
ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯರ ಅವಶ್ಯಕ





ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಠರಾವುಗಳಿಗೆ ಸರ್ಕಾರ ಕಿಮ್ಮತ್ತು ನೀಡಬಾರದು ಏಕೆಂದರೆ ಅಭಿಪ್ರಾಯಗಳು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗಿಂತ ಸಾರ್ವಜನಿಕರ ಅಭಿಪ್ರಾಯ ಭಿನ್ನವಾಗಿರುತ್ತದೆ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಠರಾವುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ. ಜನಪ್ರತಿನಿಧಿ ವರ್ಸಸ್ ಸಾರ್ವಜನಿಕರ ಅಭಿಪ್ರಾಯಗಳು ಭಿನ್ನವಾಗಿರುವುದರಿಂದ ಅವುಗಳಿಗೆ ಮಾನ್ಯ ನೀಡುವುದು ತಪ್ಪಾಗುತ್ತದೆ. ಏನಿದ್ರೂ ಸಾರ್ವಜನಿಕರ ಅಭಿಪ್ರಾಯವೇ ಅಂತಿಮವಾಗಿರುತ್ತದೆ. ನಿಮ್ಮ ನಿಮ್ಮ ರಾಜಕೀಯ ತೆವಲಿಗೋಸ್ಕರ ಊರಿನ ಗತವೈಭವವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಆಡಳಿತಾತ್ಮಕ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು. ಸುಮ್ ಸುಮ್ನೆ ದಿನಕ್ಕೊಂದು ಗೊಂದಲ ಹುಟ್ಟುಹಾಕುವುದು ಸರಿಯಲ್ಲ. ಊರಿನ ಗತವೈಭವವನ್ನು ಹೆಚ್ಚಿಸಲು ತನ್ನದೇ ಆದ ಆಡಳಿತ ಸಂಸ್ಥೆ ಇದ್ದರೆ ಚಂದ ಅದು ಸಾರ್ವಜನಿಕರ ಇಚ್ಛೆ. ಹಾಗಾಗಿ ಊರಿನ ಗತವೈಭವವನ್ನು ಹೆಚ್ಚಿಸಲು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಅಗತ್ಯ. ಅನುದಾನ ಬೇಕಿದ್ರೆ ಸರ್ಕಾರಕ್ಕೆ ತಿವಿದು ಪಡೆದುಕೊಳ್ಳಿ ಅದು ಒಳ್ಳೆಯದು.
ವೀರೇಶ ಧೂಪದಮಠ
ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಅಥವಾ ದರ ನಿಗದಿಪಡಿಸಲು ಎಪಿಎಂಸಿ ಮಾರುಕಟ್ಟೆ ಇದೆ. ಆದರೆ ಗದಗ ಎಪಿಎಂಸಿ ಮಾರುಕಟ್ಟೆ ಮಾತ್ರ ಕೃಷಿ ಉತ್ಪನ್ನಗಳ ದರ ಹೊರರಾಜ್ಯದ ಖರೀದಿದಾರರು ಇಲ್ಲದೇ, ಹಳೆ ದಲ್ಲಾಳಿಗಳು 10 ರಲ್ಲಿ 9 ಇಳಿಸಿ, 1 ಏರಿಸಿ ಕೈ ತೊಳೆದು ಬಿಡ್ತಿದ್ದಾರೋ?. ಸರ್ಕಾರ ಬೆಂಬಲ ಬೆಲೆ ಘೋಷಿಸಿ ತಿಂಗಳು ಕಳೆದರೂ ಕಡಲೆ ಖರೀದಿ ಆರಂಭವಾಗಿಲ್ಲ. ಇವತ್ತು ಶುರುವಾಗುತ್ತೆ, ನಾಳೆ ಶುರುವಾಗುತ್ತೆ ಅಂತ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಇತ್ತ ಎಪಿಎಂಸಿ ಮಾರುಕಟ್ಟೆಗೆ ಹೊರರಾಜ್ಯದ ಖರೀದಿದಾರರನ್ನು ಎಪಿಎಂಸಿ ಒಳಗೆ ಬಿಡದೆ, ಹಳೆ ದಲ್ಲಾಳಿಗಳು ತಾವೇ ಕಡಿಮೆ ರೇಟ್ ಗೆ ರೈತರ ಉತ್ಪನ್ನಗಳನ್ನು ಖರೀದಿಸಿ, ಹೊರರಾಜ್ಯ ಖರೀದಿದಾರರಿಗೆ ದೊಡ್ಡ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರೆದರೆ ಎಪಿಎಂಸಿಗಳು ಮುಚ್ಚಿ ಹೋಗಬೇಕಾಗುತ್ತದೆ. ಹೊರರಾಜ್ಯದ ಖರೀದಿದಾರರಿಗೆ ಎಪಿಎಂಸಿ ಮಾರುಕಟ್ಟೆಗೆ ಪ್ರವೇಶ ನೀಡಬೇಕು. ದೊಡ್ಡ ಮೊತ್ತಕ್ಕೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದ್ದರಿಂದ ರೈತರಿಗೆ ಲಾಭವಾಗಲಿದೆ ಇಲ್ಲದ್ದಿದ್ದರೆ ಹಳೆ ದಲ್ಲಾಳಿಗೆ/ಖರೀದಿದಾರರಿಗೆ ಲಾಭವಾಗಲಿದೆ. ಎರಡು ವರ್ಷದ ಹಿಂದೆ ಹೊರರಾಜ್ಯದ ಕೃಷಿ ಉತ್ಪನ್ನಗಳ ಖರೀದಿದಾರರು ಗದಗ ಎಪಿಎಂಸಿ ಸೇರಿದಂತೆ ಅನೇಕ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದರು. ಈಗ ಏಕೆ ಬರುತ್ತಿಲ್ಲ, ರೈತರ ಮಾಲ್ ಬಂದಾಗ ಮುದಾಮು ರೇಟ್ ಇಳುಸ್ತಾರ ಅಂತ ಗದಗ ಎಪಿಎಂಸಿ ಮಾರುಕಟ್ಟೆಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನ್ಯಾಯಯುತವಾಗಿ ಬೆಲೆ ಸಿಗಬೇಕು ಎಂದರೆ ಎಂಪಿಎಂಸಿ ಮಾರುಕಟ್ಟೆ ಕೈ ಸುದ್ದು ಬಾಯಿ ಸುದ್ದು ಇರಬೇಕು ಇಲ್ಲದಿದ್ದರೆ ರೈತರಿಗೆ ಎಪಿಎಂಸಿ ಮಾರುಕಟ್ಟೆ ಬಗ್ಗೆ ಒಳ್ಳೆಯ ಅಭಿಪ್ರಾಯ ಕಣ್ಮಾರೆಯಾಗಿ, ಎಪಿಎಂಸಿಯಿಂದ 50 ಕಿ.ಮೀ ಸುತ್ತಾಳತೆಯ ರೈತರು ಬೇರೆ ಎಪಿಎಂಸಿ ಮಾರುಕಟ್ಟೆಗೆ ಅಥವಾ ಉತ್ತಮ ಬೆಲೆ ಇರುವ ಕಡೆ ಮುಖಮಾಡಿ ಹೋಗುವುದು ಖಚಿತ. ಸರ್ಕಾರ ಅಂದ್ರೆ, ರೈತರ ಗೋಳು ಕೇಳುವವರಿಲ್ಲ ಅಷ್ಟೇ ರಾಜ್ಯ ಕೇಂದ್ರ ಸರ್ಕಾರ ಎಂದರೆ.
ವೀರೇಶ ಧೂಪದಮಠ



.jpeg)
.jpeg)
.jpeg)
.jpeg)

.jpeg)