ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು
ಶಾಸಕರಾದವರು ತಮ್ಮ ಕ್ಷೇತ್ರವನ್ನೇ ಸಲ್ಲಿಸಾಗಿ ಗೆಲ್ಲದವರು. ಇನ್ನು 8-10 ಶಾಸಕರನ್ನು ಗೆಲ್ಲಿಸಲು ಸಾಧ್ಯವೇ?. ಸುಮ್ನೆ ಯಾವ ಮಂತ್ರಿ ಸ್ಥಾನ ಸಿಗುತ್ತೋ ಅದರಲ್ಲಿ ತೃಪ್ತಿಪಡಬೇಕು, ಇಲ್ಲದಿದ್ದರೇ ಅದು ಸಿಗಲ್ಲ. ಅಷ್ಟು ಕಿರಿಕಿರಿಯಾದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರಲಿ. ಮಂತ್ರಿ ಸ್ಥಾನ 136 ಶಾಸಕರಲ್ಲಿ ಯಾರಿಗಾದರೂ ಒಬ್ಬರ ಪಾಲಾಗುವುದು ಖಚಿತ ಬಿಟ್ರೆ ಮತ್ತೆ ಏನೇನು ಇಲ್ಲ. 31 ಜಿಲ್ಲೆಗಳನ್ನು ಓಡಾಡುವ ವ್ಯಕ್ತಿ ಮಂತ್ರಿಯಾಗಲಿ. ಮಾಜಿ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆ ಬಗೆಹರಿಸಬೇಕು. ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ. ಹೀಗೆ ಮೈಸೂರು ಮಗ, ಮೈಸೂರು ಅಳಿಯನ ಬಗ್ಗೆ ಖುಷಿಯಿದೆ, ಇಬ್ಬರು ಒಂದೇ ಭಾಗದವರು. ಒಬ್ಬರು ಕಾಂಗ್ರೆಸ್ ಹೈಕಮಾಂಡ್ ಮೆಂಬರ್ ಆಗಿದ್ದಾರೆ. ಇನ್ನೊಬ್ಬರು ಕರ್ನಾಟಕದ ಸಿಎಂ ಆಗಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದೇ ಎಟ್ಟಿಗೆ 6 ಯುವ ಗ್ಯಾರಂಟಿ ಮತ್ತು ಕರ್ನಾಟಕದಲ್ಲಿ ಜನಸಾಮಾನ್ಯರ ಅಹವಾಲು ಆಲಿಕೆಗೆ, ಎನ್ಆರ್ಐಗೆ 2 ಹೊಸ ಸಚಿವಾಲಯ ಘೋಷಣೆಯಾಗಿದ್ದು ಖುಷಿ ವಿಚಾರ ಶೀಘ್ರ ಜನರ ಸಮಸ್ಯೆ ಬಗೆಹರಿದರೆ ಸಾಕು ಅದೇ ದೊಡ್ಡ ಸಾಧನೆ. ಮತ್ತೆ ಇದೇ ವಿಷಯ ಇಟ್ಟುಕೊಂಡು ಆಗಾಗ ಪ್ರಧಾನಮಂತ್ರಿಗಳು ಕಾಂಗ್ರೆಸ್, ಕರ್ನಾಟಕ, ಕರ್ನಾಟಕ ಸರ್ಕಾರ ಎಂಬ ಪದವನ್ನು ಎತ್ತಿ ಕಾಮಿಡಿ ಮಾಡುವುದು ಸಹಜ. ಅದನ್ನು ಯಾರೂ ಸಿರಿಯಸ್ ಆಗಿ ತಗೊಳ್ಳಲ್ಲ. ಬದಲಾಗಿ ನಗಬಹುದು ಹೊರತು ಗಂಭೀರತೆ ಕಾಣಸಿಗದು.
ವೀರೇಶ ಧೂಪದಮಠ