಿಕರು ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಿದರೇ ಸರಿಯಾದ ಸ್ಪಂದನೆ ಅಧಿಕಾರಿಗಳು ಕೊಡಲ್ಲ. ಸ್ಪಂದನೆ ಕೊಟ್ಟರು ದಿಕ್ಕು ತಪ್ಪಿಸುವಂತಹ ತಪ್ಪು ಮಾಹಿತಿ ನೀಡುತ್ತಾರೆ. ಅಲ್ಲದೇ ಕೇಳಲು ಹೋದಲ್ಲಿ ರೌಡಿ, ಗುಂಡಾ ವರ್ತನೆ ಮಾಡ್ತಾರೆ ಅಂತ ಸಾರ್ವಜನಿಕರು ಸಾಕಷ್ಟು ಸಲ ಪತ್ರಿಕೆ, ದೃಶ್ಯ ಮಾಧ್ಯಮದ ಪತ್ರಕರ್ತರ ಮುಂದೆ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿ ಆರೋಪಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಅರ್ಜಿ ಹಾಕಿದ್ರೇ ಸ್ಪಂದನೆ ಕೊಡುತ್ತಾರ? ಇದಕ್ಕೂ ಅದೇ ರೀತಿ ಪ್ರಕ್ರಿಯೆ ನೀಡಿ ಕಚೇರಿಯಿಂದ ಸಾರ್ವಜನಿಕರನ್ನು ಆಚೆ ಕಳಿಸುವ ಮನಸ್ಥಿತಿ ಇದೆ. ಆದ್ದರಿಂದ ವ್ಯವಸ್ಥೆ ಬದಲಾಗಲ್ಲ. ಎಲ್ಲಿಯವರೆಗೆ ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೋ,

ಅಲ್ಲಿವರೆಗೆ ಸರ್ಕಾರ ಮರು ಆಯ್ಕೆಯಾಗಿ ಬರುತ್ತದೆ. ಉದಾಹರಣೆಯಾಗಿ ತೆಗೆದುಕೊಂಡರೇ ಬೊಮ್ಮಾಯಿ ಸರ್ಕಾರ ಬೀಳಲು ಇದು ಒಂದು ಕಾರಣವಾಯಿತು ಅಂತಲೂ ಹೇಳಬಹುದು. ಸರ್ಕಾರ ಬೀಳಬೇಕು ಎಂತಲೇ ಕೆಲ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡದೇ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡದೇ ಕಾಲಹರಣ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆಗಳು ತಲೆನೋವಿನ ಸಮಸ್ಯೆಯಾಗುದಲ್ಲದೇ ಸರ್ಕಾರಕ್ಕೂ ಮುಜುಗರವಾಗುತ್ತಿದೆ. ಆದರಿಂದ ವಿಐಪಿ ಎನ್ನುವುದು ಹೆಸರು ಮಾತ್ರ ಸಾಮಾಜಿಕ ಕಾರ್ಯಕರ್ತ, ಮಾಹಿತಿ ಕಾರ್ಯಕರ್ತ ಎನ್ನುವುದು ಉಸಿರು ಆಗಿದೆ. ಅವರನ್ನು ಹತ್ತಿಕ್ಕುವ ಪ್ರಯತ್ನ ಬೇಡ,

ಬಗೆಹರಿಯಲಾರದಂತ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರು ಬಗೆಹರಿಸಿದ್ದ ಉದಾಹರಣೆ ಸಾಕಷ್ಟಿವೆ. ಅಂತಹವರನ್ನು ಪ್ರೋತ್ಸಾಹಿಸುವ. ಸನ್ಮಾನಿಸುವ ಕಾರ್ಯವಾಗಲಿ.

ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ & ಗ್ರಾಮೀಣ ಬಸ್‌ಗಳಿಗೆ ಮಾತ್ರ ಅವಕಾಶ ನೀಡಿ?

By
Hubballi: The old bus stand has been inaugurated. It has not been handed over as some work is pending. After the handover, buses will operate but the bus stand has been named as the city and suburban bus stand. Most people come from the village area, so the old bus stand was the suburban and rural bus stand from the beginning. The city bus stand has already been built at the CBT in Durgadabail, why only two bus stands for the city bus stand? High-speed buses connecting the taluk and district centers operate at the Hosur bus stand and Gokul bus stand.

ಹುಬ್ಬಳ್ಳಿ: ಹಳೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಇನ್ನು ಕೆಲ ಕಾಮಗಾರಿ ಬಾಕಿ ಇರುವ ಕಾರಣ ಹಸ್ತಾಂತರಿಸಿಲ್ಲ. ಹಸ್ತಾಂತರಿಸಿದ ಬಳಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ ಆದರೆ ಬಸ್ ನಿಲ್ದಾಣಕ್ಕೆ ನಗರ ಮತ್ತು ಉಪನಗರ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ. ಅತಿ ಹೆಚ್ಚು ಜನ ಬರುವುದು ಹಳ್ಳಿ ಭಾಗದಿಂದ ಮೊದಲಿನಿಂದಲೂ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ, ಗ್ರಾಮೀಣ ಭಾಗದ ಬಸ್ ನಿಲ್ದಾಣವಾಗಿತ್ತು. ನಗರ ಬಸ್ ನಿಲ್ದಾಣ ಈಗಾಗಲೇ ದುರ್ಗದಬೈಲ್‌ನಲ್ಲಿರುವ ಸಿಬಿಟಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ ನಗರ ಬಸ್ ನಿಲ್ದಾಣಕ್ಕೆ ಎರಡೇ ಎರಡು ಬಸ್ ನಿಲ್ದಾಣ ಏಕೆ? ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ಬಸ್ ನಿಲ್ದಾಣದಲ್ಲಿ ತಾಲೂಕು, ಜಿಲ್ಲಾ ಕೇಂದ್ರ ಸಂಪರ್ಕಿಸುವ ವೇಗದೂತ ಬಸ್ ಸಂಚಾರ ಮಾಡುತ್ತವೆ.

ಇವುಗಳು ಎಂದಿನಂತೆ ಸಂಚಾರ ಇರಲಿ. ನೂತನವಾಗಿ ಉದ್ಘಾಟನೆಗೊಂಡ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮಾತ್ರ ಅವಕಾಶ ನೀಡಬೇಕು. ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಕಂಪನಿ ಬಸ್ ನಿಲ್ದಾಣ ಹಸ್ತಾಂತರ ಮಾಡಿದ ಬಳಿಕ ಉಪನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಎಂದು ಹೆಸರಿಟ್ಟು ಸಂಚರಿಸಲು ಅವಕಾಶ ನೀಡಬೇಕು. ನಗರ ಬಸ್‌ಗಳು ಯಥಾಪ್ರಕಾರ ಸಿಬಿಟಿ ಬಸ್ ನಿಲ್ದಾಣದಿಂದ ಬಂದು ಹಳೆ ಬಸ್ ನಿಲ್ದಾಣದಲ್ಲಿ ಹಾಗೆಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡಲಿ. ವೇಗದೂತ ಬಸ್ ಸೇರಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರದ ಬಸ್‌ಗಳು ಗೋಕುಲ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣದಿಂದ ಸಂಚಾರಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮವಹಿಸಬೇಕು. ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮೀಸಲಿಟ್ಟು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕಿದೆ.

ಸಮೂಹ ಸಂವಹನವಿಲ್ಲದ ಜಗತ್ತು ಸೃಷ್ಟಿಸಲು ಸಾಧ್ಯವೇ?

By
When the day breaks, we must talk to each other, whether through letters, newspapers, media, radio, telephone, speech or even facial expressions. Without communication, no daily work can be done. The basic purpose of communication is for a person to freely express his opinion on every subject. Freedom of speech is linked to communication. But some controversial statements such as caste, religion, state, country, language, dialect, etc., which are derogatory to a very popular person or a popular living or non-living thing, are examples of intense uproar and dissatisfaction.

ದಿನ ಬೆಳಗಾದರೆ, ಒಬ್ಬರಿಗೊಬ್ಬರು ಮಾತಾಡಲೇಬೇಕು ಇಲ್ಲವೇ ಪತ್ರದ ಮೂಲಕ, ಪತ್ರಿಕೆ, ಮಾಧ್ಯಮಗಳ ಮೂಲಕ, ರೇಡಿಯೊ ಮೂಲಕ, ದೂರವಾಣಿ ಮೂಲಕ, ಮಾತಿನ ಮೂಲಕ ಅಥವಾ ಮುಖದ ಹಾವಭಾವ ಕೈ ಸೊನ್ನೆಯಾದರೂ ಮಾಡಲೇಬೇಕು. ಸಂವಹನ ಇಲ್ಲದಿದ್ದರೇ ದಿನನಿತ್ಯ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಮನುಷ್ಯ ಪ್ರತಿಯೊಂದು ವಿಷಯವನ್ನು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಸಂವಹನದ ಮೂಲ ಉದ್ದೇಶವಾಗಿದೆ. ಸಂವಹನಕ್ಕೆ ವಾಕ್ ಸ್ವಾತಂತ್ರ‍್ಯ ಕೈ ಜೋಡಿಸಿದೆ. ಆದರೆ ಕೆಲವು ವಿವಾದಾತ್ಮಕ ಹೇಳಿಕೆಗಳಾದ ಜಾತಿ, ಧರ್ಮ, ರಾಜ್ಯ, ದೇಶ, ಭಾಷೆ, ನಾಡು ನುಡಿ ಸೇರಿದಂತೆ ಅತಿಹೆಚ್ಚು ಜನಪ್ರಿಯತೆ ಹೊಂದಿದ ವ್ಯಕ್ತಿ ಬಗ್ಗೆ ಅಥವಾ ಜನಪ್ರಿಯತೆ ಹೊಂದಿದ ಜೀವ, ನಿರ್ಜೀವ ವಸ್ತುವಿನ ಬಗ್ಗೆ ಅವಹೇಳನ ಮಾಡುವುದು ತೀವ್ರ ಕೋಲಾಹಲ ಅಸಮಾಧಾನ ವ್ಯಕ್ತವಾದ ಉದಾಹರಣೆಗಳು ಸಾಕಷ್ಟಿವೇ.

ಕೆಲವರ ಆಕ್ರೋಶ ಭರಿತ ಹೇಳಿಕೆಯನ್ನು ಸಮಾಧಾನಕರ ಹೇಳಿಕೆಯನ್ನಾಗಿ ತಿದ್ದಿ, ತಿಡಿ ಪತ್ರಿಕೆ ಸಂಪಾದಕರು ಸರಿಪಡಿಸುತ್ತಾರೆ. ಆದರೆ ದೃಶ್ಯ ಮಾಧ್ಯಮದಲ್ಲಿ ಮಾತ್ರ ನೇರವಾಗಿ ಮಾತನಾಡಿದು ಪ್ರಸಾರವಾಗುವುದರಿಂದ ಕೆಲವು ಆಕ್ರೋಶ ಭರಿತ ಹೇಳಿಕೆ ನೀಡಿದ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕರಣಗಳು ಸಾಕಷ್ಟಿವೇ. ಮಾನನಷ್ಟ ಮೊಕದ್ದಮೆ ನ್ಯಾಯಾಲಯಕ್ಕೆ ಹೋಗಿ, ದಂಡ ಕಟ್ಟಿಯೋ, ಕ್ಷೇಮಾಪಣೆ ಕೇಳಿಯೋ ಮುಗಿದು ಬಿಡುತ್ತದೆ. ಆದರೆ ಮಾನನಷ್ಟ ಮೊಕದ್ದಮೆ ಹೂಡಿದ ತಕ್ಷಣ ಯಾರ ಯಾರ ಸಂವಹನ, ವಾಕ್ ಸ್ವಾತಂತ್ರ‍್ಯ ನಿಲ್ಲುವುದಿಲ್ಲ ಅವರ ಅವರ ಜೊತೆ ಸಂವಹನ ಮೂಲಕ ದೈನಂದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ. ಒಂದುವೇಳೆ ಸಂವಹನವನ್ನು ನಿಲ್ಲಿಸಿದರೇ, ಯಾವುದೇ ಕಾರ್ಯಚಟುವಟಿಕೆಗಳು ನಡೆಯುವುದೇ ಇಲ್ಲ.

ಯಾರೇ ಆದರೂ ಹೇಳಿಕೆ ನೀಡುವುದು ತಪ್ಪಲ್ಲ ಅದು ಸತ್ಯವೋ ಸುಳ್ಳೋ ಎಂಬುವುದನ್ನು ಕೂಲಂಕುಶವಾಗಿ ಪರಿಶೀಲಿಸಿ ಹೇಳಿಕೆ ನೀಡುವುದು ಸಂವಹನದ ಮೂಲ ಉದ್ದೇಶವಾಗಿದೆ.

ಸಾಮಾನ್ಯ ವ್ಯಕ್ತಿ ಹೇಳಿಕೆಗೆ ಇಲ್ಲ ಮನ್ನಣೆ
ಸಾಮಾನ್ಯ ವ್ಯಕ್ತಿ ಹೇಳಿಕೆಗಿಂತ ಪ್ರಧಾನಮಂತ್ರಿಗಳು ಹೇಳಿಕೆ ಹೆಚ್ಚು ಪ್ರಭಾವ ಬಿಳುತ್ತದೆ. ಪ್ರಧಾನಮಂತ್ರಿಗಳು ನಿಮ್ಮ ನಿಮ್ಮ ಊರನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಿ ಎಂದರೇ, ಜನ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡುತ್ತಾರೆ. ಇದೇ ಮಾತು ಸಾಮಾನ್ಯ ವ್ಯಕ್ತಿ ಹೇಳಿದ್ರೇ, ತಲೆ ಸರಿ ಇಲ್ವಾ ನಿನಗೆ ಎಂಬ ಪ್ರಶ್ನೆ ಜನ ಮಾಡ್ತಾರೆ. ಅದೇ ರೀತಿ ಪ್ರಧಾನಮಂತ್ರಿಗಳು ಯಾರು ಹೆಸರನ್ನು ಹೇಳದೇ, ಲೇವಡಿ ಮಾಡಿದ್ರೂ ಪ್ರಧಾನಮಂತ್ರಿಗಳು ಇವರನ್ನೇ ಟೀಕಿಸಿದರು ಎಂದು ವರದಿ ಪ್ರಸಾರವಾಗುವುದುಂಟು, ಈ ತರ ಪ್ರಧಾನಮಂತ್ರಿಗಳು ಯಾರ ಹೆಸರನ್ನು ನೇರವಾಗಿ ಹೇಳದೇ, ಈ ತರ ಹೇಳಿಕೆಯ ಉದಾಹರಣೆ ಎಂದರೇ ಬೆಂಗಳೂರು ಗ್ರಾಮಾಂತರ ಮಾಜಿ ಸಂಸದರ ಸೋಲಿಗೂ ಒಂದು ಕಾರಣವಾಯಿತು.

ಈಗ ಸಂಸದನಾಗಿ ಸೋತರು ಮನಸ್ಸು ಮಾಡಿ ಮುಂದೆ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಸ್ಪರ್ಧಿಸಿ, ಗೆದ್ದು ಶಾಸಕರಾಗಬಹುದು ಅದು ಬೇರೆ ವಿಷ್ಯ. ವ್ಯಕ್ತಿಗಿಂತ ಪ್ರಧಾನಮಂತ್ರಿ ಎಂಬ ಗೌರವದ ಹುದ್ದೆಗೆ ಬಹಳ ಬಹುಮುಖ್ಯ ಪ್ರಾಮುಖ್ಯತೆ ಸಿಗುತ್ತದೆ. ಗೌರವನ್ವಿತ ಹುದ್ದೆ ಸಹ ಸಂವಹನ ಬಯಸುತ್ತದೆ. ಯಾವುದೇ ಗೌರವನ್ವಿತ ಹುದ್ದೆಯಿಂದ ಮಾಜಿಯಾದ ವ್ಯಕ್ತಿ ಹೇಳಿಕೆ ಪ್ರಾಮುಖ್ಯತೆ ಕ್ಷೀಣಿಸುತ್ತದೆ. ಆದ್ದರಿಂದ ಯಾವುದೇ ಕೆಲಸ, ಕಾರ್ಯಗಳು ಸ್ಥಗಿತಗೊಳ್ಳಬಹುದು ಆದರೆ ಸಂವಹನ ತಡೆರಹಿತವಾಗಿರುತ್ತದೆ ಸ್ಥಗಿತಗೊಳ್ಳುವುದಿಲ್ಲ. ಇದು ರಾಜಕಾರಣಿಗಳಿಗೆ ಮನವರಿಕೆಯಾಗಲಿ ಎಂಬ ಸದುದ್ದೇಶವಾಗಿದೆ.

ಆಡಳಿತ ಯಂತ್ರ ಚುರುಕುಗೊಳಿಸಲು ಪ್ರತಿ 20 ತಿಂಗಳಗೊಮ್ಮೆ ಸಚಿವ ಸಂಪುಟ ಪುನರ್ ರಚಿಸಿ?

By
The Congress high command has kept the issue of the power formula a secret. No one can guess. Only the Leader of Opposition in the Lok Sabha Rahul Gandhi, AICC President Mallikarjun Kharge, the Chief Ministers and Deputy Chief Ministers may know, but any government has a time limit of five years, i.e. 60 months to rule. It has already been more or less 17 months since the government was formed. Although the government has won praise from the people for various programs and guarantee schemes, the public does not want to see the current minister in the district headquarters again and again.

ಕಾಂಗ್ರೆಸ್ ಹೈಕಮಾಂಡ್ ಅಧಿಕಾರದ ಸೂತ್ರದ ವಿಚಾರವನ್ನು ಗುಪ್ತವಾಗಿ ಇರಿಸಿದೆ. ಯಾರಿಗೂ ಊಹಿಸಲು ಸಾಧ್ಯವಿಲ್ಲ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತಿರಬಹುದೇನು ಆದರೆ ಯಾವುದೇ ಸರ್ಕಾರವಾಗಲಿ ಐದು ವರ್ಷ ಅಂದರೆ 60 ತಿಂಗಳು ಅಧಿಕಾರ ನಡೆಸಲು ಕಾಲಾವಕಾಶ ಇರುತ್ತದೆ. ಈಗಾಗಲೇ ಸರ್ಕಾರ ರಚನೆಯಾಗಿ ಹೆಚ್ಚು-ಕಡಿಮೆ 17 ತಿಂಗಳಾಗಿದೆ. ಸರ್ಕಾರ ವಿವಿಧ ಕಾರ್ಯಕ್ರಮ, ಗ್ಯಾರಂಟಿ ಯೋಜನೆಗಳಿಂದ ಜನಮೆಚ್ಚುಗೆ ಪಾತ್ರರಾದರೂ ಪ್ರಸ್ತುತ ಸಚಿವರನ್ನು ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರು ಹಳೆ ಮುಖ ಮತ್ತೆ ಮತ್ತೆ ನೋಡಲು ಬಯಸುವುದಿಲ್ಲ.

ಪ್ರಸ್ತುತ ಸಚಿವರನ್ನು ಬೇರೆ-ಬೇರೆ ಜಿಲ್ಲೆಗೆ ಅಥವಾ ಅಂತರಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಮತ್ತು 20 ತಿಂಗಳು ಬಿಟ್ಟು ಬೇರೆಯವರಿಗೂ ಅವಕಾಶ ನೀಡುವುದು ಅವಶ್ಯಕವಾಗಿರುತ್ತದೆ. ಮಂತ್ರಿಗಳು ಎಂದಮೇಲೆ ಕೇವಲ ಅಯಾ ಇಲಾಖೆಯ, ಅಯಾ ಜಿಲ್ಲೆಯ ಸಚಿವರಾಗಿ ಇರುವುದಿಲ್ಲ. ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿಯಾಗಿರುತ್ತಾರೆ. ಈಗಿರುವ 4-5 ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ 50-60 ಶಾಸಕರು ಇರುವುದರಿಂದ ಅವರಿಗೂ ಅವಕಾಶ ನೀಡುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸುವುದು ಅಗತ್ಯವಿರುತ್ತದೆ. ಈಗಿರುವ ಅಧಿಕಾರಿಗಳು ಯಾರು ಯಾರ ಮಾತನ್ನು ಕೇಳುತ್ತಿಲ್ಲ. ಜನ ಸಾರ್ವಜನಿಕರು ಕೇಳುತ್ತಿರುವುದು ಕಾಯ್ದೆ ಕಾನೂನಿನ ಪ್ರಕಾರ,

ನಿಯಮಾನುಸಾರ ಸಿಗಬೇಕಾದ ಸೌಲಭ್ಯ ಯೋಜನೆಗಳನ್ನು ಆದರೆ ಅಧಿಕಾರಿಗಳು ಅವುಗಳನೆಲ್ಲ ಓದಗಿಸಲು ನೂರಾರು ಬಾರಿ ವಿಚಾರ ಮಾಡಿ, ಕ್ರಮ ಕೈಗೊಳ್ಳಬೇಕಾ ಅಥವಾ ಬೇಡವೇ ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಲಿಸಿದ ಜನಸ್ಪಂದನ ಕಾರ್ಯಕ್ರಮದ ಸಾರ್ವಜನಿಕರ ಕುಂದುಕೊರತೆಯ ಅರ್ಜಿಗಳು ಹಾಗೂ ದಿನನಿತ್ಯ ವಿಧಾನಸೌಧ ಸಚಿವಾಲಯಕ್ಕೆ ಬರುತ್ತಿರುವ ಪತ್ರದ ಅರ್ಜಿಗಳು ಮತ್ತು ಜನಸ್ಪಂದನ ಐ.ಪಿ.ಜಿ.ಆರ್.ಎಸ್ ಅನ್‌ಲೈನ್‌ನಲ್ಲಿ ದಾಖಲಾದ ಸಾರ್ವಜನಿಕರ ಅರ್ಜಿಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಲಾಗಿದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಶಾಸಕರು ಜನರ ಕಷ್ಟ ದೂರ ಮಾಡಲು ಪಣ ತೊಡುತ್ತಿದ್ದಾರೆ ಆದರೆ ಅಧಿಕಾರಿಗಳಿಂದ ಬರುವ ಉತ್ತರ ತಪ್ಪು ಮಾಹಿತಿ ಮತ್ತು ವಿಳಂಬ ನೀತಿ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಯ ಅಧಿಕಾರಿಗಳಿಗೆ ಹೇಳುವರು ಇಲ್ಲ ಕೇಳುವರು ಇಲ್ಲ. ಹೀಗಾಗಿ ಆಡಳಿತ ಯಂತ್ರ ಚುರುಕುಗೊಳಿಸಲು ಪ್ರತಿ 20 ತಿಂಗಳಗೊಮ್ಮೆ 34 ಸಚಿವರಲ್ಲಿ ಕೇವಲ 20 ಸಚಿವರನ್ನು ಬದಲಾಯಿಸಿದರೆ, ಆಡಳಿತ ಯಂತ್ರ ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳೆಲ್ಲ ಪರಿಹಾರವಾಗಲೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಅದಕ್ಕೆ ಪ್ರತಿ 20 ತಿಂಗಳಗೊಮ್ಮೆ ಮೂರು ಸಲ ಸಚಿವ ಸಂಪುಟ ಪುನರ್ ರಚಿಸಬೇಕಿದೆ.

ತಕ್ಕ ಪ್ರತ್ಯುತ್ತರ ರಾಜ್ಯ ಆಡಳಿತ ಪಕ್ಷ ನೀಡಲಿ

By
Condemning the discriminatory policy of the central government in allocating funds to the state of Karnataka, the state government's Chief Minister, Deputy Chief Ministers, all ministers, MLAs, and Legislative Council members held a protest at Jantar Mantar in the national capital, Delhi, wearing Kannada shawls, drawing the attention of the country and embarrassing the central government. Not only that, but Congress MLAs won in 136 seats, making it difficult for the Prime Minister to accept it. It would have been nice if,

ಕರ್ನಾಟಕ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಖಂಡಿಸಿ, ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಕನ್ನಡ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸುವ ಮೂಲಕ ದೇಶದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು. ಅಷ್ಟೇ ಅಲ್ಲದೇ 136 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲುವ ಮೂಲಕ ಪ್ರಧಾನಮಂತ್ರಿಗಳಿಗೂ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಯಿತು. ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟದ ಜೊತೆಗೆ ಅಂದೇ ರಾಷ್ಟ್ರಪತಿ ಭವನಕ್ಕೆ ಛಲೋ ನಡೆಸಿ ಮನವಿ ಪತ್ರ ಸಲ್ಲಿಸಿ ಬಂದಿದ್ರೇ ಚನ್ನಾಗಿ ಇರುತ್ತಿತ್ತು. ಮತ್ತಷ್ಟು ದೆಹಲಿ ಮಂದಿ ಗಮನ ಕರ್ನಾಟಕ ಕಡೆ ತಿರುಗಿ ನೋಡಿ,

ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ಹೆಚ್ಚು ನೀಡಲು ಏಕೆ ಮೀನಾಮೇಷ?. ಒಂದು ವೇಳೆ ಉದಾಹರಣೆಯಾಗಿ ತೆಗೆದುಕೊಂಡರೆ ಕೇಂದ್ರಕ್ಕೆ ಪಾವತಿಯಾಗುವ 4 ಲಕ್ಷ ಕೋಟಿ ತೆರಿಗೆ ಹಣ ಕರ್ನಾಟಕ ಸರ್ಕಾರವೇ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಿದ್ರೇ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮಗಳು ಸ್ಮಾರ್ಟ್ ವಿಲೇಜ್ (ಸ್ವಚ್ಛ ಗ್ರಾಮ) ಆಗಲಿದೆ. ಕಲ್ಯಾಣ, ಕಿತ್ತೂರು, ಮೈಸೂರು ಕರ್ನಾಟಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅನ್ವಯ ತಲಾ 10,000 ಸಾವಿರ ಕೋಟಿ ಅನುದಾನ ಮೀಸಲು ಇಡಬಹುದು. ಈ ಎಲ್ಲ ಅಗತ್ಯತೆಗಿಂಥಾ ರಾಜ್ಯಕ್ಕೆ ತೆರಿಗೆ ಹಣ ಹೆಚ್ಚಿಸುವ ಮೂಲಕ,

ರಾಜ್ಯಕ್ಕೆ ಬರಬೇಕಾದ ಹೆಚ್ಚಿನ ತೆರಿಗೆ ಹಣ, ಪಾವತಿಗೆ ತಕ್ಕಂತೆ ನೀಡಲಿ. ವಿಳಂಬ ಮತ್ತು ಮಲತಾಯಿ ಧೋರಣೆ ಸಲ್ಲದು. ಈ ಹಣವನ್ನು ಯಾರು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ. ಯಾರು ತಿನ್ನಲು ಸಾಧ್ಯವಿಲ್ಲ. ಅಭಿವೃದ್ಧಿಗಾಗಿ ಬೇಕಾಗಿರುವ ತೆರಿಗೆ ಹಣ ಬೇಕು. ಈ ವಿಷ್ಯದಲ್ಲಿ ಪಕ್ಷದ ಸಂಸದರು ಅಂತ ತಿಳಿಯುವ ಬದಲು ಕರ್ನಾಟಕ ರಾಜ್ಯದ ಸಂಸದರು ಅಂತ ತಿಳಿದು, ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವುದು ರಾಜ್ಯ ಸಂಸದರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಆಡಳಿತ ಪಕ್ಷದ ಸಂಸದರು ವಿಫಲರಾಗಿದ್ದಾರೆ. ಈಗಾಗ್ಲೇ ಶ್ರೀಮಂತರಿಗೆ ದೇವರು ಎಲ್ಲ ರೀತಿಯ ಸಕಲ ಆಸ್ತಿ, ಸಂಪತ್ತು ನೀಡಿದ್ದು. ಶ್ರೀಮಂತರಿಗೆ ಗ್ಯಾರಂಟಿ ಅವಶ್ಯಕತೆ ಇರುವುದಿಲ್ಲ ಅನ್ನುವುದು ಸಾಮಾನ್ಯ ವ್ಯಕ್ತಿಗೆ ತಿಳಿದ ವಿಷಯ.

ಪಂಚ ಗ್ಯಾರಂಟಿ ಬಡವರಿಗೆ ತುಂಬ ಅವಶ್ಯಕತೆ ಇದೆ. ಆದ್ದರಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಪಂಚ ಗ್ಯಾರಂಟಿ ಮೀಸಲಿಟ್ಟರೇ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿಗಳ ಕೈ ಗ್ಯಾರಂಟಿ ಹೇಳಿಕೆಗೆ ತಕ್ಕ ಪ್ರತ್ಯುತ್ತರ ಮೂಲಕ ರಾಜ್ಯ ಆಡಳಿತ ಪಕ್ಷದ ನಾಯಕರು ಟಾಂಗ್ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಕೇವಲ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಷ್ಟೇ ಅಲ್ಲ. ಎಲ್ಲ ಸಚಿವರು, ಎಲ್ಲ ಕಾಂಗ್ರೆಸ್ ಶಾಸಕರು, ಎಲ್ಲ ಜಿಲ್ಲಾ ಅಧ್ಯಕ್ಷರು, ಪಕ್ಷದ ವಕ್ತಾರರು ತಕ್ಕ ಪ್ರತ್ಯುತ್ತರ ಮುಖಾಂತರ ತಿರುಗೇಟು ನೀಡಬೇಕು ಅಷ್ಟೇ.

ಪೋಲಿಸರಿಗೆ ಸಹಕಾರ ನೀಡಿ

By


Anyone who wants to hold any protest must get permission from the police department, just like political parties and organizations do their protest after getting permission. The protest should always be peaceful. The authorities set a time limit of 7 days, 15 days, 30 days to get permission for the protest. But it is wrong to suddenly attack the police station and policemen just because someone trolled on social media. There is a law for everything. The processes should be done and completed according to the law. It takes some time, wait until then.

ಯಾವುದೇ ಪ್ರತಿಭಟನೆ ಮಾಡಬೇಕಾದರು ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಅಷ್ಟೇ ಯಾಕೆ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಅನುಮತಿ ಪಡೆದು ಹೋರಾಟ ಮಾಡುತ್ತಾರೆ. ಹೋರಾಟ ಯಾವಾಗಲೂ ಶಾಂತ ರೀತಿಯಲ್ಲಿ ಇರಬೇಕು. ಪ್ರತಿಭಟನೆಗೆ ಅನುಮತಿ ಪಡೆಯಲು ಪ್ರಾಧಿಕಾರ ಮೂಲಕ 7 ದಿನ, 15 ದಿನ, 30 ದಿನ ಎಂದು ಸಮಯ ನಿಗದಿಪಡಿಸುತ್ತಾರೆ. ಆದರೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ರು ಅಂತ ಹೇಳಿ, ಏಕಾಏಕಿ ಪೋಲಿಸ್ ಠಾಣೆ, ಪೋಲಿಸರ ಮೇಲೆ ದಾಳಿ ಮಾಡುವುದು ತಪ್ಪು. ಎಲ್ಲದಕ್ಕೂ ಕಾನೂನು ಇದೆ. ಕಾನೂನಿನ ಪ್ರಕಾರ ಪ್ರಕ್ರಿಯೆಗಳು ನಡೆಯಬೇಕು ಮತ್ತು ಪೂರ್ಣಗೊಳ್ಳಬೇಕು. ಅದಕ್ಕೆ ಸ್ವಲ್ಪ ಸಮಯ ಬೇಕು ಅಲ್ಲಿವರೆಗೂ ಕಾಯಬೇಕು.

ಯಾರೋ ಒಬ್ಬರು ಟ್ರೋಲ್ ಮಾಡಿದ್ದು ಯಾರು ನೋಡುತಾರೋ, ಬಿಡ್ತಾರೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳಿಗೆ ಫಾರ್ವರ್ಡ್ ಆಗಿ, ವೈರಲ್ ಮಾಡಿದ್ದರಿಂದ ಗೊಂದಲಕ್ಕೂ ಕಾರಣವಾಗಿರಬಹುದು. ದಿನನಿತ್ಯ ಸಾವಿರಾರೂ ಟ್ರೋಲ್‌ಗೆ ಒಬ್ಬೊಬ್ಬರು ಗುರಿಯಾಗಿದ್ದಾರೆ ಆದರೆ ಅವರು ಯಾರು ತಲೆಕೆಡಿಸಿಕೊಳ್ಳದೇ ಪಬ್ಲಿಸಿಟಿ ಜಾಸ್ತಿ ಆಗಲಿ ಬಿಡು ಅನ್ನುವರೇ ಹೆಚ್ಚು. ಹಾಗಾಗಿ ಪೋಲಿಸರಿಗೆ ತನಿಖೆ ಮಾಡಲು ಸಂಪೂರ್ಣ ಕಾಲಾವಕಾಶ ನೀಡಬೇಕು. ತಾಳ್ಮೆ, ಸಮಾಧಾನ ಇಲ್ಲದೇ ಮತ್ತು ಕಾಲಾವಕಾಶ ನೀಡದೇ ಒಮ್ಮೆಗೆ ಆರೋಪಿಗೆ ಶಿಕ್ಷೆ ಕೊಡಿ ಅಂದ್ರೇ ಪೋಲಿಸರು ನ್ಯಾಯಾಧೀಶರ ಅಲ್ಲ ಕಾನೂನಿನ ಪ್ರಕ್ರಿಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ,

ಮುಂದೇನು ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿವರೆಗೆ ತಾಳ್ಮೆವಹಿಸದೇ. ಏಕಾಏಕಿ ಪೋಲಿಸ್ ಠಾಣೆ ನುಗ್ಗಿ, ದಾಳಿ ಮಾಡಿದ್ರೆ ಪೋಲಿಸರಲ್ಲಿ ಯಾರಿಗಾದರೂ ಗಂಭೀರ ಗಾಯವಾಗಿ ಅಂಗವಿಕಲರಾದರೇ, ಆಕಸ್ಮಿಕ ಜೀವಕ್ಕೆ ಕುತ್ತು ಬಂದರೇ ಯಾರು ಹೊಣೆ? ಯಾರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಾರೋ ಅವರಿಗೆ ಇರುವಷ್ಟು ಗೌರವ ಬೇರೆ ಯಾರಿಗೂ ಇರುವುದಿಲ್ಲ. ಅದಕ್ಕೆ ತನಿಖೆ ಮಾಡಲು ಸಮಯ ನೀಡಬೇಕು, ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಕರ್ನಾಟಕ ರಾಜ್ಯ ಅತ್ಯುತ್ತಮ ಸುಂದರ ನಗರಗಳನ್ನು ಹೊಂದಿದೆ ಅಲ್ಲದೇ ಇಲ್ಲಿನ ಜನ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡ್ತಾರೆ. ನಮ್ಮ ರಾಜ್ಯದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಪ್ರಸಿದ್ಧ ಪಡೆದಿವೆ. ರಾಜ್ಯದ ವಿವಿಧ ದೇವಸ್ಥಾನಗಳಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ.

ದೇವರ ದರ್ಶನ ಪಡುತ್ತಾರೆ. ಕರ್ನಾಟಕ ರಾಜ್ಯದಲ್ಲಿರುವ ಸುಂದರ ನಗರಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಮನಸೋತು ವಿದೇಶಿ, ಬೇರೆ-ಬೇರೆ ರಾಜ್ಯದ ಪ್ರವಾಸಿಗರು ಬರುತ್ತಾರೆ. ಅದಕ್ಕೆ ಎಲ್ಲರೂ ಕಾನೂನು ಪ್ರಕಾರ ನಡೆದುಕೊಳ್ಳುವ ಮೂಲಕ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳುವ ಕಲೆ ಜನರ ಮನದಲ್ಲಿ ಬರಲಿ ಎಂಬ ಆಶಯ.

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-01)

By
 
In a few years, the radio will celebrate its centenary. The path that radio has taken from 1924 to now is very meaningful and exciting. From the time when dozens of people sat around a radio set and listened to it, to today's mobile, tablet, laptop, and digital media, the story is exciting. Radio is now ubiquitous in many roles. Thus, the number of radio listeners today is uncountable. In addition to radio sets, DTH. Car radio sets, mobiles, apps, and the internet are ubiquitous. Although it is small in form, it has become a triple threat in effect.


"ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ

ಪರಿವಿಡಿ

ಅಧ್ಯಾಯ I: ಪ್ರಸ್ತಾವನೆ
 
1.1 ಆಕಾಶವಾಣಿಯ ಹುಟ್ಟು ಹಾಗೂ ಬೆಳವಣಿಗೆ
1.2 ಆಕಾಶವಾಣಿಯ ಧೈಯಗಳು, ಕಾರ್ಯಗಳು ಹಾಗೂ ಪ್ರಭಾವಗಳು
1.3 ಆಕಾಶವಾಣಿ ಹಾಗೂ ಸ್ವಾಯತ್ತತೆ
1.4 ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಪ್ರಕಾರಗಳು, ಸಾಧನೆಗಳು
1.5 ಸಹಕಾರ ಬಾನುಲಿ ಕೇಂದ್ರ ಪ್ರಾರಂಭ
1.6 ಸಹಕಾರ ಬಾನುಲಿ ಕೇಂದ್ರ ಹುಲಕೋಟಿ-ಗದಗ ಸ್ಥಾಪನೆ
1.7 ಸಹಕಾರ ಬಾನುಲಿ ಕೇಂದ್ರಕ್ಕೆ ಒಳಪಡುವ ಗ್ರಾಮಗಳು
1.8 ಸಹಕಾರಿ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವಿರ
1.9 ಸಂದರ್ಶಿಸಿದ ವಿಷಯ ಕೃಷಿ ಮತ್ತು ಸಹಕಾರ
 
ಅಧ್ಯಾಯ II: ಸಾಹಿತ್ಯದ ವಿಮರ್ಶೆ
 
ಅಧ್ಯಾಯ III: ವಿಧಾನಶಾಸ್ತ್ರ (ಸಂಶೋಧನಾ ವಿನ್ಯಾಸ ಮತ್ತು ವಿಧಾನಗಳು)
 
3.1 ಉದ್ದೇಶ
3.2 ಪರಿಕಲ್ಪನೆ
3.3 ವ್ಯಾಪ್ತಿ
3.4 ವಿಧಾನ
3.5 ಪ್ರಶ್ನಾವಳಿ
 
ಅಧ್ಯಾಯ IV ಸಂಶೋಧನೆಯ ಪ್ರಸ್ತುತಿ (ಫಲಿತಾಂಶಗಳು)
 
4.1 ಸಹಕಾರ ಬಾನುಲಿ ಕೇಂದ್ರ ಸಂದರ್ಶನ
4.2 ಮಾಹಿತಿ ವಿಶ್ಲೇಷಣೆ ಹಾಗೂ ವಿವರಣೆ
 
ಅಧ್ಯಾಯ V: ಸಾರಾಂಶ, ಪರಿಣಾಮಗಳು, ತೀರ್ಮಾನಗಳು (ಚರ್ಚೆ)
 
5.1 ಸಮಾರೋಪ
5.2 ಸಹಕಾರ ಬಾನುಲಿ ಕೇಂದ್ರದ ಕಿರು ಚಿತ್ರ ಹಾಗೂ ಬಾನುಲಿ ಕೇಂದ್ರದ ಸಹೋದ್ಯೋಗಿಗಳು
5.3 ಗ್ರಂಥ ಋಣ

ಅಧ್ಯಾಯ I: ಪ್ರಸ್ತಾವನೆ/ಪರಿಚಯ

    ಕೆಲವೇ ವರ್ಷಗಳಲ್ಲಿ ಬಾನುಲಿಗೆ ಶತಮಾನೋತ್ಸವ ಸಂಭ್ರಮ. 1924 ರಿಂದ ಇಲ್ಲಿಯವರೆಗೆ ಬಾನುಲಿ ನಡೆದು ಬಂದ ದಾರಿ ತುಂಬಾ ಅರ್ಥಪೂರ್ಣ, ರೋಮಾಂಚಕ, ಒಂದು ರೇಡಿಯೋ ಸೆಟ್ ಸುತ್ತ ಹತ್ತಾರು ಜನ ಕುಳಿತು ಕೇಳುವ ಕಾಲದಿಂದ ಇಂದಿನ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್,

ಡಿಜಿಟಲ್ ಮಾಧ್ಯಮಗಳ ಮೂಲಕ ರೇಡಿಯೋ ಕೇಳಿ ಆನಂದಿಸುವವರೆಗಿನ ಕಥೆ ರೋಚಕ, ಹಲವು ಭೂಮಿಕೆಗಳಲ್ಲಿ ಲಭ್ಯವಿರುವ ಬಾನುಲಿ ಈಗ ಸರ್ವವ್ಯಾಪಿ. ಹೀಗಾಗಿ ಈಗಿನ ರೇಡಿಯೋ ಶೋತೃಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಾಗಿದೆ. ರೇಡಿಯೋ ಸೆಟ್ ಅಲ್ಲದೇ ಡಿಟಿಎಚ್. ಕಾರ್ ರೇಡಿಯೋ ಸೆಟ್, ಮೊಬೈಲ್, ಆಪ್, ಅಂತರ್ಜಾಲಗಳ ಮೂಲಕ ಸರ್ವವ್ಯಾಪಿಯಾಗಿದೆ. ಸ್ವರೂಪದಲ್ಲಿ ವಾಮನನಾದರೂ ಪರಿಣಾಮದಲ್ಲಿ ತ್ರಿವಿಕ್ರಮ ಎನಿಸಿದೆ. ಪ್ರಸಾರ ಭಾರತಿ ಈ ಎಲ್ಲ ಮಾಧ್ಯಮಗಳನ್ನು ಕ್ರೋಢೀಕರಿಸಿ, ಸಮನ್ವಯಗೊಳಿಸಿ ಅಭಿವೃದ್ಧಿ-ಮಾಹಿತಿ-ಮನರಂಜನೆ-ವಾಣಿಜ್ಯೋದ್ದೇಶಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೊಸ ವರ್ಷದ ಕೊಡುಗೆಯಾಗಿ ಆಕಾಶವಾಣಿ 'ರಾಗಂ' ಎಂಬ 24 ಗಂಟೆಯ ಸಂಗೀತ ವಾಹಿನಿಯನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿತು. ದೇಶದ ಉದ್ದಗಲಕ್ಕೂ ಹರಡಿರುವ ಹಲವು ಹತ್ತು ಆಕಾಶವಾಣಿ ನಿಲಯಗಳ ಧ್ವನಿ ಭಂಡಾರದಿAದ ಆಯ್ದ ಉತ್ಕೃಷ್ಟ ಕಾರ್ಯಕ್ರಮಗಳು ಹಾಗೂ ನೇರ ಪ್ರಸಾರಗಳನ್ನು ಡಿಟಿಎಚ್, ಅಂತರ್ಜಾಲ ಹಾಗೂ ಆಪ್ ಮೂಲಕ ಲಭ್ಯಗೊಳಿಸಿ, ಕಾಲದೇಶಗಳ ಮಿತಿಯನ್ನು ಮೀರಿ ಶ್ರೀಸಾಮಾನ್ಯನಿಗೆ ತಲುಪಿಸುವ ಸ್ತುತ್ಯ ಪ್ರಯತ್ನವೊಂದನ್ನು ಆಕಾಶವಾಣಿ ಇತ್ತೀಚೆಗೆ ನಡೆಸಿತು. ಪ್ರಸಾರ ಭಾರತೀಯ ಅಂಗಗಳಾದ ರೇಡಿಯೋ ಹಾಗೂ ದೂರದರ್ಶನದ ಸಹಭಾಗಿತ್ವ ಇನ್ನೂ ಔಪಚಾರಿಕ ಸ್ಥಿತಿಯಲ್ಲಿದೆ.

ಈ ಉದ್ಯಮ ಚುರುಕುಗೊಳ್ಳಲು ವೃತ್ತಿಪರ ರೀತಿಯಲ್ಲಿ ಹೊಂದಾಣಿಕೆ ಹಾಗೂ ಪರಸ್ಪರ ಕಾರ್ಯಕ್ರಮಗಳ ನಿರಂತರ ಪ್ರಚಾರದಿಂದ ಪ್ರಸಾರ ಭಾರತಿಗೆ ಮತ್ತಷ್ಟು ಲಾಭವಾಗುವ ಸಾಧ್ಯತೆಯಿದೆ. ರೇಡಿಯೋ ಹಾಗೂ ದೂರದರ್ಶನಗಳು ಸಾಮಾಜಿಕ ಜಾಲತಾಣಗಳ ಸಂಪೂರ್ಣ ಲಾಭ ಇನ್ನೂ ಪಡೆದುಕೊಳ್ಳಬೇಕಿದೆ. ಫೇಸ್ ಬುಕ್ ಒಂದರ ಹಿಂಬಾಲಕರೇ 2030ರ ವೇಳೆಗೆ 5 ಬಿಲಿಯನ್ ಆಗುವ ನಿರೀಕ್ಷೆಯಿದೆ. ಅಲ್ಲದೆ ಟ್ವಿಟರ್, ಇನ್ಸಾಗ್ರಾಮ್ ನಂತಹ ಶಕ್ತಿದಾಯಕ ಸಾಮಾಜಿಕ ಜಾಲತಾಣಗಳನ್ನು ಆಕಾಶವಾಣಿ, ದೂರದರ್ಶನ ತಮ್ಮ ಬ್ರಾಂಡ್ ಬೆಳೆಸಿಕೊಳ್ಳಲು ಸಮರೋಪಾದಿಯಲ್ಲಿ ಬಳಸಬಹುದು. ಪ್ರತಿ ರೇಡಿಯೋ ಕೇಂದ್ರವೂ ತನ್ನದೇ ಆದ ವೆಬ್‌ಸೈಟ್ ಹೊಂದಿ ದಿನನಿತ್ಯದ ಬೆಳವಣಿಗೆಯನ್ನು ದಾಖಲಿಸಿಕೊಂಡು ಶೋತೃಗಳೊಡನೆ ನೇರ ಚಾಟಿಂಗ್ ನಡೆಸುವ ವ್ಯವಸ್ಥೆ ರೂಢಿಸಿಕೊಳ್ಳಬೇಕು.

ರೇಡಿಯೋ ಒಂದು ಕಾಸ್ಟ್ ಎಫೆಕ್ಟಿವ್ ಮಾಧ್ಯಮ, ಹೆಚ್ಚಿನ ವರಮಾನ ಜಾಹಿರಾತಿನಿಂದಲೇ ಬರಬೇಕು. ಟೆಲಿವಿಷನ್‌ನಲ್ಲಿ ಈ ಚಿತ್ರ ಬೇರೆಯೇ ಆಗಿದೆ. ಶೇ 60ಕ್ಕೂ ಹೆಚ್ಚು ವರಮಾನ ಖಾಸಗೀ ದೂರದರ್ಶನ ವಾಹಿನಿಗಳ ಚಂದಾ ಹಣದಿಂದ ಬರುತ್ತದೆ. ಕೇವಲ ಶೇ 20 ರಿಂದ 30 ರಷ್ಟು ಆದಾಯ ಖಾಸಗೀ ದೂರದರ್ಶನಗಳಿಗೆ ಜಾಹಿರಾತಿನಿಂದ ಬರುತ್ತದೆ. ಬಿಬಿಸಿಯಂತಹ ಸಂಸ್ಥೆಯನ್ನು ನಡೆಸಲು ಅದರ ಖರ್ಚಿನ ಬಹುಪಾಲು ಲೈಸೆನ್ಸ್ ಶುಲ್ಕದಿಂದ ಬರುತ್ತದೆ. ಫಿಕಿ, ಕೆಪಿಎಮ್‌ಜಿ ವರದಿಯಂತೆ ಭಾರತದ ಮಾಧ್ಯಮ ಹಾಗೂ ಮನರಂಜನಾ ಉದ್ಯಮ 161 ದಶಲಕ್ಷ ಟಿವಿ ಮನೆಗಳನ್ನು, 64067 ವಾರ್ತಾ ಪತ್ರಿಕೆಗಳು, 2 ಸಾವಿರ ಮಲ್ಟಿಪ್ಲೆಕ್ಸ್ಗಳು, 214 ದಶಲಕ್ಷ ಅಂತರ್ಜಾಲ ಬಳಕೆದಾರರನ್ನು ಹಲವಾರು ಭೂಮಿಕೆಗಳ ಮೂಲಕ ಪ್ರಸ್ತುತಗೊಂಡಿರುವ ಬಾನುಲಿಯ ಅಸಂಖ್ಯ

ಕೇಳುಗರನ್ನು ತಲುಪುತ್ತದೆ. ಮಾಹಿತಿ, ಮನರಂಜನೆ ಉದ್ಯಮದಿಂದ ಬರುವ ಒಟ್ಟು ಜಾಹಿರಾತಿನ ವರಮಾನ 2004 ರಲ್ಲಿ 41400 ಕೋಟಿ ರೂಪಾಯಿಗಳಷ್ಟಿದ್ದು 2019 ಕ್ಕೆ 81600 ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇದರ ಶೇ. 4 ರಷ್ಟು ಮಾತ್ರ ಅಂದರೆ 2004 ರಲ್ಲಿ ರೇಡಿಯೋ ಜಾಹಿರಾತಿನ ಪಾಲು 172 ಬಿಲಿಯನ್ ರೂಪಾಯಿಗಳು. 2014 ರ ಮಾಧ್ಯಮಗಳ ಜಾಹಿರಾತಿನ ವರಮಾನದಲ್ಲಿ ಸರ್ಕಾರ ನೀಡಿರುವ ಪಾಲು 998,34 ಕೋಟಿ ರೂಗಳು. ದ ಮ್ಯಾಡಿಸನ್ ಅಡ್ವಟೈಸಿಂಗ್ ರಿಪೋರ್ಟ 2016 ರ ಪ್ರಕಾರ ಭಾರತದ ಜಾಹಿರಾತು ಉದ್ಯಮ 2015 ರಲ್ಲಿ 17.60% ಬೆಳವಣಿಗೆಯನ್ನು ಕಂಡರೆ 2016 ರಲ್ಲಿ ಅದು 168% ಬೆಳವಣಿಗೆಯನ್ನು ಕಾಣುವ ನಿರೀಕ್ಷೆ ಇದೆ. 2015 ರಲ್ಲಿ 6586 ಕೋಟಿ ಹಣವನ್ನು ಅದು ಮಾರುಕಟ್ಟೆಗೆ ಸೇರಿಸಿದೆ.

ಮುದ್ರಣ ಮಾಧ್ಯಮವನ್ನು ಹಿಂದಿಕ್ಕಿ ಟಿವಿ ಉದ್ಯಮ 39% ಭಾಗದ ಜಾಹೀರಾತನ್ನು ತನ್ನದಾಗಿಸಿಕೊಂಡಿದೆ. 2015 ರಲ್ಲಿ ಈ ಉದ್ಯಮದಲ್ಲಿ ಜಾಹೀರಾತು ವೆಚ್ಚ 17261 ಕೋಟಿ, ಮುದ್ರಣ ಮಾಧ್ಯಮ ಎರಡನೇ ದೊಡ್ಡ ಉದ್ಯಮವಾಗಿ ಹೊರಹೊಮ್ಮಿದ್ದು ಒಟ್ಟಾರೆ ಜಾಹೀರಾತಿನಲ್ಲಿ 38% ಭಾಗವನ್ನು ತನ್ನದಾಗಿಸಿಕೊಂಡು 16935 ಕೋಟಿ ಗಳಿಕೆಯನ್ನು ಮಾಡಿದೆ. ಡಿಜಿಟಲ್ ಮಾಧ್ಯಮ 29% ಭಾಗವನ್ನು ಹೊಂದಿ ಮೂರನೇ ಸ್ಥಾನದಲ್ಲಿದ್ದು ಒಟ್ಟಾರೆ ಜಾಹೀರಾತಿನಲ್ಲಿ 12%, ಅಂದರೆ 5000 ಕೋಟಿ ಗಳಿಕೆಯನ್ನು 2015ರಲ್ಲಿ ದಾಖಲಿಸಿದೆ. ತರಂಗಾAತರಗಳ ಕುರಿತಾದ ಸರ್ವೋಚ್ಛ ನ್ಯಾಯಾಲಯದ ಮಹತ್ವದ ತೀರ್ಪಿನ ನಂತರ ರೇಡಿಯೋ ಹಾಗೂ ದೂರದರ್ಶನದ ಖಾಸಗೀಕರಣ ಪ್ರಾರಂಭವಾಗಿ ಇಂದು 830 ಕ್ಕೂ ಹೆಚ್ಚು ಖಾಸಗಿ ದೂರದರ್ಶನದ ವಾಹಿನಿಗಳು

ಪ್ರಸಾರೋದ್ಯಮದಲ್ಲಿ ತೊಡಗಿವೆ. ಇದರಲ್ಲಿ 400 ಕ್ಕೂ ಹೆಚ್ಚು ವಾರ್ತಾ ವಾಹಿನಿಗಳು. 400 ಕ್ಕೂ ಹೆಚ್ಚು ಮನರಂಜನೆ ಮತ್ತು ಇತರ ವಾಹಿನಿಗಳು. ಆಕಾಶವಾಣಿಯ 423 ಪ್ರಸಾರಕೇಂದ್ರಗಳಲ್ಲದೇ 240 ಕ್ಕೂ ಹೆಚ್ಚು ಖಾಸಗಿ ರೇಡಿಯೋ ಕೇಂದ್ರಗಳು ಇವೆ. 243 ಖಾಸಗಿ ರೇಡಿಯೋ ಕೇಂದ್ರಗಳು 86 ನಗರಗಳಲ್ಲಿ ಪ್ರಸಾರ ಮಾಡುತ್ತಿವೆ. 1999-2000 ದ ಮೊದಲ ಹಂತದ ಮತ್ತು 2005-2006 ರ ಎರಡನೇ ಹಂತದ ರೇಡಿಯೋ ತರಂಗಾAತರಗಳ ಹರಾಜಿನ ನಂತರ, ಮೊದಲ ಹಂತದಲ್ಲಿ 21 ಖಾಸಗಿ ರೇಡಿಯೋ ವಾಹಿನಿಗಳು ಹಾಗೂ 2 ನೇ ಹಂತದಲ್ಲಿ 220 ಖಾಸಗಿ ರೇಡಿಯೋ ವಾಹಿನಿಗಳು ಕಾರ್ಯಾರಂಭ ಮಾಡಿದವು. 3 ನೇ ಹಂತದ ತರಂಗಾAತರದ ಹರಾಜಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಿಗೆ ಈ ಪ್ರಸಾರ ಲಾಭ ದೊರೆಯಲಿದೆ.

ಜಮ್ಮು-ಕಾಶ್ಮೀರ ಹಾಗೂ ಪೂರ್ವೋತ್ತರ ರಾಜ್ಯಗಳ 1 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ 11 ಪಟ್ಟಣಗಳಲ್ಲೂ ಪ್ರಸಾರ ವ್ಯವಸ್ಥೆ ಪ್ರಾರಂಭವಾಗಲಿದೆ. ಮುಂದಿನ 5 ವರ್ಷಗಳಲ್ಲಿ ರೇಡಿಯೋದಿಂದ ಬರುವ ಜಾಹಿರಾತಿನ ವರಮಾನ ದ್ವಿಗುಣಗೊಂಡು 3900 ಕೋಟಿ ತಲುಪುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ಸಂಸ್ಥೆ ಅಭಿಪ್ರಾಯ ಪಟ್ಟಿದೆ, ರೇಡಿಯೋ ಪ್ರಸಾರಣ ವ್ಯಾಪ್ತಿ ಪ್ರದೇಶದ ವಿಸ್ತರಣೆ, ಸ್ಥಳೀಯ ಜಾಹಿರಾತುಗಳು, ಲವು ಭೂಮಿಕೆಗಳ ಮುಖೇನ ಲಭ್ಯವಿರುವ ರೇಡಿಯೋ ಕಾಠ್ಯಕ್ರಮಗಳು, ಚಲನೆಯಲ್ಲೂ ಲಭ್ಯವಿರುವ ಪ್ರಸರಣ ಸಂಕೇತಗಳು, ರೇಡಿಯೋ ಉದ್ಯಮವನ್ನು ಮುಂದಿನ ವರ್ಷಗಳಲ್ಲಿ ಹೆಚ್ಚು ಲಾಭದತ್ತ ಕೊಂಡೊಯ್ಯಲಿವೆ. ನಾಲ್ಕು ಮಹಾನಗರಗಳಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ವಾರವೊಂದರಲ್ಲಿ ರೇಡಿಯೋಗಾಗಿ ಮೀಸಲಿಟ್ಟ ಸಮಯ:

ದೆಹಲಿ-614 ನಿಮಿಷ, ಮುಂಬಯಿ- 567 ನಿಮಿಷ, ಬೆಂಗಳೂರು-653 ನಿಮಿಷ, ಕೊಲ್ಕತ್ತ-624 ನಿಮಿಷ. ರೇಡಿಯೋ ತರಂಗಾAತರಗಳ 3ನೇ ಹಂತದ ಹರಾಜಿನಲ್ಲಿ ಸುಮಾರು 284 ಪಟ್ಟಣಗಳು ಅದರ ವ್ಯಾಪ್ತಿಗೆ ಬಂದು 535 ಹೊಸ ರೇಡಿಯೋ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಖಾಸಗೀ ರೇಡಿಯೋ ಉದ್ಯಮಿಗಳ ಕೋರಿಕೆಯಾದ 15 ವರ್ಷಗಳ ಪರವಾನಗಿ, ಒಂದು ನಗರ ಅಥವಾ ಪಟ್ಟಣದಲ್ಲಿ ಹಲವು ತರಂಗಾAತರಗಳಲ್ಲಿ ಪ್ರಸಾರ ಮಾಡುವ ಒಡೆತನ ಹೊಂದಿರಲು ಅನುಮತಿ, ಇವನ್ನು ಸರ್ಕಾರ ಈಡೇರಿಸಿದರೆ ರೇಡಿಯೋ ಮತ್ತಷ್ಟು ಪ್ರಬಲವಾಗಿ ಬೇರೂರುತ್ತದೆ ಎಂಬುದು ಖಾಸಗಿ ಉದ್ಯಮಿಗಳ ಅಭಿಪ್ರಾಯ. ಇಷ್ಟಾದರೂ ರೇಡಿಯೋಗೆ ತನ್ನದೇ ಆದ ಕೆಲವು ಸವಾಲುಗಳಿವೆ.

ಏರುತ್ತಿರುವ ದರಗಳು, ಶೋತೃ ಮಾಪನಾ ವಿಧಾನ (ರಾಮ್) ಗೌರವಧನ ಹಾಗೂ ಡಿಜಿಟಲ್ ಮಾಧ್ಯಮದಿಂದಾಗಿ ದಿನನಿತ್ಯ ಎದುರಿಸಬೇಕಾಗಿ ಬಂದಿರುವ ಸವಾಲುಗಳು ಇನ್ನೂ ಬಾಧಿಸುತ್ತಲೇ ಇವೆ. ಭಾರತದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿದೆ. ಕೇಬಲ್ ದೂರದರ್ಶನದ ಡಿಜಿಟಲೀಕರಣ ಎಫ್. ಎಮ್. ರೇಡಿಯೋ ತರಂಗಾAತರಗಳ ಹರಾಜಿನ 3ನೇ ಹಂತ, ವಿದೇಶಿ ಬಂಡವಾಳ ಹೂಡಿಕೆ ಮಿತಿಯಲ್ಲಿ ಹೆಚ್ಚಳ, ಮಾಧ್ಯಮ ಹಾಗೂ ಮನರಂಜನೆ ಉದ್ಯಮದ ಸಬಲೀಕರಣಕ್ಕೆ ಮತ್ತಷ್ಟು ಇಂಬು ಕೊಡಲಿದೆ.

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-02)

By
Click to Learn More 1.1 ಆಕಾಶವಾಣಿಯ ಹುಟ್ಟು ಹಾಗೂ ಬೆಳವಣಿಗೆ

ಸಂವಹನ :

ನಿರ್ದಿಷ್ಟ ಉದ್ದೇಶದಿಂದ ಮಾತು, ಧ್ವನಿ, ಸಂಜ್ಞೆ ಮುಂತಾದವುಗಳ ಮೂಲಕ ನಡೆವ ಸಂಭಾಷಣೆಯನ್ನು ಬಹು ಸರಳವಾಗಿ ಸಂವಹನ ಎಂದು ಹೇಳಬಹುದು. ನಿರ್ದಿಷ್ಟ ಉದ್ದೇಶವೆಂದರೆ ಒಬ್ಬ ಸಂಭಾಷಣೆಕಾರ ಇನ್ನೊಬ್ಬನಿಗೆ ತಾನು ನೀಡಬೇಕಾದ ಮಾಹಿತಿಯನ್ನು ನೀಡುವುದು.

ಇಲ್ಲಿ ಬಹುಮುಖ್ಯವಾದ ಅಂಶಗಳು ಮಾಹಿತಿ ನೀಡುವವ, ಮಾಹಿತಿ ಪಡೆಯುವವ, ಮಾಹಿತಿ ಹಾಗೂ ಈ ಪ್ರಕ್ರಿಯೆ ನಡೆಯಲು ಬೇಕಾದ ಮಾಧ್ಯಮ. ಈ ಪ್ರಕ್ರಿಯೆ ಜಗತ್ತಿನಲ್ಲಿ ಜೀವ ಹುಟ್ಟಿದಂದಿನಿAದ ಇದೆ. ಪ್ರಕೃತಿಯಲ್ಲಿ ಇರುವ ಅನೇಕ ಜೀವ-ಜಂತುಗಳಲ್ಲಿ ಈ ಕ್ರಿಯೆ ಸಹಜವಾಗಿ ನಡೆಯುತ್ತದೆ. ಕಾಗೆಯೊಂದಗುಳ ಕಂಡರೆ ಕರೆವುದು ತನ್ನ ಬಳಗವ ಎಂದು ಬಸವಣ್ಣನವರು ಹೇಳಿದುದರಲ್ಲೂ ಸಂವಹನವೇ ಇದೆ. ಇಲ್ಲಿ ಒಂದು ಕಾಗೆ ತನ್ನ ಸಮೂಹಕ್ಕೆ ಮಾಹಿತಿಯನ್ನು ಕೂಗುವಿಕೆ ಅಥವಾ 'ಧ್ವನಿ' ಯ ಮೂಲಕ ತಲುಪಿಸುತ್ತದೆ. ಮಳೆ ಬರುವ ಮುನ್ನ ಗುಡುಗು, ಮಿಂಚು, ಸಿಡಿಲುಗಳು ಪ್ರಕೃತಿ ಜಗತ್ತಿಗೆ ನೀಡುವ ಮುನ್ಸೂಚನೆ. ಇಲ್ಲಿ ಸಂವಹನ ಬಹುತೇಕವಾಗಿ 'ಸಂಜ್ಞೆ ಅಥವಾ 'ಧ್ವನಿ' ಗಳ ಮೂಲಕ ನಡೆಯುತ್ತದೆ.

ಆದರೆ ಮಾತನಾಡಬಲ್ಲ ಮಾನವ ಮಾಹಿತಿಯನ್ನು ಮಾತಿನ, ಧ್ವನಿಯ ಹಾಗೂ ಸಂಜ್ಞೆಗಳ ಮೂಲಕ ಇತರರಿಗೆ ನೀಡಲು ಪ್ರಾರಂಭಿಸಿದ. ಸಮಾಜದ ವ್ಯಾಪ್ತಿ ಕಿರಿದಾಗಿದ್ದಾಗ ಈ ಮಾಹಿತಿಯ ವಿನಿಮಯ ಇಬ್ಬರು ವ್ಯಕ್ತಿಗಳ ನಡುವೆ, ವ್ಯಕ್ತಿ - ಸಮುದಾಯದ ನಡುವೆ, ಗುಂಪು ಗುಂಪುಗಳ ನಡುವೆ ನಡೆಯುತ್ತಿತ್ತು. ಹೀಗೆ ಬಾಯಿಂದ ಬಾಯಿಗೆ ಹರಿದು ಬಂದ ಮಾಹಿತಿಗೆ ವೇದ-ಉಪನಿಷತ್ತುಗಳು, ಜನಪದ ಸಂಗೀತದ ಪರಂಪರೆ ಉತ್ತಮ ಉದಾಹರಣೆಗಳು, ಹಬ್ಬ-ಹರಿದಿನಗಳ ಆಚರಣೆಗಳು ರೂಢಿ, ನೀತಿ, ಸಂಪ್ರದಾಯಗಳು ಬಾಯಿಂದ ಬಾಯಿಗೆ ಹರಿದು ಆಚರಣೆಗೆ ಬಂದ ಮಾಹಿತಿಗಳೆ, ಈ ಹಂತದಲ್ಲಿ ಜನಸಂಖ್ಯೆ ಕಡಿಮೆಯಿತ್ತು. ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಒಂದು ಬುಡಕಟ್ಟಿಗೆ ಸೇರಿದ ಜನ ಸಣ್ಣ-ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು.

ಅವರ ಅಗತ್ಯಗಳು ತೀರ ಕಡಿಮೆಯಿದ್ದು ಅವನ್ನು ತಾವೇ ತಮ್ಮತಮ್ಮಲ್ಲೇ ಪೂರೈಸಿಕೊಳ್ಳುತ್ತಿದ್ದರು. ಸಮಾಜ ಆಗ ಬಹಳ ಸರಳವಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಿದಂತೆ ಅಗತ್ಯಗಳೂ ದ್ವಿಗುಣವಾಗಿ ಉತ್ಪಾದನೆಯಲ್ಲಿ ಹೆಚ್ಚಳ ಅಗತ್ಯಗಳನ್ನು ಪೂರೈಸಬಲ್ಲ ಸ್ಥಳಗಳಿಗೆ ವಲಸೆ ಹೋದರು. ಇದರಿಂದ ವಸ್ತುಗಳ ಹಾಗೂ ಜನರ ಸಾಗಾಟವೂ ಹೆಚ್ಚಿತು. ಈ ಎರಡರ ವೇಗದ ಗತಿ ತೀವ್ರವಾದಾಗ ಕಾರ್ಖಾನೆಗಳು ಹುಟ್ಟಿಕೊಂಡವು. 19ನೇ ಶತಮಾನದಲ್ಲಿ ಆದ ಕೈಗಾರಿಕಾಕರಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಯಿತು. ಬೇರೆ ಬೇರೆ ಭಾಗದ, ಆಶೋತ್ತರಗಳ, ಹಿತಾಸಕ್ತಿಗಳ, ಬೇಡಿಕೆಗಳ ಜನ ಎಲ್ಲೆಡೆಯೂ ಕಂಡುಬAದರು.

ಇವರಿಗೆ ಮೊದಲಿನಂತೆ ಬಾಯಿಂದ ಬಾಯಿಗೆ ಮಾಹಿತಿಯನ್ನು ಸಾಗಿಸುವುದು ಸಾಧ್ಯವಿರಲಿಲ್ಲ. ಸಮಾಜ ಸಂಕೀರ್ಣವಾಗ ಹತ್ತಿತು. ಮಾಹಿತಿಯನ್ನು ಪೂರೈಸುವ ಪತ್ರಿಕೆಗಳು ಅಲ್ಲಲ್ಲಿ ಇದ್ದರೂ ಸಾಗಾಟದ ತೊಂದರೆಯಿAದ ಅವು ಕೆಲವು ಭಾಗಗಳಿಗೆ ತಲುಪುವುದೂ ಸಾಧ್ಯವಿರಲಿಲ್ಲ. ಇನ್ನು ಕೆಲವು ಭಾಗಗಳಿಗೆ ತಲುಪಲು ವಾರಗಳೇ ಬೇಕಾಗುತ್ತಿದ್ದವು. ಆದ್ದರಿಂದ ಶೀಘ್ರವಾಗಿ ದೂರದವರೆಗೂ ತಲುಪಬಲ್ಲ ಮಾಧ್ಯಮದ ಅವಶ್ಯಕತೆ ಇತ್ತು. 19ನೇ ಶತಮಾನದ ಸಂಶೋಧನೆಗಳ ವರದಾನ 1844 ರಲ್ಲಿ ವಿದ್ಯುತ್ ತಂತಿಗಳ ಮೂಲಕ 'ಮೋರ್ಸ ಕೋಡ್' ಗಳನ್ನು ಬಳಸಿ ಸಂದೇಶಗಳನ್ನು ರವಾನಿಸಲು ಸಾಧ್ಯವಾಯಿತು. ಇದರಿಂದ ಟೆಲಿಗ್ರಫಿಯ ಉದಯವಾಯಿತು.

ನಂತರ 1876 ರಲ್ಲಿ ಗ್ರಹಾಂ ಬೆಲ್ ಕಂಡುಹಿಡಿದ ಟೆಲಿಫೋನ್ ಮಾದರಿಯ ಉಪಕರಣದಿಂದ ಸಂವಹನದಲ್ಲಿ ಧ್ವನಿಯನ್ನು ಕೇಳಲು ಸಹಾಯವಾಯಿತು. ಈ ಎರಡು ಅನ್ವೇಷಣೆಗಳು ಶೀಘ್ರವಾದ ಸಂವಹನಕ್ಕೆ ನೆರವಾದವು. ಆದರೆ ಈ ಎರಡೂ ಉಪಕರಣಗಳಲ್ಲಿ ವಿದ್ಯುತ್ ತಂತಿಯ ಅಗತ್ಯವಿತ್ತು. ಅದಿಲ್ಲದೇ ಸಂವಹನ ಸಾಧ್ಯವೇ ಇರದಿದ್ದುದು ಇವುಗಳ ಮುಖ್ಯ ನ್ಯೂನ್ಯತೆಯಾಗಿತ್ತು. 19ನೇ ಶತಮಾನದ ಕೊನೆಯ ದಶಕದಲ್ಲಿ ಮಾರ್ಕೋನಿ ಕಂಡು ಹಿಡಿದ ರೇಡಿಯೋ ಈ ಎರಡೂ ಉಪಕರಣಗಳ ತೊಂದರೆಯನ್ನು ನೀಗಿಸಿತ್ತು. ಅದರಲ್ಲಿ ಸಂದೇಶಗಳು ತಂತಿಯ ಸಹಾಯವಿಲ್ಲದೆ ವಿದ್ಯುತ್ ತರಂಗಗಳ ಮೂಲಕ ಬೆಳಕಿನಂತೆ ವೇಗವಾಗಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದವು.

1906ರ ಹೊತ್ತಿಗೆ ಇದರ ತಾಂತ್ರಿಕತೆಯನ್ನು ಅಭಿವೃದ್ಧಿಗೊಳಿಸಿ ಮಾತಿನ ಧ್ವನಿ ರೇಡಿಯೋದ ಮೂಲಕ ಕೇಳಲು ಅಥವಾ ಪ್ರಸಾರವಾಗಲು ಸಾಧ್ಯವಾಯಿತು. ಆನಂತರ ತ್ವರಿತಗತಿಯಲ್ಲಿ ರೇಡಿಯೊ ತಂತ್ರಜ್ಞಾನ ಹೆಚ್ಚಿನ ಅಭಿವೃದ್ಧಿ ಹೊಂದಿ 1922 ರ ತ ಹೊತ್ತಿಗೆ ಅಮೇರಿಕ, ಒಂದು ಬುಡಕಟ್ಟಿಗೆ ಸೇರಿದ ಜನ ಸಣ್ಣ-ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಅವರ ಅಗತ್ಯಗಳು ತೀರ ಕಡಿಮೆಯಿದ್ದು ಅವನ್ನು ತಾವೇ ತಮ್ಮತಮ್ಮಲ್ಲೇ ಪೂರೈಸಿಕೊಳ್ಳುತ್ತಿದ್ದರು. ಸಮಾಜ ಆಗ ಬಹಳ ಸರಳವಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಿದಂತೆ ಅಗತ್ಯಗಳೂ ದ್ವಿಗುಣವಾಗಿ ಉತ್ಪಾದನೆಯಲ್ಲಿ ಹೆಚ್ಚಳ ಅಗತ್ಯಗಳನ್ನು ಪೂರೈಸಬಲ್ಲ ಸ್ಥಳಗಳಿಗೆ ವಲಸೆ ಹೋದರು. ಇದರಿಂದ ವಸ್ತುಗಳ ಹಾಗೂ ಜನರ ಸಾಗಾಟವೂ ಹೆಚ್ಚಿತು.

ಈ ಎರಡರ ವೇಗದ ಗತಿ ತೀವ್ರವಾದಾಗ ಕಾರ್ಖಾನೆಗಳು ಹುಟ್ಟಿಕೊಂಡವು. 19ನೇ ಶತಮಾನದಲ್ಲಿ ಆದ ಕೈಗಾರಿಕಾಕರಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಯಿತು. ಬೇರೆ ಬೇರೆ ಭಾಗದ, ಆಶೋತ್ತರಗಳ, ಹಿತಾಸಕ್ತಿಗಳ, ಬೇಡಿಕೆಗಳ ಜನ ಎಲ್ಲೆಡೆಯೂ ಕಂಡುಬAದರು. ಇವರಿಗೆ ಮೊದಲಿನಂತೆ ಬಾಯಿಂದ ಬಾಯಿಗೆ ಮಾಹಿತಿಯನ್ನು ಸಾಗಿಸುವುದು ಸಾಧ್ಯವಿರಲಿಲ್ಲ. ಸಮಾಜ ಸಂಕೀರ್ಣವಾಗ ಹತ್ತಿತು. ಮಾಹಿತಿಯನ್ನು ಪೂರೈಸುವ ಪತ್ರಿಕೆಗಳು ಅಲ್ಲಲ್ಲಿ ಇದ್ದರೂ ಸಾಗಾಟದ ತೊಂದರೆಯಿAದ ಅವು ಕೆಲವು ಭಾಗಗಳಿಗೆ ತಲುಪುವುದೂ ಸಾಧ್ಯವಿರಲಿಲ್ಲ. ಇನ್ನು ಕೆಲವು ಭಾಗಗಳಿಗೆ ತಲುಪಲು ವಾರಗಳೇ ಬೇಕಾಗುತ್ತಿದ್ದವು. ಆದ್ದರಿಂದ ಶೀಘ್ರವಾಗಿ ದೂರದವರೆಗೂ ತಲುಪಬಲ್ಲ ಮಾಧ್ಯಮದ ಅವಶ್ಯಕತೆ ಇತ್ತು.

ಕೊಡಬಾರದೆಂದು ವೈಸ್‌ರಾಯ್ ಸರ್ಕಾರದಲ್ಲಿ ಒಂದು ವಿಭಾಗವನ್ನು ಅದಕ್ಕಾಗಿ -ಸ್ಥಾಪಿಸಿ ಕೇಂದ್ರಗಳ ಉಸ್ತುವಾರಿಯನ್ನು ನೀಡಿದರು. ದ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿ ಕೇವಲ 15 ಲಕ್ಷಗಳಷ್ಟು ಬಂಡವಾಳದಲ್ಲಿ ಆರಂಭವಾಯಿತು. ಇದರಲ್ಲಿ 4.5 ಲಕ್ಷಗಳಷ್ಟು ಹಣ ಬಾಂಬೆ ಹಾಗೂ ಕಲ್ಕತ್ತಾ ಕೇಂದ್ರಗಳ ಸ್ಥಾಪನೆಗೆ ವೆಚ್ಚವಾಯಿತು. ನಂತರ 1936 ಜೂನ್ 8 ರಂದು ಅದು 'ಆಲ್ ಇಂಡಿಯಾ ರೇಡಿಯೋ ” ಎಂದು ಪುನರ್ನಾಮಕರಣಗೊಂಡಿತು. ಇದರ ಹಿಂದೆಯೂ ಒಂದು ಕುತೂಹಲಕಾರಿ ಕತೆ ಇದೆ.
1935 ಅಗಸ್ಟ್ನಲ್ಲಿ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಲಯೊನೆಲ್ ಫೀಲ್ಡನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕಂಟ್ರೋಲರ್ ಆಫ್ ಬ್ರಾಡ್‌ಕಾಸ್ಟಿಂಗ್ ಆಗಿ ಭಾರತಕ್ಕೆ ನೇಮಿಸಿತು.

ಫೀಲ್ಡನ್‌ಗೆ 'ಇಂಡಿಯನ್ ಸ್ಟೇಟ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್' ಎಂಬ ಹೆಸರು ಇಷ್ಟವಿರಲಿಲ್ಲ. ಭಾರತೀಯರಿಗೆ 'ಬ್ರಾಡ್‌ಕಾಸ್ಟಿಂಗ್' ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎನ್ನುವುದು ಅವರ ವಾದ. ಅವರು 'ಆಲ್ ಇಂಡಿಯಾ ರೇಡಿಯೊ' ಎಂಬ ಹೆಸರನ್ನು ಸೆಕ್ರೆಟೇರಿಯಟ್‌ನ ಸದಸ್ಯರ ಮುಂದೆ ಪ್ರಸ್ತಾಪಿಸಿದಾಗ ಅವರು ಅದನ್ನು ತೀವ್ರವಾಗಿ ವಿರೋಧಿಸಿದರು. ಆಗ ಲಾರ್ಡ ಲಿನ್‌ತ್‌ಗೋ ಭಾರತದಲ್ಲಿ ಬ್ರಿಟಿಷ್ ವೈಸ್‌ರಾಯ್ ಆಗಿದ್ದರು. ಅವರು ಏರ್ಪಡಿಸಿದ್ದ ಒಂದು ಔತಣಕೂಟದಲ್ಲಿ ಮಾತಿನ ನವ ಮಾಡಿಕೊಂಡು ಫೀಲ್ಡನ್ ವೈಸ್‌ರಾಯ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ 'ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್' ಎಂಬುದು ಬಹಳ 'ಕ್ಲಮಿ' ಅಲ್ಲವೇ ಎಂದು ಕೇಳುತ್ತಾ ಭಾರತೀಯರಿಗೆ ಅದರ ಉಚ್ಚಾರಣೆ ಕಷ್ಟವಾಗಿ ಅವರು ತಪ್ಪಾಗಿ ಉಚ್ಛರಿಸುವ

ಸಾಧ್ಯತೆಗಳೇ ಹೆಚ್ಚು ಎಂಬ ತರ್ಕವನ್ನು ಮುಂದಿಟ್ಟರು. ಅದು ವೈಸ್‌ರಾಯ್ ನಿಜವೆನ್ನಿಸಿತು. ಆದರೆ ಫೀಲ್ಡನ್ ಅವರಿಗೆ ತಮ್ಮ ಮನದಲ್ಲಿದ್ದ 'ಆಲ್ ಇಂಡಿಯಾ ರೇಡಿಯೋ' ಎಂಬ ಹೆಸರನ್ನು ತಾವೇ ಸೂಚಿಸಲು ಹಿಂಜರಿಕೆಯಾಗಿ ವೈಸ್‌ರಾಯ್ ಅವರ ಬಾಯಿಂದಲೇ ಅದನ್ನು ಹೊರಡಿಸುವ ಪ್ರಯತ್ನ ಮಾಡಿದರು. ಅದಕ್ಕಾಗಿ ಆ ಹೆಸರಲ್ಲಿ ರೇಡಿಯೋ ಎಂದಿದ್ದರೆ ಉಚ್ಛಾರಣೆಗೆ ಸುಲಭವಾದೀತು ಎಂತಲೂ, ಇಡಿಯ ಭಾರತಕ್ಕೆ (ಆಲ್ ಇಂಡಿಯಾ) ಅದು ಅನ್ವಯವಾಗುವಂತೆ ಇಂಡಿಯಾ ಇರಲಿ ಎಂತಲೂ ಹೇಳುತ್ತಾರೆ. ಆಗ ವೈಸ್‌ರಾಯ್ ಅವರೇ 'ಆಲ್ ಇಂಡಿಯಾ ರೇಡಿಯೋ' ಎಂಬ ಹೆಸರು ಹೇಗಿದೆ ಎಂದು ಪ್ರಶ್ನಿಸುತ್ತಾರೆ. ಫೀಲ್ಡನ್ ತಮ್ಮ ಮನದಲ್ಲಿದ್ದ ಹೆಸರು ಅವರ ಬಾಯಲ್ಲಿಯೂ ಬಂದದ್ದಕ್ಕೆ ಹುಸಿ ಆಶ್ಚರ್ಯ ವ್ಯಕ್ತಪಡಿಸುತ್ತ ಸಂತಸದಿAದ ಒಪ್ಪಿಕೊಳ್ಳುತ್ತಾರೆ.

ಸ್ವತಃ ವೈಸ್‌ರಾಯ್ ಅವರೇ ಸೂಚಿಸಿದ ಹೆಸರಾದ್ದರಿಂದ ಅದೇ ಜಾರಿಗೆ ಬರುತ್ತದೆ. ಹೀಗೆ 'ಆಲ್ ಇಂಡಿಯಾ ರೇಡಿಯೋ' ಹುಟ್ಟಿಕೊಂಡಿತು. ಇದನ್ನು ಫೀಲ್ಡನ್ ಅವರು 1960 ರಲ್ಲಿ ಪ್ರಕಟಿಸಿದ 'ದ ನ್ಯಾಚುರಲ್ ಬೆಂಟ್' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಆಕಾಶವಾಣಿಯ ಪ್ರಕಟಣೆಯಾದ 'ದ ಇಂಡಿಯನ್ ಲಿಸ್‌ನ ತನ್ನ ಸಂಪಾದಕೀಯದಲ್ಲಿ 'ಆಲ್ ಇಂಡಿಯಾ ರೇಡಿಯೊ-ಇದರ ಮೊದಲ ಅಕ್ಷರಗಳಾದ ಎ.ಆಯ್.ಆರ್ ನಾವು ಏನಾಗ ಬಯಸಿದ್ದೇವೆ ಎಂಬುದನ್ನು ಹೇಳಿದೆ. ಭಾರತ ಆಕಾಶದಷ್ಟು (ಗಾಳಿ-ಇಂಗ್ಲೀಷಿನ ಏರ್) ವಿಸ್ತಾರವಾದ ದೇಶ ...' ಎಂದು ಈ ಹೊಸ ಹೆಸರನ್ನು ಬಣ್ಣಿಸಿತು, ಮುಂದಿನ ನಾಲ್ಕು ವರ್ಷಗಳ ಕಾಲ ಪ್ರಸಾರ ಕಾರ್ಯ ನಿರಂತರವಾಗಿ ನಡೆಯಿತು.

ಜೊತೆಗೆ ದೆಹಲಿಯಲ್ಲಿ ದೇಶದ ಮೂರನೇ ಕೇಂದ್ರ ಹುಟ್ಟಿಕೊಂಡಿತು. ರೇಡಿಯೊ ಲೈಸೆನ್ಸ್ಗಳು ಮೂರು ಪಟ್ಟು ಹೆಚ್ಚಿದವು. ಬಿಬಿಸಿಯೇ ಭಾರತದಲ್ಲಿ ಐಬಿಸಿಯನ್ನು (ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿ) ನಿಯಂತ್ರಿಸುತ್ತಿತ್ತು. ಎರಿಕ್ ಡನ್ಸನ್ ಎಂಬುವವರನ್ನು ಐಬಿಸಿಯ ಜನರಲ್ ಮ್ಯಾನೇಜರ್ ಆಗಿ ಅದು ಲಂಡನ್ನಿನಿAದ ಕಳಿಸಿತ್ತು. ಮುಂಬೈ ಹಾಗೂ ಕಲ್ಕತ್ತಾ ಆಕಾಶವಾಣಿಗಳಿಗೆ ಇನ್ನೂ ಅನೇಕರು ಲಂಡನ್ನಿನಿAದಲೇ ಬಂದಿದ್ದರು. ಹಾಗೇ ಸ್ಥಳೀಯ ಪ್ರತಿಭೆಗಳನ್ನೂ ಈ ಅಧಿಕಾರಿಗಳು ಬೆಳಕಿಗೆ ತಂದಿದ್ದರು. ಆಗ ಬಂಗಾಳದ ಹೆಸರಾಂತ ಗಾಯಕರಾಗಿದ್ದ ಪಂಕಜ ಮಲಿಕ್ ಅವರು 1927 ಸೆಪ್ಟೆಂಬರ್ 26ರಂದು ಕಲ್ಕತ್ತಾ ಆಕಾಶವಾಣಿಯಿಂದ ಮೊದಲ ಬಾರಿಗೆ ಹಾಡಿದರು.

ಅಂದು ಮುಂಬೈನಲ್ಲೂ ಶೋತೃಗಳು ಆ ಹಾಡನ್ನು ಏಕಕಾಲದಲ್ಲಿ ಕೇಳಿದ್ದು ಆ ಕಾಲದ ವಿಶೇಷವಾಗಿತ್ತು. 1935ರ ಆಯವ್ಯಯ ಪಟ್ಟಿಯಲ್ಲಿ ಭಾರತದಲ್ಲಿ ಆಕಾಶವಾಣಿಯ ಪ್ರಸಾರಕಾರ್ಯದ ಸ್ಥಾಪನೆಗೆ 40 ಲಕ್ಷ ರೂಪಾಯಿಗಳ ಸಹಾಯಧನ ದೊರೆಯಿತು. ಭಾರತ ಸರ್ಕಾರ ಬಿ.ಬಿ.ಸಿ.ಯಲ್ಲಿ ರೇಡಿಯೋ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವ ಅಧಿಕಾರಿ ಎಚ್.ಎಲ್.ಕ್ರಿಕ್ ಅವರನ್ನು ಭಾರತಕ್ಕೆ 1936 ಜನವರಿ 23ರಂದು ಕರೆಸಿ ಭಾರತದಲ್ಲಿ ವ್ಯವಸ್ಥಿತವಾಗಿ ಪ್ರಸಾರ ವ್ಯವಸ್ಥೆಯನ್ನು ನಿರ್ವಹಿಸಲು ಸಲಹೆಗಳನ್ನು ನೀಡಲು ಸೂಚಿಸಿತು. ಅವರು ಭಾರತದೆಲ್ಲೆಡೆ ಸಂಚರಿಸಿ ಪ್ರಸಾರಕಾರ್ಯ ಎಲ್ಲೆಡೆ ಕೇಳುವಂತಾಗಬೇಕಾದರೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಸಾರ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಿ ಅವುಗಳ ಸ್ಥಾಪನೆಗೆ ಸ್ಥಳಗಳನ್ನೂ ತೋರಿಸಿದರು.

ಮತ್ತು ಆಕಾಶವಾಣಿಗೆ ಸಂಬAಧಿಸಿದ ಸಂಶೋಧನೆಗಳನ್ನು ಮಾಡುವ ಬಗ್ಗೆ ಒಂದು ಕೇಂದ್ರ ಪ್ರಯೋಗಶಾಲೆಯನ್ನು ಸ್ಥಾಪಿಸಬೇಕೆಂದೂ ಸಲಹೆ ಕೊಟ್ಟರು. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ 40 ಲಕ್ಷ ರೂಪಾಯಿಗಳಲ್ಲಿ ಎಲ್ಲ ಕಡೆಯೂ ಪ್ರೇಷಕಗಳನ್ನು ಸ್ಥಾಪಿಸಿ ರೇಡಿಯೋ ಕೇಂದ್ರಗಳ ಸರಮಾಲೆಯನ್ನು ಸ್ಥಾಪಿಸುವುದು ಅಸಾಧ್ಯವಾಗಿತ್ತು. ಆದರೆ ಎದೆಗುಂದದ ಆಲ್ ಇಂಡಿಯಾ ರೇಡಿಯೋ, ಸಿ.ಡಬ್ಲ್ಯು,ಗಾಯ್ಕರ್ ಎಂಬ ಇನ್ನೊಬ್ಬ ಬಿಬಿಸಿ ತಜ್ಞರ ಸಲಹೆ ಕೇಳಿತು. ಅವರು ಅದೇ ಅಗಸ್ಟ್ ಹೊತ್ತಿಗೆ ಆಲ್ ಇಂಡಿಯಾ ರೇಡಿಯೋದ ಮೊದಲ ಚೀಫ್ ಎಂಜಿನೀಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಸೂಚನೆಗಳ ಫಲವಾಗಿ 1939ರ ಕೊನೆಯಲ್ಲಿ 40 ಲಕ್ಷ ರೂಪಾಯಿಗಳ ಸಹಾಯಧನದಲ್ಲೇ ದೆಹಲಿ, ಮುಂಬೈ, ಕಲ್ಕತ್ತಾ,

ಮದಾಸ್, ಲಾಹೋರ್, ಲಖೋ, ತಿರುಚನಾಪಳ್ಳಿ, ಢಾಕಾ ಮತ್ತು ಪೆಷಾವರಗಳಲ್ಲಿ ಆಕಾಶವಾಣಿ ಜಾಲ ಆರಂಭವಾಯಿತು. ದೆಹಲಿ ಈ ಜಾಲದ ಕೇಂದ್ರ ಕಛೇರಿಯಾಗಿತ್ತು. ಎರಡನೇ ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ರೇಡಿಯೊ ಅದಕ್ಕೆ ಸಿದ್ಧವಾಗಬೇಕಾಯಿತು. ದಿನದ ಸುದ್ದಿಗಳನ್ನು ಪ್ರಸಾರ ಮಾಡಲು ಹಾಗೂ ವಿವಿಧ ವಿಷಯಗಳ ಕುರಿತ ಸರ್ಕಾರದ ಅಭಿಪ್ರಾಯವನ್ನು ಜನರಿಗೆ ತಲುಪಿಸಲು ಸರ್ಕಾರ ರೇಡಿಯೋವನ್ನೆ ಹೆಚ್ಚು ಬಳಸಿತು. ಪ್ರಸಾರಾವಧಿ ಗಣನೀಯವಾಗಿ ಹೆಚ್ಚಿತು. ಇತರ ಕೇಂದ್ರಗಳಿಗೆ ಮಾಹಿತಿ ಹಾಗೂ ಸುದ್ದಿಯನ್ನು ನಿರಂತರವಾಗಿ ನೀಡಲು ಕೇಂದ್ರ ಸುದ್ದಿ ವಿಭಾಗವು ತೆರೆಯಲ್ಪಟ್ಟಿತು. ಜನರಲ್ಲಿ ಯುದ್ಧಭೀತಿಯನ್ನು ಅಳಿಸಲು ಹಾಗೂ ಯುದ್ಧಕ್ಕೆ ಅವರ ಸಹಾನುಭೂತಿ ಇರುವಂತೆ ಮಾಡಲು ಭಾಷಣಗಳು ಹಾಗೂ

ರೂಪಕಗಳನ್ನು ರೂಪಿಸಿ ಹೆಚ್ಚು ಹೆಚ್ಚು ಪ್ರಸಾರ ಮಾಡಲಾಯ್ತು. ಎರಡು ಅತಿಶಕ್ತಿ ಶಾರ್ಟವೇವ್ ಟ್ರಾನ್ಸಮಿಟರ್‌ಗಳ ಸ್ಥಾಪನೆ ಆಧುನಿಕ ಯುದ್ಧಗಳ ಸಂದರ್ಭದಲ್ಲಿ ಪ್ರಸಾರದ ಮಹತ್ವವನ್ನು ತೋರಿಸಿತು. ಇಲ್ಲಿಂದ ಪೂರ್ವ ಹಾಗೂ ಆಗ್ನೆಯ ಏಷ್ಯಾ, ಮಧ್ಯ ಪ್ರಾಚ್ಯ ಹಾಗೂ ಯುರೋಪ್ ದೇಶಗಳಿಗೆ ಆಯಾ ಭಾಷೆಗಳಲ್ಲಿ ಮಾಹಿತಿಯನ್ನು ಬಿತ್ತರಿಸಲಾಗುತ್ತಿತ್ತು. ಇದು ಆಲ್ ಇಂಡಿಯಾ ರೇಡಿಯೋದ ವಿದೇಶ ಸೇವಾ ವಿಭಾಗದ ಮೊದಲ ಹೆಜ್ಜೆ ಎನ್ನಬಹುದು. ಯುದ್ಧದಲ್ಲಿ ಬ್ರಿಟನ್ ಹಾಗೂ ಅದರ ಮಿತ್ರ ಪಕ್ಷಗಳು ಭಾಗವಹಿಸಲು ಕಾರಣಗಳು, ಯುದ್ಧದಲ್ಲಿ ಭಾರತೀಯರು ನೀಡಬಹುದಾದ ಸಹಾಯ ಹಾಗೂ ಶತ್ರುನಾಶ ಮುಂತಾದ ವಿಷಯಗಳು ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದವು.

ಅದರಲ್ಲೂ ಜಪಾನ್ ಯುದ್ಧದಲ್ಲಿ ಧುಮುಕಿದ ನಂತರ ಈ ಪ್ರಕ್ರಿಯೆ ತೀವ್ರವಾಯಿತು. ಶತ್ರುಗಳನ್ನು ಹಿಮ್ಮೆಟ್ಟಿಸುವುದು ಭಾರತೀಯರ ಪವಿತ್ರ ಕಾರ್ಯ ಎಂದು ಬಿಂಬಿಸಲಾಯಿತು. ರೇಡಿಯೋದಲ್ಲಿ ಕಾಲಕಾಲಕ್ಕೆ ವಾಯುದಾಳಿಯ ಮುನ್ನೆಚ್ಚರಿಕೆಯನ್ನು ಪ್ರಕಟಿಸಲಾಗುತ್ತಿತ್ತು. ವಾರದ ಕೊನೆಯಲ್ಲಿ ಇದರ ಪ್ರಸಾರಿತ ವಿವರವನ್ನು ಕೇಂದ್ರ ಕಛೇರಿಗೆ ಕಳಿಸಲಾಗುತ್ತಿತ್ತು. ಅಂದಿನ ಪ್ರಸಿದ್ಧ ಉದ್ಯೋಷಕ ಮೆಲ್ವಿಲ್ ಡಿ ಮೆಲ್ಲೊ 1944 ರ ಜೂನ್ 6ರಂದು ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮ ಪ್ರಸಾರವೊಂದನ್ನು ಮೊಟಕುಗೊಳಿಸಿ ಯುದ್ಧದ ಆರಂಭದ ಪ್ರಕಟಣೆಯನ್ನು ಮಾಡಿದರು. ಹನ್ನೊಂದು ತಿಂಗಳುಗಳ ನಂತರ ಅವರೇ ಯುದ್ಧವಿರಾಮದ ಘೋಷಣೆಯನ್ನೂ ಮಾಡಿದರು.

(ಟ್ಯಾಂಗಲ್ಸ್ ಟೇಲ್ಸ್ -ಕೆ.ಎಸ್.ಮಲಿಕ್.1974, Zಔ 18-19) ಯುದ್ಧಾನಂತರ ರೇಡಿಯೋದ ಅಭಿವೃದ್ಧಿಯತ್ತ ದೃಷ್ಟಿ ಹರಿಸಲಾಯಿತು. ಆಗ ದಶಕದ ಹೊಸ್ತಿಲಲ್ಲಿ ನಿಂತಿದ್ದ ಆಕಾಶವಾಣಿ 9 ಕಾರ್ಯನಿರ್ವಹಿಸುತ್ತಿತ್ತು. ಮುಂದಿನ ಹೆಜ್ಜೆಯಾಗಿ ಅದರ ವಿಸ್ತರಣೆಯಾಗಬೇಕಿತ್ತು. ಆಗ ಎಸ್.ಗೋಪಾಲನ್' ಎಂಬ ತಂತ್ರಜ್ಞರ ನೇತ್ರತ್ವದ ತಂಡ ಭಾರತದ ಎಲ್ಲ ಕೇಂದ್ರಗಳ ಮೂಲಕ ಭಾಗವನ್ನೂ ತಲುಪಲು ರೇಡಿಯೋ ಪ್ರಸಾರಕ್ಕೆ ಬೇಕಾದ ನೀಲಿ ನಕ್ಷೆಯನ್ನು ಸಿದ್ಧಪಡಿಸಿತು. ಆದರೆ ಇದನ್ನು ಅಧ್ಯಯನ ಮಾಡುವಷ್ಟರಲ್ಲಿ ಭಾರತದ ರಾಜಕೀಯ ಚಿತ್ರ ತೀವ್ರಗತಿಯಲ್ಲಿ ಬದಲಾಗತೊಡಗಿತು. ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿನ್ನಡೆ ಕಂಡ 1942ರ ಕ್ವಿಟ್ ಇಂಡಿಯಾ ಚಳುವಳಿ ಮತ್ತೆ ಬಿರುಸಾಗಿ ಆರಂಭವಾಯಿತು.

ಸರ್ಕಾರದ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡವು. ಸ್ವಾತಂತ್ರ‍್ಯದ ಕನಸನ್ನು ಎಲ್ಲ ಕಾಣಹತ್ತಿದ್ದರು. ಅದರ ಬೆನ್ನಲ್ಲೇ ವಿಭಜನೆಯ ಕರಾಳತೆಯೂ ಮುಸುಕಿತ್ತು, ಇದು ದೇಶದ ಅನೇಕ ಕಡೆಗಳಲ್ಲಿ ಹಿಂಸೆಯನ್ನು ಪ್ರಚೋದಿಸಿತು. ಬೆದರಿದ ಜನತೆ ಜೀವ ಹಾಗೂ ಗೌರವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿತ್ತು. ಹೀಗೆ ಬಂಧುಗಳಿAದ ದೂರವಾದವರಿಗೆ ಸಂದೇಶಗಳನ್ನು, ಮಾಹಿತಿಯನ್ನು ಆಕಾಶವಾಣಿ ವಿಶೇಷ ಪ್ರಸಾರಗಳಲ್ಲಿ ಪ್ರಸಾರ ಮಾಡಿ ಅವರ ನಡುವಿನ ಸೇತುವೆಯಾಗಿ ಕೆಲಸ ಮಾಡಿತು. ಆಗ ಮಹಾತ್ಮಾ ಗಾಂಧಿಯವರ ಭಾಷಣಗಳು ನೊಂದವರಿಗೆ ಸಾಂತ್ವನ ಹಾಗೂ ಶಕ್ತಿಯನ್ನು ನೀಡುತ್ತಿದ್ದುದರಿಂದ ಅವುಗಳನ್ನು ಆಕಾಶವಾಣಿ ಪ್ರಸಾರ ಮಾಡುತ್ತಿತ್ತು.

ಅಗಸ್ಟ್ 15, 1947 ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರ ಮಾಡಿದ ಐತಿಹಾಸಿಕ ಸಮಾರಂಭದ ಪ್ರಸಾರವನ್ನು ಆಕಾಶವಾಣಿ ಮಾಡಿತು. ಮಹಾತ್ಮಾ ಗಾಂಧಿಯವರು 1947 ನವಂಬರ್ 12ರಂದು ಕುರುಕ್ಷೇತ್ರದಲ್ಲಿ 2.5 ಲಕ್ಷ ಭಾರತೀಯ ನಿರಾಶ್ರಿತರನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭವಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಕುರುಕ್ಷೇತ್ರವನ್ನು ತಲುಪಲು ಸಾಧ್ಯವಾಗದೆ ಅಲ್ಲಿ ನೆರೆದಿದ್ದ ಜನರಿಗಾಗಿ ಗಾಂಧೀಜಿಯವರ ಭಾಷಣದ ನೇರ ಪ್ರಸಾರವನ್ನು ಆಯೋಜಿಸಲಾಯಿತು. ಗಾಂಧೀಜಿಯವರು ಅಂದು ಮಧ್ಯಾನ್ಹ ಮೂರು ಗಂಟೆಗೆ ಅವರನ್ನು ಉದ್ದೇಶಿಸಿ ದೆಹಲಿ, ಆಕಾಶವಾಣಿ ಕೇಂದ್ರದಿAದ ಮಾತನಾಡಿದರು.

ಇದರ 50 ವರ್ಷದ ನೆನಪಿಗಾಗಿ 1997 ನವಂಬರ್ 12 ರಂದು ದೆಹಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ನಂತರ 2001 ರಲ್ಲಿ ಆ ದಿನವನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್ ಕಾಸ್ಟಿಂಗ್ ಡೇ' ಎಂದು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿAದ ಪ್ರತಿವರ್ಷ ನವಂಬರ್ 12 ನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಡೇ' ಎಂದು ಆಚರಿಸಲಾಗುತ್ತಿದೆ. ಭಾರತ ವಿಭಜನೆಯ ನಂತರ ಲಾಹೋರ್ ಹಾಗೂ ಪೆಷಾವರ್ ಕೇಂದ್ರಗಳು ಪಾಕಿಸ್ತಾನಕ್ಕೆ ಸೇರಿದವು. ಆ ನಷ್ಟವನ್ನು ತುಂಬಲು ಅದುವರೆಗೂ ಖಾಸಗಿ ಒಡೆತನದಲ್ಲಿ ಅಂದರೆ ಅರಸೊತ್ತಿಗೆಯಲ್ಲಿದ್ದ ಮೈಸೂರು, ಬರೋಡ, ತಿರುವನಂತಪುರ, ಹೈದರಾಬಾದ್ ಹಾಗೂ ಔರಂಗಾಬಾದ್ ಈ ಐದು ಕೇಂದ್ರಗಳನ್ನು ಭಾರತ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.

(ಟ್ಯಾಂಗಲ್ಸ್ ಟೇಫ್ಟ್ ಕೆ.ಎಸ್.ಮಲಿಕ್ 1974, ಪುಟ-21) (ಹೊಸ ಸಂವಿಧಾನದಲ್ಲಿ ರೇಡಿಯೊ ಸರ್ಕಾರದ ಅಧೀನದಲ್ಲಿ ಬಂದದ್ದರಿAದ) ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಾದ ತುರ್ತು ಇತ್ತು. ಆದರೆ ಹಣಕಾಸು ಹಾಗೂ ತಾಂತ್ರಿಕ ಈ ಹಿಂದಿನ ಹಂತದಲ್ಲಿ ಸೇರಿಸದಿದ್ದ ವಿಭಿನ್ನ ಬಂದು ನ ಹಾಗಎ ಯುದ್ಧತಿಯ ದುಗಳಲ್ಲಿ ಸರಣಿ ಅಲ್ಪ ಶಕ್ತಿಯ ವೇಷಕಗಳನ್ನು (ಂಖಿಖಿU) ನಿರ್ಮಿಸಲು ಯೋಜನೆಯೊಂದನ್ನು ರೂಪಿಸಲಾಯಿತು. 1941ರಲ್ಲಿ ಮಾಹಿತಿ ಹಾಗೂ ನಿಸರ ಮಾಲಯ ಹೊಸದಾಗಿ ಅಸ್ತಿತ್ವಕ್ಕೆ ಅದು ಕಾರಿಕಾ ಮಾಯದಲ್ಲಿದ್ದ ಸಸಾರ ವಿಭಾಗ ಮಾಹಿತಿ ಹಾಗೂ ಪ್ರಸಾರ, ಮಾಕ್ಕೆ ವರ್ಗಾವಣೆಯಾಯಿತು.

1935ರಲ್ಲಿ ಫೀಲ್ಡನ್ ಅಲ್ಲಿ ಕೊಂಡಾಗ ಎರಡು ಕೇಂದ್ರಗಳು ಇದ್ದು 1930 ರ ಹೊತ್ತಿಗೆ 14 ಸೆಟ್‌ಗಳಿದ್ದವು ಕೆಂದ್ರಗಳು ಕಾರ್ಯ ನಡೆಸುತ್ತಿದ್ದವು ಹಾಗೂ 85,000 ರೇಡಿಯೋ ಆಗಿನ ಜನಸಂಖ್ಯೆ 400 ದಶಲಕ್ಷವಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ‍್ಯ ಬಂದಾಗ 25 ಲಕ್ಷ ರೇಡಿಯೋ ಸೆಟ್‌ಗಳಿದ್ದವು. ಅಂದಿನ ಜನಸಂಖ್ಯೆಗೆ ಹೋಲಿಸಿದರೆ 12,500 ಮಂದಿಗೆ ಒಂದು ರೇಡಿಯೋ ಸೆಟ್ ಲಭ್ಯವಿತ್ತು. 1973ರ ಡಿಸೆಂಬರ್ ಹೊತ್ತಿಗೆ 14 ಲಕ್ಷ ರೇಡಿಯೋಗಳು ಪರವಾನಿಗೆಯನ್ನು ಹೊಂದಿದ್ದವು. ಮೊದಲನೇ ಪಂಚವಾರ್ಷಿಕ ಯೋಜನೆ ಆರಂಭವಾದಾಗ ದೇಶದಲ್ಲಿ 25 ರೇಡಿಯೊ ಕೇಂದ್ರಗಳಿದ್ದವು. ದೇಶದ ಒಟ್ಟೂ ಜನಸಂಖ್ಯೆಯ 20% ಭಾಗವನ್ನು ಪ್ರಸಾರ ವ್ಯವಸ್ಥೆಯ ಮೂಲಕ ಈ ಯೋಜನೆಯ ಕಾಲದಲ್ಲಿ ( 1951-56) ತಲುಪಲಾಯಿತು.

ಎರಡು ಪಂಚವಾರ್ಷಿಕ ಯೋಜನೆಗಳಲ್ಲಿ ಅಂದರೆ 10 ವರ್ಷಗಳ ಅವಧಿಗೆ 13 ಕೋಟಿ ಹಣವನ್ನು ಆಕಾಶವಾಣಿಯ ಅಭಿವೃದ್ಧಿಗೆ ನೀಡಲಾಯಿತು. ಇದರ ನರನಿವಿಂದ 1961ರ ಕೊನೆಯಲ್ಲಿ 55 * ಜನತೆಯನ್ನು ತಲುಪುವುದು ಸಾಧ್ಯವಾಯಿತು. ಪ್ರಸಾರ ವ್ಯವಸ್ಥೆಯ ವಿಸ್ತರಣೆ ಮೂರನೆ ಹಾಗೂ ನಾಲ್ಕನೇ ಪಂಚವಾರ್ಷಿಕ ಯೋಜನೆಗಳಲ್ಲೂ ಮುಂದುವರೆದು 1971 ರಲ್ಲಿ 75 ಜನತೆಯನ್ನು ತಲುಪಲಾಯಿತು. 1976 ರಲ್ಲಿ 1,74 ಕೋಟಿ ರೇಡಿಯೋಗಳು ಪರವಾನಿಗೆಯನ್ನು ಹೊಂದಿದ್ದು ಈ ಪರವಾನಿಗೆಯಿಂದ 23.51 ಕೋಟಿ ರೂಪಾಯಿಗಳ ವರಮಾನ ಸರ್ಕಾರಕ್ಕೆ ಬಂದಿತ್ತು. 1977 ಜುಲೈ 23 ರಂದು ಆಕಾಶವಾಣಿಯ ಮೊದಲ ಎಫ್.ಎಮ್ ಪ್ರಾರಂಭವಾಯಿತು.

1993ರ ಹೊತ್ತಿಗೆ ಎಫ್.ಎಮ್. ಪ್ರಾಮುಖ್ಯತೆಯನ್ನು ಪಡೆದು 1997-98ರ ಹೊತ್ತಿಗೆ ಮನೆಗಳಲ್ಲಿ, ಮಹನಗಳಲ್ಲಿ ಅದು ಸ್ಥಾನ ಪಡೆದುಕೊಂಡಿತು. ಇಸವಿ 2000ದ ಮಾರ್ಚ ತಿಂಗಳಲ್ಲಿ ಸರ್ಕಾರ ಎಫ್.ಎಮ್. ಕೇಂದ್ರದ 108 ಪರವಾನಿಗೆಗಳ ಮುಕ್ತ ಹರಾಜಿಗೆ ಆಹ್ವಾನ ನೀಡಿತು. 1935ರ ಸಪ್ಟೆಂಬರ್ 10ರಂದು ಕರ್ನಾಟಕದ ಮೈಸೂರಿನಲ್ಲಿ ಡಾ.ಎಮ್.ವಿ.ಗೋಪಾಲಸ್ವಾಮಿಯವರ ನಿರ್ದೇಶನದಲ್ಲಿ ಅವರ ಮನೆಯಲ್ಲಿ ಅಲ್ಪಶಕ್ತಿಯ ಪ್ರಸಾರ ಯಂತ್ರದಿAದ ಮೊದಲ ಕಾರ್ಯಕ್ರಮ ಬಿತ್ತರಗೊಂಡಿತು. ಗೋಪಾಲಸ್ವಾಮಿಯವರು ತಮ್ಮ ಮಿತ್ರ ರೇಡಿಯೋ ತಂತ್ರಜ್ಞ ಎ, ಜಗದೀಶ ಅವರೊಡನೆ ಸೇರಿ ರೇಡಿಯೋ ಪಟ್ಟಿಗೆ ಧ್ವನಿಪ್ರಸಾರ ಮಾಡುವ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿದರು.

ಈ ಸಂದರ್ಭದಲ್ಲಿ ವರ್ತಮಾನ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟಗೊಂಡು ಹಾಲೆಂಡಿನ ಆಂಗ್ಲ ಪ್ರಜೆಯೊಬ್ಬ 5 ಕಿ.ವ್ಯಾ. ಪ್ರಕಟಿಸಿದ್ದ. ಶಕ್ತಿಯ ರೇಡಿಯೋ ಪ್ರೇಷಕವನ್ನು ಮಾರಾಟ ಮಾಡುವುದಾಗಿ ಅದರಲ್ಲಿ ಗೋಪಾಲಸ್ವಾಮಿಯವರು ಅದನ್ನು ಕೊಂಡು ಮೈಸೂರಿಗೆ ತರಿಸಿ ತಮ್ಮ ಪ್ರಯೋಗವನ್ನು ಮುಂದುವರಿಸಿದರು. ಅದರ ಫಲಿತಾಂಶಗಳು ಉತ್ತಮವಾಗಿದ್ದುದರಿಂದ ಅವರು 30 ಕಿ.ವ್ಯಾ. ಶಕ್ತಿಯ ಹೊಸ ಟ್ರಾನ್ಸಮೀಟರನ್ನು ಧೈರ್ಯದಿಂದ ಕೊಂಡುಕೊAಡರು. ಇದನ್ನೆಲ್ಲ ಗೋಪಾಲಸ್ವಾಮಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿ ತಮ್ಮ ಮನೆಯ ಮಹಡಿಯ ಮೇಲೆ ಅದನ್ನು ಸ್ಥಾಪಿಸಿದರು. ಆಗ ಕಾರ್ಯಕ್ರಮಗಳು ಸಾಯಂಕಾಲ 6 ರಿಂದ 7.30 ರವರೆಗೆ ಹಾಗೂ ಕೆಲದಿನ 8.30 ರವರೆಗೆ ಪ್ರಸಾರವಾಗುತ್ತಿದ್ದವು,

ಮನೆಯ ಮುಂದೆ ಧ್ವನಿವರ್ಧಕ ಹಾಕಿ ಎಲ್ಲರಿಗೆ ಕೇಳುವ ವ್ಯವಸ್ಥೆ ಮಾಡಲಾಗಿತ್ತು. ನಂತರ ಎರಡನೇ ಮಹಾಯುದ್ಧದ ಕಾಲ, ಜನ ಯುದ್ಧದ ಸುದ್ದಿಗಳನ್ನು ತಿಳಿಯಲು ಆಸಕ್ತಿ ತೋರಿದ್ದರಿಂದ ಮೈಸೂರು ಪುರಸಭೆ ಹಾಗೂ ಮೈಸೂರು ಸಂಸ್ಥಾನ ಸರ್ಕಾರ ಕೊಂಚ ಹಣ ಸಹಾಯ ಮಾಡಿತು. ಅದನ್ನು ಪಡೆದು 1941 ರವರೆಗೂ ಈ ಕೇಂದ್ರವನ್ನು ಖಾಸಗಿಯಾಗಿಯೇ ನಡೆಸಿಕೊಂಡು ಬರಲಾಯಿತು. 1942ರಲ್ಲಿ ಮೈಸೂರು ಸಂಸ್ಥಾನ ಈ ಕೇಂದ್ರದ ಆಡಳಿತವನ್ನು ವಹಿಸಿಕೊಂಡಿತು. ಮುಂದೆ 1950 ಏಪ್ರಿಲ್ 1 ರಂದು ಅದು ಸರ್ಕಾರದೊಂದಿಗೆ ವಿಲೀನವಾಗಿ ಆಕಾಶವಾಣಿ ಜಾಲದ ಭಾಗವಾಯಿತು. ಮೈಸೂರು ಕೇಂದ್ರ ದೇಶೀಯ ಸಂಸ್ಥಾನಗಳ ಮೊದಲ ಕೇಂದ್ರ ಅಲ್ಲೇ ಮೊಟ್ಟಮೊದಲ ಬಾರಿಗೆ ರೇಡಿಯೋವನ್ನು “ಆಕಾಶವಾಣಿ” ಎಂದು ಕರೆಯಲಾಯಿತು.

ಮೈಸೂರಿನಲ್ಲಿ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ನಾ. ಕಸ್ತೂರಿಯವರನ್ನು ಗೋಪಾಲಸ್ವಾಮಿಯವರು ಸಂಸ್ಥೆಗೆ ಒಳ್ಳೆಯ ಹೆಸರು ಸೂಚಿಸುವಂತೆ ಕೇಳಿದ್ದರು. ಕಸ್ತೂರಿಯವರು ಅದನ್ನು ಮಾಹಾರಾಜಾ ಕಾಲೇಜಿನ ತಮ್ಮ ಮಿತ್ರವರ್ಗದೊಂದಿಗೆ ಲೋಕಾಭಿರಾಮವಾಗಿ ಚರ್ಚಿಸಿದಾಗ ಅಲ್ಲೇ ಆಕಾಶವಾಣಿ ಅಭಿದಾನದ ಉಗಮವಾಯಿತು ಹಾಗೂ ನಾ. ಕಸ್ತೂರಿಯವರೇ ಅದನ್ನು ಮೊದಲಿಗೆ ಸೂಚಿಸಿ ಇತರರು ಅದನ್ನು ಸ್ವಾಗತಿಸಿದರು. ಮುಂದೆ ಆ ಹೆಸರೇ ಶಾಶ್ವತವಾಗಿ ಉಳಿಯಿತು. ರವೀಂದ್ರನಾಥ ಟಾಗೋರರು ಆಕಾಶವಾಣಿ ಎಂಬ ಪದವನ್ನು ಮೊದಲು ಬಳಸಿದ್ದರು ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಏನೇ ಇದ್ದರೂ ಅಂದಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೈಸೂರು ಆಕಾಶವಾಣಿಗೆ ಮಹತ್ವದ ಸ್ಥಾನವಿತ್ತು.

ಆಗ ರೇಡಿಯೋ ರಿಸೀವರೆ 300-400 ರೂಪಾಯಿಗಳಷ್ಟು ಬೆಲೆಯಿದ್ದು ಅದು ಸಿರಿವಂತರಿಗೆ ಮಾತ್ರ ಎಟಕುವ ಸಾಧನವಾಗಿತ್ತು. ಆಕಾಶವಾಣಿಯ 'ಸಿಗ್ರೇಚರ್ ಟ್ಯೂನ್' ಬಗ್ಗೆ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಇದನ್ನು ಜ್ಯೂ(ಯಹೂದಿ) ಸಂಗೀತಗಾರ, ವಾಲ್ಟರ್ ಕಾಫ್‌ಮನ್ ರಚಿಸಿದ್ದಾನೆ. ಇವನು ಜರ್ಮನಿಯ ರೆಮ್ಯೂಜಿಯಾಗಿದ್ದ. ಇದಕ್ಕೆ ಸಂಗೀತವನ್ನು ಪ್ರಸಿದ್ಧ ಸಂಗೀತಗಾರ ಜುಬಿನ್ ಮೆಹ್ರಾ ಅವರ ತಂದೆ ಸಂಯೋಜಿಸಿದ್ದಾರೆ. ಸಂಕೇತವಾಗಿಯೂ ಇರುವ ಈ ಆರಂಭ ಸಂಗೀತದಿAದಲೇ ಇಂದಿಗೂ ಆಕಾಶವಾಣಿ ತನ್ನ ಪ್ರಸಾರ ಕಾರ್ಯವನ್ನು ಆರಂಭಿಸುತ್ತದೆ.

ಮೈಲಿಗಲ್ಲಗಳು
ಇAಡಿಯನ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್ ಇಂದಿನ ಆಲ್ ಇಂಡಿಯಾ ರೇಡಿಯೋ ಅಥವಾ ಆಕಾಶವಾಣಿಯಾದ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆಯ ಹಂತಗಳಿವೆ.

1) 1921, ಅಗಸ್ಯ. 20 ರಂದು ಮುಂಬೈನ (ಅಂದಿನ ಬಾಂಬೆ) ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ತನ್ನ ಕಟ್ಟಡದ ಮೇಲ್ಬಾವಣಿಯಿಂದ ಅಂಚೆ-ತAತಿ ಇಲಾಖೆಯ ಸಹಯೋಗದೊಂದಿಗೆ ಮೊದಲ ಪ್ರಸಾರ ಆರಂಭಿಸಿತು,
2) 1922: ಫೆಬ್ರವರಿ 23 ರಂದು ಮೊದಲ ಪ್ರಸಾರ ಪರವಾನಗಿ (ಲೈಸೆನ್ಸ್) ಕೊಡಲಾಯಿತು.
3) 1923 ಮಾರ್ಚ 7 ರಂದು ಮೊದಲ ಪ್ರಸಾರ ಸಮಾವೇಶ ನಡೆಯಿತು. 4) 1923 ನವೆಂಬರಿನಲ್ಲಿ ಕೋಲ್ಕತ್ತಾದ ರೇಡಿಯೋ ಕ್ಲಬ್ ಆರಂಭವಾಯಿತು.
5) 1924 ಮೇ 16 ರಂದು ಮದ್ರಾಸಿನ ರೇಡಿಯೊ ಕ್ಲಬ್ ಆರಂಭವಾಯಿತು.
6) 1925 ಮಾರ್ಚ 27ರಂದು ಪ್ರಸಾರ ಕೇಂದ್ರಗಳನ್ನು ಬೇರ ಬೇರೆ ಭಾಗಗಳಲ್ಲಿ
ಆರಂಭಿಸಲು ಸರ್ಕಾರ ಸೂಚನೆಯನ್ನು ಕಳಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು.
7) 1927 ಜುಲೈ 23 ಮುಂಬೈ ಕೇಂದ್ರದ ಪ್ರಸಾರ ಆರಂಭವಾಯಿತು. 8) 1927 ಅಗಸ್ಟ 26 ಕೋಲ್ಕತ್ತಾ ಕೇಂದ್ರ ಆರಂಭವಾಯಿತು.
9) 1930 ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಮುಂಬೈ ಕೇಂದ್ರವನ್ನು ಸರ್ಕಾರಕ್ಕೆ ಹಸ್ತಾಂತರಿಸಿತು. ಅದನ್ನು ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್ (ಐಎಸ್‌ಬಿಎಸ್) ಎಂದು ಮರುನಾಮಕರಣ ಮಾಡಲಾಯಿತು.
10) 1936 ಜೂನ್ 8 ರಂದು ಐಎಸ್‌ಬಿಎಸ್ ಅನ್ನು ಆಲ್ ಇಂಡಿಯಾ ರೇಡಿಯೊ ಎಂದು ಪರ್ನನಾಮಕರಣ ಮಾಡಲಾಯಿತು.
11) 1938 ರಲ್ಲಿ ಶಾರ್ಟ್ ವೇವ್ ಪ್ರಸಾರ ಆರಂಭವಾಯಿತು.
12) 1939 ರಲ್ಲಿ ಹೊರದೇಶಗಳ ಪ್ರಸಾರ ಸೇವೆ ಸರ್ವಿಸಸ್ ಡಿವಿಶನ್) ಉದ್ಘಾಟನೆಯಾಯಿತು. ಇಎಸ್‌ಡಿ (ಎಕ್ಸ್ಟರ್‌ನಲ್
13) 1957 ಅಕ್ಟೋಬರ್ 2 ರಂದು ವಿವಿಧ ಭಾರತಿ ಸೇವೆ ಆರಂಭವಾಯಿತು.
14) 1969 ರಿಂದ ವಿವಿಧ ಭಾರತಿಯಲ್ಲಿ ಜಾಹೀರಾತುಗಳ ಪ್ರಸಾರ
15) 1977 ಜುಲೈ 23 ರಂದು ಮೊದಲ ಎಫ್ ಎಮ್ ಆರಂಭವಾಯಿತು 16) 1988 ರಲ್ಲಿ ಉಪಗ್ರಹದ ಮೂಲಕ ರಾಷ್ಟ್ರೀಯ ವಾಹಿನಿಯೊಂದರ ಪ್ರಸಾರ ಆರಂಭವಾಯಿತು.
17) 1990: ಭಾರತ ಸರ್ಕಾರ ಖಾಸಗೀಕರಣ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟಿಕೊಂಡು ಪ್ರಸಾರ ಸೇವೆಯನ್ನು ಸರ್ಕಾರಿ ಸ್ವಾಮ್ಯದಿಂದ ಮುಕ್ತಗೊಳಿಸಲು 'ಪ್ರಸಾರ ಭಾರತಿ ಮಸೂದೆ' ಯನ್ನು ಮಂಡಿಸಿತು. ನಂತ 1997 ರಲ್ಲಿ ಅದು ಜಾರಿಗೆ ಬಂದಿತು.
18) 1995: ಫೆಬ್ರವರಿಯಲ್ಲಿ ಸರ್ವೋಚ್ಛ ನ್ಯಾಯಾಲಯವು 'ಪ್ರಸಾರ ಅಲೆಗಳ ಸಾರ್ವಜನಿಕ ಆಸ್ತಿ' ಎಂಬ ಮಹತ್ತರವಾದ ತೀರ್ಪನ್ನು ನೀಡಿತು. ಸಾರ್ವಜನಿ ಹಿತಾಸಕ್ತಿಗಾಗಿ ಅವುಗಳನ್ನು ಸಾರ್ವಜನಿಕ ಪ್ರಾಧಿಕಾರವು ನಿಯಂತ್ರಿಸಬೇಕೆAದ ಹೇಳಿದ್ದು ಪ್ರಸಾರ ಭಾರತಿಗೆ ಸ್ವಾಯತ್ತತೆಯನ್ನು ಹಾಗೂ ಖಾಸಗೀಕರಣ ನಾಂದಿಯನ್ನು ಹಾಡಿತು.
19) 1996: ಪ್ರಸಾರ ಮಸೂದೆಯ ಕರಡನ್ನು ಸಿದ್ದಪಡಿಸಲಾಯಿತು. ಇದರನ್ವ ಸರ್ಕಾರಿ ಹಾಗೂ ಖಾಸಗಿ ಒಡೆತನದ ಪ್ರಸಾರ ಕೇಂದ್ರಗಳನ್ನು ನಿರ್ವಹಿಸು ಹೊಣೆ ಪ್ರಸಾರ ಪ್ರಾಧಿಕಾರಕ್ಕೆ ನೀಡಲ್ಪಟ್ಟಿತು. ಉಪಗ್ರಹ ಆಧಾರಿತ, ಟೆರಿಸ್ಟಿಯ ಹಾಗೂ ಕೇಬಲ್ ಪ್ರಸಾರಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು.
20) 1998 ಆಗಸ್ಟ್: ಕೆಳಮನೆಯಲ್ಲಿ ಪ್ರಸಾರ ಭಾರತಿ ಮಸೂ ಅಂಗೀಕಾರವಾಯಿತು. ಜೊತೆಗೆ ಪ್ರಸಾರ ಪ್ರಾಧಿಕಾರವು 32 ಸದಸ್ಯ ಪಾರ್ಲಿಮೆಂಟರಿ ಕಮಿಟಿಯಿಂದ ನಿಗಾವಹಿಸಲ್ಪಡುತ್ತದೆ ಎಂಬ ತಿದ್ದುಪಡಿಯನ ಇದಕ್ಕೆ ತರಲಾಯಿತು.
21) 2000 ದಲ್ಲಿ ದೇಶದ 108 ಎಫ್, ಎಮ್. ಕೇಂದ್ರಗಳ ಪರವಾನಿಗೆ ಮುಕ್ತ ಹರಾಜಿಗೆ ಸರ್ಕಾರ ಆಹ್ವಾನ ನೀಡಿತು.
22) 2001 ನವಂಬರ್ 12, ಗಾಂಧೀಜಿಯವರ ಆಕಾಶವಾಣಿ ಭೇಟಿಯ ನೆನಪಿಗ ಈ ದಿನವನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ದಿನ' ಎಂದು ಕರೆಯಲಾಯಿತ ಆಕಾಶವಾಣಿ ಹಾಗೂ ದೂರದರ್ಶನಗಳ ಸಂಗ್ರಹಾಲಯವನ ಉದ್ಘಾಟಿಸಲಾಯಿತು.
23) 2002 ಜುಲೈ -ಪ್ರಸಾರದ 75ನೇ ವರ್ಷಾಚರಣೆ
24) 2003 .ಪ್ರಸಾರ ಭಾರತಿಯ ಮಾರುಕಟ್ಟೆ ವಿಭಾಗದ ಉದ್ಘಾಟನೆ
25) .2004 .ಜನವರಿ 26 ದೆಹಲಿಯಿಂದ ಭಾಷಾ ಭಾರತಿ ವಾಹಿನಿಯ ಹಾಗೂ ಬೆಂಗಳೂರಿಲ್ಲಿ ಶಾಸ್ತ್ರೀಯ ಸಂಗೀತದ ವಾಹಿನಿಯ ಉದ್ಘಾಟನೆ
26) 2004 ಎಪ್ರಿಲ್ 1 12 ಕೇಂದ್ರಗಳಿAದ ಕಿಸಾನ್ ವಾಣಿ ಕಾರ್ಯಕ್ರಮದ
27) 2004 ಮೇ 25 - ಕುಸ್ವಾರಾದಲ್ಲಿ ಜಮ್ಮು ಹಾಗೂ ಕಾಶ್ಮೀರದ ಗಡಿಯಲ್ಲಿ ರೇಡಿಯೋ ಪ್ರಸಾರವನ್ನು ಬಲಗೊಳಿಸಲು 20 ಕಿ.ವ್ಯಾ. ಮಿಡಿಯಂ ವೇವ ಪ್ರಸಾರದ ಉದ್ಘಾಟನೆ
28) 2004 ಡಿಸೆಂಬರ 16 – ಆಕಾಶವಾಣಿ ಹಾಗೂ ದೂರದರ್ಶನಗಳ ಡಿಟಿಹೆಚ್ ಪ್ರಸಾರದ ಉದ್ಘಾಟನೆ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ಅವರಿಂದ
29) 2006 ಸಪ್ಟೆಂಬರ್ 1- ಕಾರ್ಗಿಲ್ (ಜಮ್ಮು ಹಾಗೂ ಕಾಶ್ಮೀರ) ನಲ್ಲಿ 200 ಕಿ.ವ್ಯಾ. ಸಾಮರ್ಥ್ಯದ ಪ್ರೇಷಕದ ಪ್ರಾರಂಭ
30) 2008 ಲೆಹ್ (ಜಮ್ಮು ಹಾಗೂ ಕಾಶ್ಮೀರ) ದಲ್ಲಿ ಎಫ್.ಎಮ್. ಪ್ರೇಷಕ ಆರಂಭ
31) 2010- 'ಫೋನಿನಲ್ಲಿ ವಾರ್ತೆ' ಸೇವೆ 14 ಪ್ರಮುಖ ನಗರಗಳಿಂದ ಆರಂಭ
32) 2012 ಮಾರ್ಚ 27 -ಬಾಂಗ್ಲಾದೇಶ ವಿಮುಕ್ತಿ ಯುದ್ಧದಲ್ಲಿ ಆಕಾಶವಾಣಿಯ
ಸೇವೆಯನ್ನು ಗುರುತಿಸಿ ಬಾಂಗ್ಲಾದೇಶದ ಸರ್ಕಾರದಿಂದ ಆಕಾಶವಾಣಿಗೆ ವಿಶೇಷ ಪರಸ್ಕಾರ
33) 2014 ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮದ ಮೂಲಕ ಜನರೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಇದು ಪ್ರತಿ ತಿಂಗಳ ಒಂದು ಭಾನುವಾರದಂದು ದೇಶವ್ಯಾಪಿ ಪ್ರಸಾರವಾಗುತ್ತಿದೆ.
34) ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಭೇಟಿ ಸಂದರ್ಭದಲ್ಲಿ 2015 ರ ಜನವರಿ 27 ರಂದು ಪ್ರಧಾನಿ ಮೋದಿ ಅವರು ಒಬಾಮಾ ಅವರೊಂದಿಗೆ ಜಂಟಿಯಾಗಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
35) 2016 ಜನವರಿ 26 ರಂದು ಆಕಾಶವಾಣಿಯ 24 7 ಸಂಗೀತ ವಾಹಿನಿ 'ರಾಗಂ' ದ ಹಾಗೂ ಮೊಬೈಲ್ ಆಪ್‌ಗಳ ಉದ್ಘಾಟನೆ ಬೆಂಗಳೂರಿನಲ್ಲಿ

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-3)

By
Click to Learn More 1.2 ಆಕಾಶವಾಣಿಯ ಧೈಯಗಳು, ಕಾರ್ಯಗಳು ಹಾಗೂ ಪ್ರಭಾವಗಳು

ಸಂವಹನ ಒಂದು ಸಾಮಾಜಿಕ ಪ್ರಕ್ರಿಯೆ, ಇದರಲ್ಲಿ ವ್ಯಕ್ತಿ-ವ್ಯಕ್ತಿಗಳ ನಡುವೆ, ವ್ಯಕ್ತಿ-ಸಮುದಾಯದ ನಡುವೆ ನಿರಂತರ ಮಾಹಿತಿಯ ವಿನಿಮಯ ನಡೆಯುತ್ತದೆ. ಆದರೆ ಇದರ ವ್ಯಾಪ್ತಿ ಸೀಮಿತವಾಗಿರುತ್ತದೆ. ನೀಡುವ ಮಾಹಿತಿಯ ಪ್ರಭಾವವೂ ಅನೇಕ ಬಾರಿ ಸೀಮಿತವಾಗಿರಬಹುದು.

ಆದರೆ ಸಮೂಹ ಸಂವಹನ ವಿಶಾಲ ಕ್ಷೇತ್ರಕ್ಕೆ ಅನ್ವಯವಾಗುವಂತೆ, ವಿವಿಧ ಭಾಷೆ, ಜಾತಿ, ಜನಾಂಗದ ಗುಂಪುಗಳ ನಡುವೆ, ಬೇರೆ ಬೇರೆ ಆಸಕ್ತಿ-ಆಶೋತ್ತರಗಳ ಗುಂಪುಗಳ ನಡುವೆ ನಡೆಯುತ್ತದೆ. ಆದ್ದರಿಂದ ಇದರ ಪ್ರಭಾವವೂ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಗಾಢವಾಗಿರುತ್ತದೆ. ಈ ಸಮೂಹ ಮಾಧ್ಯಮಗಳ ಪ್ರಭಾವದಿಂದ ವಿವಿಧ ಬಗೆಯ ಅಭಿಪ್ರಾಯಗಳನ್ನು ರೂಪಿಸುವ ಗುಂಪುಗಳು ಶಹರಗಳಲ್ಲಿ ಹೆಚ್ಚಿದಂತೆ ಸಣ್ಣ ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲೂ ಹೆಚ್ಚಾಗ ತೊಡಗಿದವು. ಆಗ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ಆ ಪ್ರದೇಶಗಳಿಗೂ ವಿಸ್ತರಿಸಲು ಪ್ರಾರಂಭಿಸಿದವು. ನಗರೀಕರಣ ಹಾಗೂ ಕೈಗಾರಿಕಾಕರಣದಿಂದ 19ನೇ ಶತಮಾನದಲ್ಲಿ ಪಟ್ಟಣಗಳ ಸಾಮಾಜಿಕ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು.

ಪತ್ರಿಕೆಗಳು ಮಾಹಿತಿಯ ಮಹಾಪೂರವನ್ನೇ ಹರಿಸಿದವು. 20ನೇ ಶತಮಾನದಲ್ಲಿ ಪತ್ರಿಕೆಗಳ ತಾಂತ್ರಿಕ ಅಭಿವೃದ್ಧಿಯಿಂದ ಅವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಇದರೊಂದಿಗೆ ರೇಡಿಯೋ, ದೂರದರ್ಶನ, ಸಿನೆಮಾ ಮುಂತಾದ ಹೊಸ ಸಮೂಹ ಮಾಧ್ಯಮಗಳೂ ಬಹು ವೇಗವಾಗಿ ಬೆಳೆದವು. ಈ ಎಲ್ಲ ಮಾಧ್ಯಮಗಳೂ ತಮ್ಮ ಓದುಗರಿಗೆ, ಕೇಳುಗರಿಗೆ, ನೋಡುಗರಿಗೆ ಮಾಹಿತಿಯ ಭಂಡಾರವನ್ನೇ ತೆರೆದವು. ಜನರೆದುರು ಹೆಚ್ಚು ಆಯ್ಕೆಗಳು ತೆರೆದುಕೊಂಡವು. ಇವುಗಳೊಂದಿಗೆ ಆಧುನಿಕ ಮಾಧ್ಯಮಗಳೂ ಬೆಳೆದವು. ಇದರಿಂದ ಈ ಶತಮಾನವನ್ನು ಮಾ ಯುಗ' ಎಂದು ಕರೆಯಲಾಯಿತು. ಈ ಎಲ್ಲ ಮಾಧ್ಯಮಗಳ ಉದ್ದೇಶಗಳು, ಏಕತೆರನಾಗಿದ್ದು, ಅವುಗಳೆಂದರೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣ,

ಆಕಾಶವಾಣಿ ಭಾರತದಲ್ಲಿ ನೆಲೆಯೂರುವ ಬಹಳ ಮೊದಲೇ ಪತ್ರಿಕೆಗಳು, ಇಲ್ಲಿ ಬೇರೂರಿದ್ದವು. ಸ್ವಾತಂತ್ರ‍್ಯಪೂರ್ವ ಹಾಗೂ ಸ್ವಾತಂತ್ರಾನAತರ ಶಾನಭ ನಾಲ್ಕನೇ ಅಂಗ'ವಾಗಿ ಪತ್ರಿಕೆಗಳು ಹೆಸರು ಹಾಗೂ ಜನಮನ್ನಣೆ ಗಳಿಸಿರು ಆಗ ಬಂದ ರೇಡಿಯೊ ಮಾಧ್ಯಮವಾಗಿ ನೆಲೆಯೂರುವ ಮೊದಲು ಎಲ್ಲಾ ಕುತೂಹಲಕ್ಕೆ ಕಾರಣವಾಗಿತ್ತು. ಕೆಲವೇ ಕೆಲವು ಉಳ್ಳವರ ಪಡಸಾಲೆಯ ಹೆಮ್ಮೆಯಾಗಿತ್ತು. ರೇಡಿಯೋದಲ್ಲಿ ಧ್ವನಿ ಹೇಗೆ ಮೂಡಿಬರುತ್ತದೆ? ಅದರ ಒಳಗೆ ಮಾತನಾಡುವವರು ಯಾರಿದ್ದಾರೆ? ಎಲ್ಲಿ ಕುಳಿತು ಮಾತನಾಡುತ್ತಾರೆ? ಅನ್ನು ಹತ್ತಿರದಿಂದ ಮಾತನಾಡಿದರೂ ಅವರೇಕೆ ಕಾಣುವುದಿಲ್ಲ ಇತ್ಯಾದಿ ಪ್ರಶ್ನೆಗಳು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಾಮಾನ್ಯವಾಗಿದ್ದವು.

ಬರುಬರುತ್ತ ಈ ಕುತೂಹಲಭರಿತ ಪ್ರಶ್ನೆಗಳಿಗೆ ತಾಂತ್ರಿಕ ಜ್ಞಾನದಿಂದ ಉತ್ತರ ಕಂಡುಕೊAಡವರು ಅದನ್ನು ಒಂದು ಬೆಲೆಬಾಳುವ ಆಸ್ತಿಯಂತೆ ಕಾಪಾಡಿಕೊಂಡರು. ಆಕಾಶವಾಣಿಯ ವಿಸ್ತರಣೆ ಹಾಗೂ ತಾಂತ್ರಿಕ ಅಭಿವೃದ್ಧಿಯ ಕಾರಣ ಅದು ಕಡಿಮೆ ಬೆಲೆಗೆ ಎಲ್ಲರಿಗೂ ಎಟುಕುವಂತಾದಾಗ ಅದರ ಮಹತ್ವ ಹೆಚ್ಚಿತು. ಈ ಮಾಧ್ಯಮ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದರಿAದ ಬಹುಬೇಗ ಅದು ಜನಮನ್ನಣೆಗೆ ಪಾತ್ರವಾಯಿತು.

ಮಾಧ್ಯಮವಾಗಿ ರೇಡಿಯೋದ ವಿಶೇಷ ಗುಣಗಳು

ರೇಡಿಯೋ ಮಾಧ್ಯಮಕ್ಕೆ ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳಿವೆ. ಇತರ ಮಾಧ್ಯಮಗಳಿಗೆ ಹೋಲಿಸಿದಾಗ ರೇಡಿಯೋದ ಈ ವೈಶಿಷ್ಟ್ಯಗಳು ಶೋತೃಗಳಿಗೆ ಅನುಕೂಲವಾಗಿ ಪರಿಣಮಿಸುತ್ತವೆ. ಅವೆಂದರೆ ರೇಡಿಯೋದ ವೇಗ ಮತ್ತು ವ್ಯಾಪ್ತಿ, ಒಂದು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ರೇಡಿಯೋ | ಅದರ ವಿವರಗಳನ್ನು ಬಿತ್ತರಿಸುವ ಸಾಧ್ಯತೆ ಇದೆ. ಆದರೆ ಪತ್ರಿಕೆಗಳಲ್ಲಿ ಇದೇ ಸುದ್ದಿಯನ್ನು ಪಡೆದುಕೊಳ್ಳಲು ನಾಳೆಯವರೆಗೂ ಕಾಯಬೇಕಾಗುತ್ತದೆ. ರೇಡಿಯೋಗ | ವ್ಯಾಪ್ತಿ ಕೂಡಾ ವಿಸ್ತಾರವಾದದ್ದು. ರೇಡಿಯೋ ತರಂಗಗಳು ಎಲ್ಲೆಲ್ಲಿ ತಲುಪಲು | ಸಾಧ್ಯವೋ ಅಲ್ಲಿಗೆ ರೇಡಿಯೋ ಪ್ರಸಾರ ತಲುಪುತ್ತದೆ. ಪತ್ರಿಕೆಗಳು ತಲುಪಲಾರದ ಜಾಗಕ್ಕೂ ರೇಡಿಯೊ ಅಲೆಗಳು ತಲುಪುತ್ತವೆ, ರೇಡಿಯೋ ತರಂಗಗಳಿಗೆ ತಂತಿ | ಅಥವಾ ರಸ್ತೆಯ ಅಗತ್ಯವಿಲ್ಲ!

ಪತ್ರಿಕೆಗಳು ಓದು-ಬರಹ ಬಲ್ಲವರಿಗೆ ಮಾತ್ರ ಅನುಕೂಲವಾಗುವಂಥವು. ಆದರೆ ರೇಡಿಯೋ ಕೇಳುವ ಮಾಧ್ಯಮವಾದ್ದರಿಂದ ಈ ನ್ಯೂನ್ಯತೆಯನ್ನು ಮೀರಿರುವಂಥದ್ದು, ಕಣ್ಣು ಕಾಣದವರಿಗೂ ಇದು ಮಾಹಿತಿ, ಮನರಂಜನೆಯನ್ನು ನೀಡಬಲ್ಲದು. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಜನರನ್ನು ತಲುಪಲು ಪತ್ರಿಕೆಗಳಿಗೆ ಇರುವ ಮಿತಿಯನ್ನು ರೇಡಿಯೋ ಸಲ್ಲುತ್ತದೆ. ಡಿಯೋ ಪ್ರಸಾರದ ಆಲಿಸುವಿಕೆಗೆ ಪತ್ರಿಕೆಯಂಡ ದಿನವೂ ಹನಿಗವ ಅವಶ್ಯಕತೆಯಿಲ್ಲ. ಈಗ ಲೈಸೆನ್ಸ್ ಹುಲ್ಕವೂ ಇಲ್ಲದಿರುವುದರಿಂದ ದೃಶ್ಯ ಮಾಧ್ಯಮಗಳಂತೆ (ಮುಖ್ಯವಾಗಿ ಖಾಸಗಿ ತಿಂಗಳ ವಂತಿಗೆಯನ್ನೂ ನೀಡುವ ಅವಶ್ಯಕತೆ ಇದಕ್ಕಿಲ್ಲ. ಇವ ಕೆಲಸಗಳನ್ನು ಮಾಡುತ್ತಲೇ ಆಲಿಸಲು ಸಾಧ್ಯವಾಗುವದು ರೇಡಿಯೋದ ಮಹಾತ್ಮಕ ಅಂಶ.

ಸ್ವಂತ ಕೆಲಸಗಳಿಗೆ ಇದರಿಂದ ಯಾವುದೇ ಬಾಧೆಯಿರು ಒಳಾಗಿ ವಡಸಾಲೆಯನ್ನು ದಾಟಿ ಅಡುಗೆಮನೆಗೂ ಇದು ಲಗ್ಗೆ ಇಟ್ಟು ಈಗ ರೇಡಿಯೊದಲ್ಲಿ ಎಫ್ ಎಮ್. ತಂತ್ರಜ್ಞಾನದ ಅಭಿವೃದ್ಧಿಯ ನಂತರ, ಅವರಲ್ಲೂ ವಾಹನಗಳಲ್ಲಿಯೂ ಎಫ್.ಎಮ್, ಸೆಟ್‌ಗಳ ಅಳವಡಿಕೆ ಸಾಧ್ಯವಾದದ್ದರಿಂದ ರೇಡಿಯೋದ ಜನಪ್ರಿಯತೆ ಹೆಚ್ಚಿತು. ಇತ್ತೀಚೆಗೆ ಮೊಬೈಲುಗಳಲ್ಲಿ ಎನ್.ಎಮ್.ಕೇಳುವ ತಂತ್ರಜ್ಞಾ ಸೇರಿಕೊಂಡ ನಂತರವAತೂ ಜನತೆಗೆ ರೇಡಿಯೊ ಹಿಂದೆAದಿಗಿAತಲೂ ಹತ್ತಿರವಾಗಿದೆ ; ಅವರಲ್ಲೂ ಮುಖ್ಯವಾಗಿ ಯುವಜನತೆ ಎಲ್ಲೆಂದರಲ್ಲಿ ಎತ್ತೊಯ್ಯಬಹುವಾದ ಗುಣದಿಂದ ಅದು ಎಲ್ಲರ ಮೆಚ್ಚುಗೆ ಬೇರೆ ಮಾಧ್ಯಮಗಳಿಗಿಂತ ರೇಡಿಯೋ ಹೆಚ್ಚು ಆತ್ಮೀಯವಾದುದು. ಇದರಲ್ಲಿ ಶೋತೃಗಳಿಗೂ ರೇಡಿಯೋಕ್ಕೂ ವ್ಯಕ್ತಿಗತ ಸಂಬAಧವಿರುತ್ತದೆ.

ಹಲವರಿಗೆ ರೇಡಿಯೋ ಸ್ನೇಹಿತ ಕೊಡ, ಇನ್ನು ಆಕಾಶವಾಣಿಯ ವಿಷಯಕ್ಕೆ ಬಂದರೆ ಉಳಿದ ಸಮೂಹ ಮಾಧ್ಯಮಗಳಂತೆ ಅದು "ಯಶಸ್ಸಿನ ಫಾರ್ಮುಲಾ' ವನ್ನು ಅಪ್ಪಿಕೊಂಡಿಲ್ಲ. ಕೆಲವು ಸಮೂಹ ಮಾಧ್ಯಮಗಳು ಮಾಡುವ 'ಬ್ರೇನ್ ವಾಶಿಂಗ್' ಇಲ್ಲಿ ಇಲ್ಲ. ಜನರಿಗೆ ಹೆಚ್ಚು ರುಚಿಸುವ, ಜನಪ್ರಿಯ ವಸ್ತುವಿಷಯವನ್ನು ಬಹುತೇಕ ಎಲ್ಲ ಮಾಧ್ಯಮಗಳೂ ನೀಡುತ್ತವೆ. ಆದರೆ ಆಕಾಶವಾಣಿ ಬೇರೆ ಬೇರೆ ವಯಸ್ಸಿನ ಶೋತೃಸಮೂಹಕ್ಕೆ ಅವರ ವಿಶಿಷ್ಟಾಸಕ್ತಿಗಳನ್ನು, ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ನೀಡುತ್ತದೆ. ಅದಲ್ಲದೇ ಭಾರತದಲ್ಲಿ ಆಕಾಶವಾಣಿ ಕೇಂದ್ರಗಳ ಜಾಲವೇ ಇರುವುದರಿಂದ ಉತ್ತಮ ಕಾರ್ಯಕ್ರಮಗಳನ್ನು ಎಲ್ಲೆಡೆ ಪ್ರಸಾರ ಮಾಡುವ ಹಾಗೂ ಜನರಿಗೆ ತಲುಪಿಸುವ ಅನುಕೂಲವಿದೆ.

ಇತರ ಸರ್ಕಾರಿ ಇಲಾಖೆಗಳಿಗಿಂತ ಆಕಾಶವಾಣಿ ಭಿನ್ನ

ಆಕಾಶವಾಣಿಯ ಇತಿಹಾಸದ ಕುರಿತು ಹೇರಳ ಮಾಹಿತಿ ಲಭ್ಯವಿದೆ, ಆದರೆ ಆಕಾಶವಾಣಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ದೊರೆಯುವುದು ವಿರಳ, ಇಂತಹ ಶಿಸ್ತಿನ, ಅಚ್ಚುಕಟ್ಟುತನದ ಸರ್ಕಾರಿ ಇಲಾಖೆ ಬೇರೊಂದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು, ಅಂತರಿಕವಾಗಿ ಆಕಾಶವಾಣಿಯ ಕಾರ್ಯಗಳು, ಅದನ್ನು ನಿರ್ವಹಿಸುವ ಬೇರೆ ಬೇರೆ ವಿಭಾಗಗಳು, ಅವುಗಳ ನಡುವಿನ ಹೊಂದಾಣಿಕೆ ಮುಂತಾದ ಅನೇಕ ವಿಷಯಗಳು ಜನಸಾಮಾನ್ಯರಿಗೆ ತಿಳಿದಿರದ ಸಾಧ್ಯತೆಗಳು ಹೆಚ್ಚು ಆಕಾಶವಾಣಿ ಭಾರತ ಸರ್ಕಾರದ ಅಧೀನ ಸಂಸ್ಥೆಯಾದರೂ ಅದು ಉಳಿದ ಸರ್ಕಾರಿ ಇಲಾಖೆಗಳಂತಲ್ಲದೆ ಸಾಮಾಜಿಕ ಹೊಣೆಗಾರಿಕೆಯನ್ನು ತನ್ನ ಹೆಗಲ ಮೇಲೆ ಕಳೆದ 80-90 ವರ್ಷಗಳಿಂದ ಹೊತ್ತಿರುವ ಬೃಹತ್ ಮಾಧ್ಯಮ ವಿಭಾಗ, 

ಸ್ವಾತಂತ್ರ‍್ಯಾನAತರ ಭಾರತ ಸರ್ಕಾರದ ಅನೇಕ ಮಹತ್ತರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಕಾಶವಾಣಿಯ ಸಾರ್ಥಕ ಸೇವೆಯಿದೆ, ಇಂತಹ ಸಂಸ್ಥೆ ಕಾಲಕಾಲಕ್ಕೆ ಅನೇಕ ಬದಲಾವಣೆಗಳಿಗೆ ತನ್ನನ್ನ ಒಡ್ಡಿಕೊಂಡಿದೆ. 'ಬಹುಜನ ಹಿತಾಯ ಬಹುಜನ ಸುಖಾಯ' ಎಂಬ ಧೈಯ ವಾಕ್ಯವನ್ನು ಹೊಂದಿರುವ ಆಕಾಶವಾಣಿ ತನ್ನ ವ್ಯಾಪ್ತಿ ಹಾಗೂ ಜನಪ್ರಿಯತೆಯನ್ನು ಎಂದೂ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಜನಪರವಾದ, ಜನಹಿತವಾದ, ನಾಡು-ನುಡಿಯ ಏಳೆ, ಸಂಸ್ಕೃತಿ-ಪರAಪರೆಯನ್ನು ಬಿಂಬಿಸುವAತಹ ಕಾರ್ಯಕ್ರಮಗಳನ್ನೇ ಮಾಡುತ್ತಿದೆ. ದೇಶದ ಪ್ರಮುಖ 20 ಭಾಷೆಗಳಲ್ಲಿ ಪ್ರಸಾರ ಮಾಡುತ್ತಿರುವುದರ ಜೊತೆಗೆ ಉಪಭಾಷೆ (ಡಯಲೆಕ್ಟ್) ಗಳಲ್ಲೂ ಪ್ರಸಾರ ಮಾಡುತ್ತಿದೆ.

ನಾಡಿನ ಸಾಹಿತ್ಯ, ಕಲೆ, ನಾಟಕ ಮುಂತಾದ ಕ್ಷೇತ್ರಗಳು ಆಕಾಶವಾಣಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅವುಗಳ ಕೊಡುಗೆ ಆಕಾಶವಾಣಿಗೆ ದೊರೆತು ತನ್ಮೂಲಕ ಆ ಕ್ಷೇತ್ರಗಳ ಬೆಳವಣಿಗೆಗೆ ಅದು ಸಹಕಾರಿಯಾಗಿದೆ. ಸರ್ಕಾರದ ವಿವಿಧ ಇಲಾಖೆಗಳಾದ ಭಾಷೆ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಯುವಜನಸೇವಾ ಇಲಾಖೆಗಳೊಂದಿಗೆ, ಸಾಹಿತ್ಯ ಅಕಾಡೆಮಿಗಳು, ಜನಪದ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ಅಕಾಡೆಮಿ ಮುಂತಾದವುಗಳೆಲ್ಲ ಸೇರಿ ಮಾಡುವ ಕೆಲಸವನ್ನು ಇದೊಂದೆ ಸಂಸ್ಥೆ ನಿರ್ವಹಿಸುವುದು ಅದರ ಕಾರ್ಯಬಾಹುಳ್ಯವನ್ನು ತೋರಿಸುತ್ತದೆ. ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಅನಕ್ಷರತೆ, ಬಡತನ, ಸರ್ಕಾರ ತನ್ನ ಯೋಜನೆಗಳಿಂದ ಹರಸಾಹಸ ಮಾಡುತ್ತಿದೆ.

ಈ ತನ್ನದೇ ಆದ ಮಾಧ್ಯಮದ ಅವಶ್ಯಕತೆಯನ್ನು ಮನಗಂಡ ಸರ್ಕಾರ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳೆಗಳಿಗಾಗಿ ರೂಪಿಸಿದ ತನ್ನ ಯೋಜನೆಗಳ ಹಿನ್ನೆಲೆಯಲ್ಲಿ

ಅನುಷ್ಠಾನಕ್ಕೆ ಈ ಮಾಧ್ಯಮವನ್ನು ಕಾಲಕಾಲಕ್ಕೆ ಯಶಸ್ವಿಯಾಗಿ ಉಪಯೋಗಿಸಿಕೊಳ್ಳುತ್ತ ಬಂದಿದೆ. ಕೃಷಿ, ನೀರಾವರಿ, ಹವಾಮಾನ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಮಂತ್ರಾಲಯಗಳು ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಆಕಾಶವಾಣಿ ಕಾರ್ಯ ನಿರ್ವಹಿಸುತ್ತದೆ. ದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಆಕಾಶವಾಣಿ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಉದಾಹರಣೆಗೆ ಕರ್ನಾಟಕವನ್ನು ತೆಗೆದುಕೊಂಡರೆ ರಾಜಧಾನಿ ಬೆಂಗಳೂರಲ್ಲದೆ ಮೈಸೂರು, ಧಾರವಾಡ, ಕಲ್ಲುರ್ಗಿ, ಭದ್ರಾವತಿ, ಮಂಗಳೂರು, ಹಾಸನ,

ಮಡಿಕೇರಿ, ಹೊಸಪೇಟೆ, ಬಿಜಾಪುರ, ಚಿತ್ರದುರ್ಗ, ರಾಯಚೂರು, ಕಾರವಾರಗಳಲ್ಲಿ ಆಕಾಶವಾಣಿ ಕೇಂದ್ರಗಳಿವೆ. ಸ್ಥಳೀಯರಿಗೆ ಆದ್ಯತೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ರೀತಿ ಆಕಾಶವಾಣಿಯ ಕಾರ್ಯವ್ಯಾಪ್ತಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಸ್ತರಣೆಯಾಗಿದೆ. ಒಟ್ಟಿನಲ್ಲಿ ಕೇಳುಗರ ದೃಷ್ಟಿಯಿಂದ ನೋಡಿದರೆ 2005ರಿಂದ ಮತ್ತೊಮ್ಮೆ ರೇಡಿಯೋದ ಸುವರ್ಣಯುಗ ಮರುಕಳಿಸಿದೆ ಎಂದು ಹೇಳಬಹುದು.

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-04)

By
Click to Learn More 1.3 ಆಕಾಶವಾಣಿ ಹಾಗೂ ಸ್ವಾಯತ್ತತೆ

ಆಕಾಶವಾಣಿ, ಭಾರತ ಸರ್ಕಾರದ ಸಮಾಚಾರ ಹಾಗೂ ಪ್ರಸಾರ ಮಂತ್ರಾಲಯದ ಮಾಧ್ಯಮ ವಿಭಾಗದ ಒಂದು ಪ್ರಮುಖ ಭಾಗ, ಭಾರತೀಯ ಪ್ರಸಾರ ವ್ಯವಸ್ಥೆಯ ಯಾವುದೇ ನಿಯಮಗಳನ್ನು ರೂಪಿಸುವುದು ಈ ಮಂತ್ರಾಲಯವೇ. ಇದರಲ್ಲಿ ಕೇಂದ್ರ ಮಂತ್ರಿಗಳಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಕಾರ್ಯದರ್ಶಿಗಳಾಗಿಯೂ ಅವರಿಗೆ ಅಧೀನವಾಗಿ ಗಜಗಾತ್ತದ ಸೆಕಟೇರಿಯಟ್ ಒಂದು ಕಾರ್ಯ ನಿರ್ವಹಿಸುತ್ತದೆ. ಇದನ್ನು ಮೂರು ವಿಭಾಗಗಳಾಗಿ ರ್ಶಿಯೊಬ್ಬರು ವಿಂಗಡಿಸಲಾಗಿದೆ. ಪ್ರಸಾರ, ಮಾಹಿತಿ ಹಾಗೂ ನಿಯಮ ಮತ್ತು ಸಮನ್ವಯ ಈ ಮೂರು ವಿಭಾಗಗಳಲ್ಲಿ ಪ್ರತಿಯೊಂದಕ್ಕೂ ಜಂಟಿ ಕಾರ್ಯದರ್ಶಿ ಮುಖ್ಯಸ್ಥರಾಗಿರುತ್ತಾರೆ.

ಸಂವಿಧಾನದ 246ನೇ ವಿಧಿ(ಆರಿಕಲ್)ಯು ಕೇಂದ್ರ ಸರ್ಕಾರಕ್ಕೆ ಪ್ರಸಾರ ಕ್ಷೇತ್ರದ ಮೇಲಿನ ಹಿಡಿತವನ್ನು ನೀಡುತ್ತದೆ. ಇದರನ್ವಯ ಸಂವಿಧಾನದ 7ನೇ ಷೆಡ್ಯೂಲಿನ ಒಂದನೇ ಪಟ್ಟಿಯಲ್ಲಿ (ಲಿ) ನಮೂದಿತವಾಗಿರುವ ಯಾವುದೇ ವಿಷಯಕ್ಕೆ ಸಂಬAಧಿಸಿದAತೆ ಕಾನೂನನ್ನು ಮಾಡುವ ಪರಮಾಧಿಕಾರ ಲೋಕಸಭೆಗೆ ಇರುತ್ತದೆ. ಈ ಪಟ್ಟಿಯ 31 ನೇ ಭಾಗದಲ್ಲಿ ಅಂಚೆ ಮತ್ತು ತಂತಿ ಇಲಾಖೆ, ಟೆಲಿಫೋನ್, ವೈರ್‌ಲೆಸ್, ಪ್ರಸಾರ ಮತ್ತು ಸಂವಹನಕ್ಕೆ ಸಂಬAಧಿಸಿದ ವಿಷಯಗಳು' ಇವೆ. ಇವುಗಳಲ್ಲಿ ಬ್ರಿಟಿಷರಿಂದ ಜಾರಿಗೊಳಿಸಲ್ಪಟ್ಟಿದ್ದ 1885ರ 'ದ ಇಂಡಿಯನ್ ಟೆಲಿಗ್ರಾಫ್ ಆಕ್ಟ್' ಹಾಗೂ 1933ರ 'ಇಂಡಿಯನ್ ವೈರ್‌ಲೆಸ್ ಟೆಲಿಗ್ರಫಿ ಆಕ್ಷ ಗಳು ಈಗಲೂ ಚಾಲ್ತಿಯಲ್ಲಿವೆ.

ಇವುಗಳ ಮೂಲಕ ಸರ್ಕಾರ ಪ್ರಸಾರದ ಮೇಲೆ ಏಕಸ್ವಾಮ್ಯದ ಜೊತೆಗೆ ಸಂಪೂರ್ಣ ನಿಯಂತ್ರಣವನ್ನೂ ಸಾಧಿಸಿದೆ. 1970 ರ ಎಐಆರ್ ಕೋಡ್‌ನ (ಅಕಾಶವಾಣಿಯ ಮಾರ್ಗಸೂಚಿ) ಪ್ರಕಾರ ಕಾಗಿನ ವಾರ ನೀತಿಯು ಆಕಾಶವಾಣಿಯ ಪ್ರಕಾರದಲ್ಲಿ ಕೆಲವು ಅಂಶಗಳು ಇರಬಾರವೆಂದು ಹೇಳುತ್ತದೆ.

ರಾಷ್ಟ್ರಗಳ ಟೀಕೆ

ಧರ್ಮ ಅಥವಾ ಪಂಗಡಗಳ ಮೇಲೆ ದಾಳಿ ಅಲ ಹಾಗೂ ಉದ್ರೇಕಗೊಳಿಸಬಲ್ಲ
ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಿ ಹಿಂಸೆಗೆ ಪ್ರಚೋದಿಸುವ ನ್ಯಾಯಾಲಯದ ನಿಂದನೆ ಮಾಡುವ
ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ನ್ಯಾಯಾಲಯಗಳ ಐಕ್ಯತೆಗೆ ಭಂಗ ಉಂಟುಮಾಡುವ
ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸಿ ನಿಂದಿಸುವ ಯಾವುದೇ ರಾಜ್ಯ ಅಥವಾ ಕೇಂದ್ರದ ಬಗ್ಗೆ ಕಟುಟೀಕೆ ಸಂವಿಧಾನಕ್ಕೆ ಅಗೌರವ ಉಂಟುಮಾಡುವ ಅಥವಾ ಹಿಂಸಾತ್ಮಕವಾಗಿ ಸಂವಿಧಾನದಲ್ಲಿ ಬದಲಾವಣೆಯನ್ನು ಬಯಸುವ ವಸ್ತು, ವಿಷಯಗಳು
ಆದರೆ ಇವುಗಳ ಬಗ್ಗೆ ಆರೋಗ್ಯಕರ ಚರ್ಚೆಯನ್ನು ಈ ನೀತಿ ವಿರೋಧಿಸುವುದಿಲ್ಲ.

ಈ ನಿಯಮಗಳು ಸಂವಿಧಾನದ 19ನೇ ಪರಿಚ್ಛೇದದ 2ನೇ ವಿಧಿಯಲ್ಲಿ ಹೇಳಲ್ಪಟ್ಟಿವೆ. ಇವುಗಳೊಂದಿಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಂತಾದ ಕೆಲವು ಗಣ್ಯರ ಸಾವಿನ ಸುದ್ದಿಯನ್ನು ಗೃಹ ಮಂತ್ರಾಲಯದ ಪ್ರಕಟಣೆಯ ನಂತರವೇ ವಾರ್ತಾಸಂಚಿಕೆಗಳಲ್ಲಿ ಪ್ರಸಾರಿಸಬೇಕೆಂಬ ನಿಯಮವಿದೆ. 1975ರ ತುರ್ತುಪರಿಸ್ಥಿತಿಯ ಕಾಲದಲ್ಲಿ ಈ ಮಾರ್ಗಸೂಚಿ ಸ್ಥಗಿತಗೊಂಡಿತ್ತು. ಆನಂತರ 1977 ರ ಮಾರ್ಚನಲ್ಲಿ ಪುನಃ ಅದು ಜಾರಿಗೆ ಬಂದಿದೆ. ಆಕಾಶವಾಣಿ ಮಾಧ್ಯಮ ಭಾರತದಂತಹ ಬಹು ಸಂಸ್ಕೃತಿಯ, ಬಹು ಭಾಷೆಯ ದೇಶದಲ್ಲಿ ಉತ್ತಮ ಸಾಧನೆಗಳನ್ನು ಮಾಡಿರುವ ಅನೇಕ ಕ್ಷೇತ್ರಗಳವೆ. ಆದರೆ ವಿವಿಧ ಸಂಸ್ಕೃತಿ, ಪರಂಪರೆ, ರೂಢಿ-ನೀತಿ ಸಂಪ್ರದಾಯಗಳು,

ಅನಕ್ಷರತೆ ಮುಂತಾದ ಸಾಮಾಜಿಕ ತೊಡಕುಗಳ ನಡುವೆ ಆಕಾಶವಾಣಿ ಪ್ರಬಲವಾಗಿ ಹೊರಬರಲು ಅನೇಕ ಮಿತಿಗಳೂ ಇವೆ. ಸಾಮಾನ್ಯವಾಗಿ ಸಾರ್ವಜನಿಕರು ಮಾಡುವ ಟೀಕೆಯೆಂದರೆ ಆಕಾಶವಾಣಿ ಸರ್ಕಾರದ ಅಧೀನದಲ್ಲಿರುವುದರಿಂದ ಇತರ ಮಾಧ್ಯಮಗಳಷ್ಟು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು. ಇತರ ಟೀಕೆಗಳ ಕಾರಣದಿಂದಲೇ ಶ್ರೀಮತಿ ಇಂದಿರಾ ಗಾಂಧಿಯವರು ಸಮಾಚಾರ ಹಾಗೂ ಪ್ರಸಾರ ಖಾತೆಯ ಮಂತ್ರಿಗಳಾಗಿದ್ದಾಗ ಮಾಧ್ಯಮಗಳ ರ್ಕವನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಿದರು. ಎ.ಕೆ.ಚಂದ್ರ ಅವರು ಅಧ್ಯಕ್ಷರಾಗಿದ್ದ ಈ ಸಮಿತಿ ತನ್ನ ವರದಿಯಲ್ಲಿ ಆಕಾಶವಾಣಿಯ : ಕೇಳಿಬರುತ್ತಿದ್ದ ಟೀಕೆಗಳನ್ನು ದೀರ್ಘವಾಗಿ ಚರ್ಚಿಸಿದೆ.

ಆನಂತರದಲ್ಲಿ ಅ ಸಮಿತಿ 140 ಈ ವಿಷಯವಾಗಿ ಚರ್ಚಿಸಿವೆ. 1989ರ ಸಾರ್ವಜನಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮಾಧ್ಯಮದ ಮೇಲಿನ ಸರ್ಕಾರದ ಹಿಡಿತವನ್ನು ತೆಗೆದು ನೀಡಬೇಕೆಂದು ಬಹುತೇಕ ಪಕ್ಷಗಳು ಪ್ರತಿಪಾದಿಸಿದವು. ಬ್ರಿಟನ್ನಿನಂತೆಯೇ ಭಾರತದಲ್ಲೂ ಮೊದಲು ಈ ಮಾಧ್ಯಮ, ಖಾಸಗಿ ಒಡೆತನದಲ್ಲೇ ಇತ್ತು. ಹಣಕಾಸಿನ ಮುಗ್ಗಟ್ಟಿನಿಂದ ಖಾಸಗಿ ಕಂಪನಿಗಳು ಸೋತಾಗ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಅದನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿತ್ತು. 1925 ಮಾರ್ಚ 27ರಂದು 'ಬ್ರಿಟಿಷ್ ಇಂಡಿಯಾ'ದಲ್ಲಿ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಿ ಪ್ರಸಾರಕಾರ್ಯವನ್ನು ಮಾಡಲು ಖಾಸಗಿಯವರಿಗೆ ಪರವಾನಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂಬ ಪತ್ರಿಕಾ ಪ್ರಕಟಣೆಯನ್ನೂ ನೀಡಿತ್ತು.

ಇದರೊಂದಿಗೆ ಅಂತಹ ಕೇಂದ್ರಗಳ ಮೇಲೆ ತನ್ನ ನಿಯಂತ್ರಣದ ಸ್ಪಷ್ಟಿಕರಣವನ್ನೂ ನೀಡಿತು. ಅದರನ್ವಯ ಕೇಂದ್ರಗಳ ತಪಾಸಣೆ ಮಾಡುವ, ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ, ಅವುಗಳ ಮೇಲೆ ಸಂಪೂರ್ಣ ಅಥವಾ ಭಾಗಶಃ ನಿಷೇಧ ಹೇರುವ, ಯಾವ ಕಾರ್ಯಕ್ರಮಗಳ ಪ್ರಸಾರವಾಗಬೇಕು, ಯಾವುವು ಆಗಬಾರದು, ಯಾರ ಕಾರ್ಯಕ್ರಮ ಪ್ರಸಾರವಾಗಬಹುದು, ಯಾರದು ಆಗಬಾರದು, ಸುದ್ದಿಯ ಮೂಲಗಳನ್ನು ಬಹಿರಂಗಗೊಳಿಸುವ, ಅನುಚಿತ ಪ್ರಸಾರ ಕಂಡುಬAದಲ್ಲಿ ಪರವಾನಿಗೆಯನ್ನು ರದ್ದುಪಡಿಸುವ ಉಚಿತವಾಗಿ ಹವಾಮಾನ ವರದಿ, ಮುನ್ಸೂಚನೆ, ಸರ್ಕಾರಿ ಹಾಗೂ ಶೈಕ್ಷಣಿಕ ಪ್ರಕಟಣೆಗಳನ್ನು ಪ್ರಸಾರ ಮಾಡುವ ಹಾಗೂ ಒಟ್ಟೂ ಕಾರ್ಯಕ್ರಮದ 10% ಮೀರದಂತೆ ಸರ್ಕಾರಿ ಸುತ್ತೋಲೆಗಳನ್ನು ಪ್ರಸಾರಮಾಡುವ ಷರತ್ತನ್ನು ವಿಧಿಸಲಾಗಿತ್ತು.

1926 ಸಪ್ಟೆಂಬರ್ 13ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರ್ಕಾರದ ಪ್ರಥಮ ನಾಮಿನಿಯಾದ ಪಿ.ಜಿ.ಎಡ್ಕಂಡ್ ಅವರು 1927 ಮೇ 5 ರಂದು ನಿಷೇಧದ ಬಗ್ಗೆ ಮಾತಾಡುತ್ತ ಬ್ರಿಟನ್ನಿನಂತೆ ಇಲ್ಲೂ ಕೂಡ ಈ ಬ್ರಾಡ್ಯಾಸ್ಟಿಂಗ್ ಕಂಪನಿ ಸರ್ಕಾರದ ಮನಗೆದ್ದು ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವಂತಾಗಲಿ ಎಂದು ಆಶಿಸಿದರು. ಆದರೆ ಈ ಖಾಸಗಿ ಒಡೆತನ ಕಂಪನಿ ತನ್ನ ಪ್ರಸಾರಕಾರ್ಯವನ್ನು ಕಿರಕೂಗಿತಗೊಳಿಸುತ್ತಿರುವುದ ಭೋಷಿಸಿತು, ಆಗ ಸರ್ಕಾರದ ಮೇಲೆ ಪ್ರಸಾರಕಾರ್ಯವನ್ನು ನಿಲ್ಲಿಸದಿರಲು ರಾಜಕೀಯ ಪಕ್ಷಗಳು ಒತ್ತಡವನ್ನೂ ತಂದವು. ಬೇರೆ ದಾರಿಯಿಲ್ಲದಿದ್ದರೆ ಸರ್ಕಾರವೇ

ಆಕಾಶವಾಣಿಯ ರಚನಾ ವ್ಯವಸ್ಥೆ

ಆಲ್ ಇಂಡಿಯಾ ರೇಡಿಯೋ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದಡಿಯಲ್ಲಿ ಇರುವ ಅನೇಕ ವಿಭಾಗಗಳಲ್ಲಿ ಬಹುದೊಡ್ಡ ವಿಧಾಗ, ಸರ್ಕಾರದ ಮಟ್ಟದಲ್ಲಿ ಇದು ರಾಜ್ಯ ಸಚಿವರಿಂದ ನಿರ್ವಹಿಸಲ್ಪಡುತ್ತದೆ, ಅವರ ಸಹಾಯಕರಾಗಿ ಕಾರ್ಯದರ್ಶಿ ಹಾಗೂ ಇತರ ಸೆಟೆರಿಯಟ್ ಅಧಿಕಾರಿಗಳಿರುತ್ತಾರೆ. ವಿಭಾಗ ಮಟ್ಟದಲ್ಲಿ ಡೈರೆಕ್ಟರ್ ಜನರಲ್ ಮುಖ್ಯಸ್ಥರಾಗಿದ್ದು ಅವರಿಗೆ ಸಹಾಯಕರಾಗಿ ವಿವಿಧ ಅಧಿಕಾರಿಗಳಿರುತ್ತಾರೆ. ಭಾರತ ಸರ್ಕಾರವು ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂಬ ಸ್ವಾಯತ್ತ ಸಂಸ್ಥೆಯನ್ನು + ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಸರ್ಕಾರಿ ಹಿಡಿತದಿಂದ ಮುಕ್ತಗೊಳಿಸುವ ಸದುದ್ದೇಶದಿಂದ ಸ್ಥಾಪಿಸಿದೆ.

1997 ನವೆಂಬರ್ 23 ರಂದು ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಪ್ರಸಾರ ಭಾರತಿ, ಬೋರ್ಡಿನಿಂದ ನಿರ್ವಹಿಸಲ್ಪಡುತ್ತಿದೆ. ಮೋರ್ಡಿನ ಮೂಲ ಉದ್ದೇಶ ಮಾಹಿತಿ, ಶಿಕ್ಷಣ ಹಾಗೂ ಮನರಂಜನೆಯನ್ನು ಕಾರ್ಯಕ್ರಮಗಳ ಮೂಲಕ ನೀಡುತ್ತ ಜನಹಿತ ಸೇವೆಯನ್ನು ಮಾಡುವುದು. 1990 ರ ಪ್ರಸಾರ ಭಾರತಿ ಕಾಯಿದೆಯನ್ವಯ ಸಂಸ್ಥೆಯ ಕಾರ್ಯಯೋಜನೆಗಳನ್ನು ಸಿದ್ಧಪಡಿಸುವ ಹಾಗೂ ಕಾರ್ಯರೂಪಕ್ಕೆ ತರುವ ಗುರುತರವಾದ ಜವಾಬ್ದಾರಿ ಪ್ರಸಾರಭಾರತಿ ಬೋರ್ಡನ ಮೇಲಿದೆ. ಚೀಫ್ ಎಕ್ಸೆಕ್ಯುಟಿವ್ ಆಫೀಸರ್ (ಸಿಇಓ) ಪ್ರಸರ ಈರತಿ ಬೋರ್ಡಿನ ನಿಯಂತಣ ಹಾಗೂ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುವ ಅತ್ಯುಚ್ಛ ಅಧಿಕಾರಿ, ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರುವ ಪಿಟಿಐ ಕಟ್ಟಡದಲ್ಲಿ ಇರುವ ಪ್ರಸಾರ ಭಾರತಿ ಕೇಂದ್ರ ಕಾರ್ಯಾಲಯದಿಂದ ಸಿಇಓ, ಮೆಂಬರ್

ಪತ್ತೊನೆಲ್ ಹಾಗೂ ಮೆಂಬ ಫೈನಾನ್ಸ್ ಇವರು ಕಾರ್ಯನಿರ್ವಹಿಸುತ್ತಾರೆ, ಇವರಿಗೆ ಪ್ರಸಾರ ಭಾರತಿ ಸೆಕ್ರೆಟೇರಿಯಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಅಧಿಕಾರಿಗಳು ಕಾರ್ಯಯೋಜನೆ, ಅನುಷ್ಠಾನ ಮುಂತಾದ ಗುರುತರ ಜವಾಬ್ದಾರಿಗಳೊಂದಿಗೆ ಬಜೆಟ್, ಲೆಕ್ಕಪತ್ರ ಇನ್ನಿತರ ಆರ್ಥಿಕ ವಿಷಯಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಾರೆ. ಪ್ರಸಾರ ಭಾರತಿಯು ಮಾರ್ಕೆಟಿಂಗ್ ವಿಭಾಗವನ್ನು ಹೊಂದಿದ್ದು ಅವುಗಳ ಕಛೇರಿಗಳು ಮುಂಬೈ, ನವದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ತಿರುವನಂತಪುರ ಹಾಗೂ ಗೌಹಾತಿಗಳಲ್ಲಿವೆ. ಈ ವಿಭಾಗದ ಒಂದು ಶಾಖೆಯು ಕೊಚ್ಚಿಯಲ್ಲಿ ಇದೆ. ಈ ಕಛೇರಿಗಳು ಆಕಾಶವಾಣಿ ಹಾಗೂ ದೂರದರ್ಶನದ ಮಾರುಕಟ್ಟೆ ಕಾರ್ಯಗಳನ್ನು ನೋಡಿಕೊಳ್ಳುತ್ತವೆ.

ಆಕಾಶವಾಣಿ ಹಾಗೂ ದೂರದರ್ಶನದ ಡೈರೆಕ್ಟರೇಟ್‌ಗಳು ಪ್ರತ್ಯೇಕ ಡೈರೆಕ್ಟರ್ ಜನರಲ್‌ರನ್ನು ಮುಖ್ಯಸ್ಥರನ್ನಾಗಿ ಹೊಂದಿವೆ, ಅವರು ಸಿಇಓ, ಮೆಂಬರ್ ಫೈನಾನ್ಸ್ ಹಾಗೂ ಮೆಂಬ ಪರ್ಸೊನೆಲ್ ಅವರ ನಿಕಟ ಸಂಪರ್ಕದೊAದಿಗೆ ಆಕಾಶವಾಣಿ ಹಾಗೂ ದೂರದರ್ಶನದ ದಿನನಿತ್ಯದ ಕಾರ್ಯಕಲಾಪಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಪ್ರಮುಖವಾಗಿ ನಾಲ್ಕು ಕಾರ್ಯವಿಭಾಗಗಳಿವೆ. ಅವು ಕಾರ್ಯಕ್ರಮ ವಿಭಾಗ, ತಾಂತ್ರಿಕ ವಿಭಾಗ, ಆಡಳಿತ ಹಾಗೂ ಹಣಕಾಸಿನ ವಿಭಾಗ ಮತ್ತು ವಾರ್ತಾ ವಿಭಾಗ,

ಪ್ರಮುಖ ವಿಭಾಗಗಳು

ಅಡಿಷನಲ್ ಡೈರೆಕ್ಟರ್ ಜನರಲ್ (ಎಡಿಜಿ) ತಮ್ಮ ಕೇಂದ್ರ ಕಛೇರಿಯಲ್ಲಿ ಹಾಗೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರಾಂತೀಯ ಕೇಂದ್ರಗಳ ಕಾರ್ಯಕ್ರಮ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಇವರ ಪ್ರಾದೇಶಿಕ ಕಛೇರಿಗಳು ದೆಹಲಿ, ಚಂದೀಗಢ (ಉತ್ತರ ವಿಭಾಗ), ಮುಂಬೈ, ಅಹಮದಾಬಾದ್ (ಪಶ್ಚಿಮ ವಿಭಾಗ), ಲಖೋ, ಭೋಪಾಲ (ಕೇಂದ್ರ ವಿಭಾಗ) ಕೋಲ್ಕತ್ತಾ (ಪೂರ್ವ ವಿಭಾಗ) ಗೌಹಾತಿ (ಈಶಾನ್ಯ ವಿಭಾಗ) ಚೆನ್ನೈ (ದಕ್ಷಿಣ ವಿಭಾಗ) ಹಾಗೂ ಬೆಂಗಳೂರು (ದಕ್ಷಿಣ ವಿಭಾಗ 2) ಎಂದು ವಿಭಾಗಿಸಲ್ಪಟ್ಟಿವೆ. ದೇಶದಾದ್ಯಂತ ಸ್ಥಾಪಿತವಾಗಿರುವ ಕೆಂದ್ರಗಳಲ್ಲಿ ಕಾರ್ಯಕ್ರಮ ವಿಭಾಗ, - ತಾಂತ್ರಿಕ ವಿಭಾಗ, ಸುದ್ದಿ ವಿಭಾಗ ಹಾಗೂ ಆಡಳಿತ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ.

ಉಪ ಮಹಾ ನಿರ್ದೇಶಕರು (ಕಾರ್ಯಕ್ರಮ) ಆಯಾ ಕೇಂದ್ರಗಳ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಅವರ ಮೇಲ್ವಿಚಾರಣೆಯಲ್ಲಿ ನಿಲಯ ನಿರ್ದೇಶಕರು, ಸಹಾಯಕ ನಿರ್ದೇಶಕರು (ಕಾರ್ಯಕ್ರಮ), ಕಾರ್ಯಕ್ರಮ ನಿರ್ವಾಹಕರು, ಪ್ರಸಾರ ನಿರ್ವಾಹಕರು ಹಾಗೂ ಉದ್ದೋಷರನ್ನೊಳಗೊಂಡ ದೊಡ್ಡ ತಂಡ ಕಾರ್ಯಕ್ರಮ ಯೋಜನೆ, ತಯಾರಿಕೆ ಹಾಗೂ ಪ್ರಸಾರದಲ್ಲಿ ಪಾಲ್ಗೊಳ್ಳುತ್ತದೆ ಉಪ ಮಹಾ ನಿರ್ದೇಶಕರು( ತಾಂತ್ರಿಕ) ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದು ಅವರ ನಿರ್ದೇಶನದಲ್ಲಿ ಉಪ ನಿರ್ದೇಶಕರು, ಸಹಾಯಕ ನಿಲಯ ಅಭಿಯಂತರರು, ಸಹಾಯಕ ಅಭಿಯಂತರರು, ತಾಂತ್ರಿಕ ಸಹಾಯಕರು, ಟೆಕ್ನಿಷಿಯನ್ ಮುಂತಾದವರ ತಂಡ ತಾಂತ್ರಿಕ ನಿರ್ವಹಣೆ, ಪ್ರಸಾರ ನಿರ್ವಹಣೆಗಳ ಕಾರ್ಯವನ್ನು ನಿರ್ವಹಿಸುತ್ತದೆ.

ಆಡಳಿತ ವಿಭಾಗವು ಆಡಳಿತಾಧಿಕಾರಿಗಳ ನೇತ್ರತ್ವದಲ್ಲಿ ಹಿರಿಯ ಲೆಕ್ಕಿಗರ, ಸಹಾಯಕ ಲೆಕ್ಕಿಗರ, ತಂಡದೊAದಿಗೆ ಕೆಲಸ ಮಾಡುತ್ತದೆ. ಈ ವಿಭಾಗವು ಖರ್ಚು-ವೆಚ್ಚಗಳ, ಲೆಕ್ಕ-ಪತ್ರಾದಿಗಳ ನಿರ್ವಹಣೆಯನ್ನು ಮಾಡುತ್ತದೆ. ಈ ಎಲ್ಲ ವಿಭಾಗಗಳ ಸಿಬ್ಬಂದಿ ಸಂಖ್ಯೆ ಹಿರಿಯ ಕೇಂದ್ರಗಳಲ್ಲಿ ಹೆಚ್ಚಿದ್ದರೆ ಸಣ್ಣ ಕೇಂದ್ರಗಳಲ್ಲಿ ಕಡಿಮೆಯಿರುತ್ತದೆ. ಈ ವಿಭಾಗಗಳಲ್ಲದೆ ಕೆಲವು ಹಿರಿಯ ಕೇಂದ್ರಗಳಲ್ಲಿ ವಾರ್ತಾ ವಿಭಾಗವಿದ್ದು ಸುದ್ದಿ ಸಂಪಾದಕರು ಮುಖ್ಯಸ್ಥರಾಗಿರುವ ಈ ವಿಭಾಗದಲ್ಲಿ ವಾರ್ತಾ ವಾಚಕರು, ಬಾತ್ಮೀದಾರರಲ್ಲದೆ ಅರೆಕಾಲಿಕ ವಾರ್ತಾ ವಾಚಕರ ತಂಡವಿರುತ್ತದೆ. ವಾರ್ತಾ ವಿಭಾಗವು ಇಂಡಿಯನ್ ಇನ್‌ಫಾರಮೇಷನ್ ಸರ್ವಿಸ್‌ನ ಅಧೀನಕ್ಕೊಳಪಟ್ಟಿರುತ್ತದೆ.

ಈ ಸೇವಾ ವ್ಯವಸ್ಥೆಯಡಿ ಬರುವ ಇತರ ಶಾಖೆಗಳು ಪ್ರೆಸ್ ಇನ್‌ಫಾರ್ಮೆಷನ್ ಬ್ಯೂರೊ, ಡೈರೆಕ್ಟರೇಟ್ ಆಫ್ ಆಡಿಯೊ ವಿರುಅಲ್ ಪಬ್ಲಿಸಿಟಿ (ಡಿಎವಿಪಿ), ಕ್ಷೇತ್ರ ಪ್ರಚಾರ ಇಲಾಖೆ, ಫಿಲ್ಡ್ ಡಿವಿಶನ್ ಮುಂತಾದವು. ಆಕಾಶವಾಣಿಯ ಸೇವೆಯಲ್ಲಿರುವ ವಿಭಾಗಗಳು ಒಂದೇ ಉದ್ದೇಶ ಅಂದರೆ ದಿನದ ಕಾರ್ಯಕ್ರಮ ಪ್ರಸಾರಕ್ಕಾಗಿ ದುಡಿಯುತ್ತವೆ. ಈ ಪ್ರಸಾರ ಕಾರ್ಯ ನಿರಂತರ. ಸಮಯ ಪರಿಪಾಲನೆ ಹಾಗೂ ಸಮಯದ ಮಹತ್ವ ಆಕಾಶವಾಣಿಯ ಜೀವಾಳ. 'ಬಹುಜನ ಹಿತಾಯ ಬಹುಜನ ಸುಖಾಯ' ಎಂಬ ಘೋಷವಾಕ್ಯದಂತೆ ಆಕಾಶವಾಣಿ ಕೃಷಿ, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಯುವಜನತೆ ಮುಂತಾದ ಬೇರೆ ಬೇರೆ ಆಸಕ್ತಿಯ ಜನಸಮುದಾಯಕ್ಕೆ ಮಾಹಿತಿ,

ಮನರಂಜನೆಯನ್ನು ನೀಡುವ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತದೆ. ನಾಡಿನ ಸಂಸ್ಕೃತಿ, ಪರಂಪರೆಯ ಹಿರಿಮೆಯನ್ನು ಕಾರ್ಯಕ್ರಮಗಳ ಮೂಲಕ ಎತ್ತಿ ಹಿಡಿಯುವ ಹಾಗೂ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ಹೊತ್ತು ಪ್ರಸಾರ ಪ್ರಾರಂಭಿಸಿದ ಆಕಾಶವಾಣಿ ಇಂದಿಗೂ ಅದನ್ನು ಅನೂಚಾನವಾಗಿ ಮುಂದುವರೆಸಿಕೊAಡು ಬಂದಿದೆ. ಸಂಗೀತ, ನಾಟಕ ಮುಂತಾದ ಕಲೆ ಹಾಗೂ ಸಾಹಿತ್ಯ ಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತ ಅವುಗಳ ಮೂಲಕ ಮನೆಮಾತಾಗಿದ್ದಲ್ಲದೆ

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-05)

By
Click to Learn More 1.4 ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಪ್ರಕಾರಗಳು, ಸಾಧನೆಗಳು

2005 ರಿಂದ ಈಚೆಗೆ ಎಫ್.ಎಮ್. ವಾಹಿನಿಗಳು ಹೆಚ್ಚಿದ ನಂತರ ಬಾನುಲಿ ಕಾರ್ಯಕ್ರಮಗಳೆಂದರೆ ನೇರ ಪ್ರಸಾರಗಳು, ಚಾಟ್ ಶೋಗಳು, ಟಾಕ್ ಶೋಗಳು, ಫೋನ್-ಇನ್, ಫೋನ್-ಔಟ್‌ಗಳು ಎಂಬ ಅಭಿಪ್ರಾಯ ಜನಸಾಮಾನ್ಯರೂ ಸೇರಿದಂತೆ ಮಾಧ್ಯಮ ವಿದ್ಯಾರ್ಥಿಗಳದೂ ಸಹ ಆಗಿದೆ. ಆಕಾಶವಾಣಿ ಕಳೆದ ಎಂಟು ದಶಕಗಳಿಂದ ಪ್ರಸಾರ ಮಾಡುತ್ತಿರುವ ವಿವಿಧ ಬಗೆಯ, ವಿವಿಧ ಕೇಳುಗ ವರ್ಗವನ್ನು ಹೊಂದಿರುವ ಕಾರ್ಯಕ್ರಮಗಳ ಬಗ್ಗೆ ಇಂದಿನ ಪೀಳಿಗೆಯವರಿಗೆ ಮಾಹಿತಿಯಿರುವುದು ಕಡಿಮೆ, ರೇಡಿಯೋ ಎಂದರೆ ಎಫ್.ಎಮ್, ಎಂಬ ಕಾಲುಭಾಗ ಸತ್ಯವನ್ನೇ ಈ ತಲೆಮಾರಿನ ಮಾಧ್ಯಮ ವಿದ್ಯಾರ್ಥಿಗಳು ನಂಬಿದ್ದಾರೆ ಎಂಬುದು ಅನೇಕ ಮಾಧ್ಯಮ ಅಧ್ಯಾಪಕರ ಅಳಲು.

ಆಕಾಶವಾಣಿಯ ದಿನವಹಿ ಕಾರ್ಯಕ್ರಮಗಳಲ್ಲಿ ಅನೇಕ ಬಗೆಯ ಕಾರ್ಯಕ್ರಮಗಳಿವೆ. ಅವುಗಳನ್ನು ಸ್ಕೂಲವಾಗಿ ಸಂಗೀತ (ಮ್ಯೂಸಿಕ್) ಹಾಗೂ ಮಾತು (ಸ್ಪೋಕನ್ ವರ್ಡ್ಸ್) ಎಂದು ವಿಂಗಡಿಸಲಾಗಿದೆ.

ಸಂಗೀತ ವಿಭಾಗ

ಸಂಗೀತ ಬಹಳ ವಿಶಾಲವಾದ ವಿಭಾಗವಾಗಿದ್ದು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳುವ ನಲವತ್ತು ಪ್ರತಿಶತ ಭಾಗ ಸಂಗೀತ ಕಾರ್ಯಕ್ರಮಗಳಿಂದ ಕೂಡಿದೆ. ಇದರಲ್ಲಿ ಶಾಸ್ತ್ರೀಯ (ಕರ್ನಾಟಕ ಹಾಗೂ ಹಿಂದೂಸ್ತಾನಿ), ಲಘು ಸಂಗೀತದ (ಭಾವಗೀತೆ, ದೇವರನಾಮ, ವಚನಗಳು, ಜನಪದ ಸಂಗೀತ, ಯಕ್ಷಗಾನ) ಎಲ್ಲ ಪ್ರಕಾರಗಳನ್ನೂ ಪ್ರಸಾರ ಮಾಡಲಾಗುವುದು. ಈ ಎಲ್ಲ ವಿಭಾಗಗಳ ಹುಗಾರಿಕೆ ಹಾಗೂ ವಾದ್ಯ ವಾದನಗಳೂ ಇದರಲ್ಲಿ ಸೇರಿವೆ. ಕಾರ್ಯಕ್ರಮಗಳನ್ನು ನೀಡುವ ಮೊದಲು ಆಕಾಶವಾಣಿ ಈ ಕಟ್ಟೆಯ ಮೂಲಕ ಸಂಗೀತಗಾರರ ಆಯ್ಕೆ ಮಾಡುತ್ತದೆ. ಇದಕ್ಕಾಗಿ ಕೇಂದ್ರಗಳಲ್ಲಿ ಅರ್ಜಿಗ ಸಂಖ್ಯೆಯ ಮೇರೆಗೆ ಕಾಲಕಾಲಕ್ಕೆ ಧ್ವನಿಪರೀಕ್ಷೆಯನ್ನು ಆಯೋಜಿಸಲಾಗುತ್ತದೆ ಅಕಾಶವಾಗಿಯಲ್ಲಿ ಮೊದಲು ಸಂಗೀತಕ್ಕೆ ಧ್ವನಿಪರೀಕ್ಷೆ ಇರಲಿಲ್ಲ,

ನಮ್ಮ ದ್ವಾಪರೀ ಪದ್ಧತಿ ಜಾರಿಗೆ ಬರುವ ಮೊದಲು ನಿಲಯದ ಸಂಗೀತದಲ್ಲಿ ಅಧಿಕಾರಗಳಿ ತಮಗೆ ಸೂಕ್ತವೆನಿಸಿದ ಕಲಾವಿದರಿಗೆ ಪ್ರಸಾರದ ಅವಕಾಶ ಕಲ್ಪಿಸಿಕೊಡುತ್ತಿದ್ದರು, ಆಗ ಕೆಲ ಕೇಂದ್ರಗಳಿAದ ವ್ಯವಸ್ಥಿತವಾದ ಪರೀಕ್ಷಾ ಪ್ರಕ್ರಿಯೆಗಾಗಿ ಒತ್ತಡ ಬಂದಿತು. ಅದರ ಫಲವಾಗಿ 1950ರ ಆರಂಭದಲ್ಲಿ ಎಲ್ಲ ನಿಲಯಗಳಿಗೂ ಅನ್ವಯವಾಗುವ 'ದನಿಪರೀಕ್ಷಾ ಪದ್ಧತಿ' ಆರಂಭವಾಯಿತು. ಇದಕ್ಕಾಗಿ ಕೇಂದ್ರ ನಿಪರೀಕ್ಷಾ ಬೋರ ಒಂದನ್ನು ರಚಿಸಲಾಗಿದೆ. ಅದರಲ್ಲಿ ಸಂಗೀತದ ಎಲ್ಲ ಪ್ರಕಾರಗಳನ್ನು ಪ್ರತಿನಿಧಿಸುವ ತಜ್ಞರು ಇರುತ್ತಾರೆ. ಇದರಲ್ಲಿ ಮುಖ್ಯವಾಗಿ ಹಿಂದೂಸ್ತಾನಿ ಹಾಗೂ ಕರ್ನಾಟಕ ವಿಭಾಗಗಳಿವೆ. ಧ್ವನಿಪರೀಕ್ಷೆಗೆ ಅರ್ಜಿ ಹಾಕಿಕೊಂಡವರು ಮೊದಲು ಸ್ಥಳೀಯ ಪ್ಯಾನೆಲ್ಲಿನ ಮುಂದೆ ಪ್ರದರ್ಶನ ನೀಡಬೇಕು.

ಇಲ್ಲಿ ತೇರ್ಗಡೆಯಾದವರ ಧ್ವನಿಮುದ್ರಿಕೆಗಳನ್ನು ಅಡಿಷನ್ ಬೋರ್ಡಿನ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಎಲ್ಲ ಹಂತದಲ್ಲೂ ಅಭ್ಯರ್ಥಿಗಳ ಹೆಸರುಗಳನ್ನು ಗೌಪ್ಯವಾಗಿರಿಸಿ ಕೇವಲ ಕ್ರಮಸಂಖ್ಯೆಗಳಿAದ ಮಾತ್ರ ಧ್ವನಿಮುದ್ರಣಗಳನ್ನು ಕೇಳಿಸುವ ಪದ್ಧತಿ ಜಾರಿಯಲ್ಲಿದೆ. ಧ್ವನಿಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಆಕಾಶವಾಣಿ 'ಬಿ' ಶ್ರೇಣಿಯ ಕಲಾವಿದರಾಗುತ್ತಾರೆ. (ಅಪರೂಪವಾಗಿ ಉತ್ತಮ ಪ್ರತಿಭೆಗೆ ಆರಂಭದಲ್ಲೇ ಬಿ ಜೈ ಶ್ರೇಣಿಯೂ ಸಿಗುತ್ತದೆ.) ಅವರಿಗೆ ಆಕಾಶವಾಣಿಯಲ್ಲಿ ಹಾಡುವ ನುಡಿಸುವ ಅವಕಾಶ ದೊರೆಯುತ್ತದೆ. ಅನಂತರದ ಐದು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಉತ್ತಮ ಸಾಧನೆಯಿಂದ ಶ್ರೇಣಿಯಲ್ಲಿ ' ' ಗೆ ತೇರ್ಗಡ ಹೊಂದಬೇಕಾಗುತ್ತದೆ.

ಇದಕ್ಕಾಗಿ ಮತ್ತೊಮ್ಮೆ ಅವರು ಧ್ವನಿಪರೀಕ್ಷೆಗೆ ಒಳಪಡಬೇಕು. ಇದರ ಫಲಿತಾಂಶ ಧ್ವನಿಪರೀಕ್ಷಾ ಮಂಡಲಿಯು ನೀಡಿದ ತೀರ್ಪಿನನ್ವಯ ದೊರೆಯುತ್ತದೆ. ಅದರಂತೆ 'ಎ' ಶ್ರೇಣಿಗೂ ಪರೀಕ್ಷೆ ನಡೆಯುತ್ತದೆ. 'ಎ ಟಾಪ್' ಶ್ರೇಣಿ ಕಲಾವಿದರ ಪ್ರತಿಭೆಗೆ ಅನುಗುಣವಾಗಿ ನೀಡಲ್ಪಡುತ್ತದೆ. ಇದೇ ಅತ್ಯುಚ್ಛ ಶ್ರೇಣಿ, ಆಕಾಶವಾಣಿ ನೀಡುವ ಈ ಶ್ರೇಣಿ ಸಂಗೀತ ಕ್ಷೇತ್ರದಲ್ಲಿ ಬಹಳ ಮಹತ್ವದ್ದು ಹಾಗೂ ಸಂಗೀತಗಾರರ ವೈಯುಕ್ತಿಕ ಸಾಧನೆಯ ಆಳತೆಗೋಲು ಎಂದು 1952 ರಲ್ಲಿ ಪ್ರಾರಂಭವಾದ ಆಕಾಶವಾಣಿ ವಾದ್ಯವೃಂದ, ಸಂಸ್ಥೆಯ ವಿಶಿಷ್ಟ ಪ್ರಯೋಗ, ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರ ವಾದ್ಯ ಪ್ರವೀಣರನ್ನು ಜೊತೆಗೂಡಿಸಿ ಹೊಸ ಹೊಸ ರಚನೆಗಳನ್ನು ರಚಿಸಿ ನಿರ್ದೇಶಿಸಿದವರಲ್ಲಿ ಪಂಡಿತ ರವಿಶಂಕರ್, ಟಿ.ಕೆ.ಜಯರಾಂ ಐಯರ್, ಘೋಷ್, ಈಮನಿಶಂಕರ ಶಾಸ್ತ್ರಿ ಇವರುಗಳು ಉಲ್ಲೇಖಾರ್ಹರು.

ಈ ಮನಿಂದ ಇನ್ನೊಂದು ಘಟಕವನ್ನು ಕರ್ನಾಟಕ ಶಾಸ್ತ್ರೀಯ ಂಏಏA) ನಲ್ಲಿ 1975 ರಲ್ಲಿ ತೆರೆಯಲಾಯಿತು. (ಬಿ, ಕುಪ್ಪುಸ್ವಾಮಿ, ಕೇರ್ ಅಂಡ್ ಸೋಶಿಯಲ್ ಡೆವಲಪ್‌ಮೆಂಟ್ ಇನ್ ಇಂಡಿಯಾ, 1984, ವಾಳ ಆನೇಕ ಕೇಂದ್ರಗಳಿAದ ಪ್ರಸಾರವಾಗುವ ಸಂಗೀತ ಶಿಕ್ಷಣ ಆನೇಕ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ಸಂಗೀತ ಕಲಿಕೆಗೆ ಸಹಾಯವಾಗಿದೆ. ಕ್ಷೇತ್ರಕ್ಕೆ ಆಕಾಶವಾಣಿ ಮಹತ್ವದ ಕೊಡುಗೆ ನೀಡಿದೆ. ಹಿಂದಿನ ಗೂ ಇಂದಿನ ಎಲ್ಲ ಹಿರಿಕಿರಿಯ ಸಂಗೀತಗಾರರೂ ಆಕಾಶವಾಣಿಯ ಮೂಲಕವೇ ಪ್ರಸಿದ್ಧಿಗೆ ಬಂದವರು, ಆಕಾಶವಾಣಿಯ ಮೂಲಕ ಅವರು ನಾಡಿನಲ್ಲಿ ಮನೆಮಾತಾದವರು. ಇಂದು ಸಂಗೀತ ಈ ರಾಷ್ಟ್ರದಲ್ಲಿ ಸಂಸ್ಕೃತಿ-ಪರAಪರೆಯ ಹೆಮ್ಮೆಯ ಪ್ರತೀಕವಾಗಿ ಉಳಿದಿದ್ದರೆ ಅದರಲ್ಲಿ ಆಕಾಶವಾಣಿಯ ಕೊಡುಗೆ ಅಪಾರ ಎಂಬುದು ಸತ್ಯ.

ಜೊತೆಗೆ ನೇಪಥ್ಯಕ್ಕೆ ಸರಿದ ಅಥವಾ ಅಸ್ತಂಗತರಾದ ಅನೇಕ ಹಿರಿಯ ಸಂಗೀತಗಾರರ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿ ಅವುಗಳನ್ನು ಹೊಸಪೀಳಿಗೆಯ ಶೋತೃಗಳಿಗೆ, ಸಂಗೀತ ರಸಿಕರಿಗೆ ಪರಿಚಯಿಸುವ ಸ್ತುತ್ಯರ್ಹ ಕಾರ್ಯ ಆಕಾಶವಾಣಿಯದು. ನಮ್ಮ ನಾಡಿನ ಹಳ್ಳಿಗಳಲ್ಲಿ ಹಾಸುಹೊಕ್ಕಾಗಿರುವ ವಿವಿಧ ಜನಪದ ಸಂಗೀತ ಪ್ರಕಾರಗಳು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲು ಮೊದಲ್ಗೊಂಡು ನಾಡಿನ ಮೂಲೆ ಮೂಲೆಗಳ ಹಳ್ಳಿಗಳಲ್ಲಿರುವ ಪ್ರತಿಭೆಗಳಿಗೂ ಅವಕಾಶ ದೊರೆಯುವಂತಾಯಿತು. ಜಾಗತೀಕರಣ ಹಾಗೂ ನಗರೀಕರಣದ ದಾಳಿಯಿಂದ ಅತಂತ್ರ ಸ್ಥಿತಿಯನ್ನು ತಲುಪಿರುವ ಜನಪದ ಸಂಗೀತವನ್ನು ಈಗಲೂ ಪೋಷಿಸುತ್ತಿರುವ ಏಕೈಕ ಸಂಸ್ಥೆ ಆಕಾಶವಾಣಿ,

ಯಾವುದೇ ಆರ್ಥಿಕ ಲಾಭವನ್ನು ತರದ ಇಂತಹ ಕಾರ್ಯಕ್ರಮಗಳು ಇಂದಿನ ಇತರ ಮಾಧ್ಯಮಗಳಿಗೆ ಬೇಡವಾಗಿದ್ದರೂ ಆಕಾಶವಾಣಿ ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾಷ್ಟ್ರವ್ಯಾಪಿ ಪ್ರಸಾರದಲ್ಲಿ ಅಖಿಲ ಭಾರತೀಯ ಸಂಗೀತ ಸಭಾ ನಡೆಯುತ್ತದೆ. 1952 ಜುಲೈನಲ್ಲಿ ಪ್ರಾರಂಭವಾದ ಈ ಪ್ರಸಾರ ಇಂದಿಗೂ ಪ್ರತಿ ಶನಿವಾರ ರಾತ್ರಿ 9.30 ರಿಂದ ರಾತ್ರಿ 11 ರವರೆಗೆ ಹಾಗೂ ಭಾನುವಾರ ರಾತ್ರಿ 10 ರಿಂದ 11 ರವರೆಗೆ ನಡೆಯುತ್ತಿದೆ. ಇದರಲ್ಲೂ ಸಂಗೀತಗಾರರಿಗೆ ವಿಫುಲವಾದ ಅವಕಾಶವಿದೆ. ಇಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತವರು ನಾಡಿನ ಶ್ರೇಷ್ಠ ಮಟ್ಟದ ಸಂಗೀತಗಾರರೇ ಆಗಿರುತ್ತಾರೆ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮದ ಖ್ಯಾತಿ ಇದೆ.

ಅಂದಿನಿಂದ ಇಂದಿನವರೆಗೂ ಸಂಗೀತ ವಿಭಾಗದಲ್ಲಿ ತನ್ನ ಹಿರಿಮೆ ಗರಿಮೆಗಳನ್ನು, ಪಾರದರ್ಶಕತೆಯನ್ನು ಆಕಾಶವಾಣಿ ಏಕರೂಪವಾಗಿ ಉಳಿ ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರತಿವರ್ಷ ಅಂಓ ಓ ಸಮ್ಮೇಳನಗಳನ್ನು ಆಯೋಜಿಸಿ ಸಂಗೀತ: ರಕರಿಗೆ ರಸದ ನೀಡುತ್ತಿರುವುದರೊಂದಿಗೆ ಹಿರಿಯ ಸಂಗೀತ ದಿಗ್ಗಜರನ್ನು ದೇಶದ ಮೂಲೆಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದೆ. ಇಂತಹ ಅವಕಾಶಗಳನ್ನು ಕಂಡು ಹೆಚ್ಚು ಹೆಚ್ಚು ಯುವಜನತೆ ಈ ಕ್ಷೇತ್ರ ಆಧುನಿಕತೆಯ ದಾಳಿಗೆಲ್ಲಿ ನಮ್ಮ ಯುವಮನಸ್ಸುಗಳು ಕೊಚ್ಚಿ ಹೋಗು 'ಎಂಬ ಭಯಕ್ಕೂ ಪರೋಕ್ಷವಾಗಿ ಆಕಾಶವಾಣಿ ಇತಿಶ್ರೀ ಹಾರುತ್ತಿದೆ. 1974 ರಲ್ಲಿ ಲಘು ಶಾಸ್ತ್ರೀಯ ಸಂಗೀತದ ರಾಷ್ಟ್ರೀಯ ಪ್ರ ಪಾರಂಭವಾಯಿತು.

ಮಂಗಳವಾರಗಳಂದು ದೆಹಲಿ ಕೇಂದ್ರದಿಂದ ಪ್ರಕರಣಗಳ ಈ ಕಾರ್ಯಕ್ರಮವನ್ನು ಉತ್ತರ ಭಾರತದ ಎಲ್ಲ ಕೇಂದ್ರಗಳ ಪ್ರಕಾರ ಮುಂ ಶುಕ್ರವಾರಗಳಂದು ಮದ್ರಾಸಿನಿಂದ ಪ್ರಸಾರವಾಗುವ ಕಾರ್ಯಕ್ರಮವನ್ನು ದ ಭಾರತದ ಎಲ್ಲ ಕೇಂದ್ರಗಳೂ ಸಹಪ್ರಸಾರ ಮಾಡುತ್ತವೆ, ಈ ಕಾರ್ಯಕ್ರಗಳ ಸಹ ಯುವಪ್ರತಿಭೆಗಳ ಶೋಧ ಹಾಗೂ ಪ್ರೋತ್ಸಾಹದ ಕಾರಣದಿಂದಲೇ ಶುರುವಾದದ್ದು. ರಾಷ್ಟ್ರೀಯ ಪ್ರಾದೇಶಿಕ ಸಂಗೀತದ ಪ್ರಸಾರ 1973 ಜನವರಿಯಲ್ಲಿ ಆರಂಭವಾಯಿತು, ಇದರಲ್ಲಿ ದೇಶದ ಬೇರೆ ಬೇರೆ ಭಾಗಗಳ ಜನಪದ ಹಾಗೂ ಲಘು ಸಂಗೀತ ಪ್ರಸಾರವಾಗುವುದು, ಇದು ತಿಂಗಳ ಮೊದಲ ಗುರುವಾರ ರಾತ್ರಿ 9.30ರಿಂದ 10.30ರವರೆಗೆ ಪ್ರಸಾರವಾಗುವುದು.

ಇದಲ್ಲದೇ ಸಮೂಹ ಗಾಯನವನ್ನು ನಿರ್ಮಾಣ ಮಾಡಲು 13 ಕೇಂದ್ರಗಳಲ್ಲಿ ಸಮೂಹಗಳನ್ನು ನೇಮಿಸಿಕೊಳ್ಳಲಾಯಿತು. ಈ ಗೀತೆಗಳು ರಾಷ್ಟ್ರೀಯ ಭಾವೈಕ್ಯತೆ, ದೇಶಭಕ್ತಿಯನ್ನು ಬೆಳೆಸುವಂತಿದ್ದವು. 1952 ರಲ್ಲಿ ಶ್ರೀ ಬಿ.ವಿ.ಕೇಸ್ಕರ್ ಅವರು ಮಾಹಿತಿ ಹಾಗೂ ಪ್ರಸಾರದ ಮಂತ್ರಿಗಳಾದಾಗ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಲು ಒಲವು ತೋರಿದರು. ಆಗ ಅಸ್ತಿತ್ವದಲ್ಲಿದ್ದ ಎಲ್ಲ ಆಕಾಶವಾಣಿ ಕೇಂದ್ರಗಳ ನಿರ್ದೇಶಕರಿಂದ ಸಂಗೀತ ಕಾರ್ಯಕ್ರಮಗಳ ಪ್ರಸಾರದ ವಿವರವನ್ನು ತರಿಸಿಕೊಂಡು ಅದನ್ನು ಪರಾಮರ್ಶಿಸಿ ಸಂಗೀತದ ಪ್ರಸಾರ ಅವಧಿಯನ್ನು ವಿಸ್ತರಿಸಿದರು. ಇದರಿಂದ ಉತ್ತಮ: ಸಂಗೀತಗಾರರು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರದ ಕೇಂದ್ರಗಳಲ್ಲಿ ಗ್ರಾಮಾಫೋನ್ ರಿಕಾರ್ಡ (ಧ್ವನಿಮುದ್ರಿತ ತಟ್ಟೆಗಳು)ಗಳನ್ನು ಉಪಯೋಗಿಸಿ ಸಂಗೀತ ಪ್ರಸಾರವನ್ನು

ಮಾಡಲಾಗುತ್ತಿತ್ತು, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಹಾಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮಾತ್ರ ಪ್ರಸಾರವಾಗುತ್ತಿದ್ದುದನ್ನು ಬದಲಿಸಿ ಉತ್ತರದಲ್ಲಿ ಕರ್ನಾಟಕಿ ಹಾಗೂ ದಕ್ಷಿಣದಲ್ಲಿ ಹಿಂದೂಸ್ತಾನಿ ಸಂಗೀತವನ್ನು ನಗರ ಮಾಡಲು ಸೂಚಿಸಲಾಯ್ತು. ಆ ಆಲೋಚನೆಯ ಪರಿಣಾಮದಿಂದಲೇ ಬಳದ ರಾಷ್ಟ್ರೀಯ ಕಾರ್ಯಕ್ರಮಗಳು ಅಸ್ತಿತ್ವಕ್ಕೆ ಬಂದದ್ದು. ಈಗ ಚಿತ್ರ ಸಂಗೀತ ಅಶ್ಲೀಲ ಹಾಗೂ ಕನಿಷ್ಟ ಎಂದು ಪರಿಗಣಿತವಾಗಿತ್ತು. ಜರಿಂದ ಚಿತ್ರ ಸಂಗೀತದ ಪ್ರಸಾರ ಅವಧಿ ಬಹಳ ಕಡಿಮೆಯಿತ್ತು. ಇದರಿಂದ ಕಾರು ರೇಡಿಯೊ ಸಿಲೋನ್ ಹಾಗೂ ರೇಡಿಯೋ ಪಾಕಿಸ್ತಾನ ಮುಂತಾದ ಚಿತ್ರಗೀತೆ ಪ್ರಸಾರ ಮಾಡುವ ಕೇಂದ್ರಗಳನ್ನು ಕೇಳಲು ಪ್ರಾರಂಭಿಸಿದರು.

ಇವರಿಂದ ಕೇಳುಗರನ್ನು ಮನಃ ಪಡೆಯಲು ಶಾಸ್ತ್ರೀಯ ಸಂಗೀತಗಾರರಿಗೆ ಲಘು ಸಂಗೀತವನ್ನು ಆಳವಡಿಸಲು ಕೇಳಲಾಯ್ತು, ಲಘು ಸಂಗೀತವನ್ನು ಹೊಂದುವ ಏತೆಗಳನ್ನು ಬರೆಯಲು ಬರಹಗಾರರನ್ನು ಕೇಳಲಾಯ್ತು. ಇದಕ್ಕಾಗಿ ಕಲಾವಿದರನ್ನು ನಿಯೋಜಿಸಿಕೊಳ್ಳಲಾಯಿತು. ಪ್ರತಿ ಘಟಕವೂ ಎರಡು ಹೊಸ ಹಾಡುಗಳನ್ನು ಒಂದು ವಾರದಲ್ಲಿ ಸಂಯೋಜಿಸಬೇಕಿತ್ತು. ಇದು ಪ್ರಾಯೋಗಿಕವಾಗಿ ಕಷ್ಟವಾಗಿತ್ತು. ಇಂತಹ ಅನೇಕ ತೊಡರುಗಳಿಂದ ಚಿತ್ರಸಂಗೀತ ಮತ್ತೆ ಅನಿವಾರ್ಯವಾಯಿತು. (ಬಿ. ಕುಪ್ಪಸ್ವಾಮಿ, ಕಮ್ಯುನಿಕೇಶನ್ ಆಂಡ್ ಸೋಶಿಯಲ್ ಡೆವಲಪ್ ಮೆಂಟ್, ಇನ್ 20, 1984, 3-215-216) ಚಿತ್ರಸಂಗೀತದಿAದ ರೇಡಿಯೋ ಸಿಲೋನ್‌ಗೆ ಹೆಚ್ಚು ಶೋತೃಗಳು ಆಕರ್ಷಿತವಾಗಿದ್ದರಿಂದ 1957ರ ಅಕ್ಟೋಬರಿನಲ್ಲಿ ವಿವಿಧ ಭಾರತಿ ಮುಂಬೈ

ಹಾಗೂ ಮದಾಸಿನಲ್ಲಿ ಎರಡು ಹೆಚ್ಚು ಸಾಮರ್ಥ್ಯದ ಟ್ರಾನ್ಸ್ ಮೀಟರ್‌ಗಳನ್ನು ಹೊಂದಿ ಪ್ರಾರಂಭಿಸಲಾಯಿತು. ಈ ಕೇಂದ್ರಗಳಲ್ಲಿ ಚಿತ್ರಗೀತೆಯೊಂದಿಗೆ ದೇಶಭಕ್ತಿ ಗೀತೆ, ಭಕ್ತಿ ಗೀತೆ, ಜನಪದ ಸಂಗೀತವೂ ಪ್ರಸಾರಗುತ್ತಿದ್ದುದರಿಂದ ಕೇಳುಗರ ಸಂಖ್ಯೆ ಪುನಃ ಹೆಚ್ಚಿತು. ಈ ಕೇಂದ್ರಗಳು ಭಾರತದಾಚೆಯೂ ಕೂಡ ಅಂದರೆ ಮಧ್ಯ ಪ್ರಾಚ್ಯ, ಆಸ್ಟ್ರೇಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಜನಪ್ರಿಯವಾದವು. ಆರಂಭದ ದಿನಗಳಲ್ಲಿ ಆಕಾಶವಾಣಿಯ ಸೀಮಿತ ಕಾಲಾವಕಾಶಕ್ಕೆ ಸಂಗೀತಗಾರರು ತಕರಾರು ಮಾಡುತ್ತಿದ್ದು ಅವರ ಮನವೊಲಿಸಿ, ಕೇಂದ್ರದ ಸ್ಟುಡಿಯೋಗಳಲ್ಲಿ ಹಾಡಲು ಆಹ್ವಾನಿಸುತ್ತಿದ್ದಾಗ ನಿಲಯ ಅನೇಕ ಗೊಂದಲದ ಪರಿಸ್ಥಿತಿಗಳಿಗೆ ಒಳಗಾಗಬೇಕಿತ್ತು.

ದೆಹಲಿ ಕೇಂದ್ರ ಅದಕ್ಕಾಗಿ 'ಸರ್ಕಾರಿ ಚಾವಡಿ ಬಜಾರ್' (ನೃತ್ಯ ಹಾಗೂ ಗಾಯನವನ್ನು ವೃತ್ತಿಯಾಗಿ ಮಾಡಿಕೊಂಡು ಮಹಿಳೆಯರು ಪ್ರದರ್ಶಿಸುತ್ತಿದ್ದ ಸ್ಥಳ) ಎಂಬ ಕೆಟ್ಟ ಅಭಿದಾನಕ್ಕೂ ಪಾತ್ರವಾಗಿತ್ತು. (ಟ್ಯಾಂಗಲ್ಸ್ ಟೇಜ್, ಕೆ. ಎಸ್. ಮಲಿಕ್, 1974, ಪುಟ 33) ಆ ಕಾಲದಲ್ಲಿ ಫೀಲ್ಡನ್ ಹಾಗೂ ಅವರ ತಂಡ ಇದನ್ನು 'ಉದ್ಯೋಗಕ್ಕೆ ಸಂಬAಧಿಸಿದ ತೊಂದರೆಗಳು' ಎಂದು ಹಗುರವಾಗಿ ಪರಿಗಣಿಸಿತು. ಆದರೆ ಹೆಸರಾಂತ ಗಾಯಕರು ಹಾಗಿರಲಿ ಉನ್ನತ ಮನೆತನದ ಯುವ ಗಾಯಕ-ಗಾಯಕಿಯರು, ಸಂಗೀತವನ್ನು ಸಂಸ್ಕೃತಿಯ ಭಾಗವಾಗಿ ಆರಾಧಿಸುವರು ಆಕಾಶವಾಣಿ ನೀಡುವ ಅಲ್ಪ ಹಣಕ್ಕಾಗಿ ತಮ್ಮ ಕಲಾಸೇನೆಯನ್ನು ಮಾರಿಕೊಳ್ಳುವುದು ಹೀನಕಾರ್ಯ ಎಂದು ಭಾವಿಸಿ ಧ್ವನಿಮುದ್ರಣದಲ್ಲಿ ಭಾಗವಹಿಸುತ್ತಿರಲಿಲ್ಲ.

ನಂತರ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಪ್ರಸಾರ ಮಂತ್ರಿಗಳಾದಾಗ 'ಖಾಸಗಿ ಬದುಕು ಶುಚಿಯಾಗಿರದ ಸಂಗೀತಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು'ಎಂಬ ಸುತ್ತೋಲೆಯನ್ನು ಹೊರಡಿಸಿದಾಗ ಕೇಂದ್ರಗಳ ನಿರ್ದೇಶಕರು ಗೊಂದಲಕ್ಕೀಡಾದರು. ಕೇಂದ್ರ ನಿರ್ದೇಶಕರು ವ್ಯಕ್ತಿಗಳ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳುವುದು, ನಿರ್ಧರಿಸುವುದು ಎಷ್ಟು ಸರಿ? ಅವರ ಮಾಹಿತಿ ನೀಡಲು ಪೋಲಿಸ್ ಠಾಣೆಗಳನ್ನು ಕೇಳಬೇಕೆ? ಮುಂತಾದ ಪ್ರಶ್ನೆಗಳನ್ನು ಮಂತ್ರಾಲಯದಿAದ ಸೂಚನೆ ಬಂದಾಗ ಕೇಂದ್ರ ನಿರ್ದೇಶಕರು ಕಂಟ್ರೋಲರ್ ಅವರಿಗೆ ಕೇಳಿದರು. ಕಂಟ್ರೋಲರ್, ಪಟೇಲರಿಂದ ಮತ್ತೆ ಸಲಹೆಗಳನ್ನು ಕೇಳಿದಾಗ ಅವರು ಆದಷ್ಟು ಬೇಗ ಆ ಕೆಲಸ ಆಗಬೇಕು ಎಂದು ದೃಢವಾಗಿ ಹೇಳಿದರು.

ಆನಂತರದಲ್ಲಿ ಕಾರ್ಯಪ್ರವೃತ್ತರಾದ ನಿರ್ದೇಶಕರಿಂದ ಮಾಹಿತಿಯ ಮಹಾಪೂರ ಕಂಟ್ರೋಲರ್ ಅವರ ಕಛೇರಿಯನ್ನು ತಲುಪಿತು. ಅದನ್ನು ಆಧರಿಸಿ ಕಂಟ್ರೋಲರ್ ಎಲ್ಲ ಕೇಂದ್ರಗಳಿಗೆ ಆಜ್ಞಾಪತ್ರವನ್ನು ಹೊರಡಿಸಿದರು. ಕೆಲವರ್ಷಗಳ ನಂತರ ಆಕಾಶವಾಣಿ ನೀಡುತ್ತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲ ವರ್ಗದ, ಸಂಸ್ಕೃತಿಯ ಜನ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಸರ್ದಾರ್ ಪಟೇಲರ ದೂರದರ್ಶಿತ್ವ ಉತ್ತರ ಭಾರತದ ಮಟ್ಟಿಗಂತೂ ಆಗ ಫಲಪ್ರದವಾಯಿತು. ದಕ್ಷಿಣ ಭಾರತದಲ್ಲಿ ಜನ ಸೇರುವ ಸಭೆಗಳಲ್ಲಿ ಸಂಗೀತ ಕಛೇರಿ ನಡೆಸುವುದು ಸಂಪ್ರದಾಯ, ಹೆಚ್ಚಾಗಿ ಹಬ್ಬ-ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಕಛೇರಿಗಳನ್ನು ಆಯೋಜಿಸಲಾಗುತ್ತಿತ್ತು.

ದಕ್ಷಿಣದಲ್ಲಿ ಸಂಗೀತಕ್ಕೆ ರಾಜಾಶ್ರಯವೂ ಹೆಚ್ಚಿದ್ದರಿಂದ ಅಲ್ಲಿ ಜನ ಆಕಾಶವಾಣಿಯನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಕಛೇರಿಗಳನ್ನು ಆಕಾಶವಾಣಿ ಧ್ವನಿಮುದ್ರಿಸಿಕೊಳ್ಳುತ್ತಿದ್ದುದರಿಂದ ಅಲ್ಲಿಯ ವ್ಯವಸ್ಥೆಯನ್ನೂ ಅದಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗುತ್ತಿತ್ತು, ಕಛೇರಿಗಳು 4-5 ತಾಸು ನಡೆಯುತ್ತಿದ್ದು ಅವುಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ಕಛೇರಿಗಳನ್ನು ಒಂದೂವರೆ ತಾಸಿಗೆ ನಿಗದಿಪಡಿಸಲಾಯಿತು. ಮುಂದೆ ಅದೇ ಸಂಪ್ರದಾಯವಾಯಿತು.

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-06)

By
Thumbnail for [Post Title]


1.5 ಸಹಕಾರ ಬಾನುಲಿ ಕೇಂದ್ರ ಪ್ರಾರಂಭ

(ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ)


ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಪ್ರಾರಂಭಿಸಲಾಯಿತು. ಗದಗ ತಾಲೂಕಿನ ಹುಲಕೋಟಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 16 ಮಾರ್ಚ್ 2022 ರಂದು ಬೆಳಗ್ಗೆ 11 ಗಂಟೆಗೆ ಸ್ಥಾಪಿಸಲಾಯಿತು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ವೀರಪ್ಪ ಮೊಯ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಎಚ್.ಕೆ ಪಾಟೀಲ, ಮಾಜಿ ಸಚಿವರು ಎ. ಎಂ ಹಿಂಡಸಗೇರಿ ಭಾಗಿಯಾಗಿದ್ದರು.

ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಎ. ಎಸ್. ಎಫ್, ಕೆ. ಎಚ್. ಪಿ, ಕೆವಿಕೆ ಹುಲಕೋಟಿ ಅಧ್ಯಕ್ಷರು ಡಿ. ಆರ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಹುಲಕೋಟಿ ಹುಲಿ ಎಂದೇ ಖ್ಯಾತರಾದ್ದ ಎಚ್. ಕೆ ಪಾಟೀಲ ಹಾಗೂ ಡಿ. ಆರ್ ಪಾಟೀಲ ಅವರ ಕನಸು ಅಗಿತ್ತು. ಸ್ವಾತಂತ್ರ‍್ಯ ಭಾರತದಲ್ಲಿ ಮತ್ತು ಸ್ವಾತಂತ್ರ‍್ಯ ಪೂರ್ವದಲ್ಲಿ ಬಾನುಲಿ ಕೇಂದ್ರಗಳ ಸಾಧನೆ ಅನನ್ಯ. ಈ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ 16 ಮಾರ್ಚ್ 2022 ರಂದು ಗದಗ ಸಮೀಪದ ಹುಲಕೋಟಿಯ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರಾರಂಭಸಲಾಯಿತು.

ಸಹಕಾರ ಬಾನುಲಿ ಕೇಂದ್ರದ ನಿರ್ವಹಣೆಯನ್ನು ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಗದಗ-ಹುಲಕೋಟಿ ಪಡೆದುಕೊಂಡಿದೆ. ಎಫ್.ಎA 89.6 ಸಹಕಾರ ರೇಡಿಯೋ ನಮ್ಮ ಧ್ವನಿ ನಿಮಗಾಗಿ ಎಂಬ ಅಡಿಯಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿರುವ ಉದ್ಯಮಿಗಳಿಗೆ ಸಹಕಾರ ಬಾನುಲಿ ಕೇಂದ್ರ ಪ್ರಯೋಜನಕರವಾಗಿದೆ. ಸುಮಾರು 30 ಕಿ.ಮೀ ವ್ಯಾಪ್ತಿ ಹೊಂದಿರುವ ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಗದಗ ನಗರ ಸೇರಿದಂತೆ ಹುಲಕೋಟಿ ಗ್ರಾಮ ಸುತ್ತಮುತ್ತಲಿನ ಸುಮಾರು 158 ಕ್ಕೂ ಅಧಿಕ ಗ್ರಾಮಗಳಿಗೆ ಸಹಕಾರ ರೇಡಿಯೋ ಕೇಳುಗರ ಧ್ವನಿಯಾಗಿ ಪ್ರಸಿದ್ಧಿ ಪಡೆದಿದೆ.

ಪ್ರತಿನಿತ್ಯ ಪ್ರಸಾರವಾಗುವ 25 ಕ್ಕೂ ಅಧಿಕ ಕಾರ್ಯಕ್ರಮಗಳು ಜನ ಮೆಚ್ಚಿಗೆಯನ್ನು ಪಡೆದಿದೆ. ಕೃಷಿ ಸಂಬAಧಿಸಿದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ,

ಅಲ್ಪಾವಧಿ, ಕೃಷಿ ಬೆಳೆಗಳು, ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ. ಸಹಕಾರ ವಿಷಯಕ್ಕೆ ಸಂಬAಧಿಸಿದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಲೇವಾದೇವಿಗಾರ ಕರ್ತವ್ಯ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ.

ಕೃಷಿ ವಿಷಯಕ್ಕೆ ಸಂಬAಧಿಸಿದAತೆ ಎಲ್ಲ ರೀತಿಯ ಸಲಹೆ ಸೂಚನೆಗಳು ನೀಡಲಾಗುತ್ತದೆ. ಪ್ರತಿಯೊಂದು ಕೃಷಿ ಚಟುವಟಿಕೆಗಳ ಬಗ್ಗೆ ಸಹಕಾರ ಬಾನುಲಿ ಕೇಂದ್ರ ಪ್ರಸರಿಸುತ್ತದೆ. ಇನ್ನು ಸಹಕಾರ ಕ್ಷೇತ್ರದ ವಿಷಯಕ್ಕೆ ಸಂಬAಧಿಸಿದAತೆ ಸಲಹೆ-ಸೂಚನೆ ಬಾನುಲಿ ಕೇಂದ್ರ ನೀಡುತ್ತಿದೆ. ಸಹಕಾರ ಬಾನುಲಿ ಕೇಂದ್ರವೂ ಕೃಷಿ, ಸಹಕಾರ, ಶಿಕ್ಷಣ, ಮಹಿಳಾ ಸಬಲೀಕರಣ, ತರಬೇತಿ ಸೇರಿದಂತೆ ಇತರೆ ವಿಷಯಗಳನ್ನು ಸೇರಿದಂತೆ ಅನೇಕ ವಿಷಯಗಳ ಆಧಾರದ ಮೇಲೆ ಬಾನುಲಿ ಕೇಂದ್ರ ತನ್ನ ಸಾಮರ್ಥ್ಯವನ್ನು ನಿರ್ವಹಿಸುತ್ತದೆ. ಗದಗ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಎಚ್.ಕೆ ಪಾಟೀಲ ಮತ್ತು

ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಎ. ಎಸ್. ಎಫ್, ಕೆ. ಎಚ್. ಪಿ, ಕೆವಿಕೆ ಹುಲಕೋಟಿ ಅಧ್ಯಕ್ಷರು ಡಿ. ಆರ್ ಪಾಟೀಲ ಅವರ ಸಹಕಾರ, ಸಲಹೆ ಮೇರೆಗೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗದಗ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಹಕಾರ ಬಾನುಲಿ ಉತ್ತಮ ಕೇಳುಗರ ಧ್ವನಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ.

ಬಾನುಲಿ ಕೇಂದ್ರದ ಗುರಿ ಮತ್ತು ಉದ್ದೇಶ

ಎಫ್. ಎಂ 89.6 ಸಹಕಾರ ಬಾನುಲಿ ಕೇಂದ್ರವು ಪ್ರಮುಖವಾಗಿ ಕೃಷಿ, ಸಹಕಾರ, ಶಿಕ್ಷಣ, ಮಹಿಳಾ ಸಬಲೀಕರಣ, ತರಬೇತಿ ಸೇರಿದಂತೆ ಇತರ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಸಹಕಾರ ಬಾನುಲಿ ಕೇಂದ್ರ ಕೇಳುಗರಿಗೆ ಪ್ರತಿ ನಿತ್ಯ ಮಾಹಿತಿ ನೀಡುತ್ತದೆ.

ಕೃಷಿ ಚಟುವಟಿಕೆಗಳಿಗೆ ಸಂಬAಧಿಸಿದ ವಿಷಯಗಳನ್ನು ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಲಹೆಯೊಂದಿಗೆ ಬಾನುಲಿ ಕೇಂದ್ರದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಸಹಕಾರ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳು, ಸಲಹೆ-ಸೂಚನೆಗಳನ್ನು ಯಾವ ರೀತಿಯಾಗಿ ಪಾಲಿಸಬೇಕು ಎಂಬ ವಿಷÀÀಯಗಳೊಂದಿಗೆ ಸಹಕಾರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಸಹಕಾರ ಬಾನುಲಿ ಪ್ರಸಾರಗೊಳ್ಳಲಿದೆ.

ಸಹೋದ್ಯೋಗ ವಿಷಯಕ್ಕೆ ಯುವ ಜನತೆಗೆ ಉದ್ಯೋಗವನ್ನು ಯಾವ ರೀತಿಯಾಗಿ ಗಿಟ್ಟಿಸಿಕೊಳ್ಳಬೇಕು, ಸ್ವ ಉದ್ಯೋಗ ತರಬೇತಿ-ಸಲಹೆ ಸೂಚನೆಗಳನ್ನು ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ನೀಡಲಾಗುತ್ತದೆ.

ಮಹಿಳಾ ಸಬಲೀಕರಣ ವಿಷಯಕ್ಕೆ ಸಂಬAಧಿಸಿದAತೆ ಮಹಿಳೆಯರಿಗೆ ವಿವಿಧ ಇಲಾಖೆಗಳ ಮಾಹಿತಿ, ಮಹಿಳೆಯರ ಉದ್ಯೋಗ, ತರಬೇತಿ, ಇನ್ನಿತರ ಯೋಜನೆಗಳ ಸಹಕಾರ ಬಾನುಲಿ ಕೇಂದ್ರದಲ್ಲಿ ತಿಳಿಸಿಕೊಡಲಾಗುತ್ತಿದೆ.

ಸಹಕಾರ ಬಾನುಲಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಕಂಪ್ಯೂಟರ್ ತರಬೇತಿ, ಕೃಷಿ ಚಟುವಟಿಕೆಗಳು ತರಬೇತಿ ಸೇರಿದಂತೆ ಇನ್ನಿತರ ತರಬೇತಿಗಳನ್ನು ಸಹಕಾರ ಬಾನುಲಿ ಕೇಂದ್ರದ ಕೇಳುಗರಿಗೆ ನೀಡಲಾಗುತ್ತಿದೆ. ಪ್ರಕಟನೆ ಹೊರಡಿಸಲಾಗುತ್ತದೆ.

ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರವು ಕೃಷಿ, ಸಹಕಾರ, ಶಿಕ್ಷಣ, ಸಹೋದ್ಯೋಗ, ಮಹಿಳಾ ಸಬಲೀಕರಣ, ತರಬೇತಿ, ಇನ್ನಿತರ ವಿಷಯಕ್ಕೆ ಸುದೀರ್ಘವಾಗಿ ಮಾಹಿತಿ ಒದಗಿಸಿ, ಸಹಕಾರ ಬಾನುಲಿ ಕೇಂದ್ರ ಜನರ ಧ್ವನಿಯಾಗಿ ಜನ ಮೆಚ್ಚುವಂತಹ ಕಾರ್ಯಕ್ರಮ ನೀಡಿ, ಜನಮನ್ನಣೆ ಗಳಿಸಿದೆ.

1.6 ಸಹಕಾರ ಬಾನುಲಿ ಕೇಂದ್ರ, ಹುಲಕೋಟಿ-ಗದಗ ಸ್ಥಾಪನೆ


ಗದಗ ತಾಲೂಕಿನ ಹುಲಕೋಟಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 16 ಮಾರ್ಚ್ 2022 ರಂದು ಬೆಳಗ್ಗೆ 11 ಗಂಟೆಗೆ ಸ್ಥಾಪಿಸಲಾಯಿತು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಹುಲಕೋಟಿ ಹುಲಿ ಎಂದೇ ಖ್ಯಾತರಾದ್ದ ಎಚ್. ಕೆ ಪಾಟೀಲ ಹಾಗೂ ಡಿ. ಆರ್ ಪಾಟೀಲ ಅವರ ಕನಸು ಅಗಿತ್ತು. ಸ್ವಾತಂತ್ರ‍್ಯ ಭಾರತದಲ್ಲಿ ಮತ್ತು ಸ್ವಾತಂತ್ರ‍್ಯ ಪೂರ್ವದಲ್ಲಿ ಬಾನುಲಿ ಕೇಂದ್ರಗಳ ಸಾಧನೆ ಅನನ್ಯವಾಗಿದ್ದು. ಈ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ 16 ಮಾರ್ಚ್ 2022 ಗದಗ ಸಮೀಪದ ಹುಲಕೋಟಿಯ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರಾರಂಭಸಲಾಯಿತು.

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-07)

By
Thumbnail for [Post Title]
1.7 ಸಹಕಾರ ಬಾನುಲಿ ಕೇಂದ್ರಕ್ಕೆ ಒಳಪಡುವ ಗ್ರಾಮಗಳು

ಸಹಕಾರ ಬಾನುಲಿ ಕೇಂದ್ರದಿಂದ ಪ್ರಸಾರಗೊಳ್ಳುವ ಎಲ್ಲ ಕಾರ್ಯಕ್ರಮಗಳು 30 ಕಿ.ಮೀ ಸುತ್ತಳತೆಯಲ್ಲಿ ಪ್ರಸರಿಸುತ್ತದೆ. ಅಂತಹ ಕಾರ್ಯಕ್ರಮಗಳು ಈ ಕೆಳಗಿನ 158 ಗ್ರಾಮಗಳ ಕೇಳುಗರನ್ನು ತಲುಪುತ್ತಿವೆ.

ಕ್ರ. ಸಂ ಬಾನುಲಿ ಕೇಂದ್ರ ವ್ಯಾಪ್ತಿಯ ಗ್ರಾಮಗಳು ಕ್ರ. ಸಂ ಬಾನುಲಿ ಕೇಂದ್ರ ವ್ಯಾಪ್ತಿಯ ಗ್ರಾಮಗಳು

1 ಗದಗ 80 ಅಡ್ನೂರು
2 ಬೆಟಗೇರಿ 81 ಮದಗಾನೂರ
3 ಹುಲಕೋಟಿ 82 ಬೆಳಹೊಂಡ
4 ಕುರ್ತಕೋಟಿ 83 ಚಿಕ್ಕಹಂದಿಗೋಳ
5 ಮಲ್ಲಿಗವಾಡ 84 ಹಿರೇಹಂದಿಗೋಳ
6 ಅಂತೂರು ಬೆಂತೂರು 85 ಸಾಸ್ವಿಹಳ್ಳಿ
7 ಅಣ್ಣಿಗೇರಿ 86 ಕೊಂಡಿಕೊಪ್ಪ
8 ಸೈದಾಪೂರ 87 ಶ್ಯಾಗೋಟಿ
9 ಹಿರೇಗುಂಜಳ 88 ದುಂದೂರ
10 ಯರಗುಪ್ಪಿ 89 ಬಿಂಕದಕಟ್ಟಿ
11 ಶಿರಗುಪ್ಪಿ 90 ಕಾರ್ಲವಾಡ
12 ಚಾಕಲಬ್ಬಿ 91 ಕಿರೇಸೂರ
13 ಹೆಬ್ಬಸೂರು 92 ಕುಮಾರಕೊಪ್ಪ
14 ಕಾಲವಾಡ 93 ಚಿಲಕವಾಡ
15 ನವಲಗುಂದ 94 ಬೆಳಹಾರ
16 ಯಮನೂರು 95 ದಿಂಡೂರ
17 ಶಲವಡಿ 96 ಬೆನ್ನೂರ
18 ಬೆಳವಣಿಕಿ 97 ಶಿಶ್ವಿನಹಳ್ಳಿ
19 ಅಬ್ಬಿಗೇರಿ 98 ಇಂಗಳಹಳ್ಳಿ
20 ಕೋಟುಮಚಗಿ 99 ನಲವಡಿ
21 ಹರ್ಲಾಪುರ 100 ಮಣಕವಾಡ
22 ಡಂಬಳ 101 ಬಲ್ಲರವಾಡ
23 ಕಡಕೋಳ 102 ನಾಗರಹಳ್ಳಿ
24 ಛಬ್ಬಿ 103 ಬಸಾಪೂರ
25 ಅಕ್ಕಿಗುಂದ 104 ಭದ್ರಾಪೂರ
26 ನರೇಗಲ್ 105 ಕೋಳಿವಾಡ
27 ಜಕ್ಕಲಿ 106 ಮಜ್ಜಿಗುಡ್ಡ
28 ಚಿಕ್ಕಮಣ್ಣೂರು 107 ಭಾಗವಾಡ
29 ಮಲ್ಲಾಪುರ 108 ಬರದ್ವಾಡ
30 ಬಸಾಪೂರ 109 ರೊಟ್ಟಿಗವಾಡ
31 ಇಬ್ರಾಹಿಂಪುರ 110 ಕೊಡ್ಲಿವಾಡ
32 ಮಾಡಳ್ಳಿ 111 ಕೊಂಕಣ ಕುರಹಟ್ಟಿ
33 ಯಳವತ್ತಿ 112 ಉಮಚಗಿ
34 ಹಿರೇವಡ್ಡಟ್ಟಿ 113 ನೀಲಗುಂದ
35 ಹಳ್ಳಿಕೇರಿ 114 ಕಲ್ಲೂರು
36 ಸಿದ್ನೇಕೊಪ್ಪ 115 ಚಿಂಚಿಲಿ
37 ಬಿನ್ನಾಳ 116 ಮುಳಗುಂದ
38 ತೊಂಡಿಹಾಳ 117 ಖಾನಾಪುರ
39 ಸೋಂಪುರ 118 ಶಿರಹಟ್ಟಿ
40 ಸವದಿ 119 ಗೊಜನೂರ
41 ಯರೇಹಂಚಿನಾಳ 120 ಮಾಗಡಿ
42 ತಿಮ್ಮಪುರ 121 ಸೀತಾಲಹರಿ
43 ಮೇವುಂಡಿ 122 ವರವಿ
44 ವೆಂಕಟಾಪುರ 123 ಜಲ್ಲಿಗೇರಿ
45 ಎಕ್ಲಾಸಪುರ 124 ಹಂಗನಕಟ್ಟಿ
46 ಜಂತ್ಲಿ 125 ಸೊರಟೂರ
47 ಆಲೂರು 126 ಅತ್ತಿಕಟ್ಟಿ
48 ಜಂತ್ಲಿ ಶಿರೂರು 127 ಡೋಣಿ
49 ಶಿರೂರು 128 ಶಿಂಗಟರಾಯನಕೇರಿ
50 ಚುರ್ಚಿಹಾಳ 129 ಕದಾಂಪೂರ
51 ಲಕ್ಕುಂಡಿ 130 ಪಾಪನಾಶಿ
52 ಸಂಭಾಪುರ 131 ಕಬಲಾಕಟ್ಟಿ
53 ಹಾತಲಗೇರಿ 132 ಶಿರುಂಜ
54 ಕಣಗಿನಹಾಳ 133 ಯಲಿಶಿರೂರು
55 ನಾರಾಯಣಪೂರ 134 ಶಿರೋಳ
56 ಚಿಕ್ಕವಡ್ಡಟ್ಟಿ 135 ಹೊಸೂರು
57 ನೀರಲಗಿ 136 ಕಣವಿ
58 ನಾಗರಾಳ 137 ಹರ್ತಿ
59 ಯರೇಬೇಲೆರಿ 138 ಅಸುಂಡಿ
60 ಕುರುಡಗಿ 139 ಮಲ್ಲಸಮುದ್ರ
61 ಗುಜಮಾಗಡಿ 140 ನಾಗಾವಿ
62 ಹಡಗಲಿ ಎಸ್ ಡಂಬಳ 141 ಬೆಳದಡಿ
63 ಕದಡಿ 142 ಕಪ್ಪತಗಿರಿ
64 ಹೊನ್ನಾಪುರ 143 ಅಡವಿಸೋಂಪುರ
65 ಸಂದಿಗವಾಡ 144 ಪರಸಾಪುರ
66 ದಾಟನಾಳ 145 ಸಂಗಮ್ ಬಜಾರ್
67 ಲಿಂಗದಾಳ 146 ಕಳಸಾಪುರ
68 ಬಳಗಾನೂರ 147 ನರಸಪುರ
69 ಗವರವಾಡ 148 ಗಾಂಧಿ ಪೇಟ
70 ಹುಯಿಲಗೋಳ 149 ಮಂಜುನಾಥ್ ನಗರ
71 ಕಿರೀಟಗೇರಿ 150 ಗಂಗಿಮಡಿ
72 ಬೆನಕನಕೊಪ್ಪ 151 ಮುಳಗುಂದ ನಾಕಾ
73 ನಾಗಸಮುದ್ರ 152 ಸಿದ್ದಲಿಂಗ ನಗರ
74 ಹಿರೇಕೊಪ್ಪ 153 ಜನತಾ ಕಾಲೋನಿ
75 ಚಿಕ್ಕಕೊಪ್ಪ 154 ವಿಜಯನಗರ
76 ಹೊಂಬಳ 155 ಬಳ್ಳಾರಿ ಲೇಔಟ್
77 ತುಪ್ಪದ ಕುರಹಟ್ಟಿ 156 ವಿಶ್ವೇಶ್ವರಯ್ಯ ನಗರ
78 ನಾವಳ್ಳಿ 157 ಕೆಎಸ್‌ಆರ್‌ಟಿಸಿ ಕಾಲೋನಿ
79 ಕಿತ್ತೂರು 158 ಹಾತಲಗೇರಿ ನಾಕಾ

ಈ ರೀತಿ ಸಹಕಾರ ಬಾನುಲಿ ಕೇಂದ್ರ ಪ್ರಸಾರ ವ್ಯಾಪ್ತಿಯಲ್ಲಿ ಮೇಲಿನ ಗ್ರಾಮಗಳಿಗೆ ಬರುತ್ತಿವೆ.

1.8 ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವಿರ

ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವರ
ಕ್ರ. ಸಂ ಸಹಕಾರ ಬಾನುಲಿ ಕೇಂದ್ರದಲ್ಲಿ ದಿನನಿತ್ಯ ಕಾರ್ಯಕ್ರಮಗಳು ವಿವರ

1 ಸಿಗ್ನೇಚರ್ ಟೂನ್
2 ಅವರ್ ಸಾಂಗ್
3 ದಿನದ ಕಾರ್ಯಕ್ರಮದ ವಿವರ
4 ಶ್ರೀ ವಾಣಿ
5 ವಚನ ಚಿಂತನ
6 ಭಕ್ತಿ ಸಿಂಚನ
7 ಮಾಹಿತಿ
8 ಹವಮಾನ
9 ಭಾವ ಸಿಂಚನ
10 ಚಿಂತನ
11 ಸ್ವಲ್ಪ ಕೇಳಿರಿ
12 ಚಿಲಿಪಿಲಿ
13 ಸಾಧಕರ ಸಮಯ
14 ಆರೋಗ್ಯ ಭಾಗ್ಯ
15 ಜನಪದ ಸಂಭ್ರಮ
16 ಕೃಷಿ
17 ಶುಭಾಶಯ
18 ನಕ್ಕ ಬಿಡ್ರಿ
19 ಗಾನ ಸಿಂಚನ
20 ಅಕ್ಷರ ಕಥೆ
21 ಕಥೆ ಹೇಳ್ತೀನಿ ಕೇಳ್ರಿ
22 ಎಲ್ಲೆಲ್ಲಿ ಎನೇನು
23 ಸ್ವ ಉದ್ಯೋಗ
24 ಕನ್ನಡ ಸಾಂಗ್
25 ಹಿಂದಿ ಸಾಂಗ್
26 ಪ್ರೋಗ್ರಾಂ ಕ್ಲೋಸರ್

ಈ ರೀತಿಯಾಗಿ ಸಹಕಾರ ಬಾನುಲಿ ಕೇಂದ್ರದಿಂದ ಪ್ರಸಾರಗೊಳ್ಳುವ ಕಾರ್ಯಕ್ರಮಗಳಾಗಿವೆ.

ಸಹಕಾರ ರೇಡಿಯೋ ಕಾರ್ಯಕ್ರಮಗಳು

1) ಸಿಗ್ನೇಚರ್ ಟೂನ್
ಸಹಕಾರ ಬಾನುಲಿ ಕೇಂದ್ರ ಬೆಳಗ್ಗೆ ಆರು ಗಂಟೆಯಿAದ 8 ಗಂಟೆವರೆಗೆ ಮತ್ತು ಸಂಜೆ 6 ಗಂಟೆಯಿAದ ರಾತ್ರಿ 8 ಗಂಟೆವರೆಗೆ ಪ್ರತಿನಿತ್ಯ ಪ್ರಾರಂಭವಾಗುವುದರಿAದ 10 ನಿಮಿಷ ಮುಂಚಿತವಾಗಿ ಸಿಗ್ನೇಚರ್ ಟೂನ್ ಕೇಳುಗರಿಗೆ ಧ್ವನಿ ಪ್ರಸಾರ ಮಾಡಲಾಗುತ್ತದೆ. ಸಿಗ್ನೇಚರ್ ಟೂನ್ ಬಂದ ನಂತರ ಸಹಕಾರ ರೇಡಿಯೋ ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ.

2) ಅವರ್ ಸಾಂಗ್
ಸಹಕಾರ ಬಾನುಲಿ ಕೇಂದ್ರವು ತನ್ನ ಕಾರ್ಯಕ್ರಮ ಪ್ರಾರಂಭ ಮಾಡುವ ಮೊದಲು ಸಿಗ್ನೇಚರ್ ಟೂನ್ ಆದಮೇಲೆ ಸಹಕಾರ ಬಾನುಲಿ ಕೇಂದ್ರದಿAದ ರಚಿತಗೊಂಡ ಗೀತೆಯನ್ನು ಪ್ರಸಾರ ಮಾಡಲಾಗುತ್ತದೆ.

3) ದಿನದ ಕಾರ್ಯಕ್ರಮದ ವಿವರ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಕಾರ್ಯಕ್ರಮಗಳ ವಿವರವನ್ನು ನೂರ್ ಅಹ್ಮದ್ ಮಕಾನದರ್ ಅವರು ತಿಳಿಸಿಕೊಡುತ್ತಾರೆ.

4) ಶ್ರೀ ವಾಣಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಶ್ರೀ ವಾಣಿ ಕಾರ್ಯಕ್ರಮ ಅನ್ವಯ ಪೂಜ್ಯ ಗವಿಸಿದ್ಧೇಶ್ವರ ಸ್ವಾಮೀಜಿ ಅಧ್ಯಾತ್ಮ ವಚನ ಪ್ರಸಾರ ಮಾಡಲಾಗುತ್ತದೆ. ಶ್ರೀಗಳ ಅಧ್ಯಾತ್ಮ ವಚನ ಭಾವನೆಗಳ ಒಂದು ಕಾರ್ಯಕ್ರಮವಾಗಿದೆ.

5) ವಚನ ಚಿಂತನ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ವಚನ ಚಿಂತನ ಬಗ್ಗೆ ವಿವರಣೆಯನ್ನು ಜ್ಯೋತಿ ಹೆರಳಗಿ ಅವರು ನಡೆಸಿಕೊಡುತ್ತಾರೆ. ವಚನ ಚಿಂತನವನ್ನು ಶ್ರೀಗಳು ಅಧ್ಯಾತ್ಮ ಭಾವನೆಗಳ ಒಂದು ಕಾರ್ಯಕ್ರಮವಾಗಿದೆ.

6) ಭಕ್ತಿ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಭಕ್ತಿ ಸಿಂಚನ ಪ್ರತಿನಿತ್ಯ ಪ್ರಾರಂಭವಾಗುತ್ತದೆ. ದೇವರ ದರ್ಶನ ಪ್ರತಿರೂಪದ ಅದ್ಬುತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವನ್ನು ರೇಣುಕಾ ವಿಭೂತಿ ನಡೆಸಿಕೊಡುತ್ತಿದ್ದಾರೆ.

7) ಮಾಹಿತಿ
ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳಲ್ಲಿ ಮಾಹಿತಿಯು ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಪ್ರತಿನಿತ್ಯ ನಡೆಯುವ ಸುದ್ದಿ ಸಮಾಚಾರ ಇನ್ನಿತರ ವಿಷಯಗಳ ಮಾಹಿತಿಯನ್ನು ನೂರ್‌ಅಹ್ಮದ್ ಮಂಕಾದರ ಅವರು ಕಾರ್ಯಕ್ರಮವನ್ನು ನೀಡುತ್ತಾರೆ.

8) ಹವಮಾನ
ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮದಲ್ಲಿಲ್ಲೊಂದಾದ ಹವಮಾನ ವರದಿಯು ದಿನನಿತ್ಯ ಗದಗ ಜಿಲ್ಲೆಯ ಹವಮಾನ ವರದಿಯನ್ನು ಕೇಳುಗರಿಗೆ ತಲುಪಿಸುತ್ತದೆ. ಈ ಕಾರ್ಯಕ್ರಮವನ್ನು ಲಲಿತಾ ಅಸೂಟಿ ಅವರು ನಡೆಸಿಕೊಡುತ್ತಿದ್ದಾರೆ.

9) ಭಾವ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಭಾವ ಸಿಂಚನ ಕಾರ್ಯಕ್ರಮವೂ ಪ್ರತಿನಿತ್ಯ ಜೀವನದಲ್ಲಿ ನಡೆದ ಭಾವ ಸೂಚಕ ಕಥೆಗಳನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮವನ್ನು ಹೇಮಂತ್ ಲಮಾಣಿ ನಡೆಸಿಕೊಡುತ್ತಾರೆ.

10) ಚಿಂತನ
ಸಹಕಾರ ಬಾನುಲಿ ಕೇಂದ್ರದಲ್ಲಿ ಚಿಂತನ ಕಾರ್ಯಕ್ರಮವೂ ಪ್ರಮುಖವಾಗಿ ಒಳ್ಳೆಯ ಗುಣಗಳನ್ನು ಹೊಂದಲು ಮತ್ತು ಜೀವನದಲ್ಲಿ ಜೀವನ ಶೈಲಿಯ ಬಗ್ಗೆ ಅಪಾರ ನಂಬಿಕೆಯನ್ನು ಗಳಿಸಲು ಚಿಂತನ ಕಾರ್ಯಕ್ರಮ ಪಾತ್ರವಹಿಸುತ್ತದೆ. ಈ ಕಾರ್ಯಕ್ರಮವನ್ನು ಅನಿಲ ವೈದ್ಯ ಅವರು ನಡೆಸಿಕೊಡುತ್ತಾರೆ.

11) ಸ್ವಲ್ಪ ಕೇಳಿರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಸ್ವಲ್ಪ ಕೇಳಿರಿ ಎಂಬ ಕಾರ್ಯಕ್ರಮವೂ ಕಥೆ, ಕಾದಂಬರಿ, ಸಾಹಿತ್ಯ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಸವಿತಾ ಕರದಾನಿ ಅವರು ನಡೆಸಿಕೊಡುತ್ತಾರೆ.

12) ಚಿಲಿಪಿಲಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಚಿಲಿಪಿಲಿ ಕಾರ್ಯಕ್ರಮ ಶಾಲಾ ಮಕ್ಕಳಲ್ಲಿ ಉತ್ತಮ ಕಲಿಕ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಶಾಲಾ ಶಿಕ್ಷಣ ವಿಷಯ ಸಂಬAಧಿಸಿದ ಮತ್ತು ಮಕ್ಕಳಲ್ಲಿ ಕಲಿಸಬೇಕಾದ ಉತ್ತಮ ಜ್ಞಾನವನ್ನು ಚಿಲಿಪಿಲಿ ಕಾರ್ಯಕ್ರಮದಲ್ಲಿ ತಿಳಿಯಬಹುದು ಈ ಕಾರ್ಯಕ್ರಮವನ್ನು ಚಂದ್ರಕಲಾ ಇಟಗಿಮಠ ಅವರು ನಡೆಸಿಕೊಡುತ್ತಾರೆ.

13) ಸಾಧಕರ ಸಮಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಸಾಧಕರ ಸಮಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರ ಜೀವನ ಚರಿತ್ರೆ, ಹಿನ್ನೆಲೆ ತಿಳಿಸಿಕೊಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ವೀರಯ್ಯಸ್ವಾಮಿ ಹಿರೇಮಠ ಅವರು ನಡೆಸಿಕೊಡುತ್ತಾರೆ.

14) ಆರೋಗ್ಯ ಭಾಗ್ಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಆರೋಗ್ಯ ಭಾಗ್ಯ ಕಾರ್ಯಕ್ರಮದಲ್ಲಿ ಮನುಷ್ಯನು ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ಸಂಬAಧಿಸಿದAತೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಿದೆ. ಈ ಕಾರ್ಯಕ್ರಮವನ್ನು ಡಾ. ಅರವಿಂದ ಅವರು ನಡೆಸಿಕೊಡುತ್ತಾರೆ.

15) ಜನಪದ ಸಂಭ್ರಮ
ಸಹಕಾರ ಬಾನುಲಿ ಕೇಂದ್ರದಲ್ಲಿ ಜಾನಪದ ಸಂಭ್ರಮದ ಕಾರ್ಯಕ್ರಮವೂ ಜಾನಪದ ಗೀತೆಗಳನ್ನು ಹಾಡುವ ಮೂಲಕ ಜಾನಪದ ಕಲೆ ಉಳಿಸಿ, ಬೆಳೆಸಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮವನ್ನು ಮಲ್ಲೇಶ ಹಡಪದ ಅವರ ತಂಡ ನಡೆಸಿಕೊಡುತ್ತದೆ.

16) ಕೃಷಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಕೃಷಿ ವಿಷಯಕ್ಕೆ ಸಂಬAಧಿಸಿದAತೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಕೃಷಿ ಚಟುವಟಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಡಾ. ಬಿ.ಎಂ ಮುರಗೋಡ ಅವರು ನಡೆಸಿಕೊಡುತ್ತಾರೆ.

17) ಶುಭಾಶಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಶುಭಾಶಯ ಕಾರ್ಯಕ್ರಮವೂ ಶುಭ ಸುದ್ದಿ ಸಮಾಚಾರ ಪ್ರಸ್ತುತಪಡಿಸುತ್ತದೆ. ಒಳ್ಳೆಯ ಭಾವನಾತ್ಮಕ ಸಂದೇಶ ಸಾರುವ ವಿಷಯಗಳನ್ನು ಪ್ರತಿನಿತ್ಯ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮವನ್ನು ಸವಿತಾ ಕರದಾನಿ ಅವರು ನಡೆಸಿಕೊಡುತ್ತಾರೆ.

18) ನಕ್ಕಬಿಡ್ರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಕಾಮಿಡಿ ಕಾರ್ಯಕ್ರಮ ನಡೆಸಲಾಗುತ್ತದೆ. ಮನುಷ್ಯನಲ್ಲಿ ನಗು ಎಲ್ಲ ಕಾಯಿಲೆಗಳು ಮಾಯವಾಗುತ್ತದೆ ಎಂಬ ನಾಲ್ನುಡಿಯಂತೆ ಪ್ರತಿನಿತ್ಯ ಬಾನುಲಿಯಲ್ಲಿ ನಕ್ಕ ಬಿಡ್ರಿ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಮತ್ತು ಮಂಜರಿ ಅವರು ನಡೆಸಿಕೊಡುತ್ತಾರೆ.

19) ಗಾನ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಗಾನ ಸಿಂಚನ ಕಾರ್ಯಕ್ರಮವೂ ಹಾಡುಗಳಲ್ಲಿ ಎಷ್ಷು ಪ್ರಾಮುಖ್ಯತೆಯನ್ನು ಗಳಿಸಿವೆ. ಮನುಷ್ಯನ ಮನಸ್ಸುಗಳಿಗೆ ಹಾಡುಗಳಲ್ಲಿ ಗಾನ ಶಕ್ತಿಯಾಗಿ ಮಾರ್ಪಡಿಸಿದ ಅಂತಹ ಗಾನ ಸಿಂಚನ ಹಾಡಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಗಂಗವ್ವ ಅವರು ನಡೆಸಿಕೊಡುತ್ತಾರೆ.

20) ಅಕ್ಷರ ಕಥೆ
ಸಹಕಾರ ಬಾನುಲಿ ಕೇಂದ್ರದಲ್ಲಿ ಅಕ್ಷರ ಕಥೆ ಕಾರ್ಯಕ್ರಮವೂ ಅಂಕಿ ಅಂಶಗಳ ವಿಷಯಕ್ಕೆ ಸಂಬAಧಿಸಿದ ಸಾಮಾನ್ಯ ಜನರಲ್ಲಿ ಅಕ್ಷರ ಜ್ಞಾನದ ಮಾಹಿತಿ ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ಕವಿರಾಜ ಜಿಡಗೆ ಅವರು ನಡೆಸಿಕೊಡುತ್ತಾರೆ.

21) ಕಥೆ ಹೇಳ್ತೀನಿ ಕೇಳ್ರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಕಥೆ ಹೇಳ್ತೀನಿ ಕೇಳ್ರಿ ಕಾರ್ಯಕ್ರಮವೂ ಜೀವನದಲ್ಲಿ ನಡೆದ ಉತ್ತಮ ಕಥೆಗಳ ಮಾಹಿತಿಯನ್ನು ಕೇಳುಗರಿಗೆ ತಲುಪಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಮೇಘನಾ ಕರಿಸೋಮನಗೌಡರ ಅವರು ನಡೆಸಿಕೊಡುತ್ತಾರೆ.

22) ಎಲ್ಲೆಲ್ಲಿ ಎನೇನು
ಸಹಕಾರ ಬಾನುಲಿ ಕೇಂದ್ರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮವೂ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ನಡೆದ ಸುದ್ದಿ ಸಮಾಚಾರ, ಇನ್ನಿತರ ವಿಷಯಗಳನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.

23) ಸ್ವ ಉದ್ಯೋಗ
ಸಹಕಾರ ಬಾನುಲಿ ಕೇಂದ್ರದಲ್ಲಿ ಸ್ವ ಉದ್ಯೋಗ ಕಾರ್ಯಕ್ರಮವೂ ಯುವ ಜನತೆಗೆ ಉದ್ಯೋಗ ಮಾಹಿತಿ ಸೇರಿದಂತೆ ಸ್ವ ಉದ್ಯೋಗ ಹೇಗೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.

24) ಕನ್ನಡ ಸಾಂಗ್
ಸಹಕಾರ ಬಾನುಲಿ ಕೇಂದ್ರದಿAದ ಹೊಸ ಹೊಸ ಕನ್ನಡ ಭಾಷೆಗಳ ಹಾಡುಗಳು ಸೇರಿದಂತೆ ಪ್ರಸಿದ್ಧ ಪಡೆದ ಕನ್ನಡ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.

25) ಹಿಂದಿ ಸಾಂಗ್
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಹಿಂದಿ ಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ಹೊಸ ಹಿಂದಿ ಹಾಡು ಸೇರಿದಂತೆ ಪ್ರಸಿದ್ಧ ಪಡೆದ ಹಾಡುಗಳನ್ನು ಕೇಳುಗರಿಗೆ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್‌ಅಹ್ಮದ ಮಂಕಾದರ ನಡೆಸಿಕೊಡುತ್ತಾರೆ.

26) ಪ್ರೋಗ್ರಾಂ ಕ್ಲೋಸರ್
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಕಾರ್ಯಕ್ರಮ ಮುಗಿದ ಮೇಲೆ ಪ್ರೋಗ್ರಾಂ ಕ್ಲೋಸರ್ ಎಂಬ ಕಾರ್ಯಕ್ರಮ ಮುಕ್ತಾಯಗೊಳಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ

1.9 ಸಂದರ್ಶಿಸಿದ ವಿಷಯ ಕೃಷಿ ಮತ್ತು ಸಹಕಾರ

ಸಂದರ್ಶಿಸಿದ ವಿಷಯ ಕೃಷಿ
ಕ್ರ.ಸಂ ಸಂದರ್ಶನ ವಿಷಯ ಕೃಷಿ
1 ಭೂ ಸುಧಾರಣೆ
2 ಮದ್ಯಸ್ಥಕಾರರ ನಿಯಂತ್ರಣ
3 ಬೆಳೆ ವಿಮೆ
4 ಬೆಳೆ ಪರಿಹಾರ
5 ಕೃಷಿ ಬೆಂಬಲ ಬೆಲೆ
6 ಸುಸ್ಥಿರ ಕೃಷಿ
7 ಆಹಾರ ಬಿಕ್ಕಟ್ಟು
8 ಜಾಗತಿಕ ತಾಪಮಾನ
9 ಹವಾಮಾನ ಬದಲಾವಣೆ
10 ರೈತರ ಆತ್ಮಹತ್ಯೆ
11 ರೈತರು ವಲಸೆ ಹೋಗುವುದು
12 ರಾಸಾಯನಿಕ ಕೃಷಿ
13 ಕೃಷಿ ಕ್ರಿಮಿನಾಶಕ
14 ಸಾವಯವ ಕೃಷಿ
15 ಶೂನ್ಯ ಬಂಡವಾಳ ಕೃಷಿ
16 ಸೀಮಿತ ಭೂಮಿ ಕೃಷಿ
17 ಕೃಷಿ ಬೆಳೆ ನಷ್ಟ ಪರಿಹಾರ
18 ನೈಸರ್ಗಿಕ ಕೃಷಿ
19 ತೋಟಗಾರಿಕೆ ಕೃಷಿ
20 ಕೃಷಿ ಬೆಳೆ ಫಲಿತಾಂಶ
21 ತಿಪ್ಪೆ ಗೊಬ್ಬರ
22 ರಾಸಾಯನಿಕ ಗೊಬ್ಬರ
23 ಕೀಟನಾಶಕ
24 ಎರೆಹುಳು ಗೊಬ್ಬರ
25 ಪಂಚಗವ್ಯ
26 ಸಣ್ಣ ಪ್ರಮಾಣ ಉಳುಮೆ
27 ಅಲ್ಪಾವಧಿ ಕೃಷಿ ಬೆಳೆಗಳು
28 ಉತ್ಪಾದನೆ ವೆಚ್ಚ
29 ಸಗಣಿ ಗೊಬ್ಬರ

ಸಂದರ್ಶಿಸಿದ ವಿಷಯ ಸಹಕಾರ
ಕ್ರ.ಸಂ ಸಂದರ್ಶನ ವಿಷಯ ಸಹಕಾರ

1 ವ್ಯವಸಾಯ
2 ಹೈನುಗಾರಿಕೆ
3 ಕೋಳಿ ಸಾಗಾಣಿಕೆ
4 ಮೀನುಗಾರಿಗೆ
5 ಕೃಷಿ ತೋಟಗಾರಿಕೆ ಸಾಲ
6 ಬ್ಯಾಕಿಂಗ್ ಗೃಹ ನಿರ್ಮಾಣ
7 ಕೃಷಿ ಕೈಗಾರಿಕೆ
8 ಗ್ರಾಮೀಣ ವಿದ್ಯುತ್ತಿಕರಣ
9 ನೀರಾವರಿ
10 ಜಲಸಂರಕ್ಷಣಿ ಕಾರ್ಮಿಕ
11 ದುರ್ಬಲವರ್ಗಗಳು
12 ಗ್ರಾಹಕವರ್ಗ
13 ಸಾರ್ವಜನಿಕ ವಿತರಣಾ ವ್ಯವಸ್ಥೆ
14 ಗಿರಿಜನಾಭಿವೃದ್ಧಿ
15 ಅಂತರರಾಷ್ಟ್ರೀಯ ವ್ಯಾಪಾರ
16 ರಫ್ತು
17 ಕೃಷಿ ವ್ಯಾಪಾರ
18 ಮಾನವ ಸಂಪನ್ಮೂಲ ಅಭಿವೃದ್ಧಿ
19 ಮಾಹಿತಿ ತಂತ್ರಜ್ಞಾನ
20 ಲೇವಾದೇವಿಗಾರ ಕರ್ತವ್ಯ

ಸ್ಥಳೀಯರ ಧ್ವನಿಯಾಗಿ ಸಹಕಾರ ರೇಡಿಯೋ ಪಾತ್ರ
ಸಹಕಾರ ಬಾನುಲಿ ಕೇಂದ್ರ ದಿನನಿತ್ಯ ಕಾರ್ಯಕ್ರಮಗಳಾದ ಸಿಗ್ನೇಚರ್ ಟೂನ್, ಅವರ್ ಸಾಂಗ್, ದಿನದ ಕಾರ್ಯಕ್ರಮದ ವಿವರ, ಶ್ರೀ ವಾಣಿ, ವಚನ ಚಿಂತನ, ಭಕ್ತಿ ಸಿಂಚನ, ಮಾಹಿತಿ, ಹವಮಾನ, ಭಾವ ಸಿಂಚನ, ಚಿಂತನ, ಸ್ವಲ್ಪ ಕೇಳಿರಿ, ಚಿಲಿಪಿಲಿ, ಸಾಧಕರ ಸಮಯ, ಆರೋಗ್ಯ ಭಾಗ್ಯ, ಜನಪದ ಸಂಭ್ರಮ, ಕೃಷಿ, ಶುಭಾಶಯ, ನಕ್ಕಬಿಡ್ರಿ, ಗಾನ ಸಿಂಚನ, ಅಕ್ಷರ ಕಥೆ, ಕಥೆ ಹೇಳ್ತೀನಿ ಕೇಳ್ರಿ, ಎಲ್ಲೆಲ್ಲಿ ಎನೇನು, ಸ್ವ ಉದ್ಯೋಗ, ಕನ್ನಡ ಸಾಂಗ್, ಹಿಂದಿ ಸಾಂಗ್, ಪ್ರೋಗ್ರಾಂ ಕ್ಲೋಸರ್ ಇತ್ಯಾದಿ ಕೇಳುಗರಿಗೆ ತಲುಪಿಸುವ ಮೂಲಕ ಸ್ಥಳೀಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ.

ಸಹಕಾರ ರೇಡಿಯೋ ಕಾರ್ಯಕ್ರಮದಲ್ಲಿ ಕೃಷಿ ಪ್ರಯೋಜನ

ಕೃಷಿ ಪ್ರಯೋಜನ
ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಕೃಷಿ ಕ್ಷೇತ್ರದ ವಿಷಯಗಳಾದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ, ಅಲ್ಪಾವಧಿ, ಕೃಷಿ ಬೆಳೆಗಳು,

ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ ಇನ್ನಿತರ ಅನೇಕ ವಿಷಯ ಬಗ್ಗೆ ಕೇಳಗರಿಗೆ ಒದಗಿಸುತ್ತದೆ. ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಮತ್ತು ಕೆ.ಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹೋದ್ಯೋಗದೊಂದಿಗೆ ಸರಿಸುಮಾರು 10,000 ವರ್ಷಗಳ ಇತಿಹಾಸ ಹೊಂದಿರುವ ಕೃಷಿ ಕ್ಷೇತ್ರಕ್ಕೆ ಕೃಷಿ ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. ನೀರಾವರಿ, ಬೆಳೆಗಳ ಸರದಿ, ರಸಗೊಬ್ಬರಗಳು ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಭಿವೃದ್ಧಿಯಾಗಲೂ ಮತ್ತು ಅತೀವವಾದ ಪ್ರಗತಿ ಸಾಧಿಸಲು

ರೈತರಿಗೆ ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಮತ್ತು ಕೆ.ಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹೋದ್ಯೋಗದೊಂದಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ,

ಸಹಕಾರ ರೇಡಿಯೋ ಕಾರ್ಯಕ್ರಮದಲ್ಲಿ ಸಹಕಾರ ಪ್ರಯೋಜನ

ಸಹಕಾರ ಪ್ರಯೋಜನ
ಸಹಕಾರ ಬಾನುಲಿ ಕೇಂದ್ರ ಸಹಕಾರ ಕ್ಷೇತ್ರದ ವಿಷಯಗಳಾದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ , ಲೇವಾದೇವಿಗಾರ ಕರ್ತವ್ಯ ಇನ್ನಿತರ ಅನೇಕ ವಿಷಯ ಬಗ್ಗೆ ಕೇಳಗರಿಗೆ ಒದಗಿಸುತ್ತದೆ. ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರಮುಖವಾಗಿ ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ

ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತು ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ. ಯಾವುದೇ ಸಂಘಟಿತ ವ್ಯವಸ್ಥೆಗಿಂತ ಅವಿರತ ಸಹಕಾರಿ ಅಭಿವೃದ್ಧಿ ಪ್ರಕ್ರಿಯೆ ಮೂಲಕ ವಂಚಿತರಾದವರ ಸಂಘಟನೆ ಮಾಡಿ ಮಾಪನ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿರುತ್ತದೆ. ಈ ಪ್ರಕ್ರಿಯೆಯು ಹೊಂದಿಕೊಳ್ಳವ ಮಾನವ ಸ್ವಭಾವಕ್ಕೆ ಪೂರಕವಾಗಿದ್ದು ಮಹತ್ವದ್ದಾಗಿರುತ್ತದೆ. ರಾಷ್ಟ್ರದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಸಹಕಾರಿ ನಿರ್ವಹಣೆಗೆ ಈ ತತ್ವವು ತಳಹದಿಯಾಗಿದ್ದು, ಸ್ವಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿರುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡಜನರಲ್ಲಿ ಆರ್ಥಿಕ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸವನ್ನು ಮಹತ್ವದ ಪಾತ್ರವನ್ನು ವಹಿಸುತ್ತವೆ ಇಂತಹ ವಿಷಯಗಳ ಬಗ್ಗೆ ಬಾನುಲಿ ಕೇಂದ್ರ ಪ್ರಸರಿಸುತ್ತದೆ.

ಸಹಕಾರ ಚಳುವಳಿಯು ಭಾರತದಲ್ಲಿ 1904 ರಲ್ಲಿ ಸಹಕಾರ ಸಂಘಗಳ ಕಾಯ್ದೆ 1904 ನ್ನು ಜಾರಿಗೆ ತರುವುದರೊಂದಿಗೆ ಪ್ರಾರಂಭವಾಗಿದೆ.



































ಅಧ್ಯಾಯ II: ಸಾಹಿತ್ಯದ ವಿಮರ್ಶೆ



ಜನಪ್ರಿಯ ಸಂವಹನ ಮಾಧ್ಯಮ ಎಂದ ತಕ್ಷಣ ನಮಗೆ ಸಾಮಾಜಿಕ ಮಾಧ್ಯಮ ನೆನಪಿಸುತ್ತದೆ. ರೇಡಿಯೋ ಜನಪ್ರಿಯತೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಇದೆ. ವಿಶ್ವ ಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವುದು ರೇಡಿಯೋ.

ಗದಗ ಜಿಲ್ಲೆಯ ಮೊಟ್ಟ ಮೊದಲ ಬಾರಿಗೆ ಸಹಕಾರ ಬಾನುಲಿ ಕೇಂದ್ರ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಕೀರ್ತಿ ಪ್ರಾಯವಾಗಿದೆ. ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಗದಗ-ಹುಲಕೋಟಿ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ ಎಂಬ ಕಿರು ಪ್ರಬಂಧಕ ಆಯ್ದು ಕೊಂಡು ಸಹಕಾರ ಬಾನುಲಿ ಕೇಂದ್ರದಲ್ಲಿ ಸಂದರ್ಶನದ ಕೃಷಿ ವಿಷಯಗಳಾದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ, ಅಲ್ಪಾವಧಿ, ಕೃಷಿ ಬೆಳೆಗಳು, ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ. ಸಂದರ್ಶನದ ಸಹಕಾರ ವಿಷಯಗಳಾದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ , ಲೇವಾದೇವಿಗಾರ ಕರ್ತವ್ಯ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ.

ಇಂತಹ ರೇಡಿಯೋ 19ನೇ ಶತಮಾನದ ಮಧ್ಯ ಭಾಗದಲ್ಲಿ ರೇಡಿಯೋ ಆರಂಭವಾಗಿದೆ. ನಿರ್ದಿಷ್ಟ ಬ್ಯಾಂಡ್‌ವಿಡ್ತ್ಗೆ ಸಂದೇಶಗಳನ್ನು ರವಾನಿಸುವ ಧ್ವನಿ ತರಂಗಗಳು ಮತ್ತು ಸಂಕೇತಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ, ರೇಡಿಯೋ 20ನೇ ಶತಮಾನದಲ್ಲಿ ಆರಂಭದಲ್ಲಿ ಪರಿಚಯವಾಗಿತ್ತು.

ಶಿಕ್ಷಣ ವಂಚಿತ ಜನರಿಗೆ ಮಾಹಿತಿ ನೀಡುವುದನ್ನ ಗಮನದಲ್ಲಿಟ್ಟುಕೊಂಡು ರೇಡಿಯೋ ಬಳಕೆ ಹೆಚ್ಚಾಗಿದ್ದಲ್ಲದೇ ಅನಿವಾರ್ಯತೆಯೂ ತಿಳಿಯಿತು. ಜಾಹೀರಾತು ಮತ್ತು ಪತ್ರಿಕೆಗಳನ್ನು ಓದಲು ಸಾಧ್ಯವಾಗದ ಜನರು ರೇಡಿಯೋ ಬಂದ ನಂತರ ವಿಷಯಗಳನ್ನು ಚೆನ್ನಾಗಿ ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಮಾಧ್ಯಮದ ಜನಪ್ರಿಯತೆಯನ್ನು ಜೀವಂತವಾಗಿರಿಸಲು ಮತ್ತು ಎಲ್ಲರ ನಡುವೆ ಅದರ ಬಳಕೆಯನ್ನು ಉತ್ತೇಜಿಸಲು, ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ರೇಡಿಯೋ ಮಾಹಿತಿಯನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ರೇಡಿಯೋ ಕೇಂದ್ರಗಳು ಪ್ರಪಂಚದಾದ್ಯAತ ಸ್ಥಳೀಯ ಜನಸಂಖ್ಯೆಗೆ ಸೂಕ್ತವಾದ ಕಾರ್ಯಕ್ರಮಗಳ ವೈವಿಧ್ಯಮಯ ಆಯ್ಕೆಗಳನ್ನು ಜನರಿಗೆ ನೀಡುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತುರ್ತು ಸಂವಹನದಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರ ವಹಿಸಿದೆ.

ರೇಡಿಯೋವನ್ನು ದೂರದರ್ಶನ ಮತ್ತು ಅಂತರ್ಜಾಲದ ಮೊದಲು ಪ್ರೇಕ್ಷಕರಿಗೆ ಸುದ್ದಿ ಮತ್ತು ಮಾಹಿತಿಯನ್ನು ಪ್ರಸಾರ ಮಾಡುವ ಸಾಧನವಾಗಿ ಕಂಡು ಹಿಡಿಯಲಾಗಿದೆ. ರೇಡಿಯೋ ಪ್ರಪಂಚದಾದ್ಯAತ ಬಹಳ ಜನಪ್ರಿಯವಾಗಿದೆ. ನಾವು ಪ್ರಪಂಚದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ರೇಡಿಯೊದಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಇದು ಶಿಕ್ಷಣವನ್ನು ಹರಡಲು ಸಹಾಯ ಮಾಡುತ್ತದೆ. ನಾವು ಅದರ ಸಂಗೀತ ಮತ್ತು ಹಾಡುಗಳ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಆಟಗಳ ಚಾಲನೆಯಲ್ಲಿರುವ ವ್ಯಾಖ್ಯಾನಗಳು ಮತ್ತು ಇತರ ಅನೇಕ ವಿಷಯಗಳನ್ನು ಆನಂದಿಸುತ್ತೇವೆ.