10-12 ವಿಧಾನಸಭೆಗೆ ಒಂದು ಲೋಕಸಭಾ ಕ್ಷೇತ್ರವಾಗಲಿ
ಪ್ರತಿಯೊಂದು ಲೋಕಸಭಾ ಕ್ಷೇತ್ರವು ಸದ್ಯ 8 ವಿಧಾನಸಭಾ ಕ್ಷೇತ್ರ ಒಳಗೊಂಡು ರಚನೆಯಾಗಿದೆ. ಅದು ಜನಸಂಖ್ಯೆ ಆಧಾರದ ಮೇಲೆ ಅಲ್ಲ. ಮತದಾರರ ಸಂಖ್ಯೆ ಆಧಾರದ ಮೇಲೆ. ಇಲ್ಲಿ ಜನಸಂಖ್ಯೆ ಬೇರೆ, ಮತದಾರರ ಸಂಖ್ಯೆ ಬೇರೆ. ಅಂದರೆ 18 ವರ್ಷ ಮೇಲ್ಪಟ್ಟವರು ಮತದಾರರ ಸಂಖ್ಯೆಯಾಗಲಿದೆ. ಸಣ್ಣ ಮಗವಿನಿಂದ ಹಿಡಿದು ವ್ಯಕ್ತಿ ಇರುವವರಿಗೆ ಜನಸಂಖ್ಯೆಯಾಗಲಿದೆ. ಆದ್ದರಿಂದ ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು. ಅಲ್ಲದೇ ಲೋಕಸಭಾ ಸಂಸದರಿಗೆ ಶಾಸಕರಿಗೆ ನೀಡುವಷ್ಟು ಬೆಲೆ ಇರುವುದಿಲ್ಲ. ವಿಧಾನಸಭಾ ಚುನಾವಣೆಗೆ ಇರುವಷ್ಟು ಹುಮ್ಮಸ್ಸು ಲೋಕಸಭಾ ಚುನಾವಣೆಗೆ ಇರುವುದಿಲ್ಲ. ವಿಧಾನಸಭಾ ಕ್ಷೇತ್ರಗಳು 2-3 ಲಕ್ಷ ಮತದಾರ ಸಂಖ್ಯೆಯನ್ನು ಆಧಾರಿಸಿ, ರಚನೆಯಾಗಿದೆ. ವಿಧಾನಸಭಾ ಕ್ಷೇತ್ರಗಳು ಹೆಚ್ಚಾಗಲಿ ಆದರೆ ಸದ್ಯ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರ ಬದಲಾಗಿ 10-12 ವಿಧಾನಸಭಾ ಕ್ಷೇತ್ರಕ್ಕೆ ಒಂದು ಲೋಕಸಭಾ ಕ್ಷೇತ್ರವಾಗಬೇಕು. 850 ಲೋಕಸಭಾ ಕ್ಷೇತ್ರವಾದರೆ ಲೋಕಸಭಾದ ಸಂಸತ್ ಅಧಿವೇಶನ ಕೋಲಾಹಲ, ಗದ್ದಲ, ವಿಪರೀತ ಶಬ್ದವಾಗಲಿದೆ. ಲೋಕಸಭಾ ಸ್ಪೀಕರ್ ಗೆ ತಲೆನೋವು ಕಟ್ಟಿಟ್ಟ ಬುತ್ತಿ. ಲೋಕಸಭಾ ಕ್ಷೇತ್ರ ಕಡಿಮೆಯಾಗಬೇಕು ವಿನಃ ಹೆಚ್ಚಾಗಬಾರದು.
ರಾಜ್ಯ ಮಂತ್ರಿ ಮಂಡಲ ಸಂಪೂರ್ಣ ಬದಲಾಗಬೇಕು
ಎಲ್ಲರೂ ಯುದ್ಧ ಕ್ಕಿಂತ ಹಾರ್ಮುಜ್ ಜಲಸಂಧಿ ಗುಂಗಿನಲ್ಲಿ ಇದ್ದಾರೆ. ಜಲಸಂಧಿ ಓಪನ್ ಆಗುತ್ತೋ ಖಾಯಂ ಮುಚ್ಚುತೋ ಗೊತ್ತಿಲ್ಲ. ಆದರೆ ತುಂಬಿದ ಹಡಗು ಬಂತೋ ಖಾಲಿ ಹಡಗು ಬಂತೋ ಅನ್ನೋದು ಯಾರು ಗಮನಿಸಿರುವುದಿಲ್ಲ. ಬೇಡಿಕೆ ತಕ್ಕಂತೆ ಪೂರೈಕೆ ಯಾವಾಗ ಬರುತ್ತೋ ಆವಾಗ ಸಮಸ್ಯೆಗೆ ಮುಕ್ತಿ. ಅಷ್ಟರಲ್ಲಿ ಕಚ್ಚಾತೈಲ ಬದಲಾಗಿ ಪರ್ಯಾಯ ಮಾರ್ಗ ಕಂಡು ಹಿಡಿಯಲು ಪ್ರಯತ್ನಿಸಬೇಕು. ನಮ್ಮದೊಂದು ಇರಲಿ. ಸಿಎಂ. ಡಿಸಿಎಂ ಸೇರಿದಂತೆ ಸಂಪೂರ್ಣ ಮಂತ್ರಿಮಂಡಲ ಸಂಪೂರ್ಣ ಬದಲಾಗಬೇಕು. ಈಗಿನ ಡಿಸಿಎಂ ಸಿಎಂ ಆಗಬೇಕು, ಈಗಿನ ಸಿಎಂ ಮಗ ಡಿಸಿಎಂ ಆಗಬೇಕು. 6-8 ಈಗಿನ ಹಳೆ ಸಚಿವರು ಸೇರಿದಂತೆ ಉಳಿದ ಹೊಸ ಮುಖಗಳು ಮಂತ್ರಿಗಳಾಗಬೇಕು. ಅದಕ್ಕೆ ಕಾಲವು ಕೂಡಿ ಬರಲಿದೆಯಾ ಎಂಬುದು ಕಾದು ನೋಡಬೇಕು. ಏಕೆಂದರೆ ದಿನನಿತ್ಯ ಎಚ್.ಓ.ಡಿ ಕುರ್ಚಿಗಾಗಿ ಕುಸ್ತಿ ಆಡುವುದನ್ನು ಸ್ನಾತಕೋತ್ತರ ಪದವಿ ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರಲ್ಲಿ ನೋಡಿದ್ದೀನಿ. ನಂತರ ಕುರ್ಚಿ ಅದಲು ಬದಲು ಆಗಿ ಇಬ್ಬರು ಒಂದೇ ಎಳೆನೀರು ಸೇವಿಸಿ ಖುಷಿಪಟ್ಟರು. ಪ್ರತಿಯೊಂದಕ್ಕೂ ಕುರ್ಚಿಗೆ ಬೆಲೆ ಇದೆ. ಆ ಯೋಗ್ಯ ಕೂಡಿ ಬರುವರಿಗೆ ಬಂದೆ ಬರುತ್ತದೆ. ಅದಕ್ಕೆ ತಾಳ್ಮೆ ಸಮಾಧಾನ ಬೇಕು. ಎಲ್ಲರೂ ಮಂತ್ರಿ ಆಗಬೇಕು ಅನ್ನುವರು ಆಗೋಕೆ ಆಗುತ್ತಾ 34 ರಾಜ್ಯ ಮಂತ್ರಿಗಳಾಗಬಹುದು ಅಷ್ಟೇ. ಕೇಂದ್ರ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ರಾಜ್ಯ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಸಂಪುಟ ಮಂತ್ರಿಗಳಲ್ಲಿ ಜಿಲ್ಲಾ ಉಸ್ತುವಾರಿ ಯಾಕೆ? ರಾಜ್ಯ ಮಂತ್ರಿ ಎಂದಮೇಲೆ ಎಲ್ಲಾ ಜಿಲ್ಲೆಗೆ ಸಂಬಂಧ ಇರುತ್ತದೆ. 2020 ರಲ್ಲಿ ಮುಖ್ಯಮಂತ್ರಿ, ಸಚಿವರಾಗಿದ್ದವರು ಉತ್ತಮ ಕೆಲಸ ನಿರ್ವಹಿಸಿದರು. ಆಗ ಮುಖ್ಯಮಂತ್ರಿ ಸಚಿವಾಲಯ ಸೇರಿದಂತೆ ಎಲ್ಲ ಸಚಿವರು ಸಾರ್ವಜನಿಕ ಅರ್ಜಿಗೆ ಸ್ಪಂದಿಸುತ್ತಿದ್ದರು. ನಂತರ ಮತ್ತೆ ಬದಲಾಗಿ ಬಂದ ಮುಖ್ಯಮಂತ್ರಿಗಳ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಈಗ ಸರ್ಕಾರದಲ್ಲಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಸರ್ಕಾರಿ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡುವುದಿಲ್ಲ. ಟೈಮ್ ಪಾಸ್ ಮಾಡುತ್ತಾ ಕಾಲಹರಣ ಮಾಡುತ್ತಾ ಸಾರ್ವಜನಿಕ ಅರ್ಜಿ ವಿಲೇವಾರಿ ಮಾಡದೇ ಫೇಲ್ ಆಗಿದ್ದಾರೆ. ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳಲ್ಲಿ ಎಕ್ಸಾಂ ಪ್ಯಾಟರ್ನ್ ಬಿಟ್ಟರೆ, ಸಾಮಾಜಿಕ ಕಳಕಳಿಯಿಂದ ಬಂದವರಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಅಧಿಕಾರ ಸಿಗಬೇಕು ಎಂದರೆ ಸಮಯ ಕೂಡಿ ಬರಬೇಕು. ಎಲ್ಲರಿಗೂ ಹೊಸ ಮುಖ ಆಡಳಿತ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇರುತ್ತದೆ.
ವೀರೇಶ ಧೂಪದಮಠ