ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಶೀಘ್ರ ಮಂತ್ರಿ ಮಂಡಲ ರಚಿಸಿ - ಚಿಕ್ಕೋಡಿ ಜಿಲ್ಲೆ ರಚನೆ ಅತಿ ಅವಶ್ಯಕ?

By
?utm_source=blogger&utm_medium=post&utm_campaign=administration_necessary

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಶೀಘ್ರ ಮಂತ್ರಿ ಮಂಡಲ ರಚಿಸಿ
ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಚುರುಕು ಮುಟ್ಟಿಸಲು ಶೀಘ್ರವಾಗಿ 34 ಮಂತ್ರಿ ಸ್ಥಾನ ಪೂರ್ತಿ ಭರ್ತಿ ಮಾಡಬೇಕು. ಬಾಕಿಯಿರುವ 21 ಮಂತ್ರಿ ಸ್ಥಾನ ರಚನೆ ತಡ ಮಾಡಿದಷ್ಟು ಜನರ ಬಾಯಿಗೆ ಆಹಾರವಾಗುವ ಸಾಧ್ಯತೆ ಇರುತ್ತದೆ. ಈಗ 13 ಜನ ಸಚಿವರಾಗಿದ್ದು, ಒಬ್ಬರನ್ನು ಹೊರತುಪಡಿಸಿ, ಬಹುತೇಕರು ಹಳೆ ಸಚಿವರಿದ್ದಾರೆ. 13 ಹಳೆ ಮುಖ ಸಾಕು 21 ಹೊಸ ಮುಖ ಬೇಕು. ಹಳೆ ಸಚಿವರು ಸೇರಿದಂತೆ ಇತ್ತಿಚೆಗೆ ಯಾರ್ಯಾರು ಮಂತ್ರಿ ಸ್ಥಾನಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ‌. ಅವರ್ಯಾರಿಗೂ ಮಂತ್ರಿ ಸ್ಥಾನ ನೀಡಬಾರದು. ಬದಲಾಗಿ ನಿಗಮ ಮಂಡಳಿಗೆ ಸೀಮಿತಗೊಳಿಸಬೇಕು. ಒಂದು ಅಂತ್ರು ಸತ್ಯ ಏನಿದ್ರೂ ಹೊಸ ಮುಖ ಮಂತ್ರಿಯಾಗಬೇಕು.

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಇದೆ. ಒಂದೊಂದು ಲೋಕಸಭಾ ಕ್ಷೇತ್ರಕ್ಕೆ ಒಬ್ಬೊಬ್ಬರಂತೆ 28 ಸಚಿವರನ್ನು ನೇಮಕ ಮಾಡಿದ್ರೆ ಒಳ್ಳೆಯದು. 28 ರಲ್ಲಿ 6 ಬಾಕಿ ಉಳಿಯಲಿದೆ. ಬಾಕಿಯಿರುವ ಎರಡು ವರ್ಷ ಆಡಳಿತ ಅಧಿಕಾರಾವಧಿಯಲ್ಲಿ ಎರಡು ಬಾರಿ ಮಂತ್ರಿ ಮಂಡಲ ಬದಲಾದರೆ ಉತ್ತಮ. ಕಡಿಮೆ ಸಮಯದಲ್ಲಿ ಜನರ ವಿಶ್ವಾಸ ಗಳಿಸುವ ಸದಾವಕಾಶವಿದೆ.

ಚಿಕ್ಕೋಡಿ ಜಿಲ್ಲೆ ರಚನೆ ಅತಿ ಅವಶ್ಯಕ?
ಸ್ವಲ್ಪ ದಿನಗಳ ಹಿಂದೆಯಷ್ಟೇ ಬೆಳಗಾವಿ ನಗರಕ್ಕೆ ಪ್ರಯಾಣ ಬೆಳೆಸಿದೆ. ಹುಬ್ಬಳ್ಳಿ-ಬೆಳಗಾವಿ ನಾನ್ ಸ್ಟಾಪ್ ಬಸ್ ಹತ್ತಿ ಬೆಳಗಾವಿಗೆ ಬಂದು, ಒಂದು ದಿನ ವಾಸ್ತವ್ಯ ಹೂಡಿ ಅಲ್ಲಿ ಗಮನಿಸಿದ್ದು ಏನೆಂದರೆ ಇಲ್ಲಿನ ಜನ ಹೇಗಿದ್ದರೆ ಅಂತ. ಅಲ್ಲಿ ಕಂಡ ಬಂದಿದ್ದು ದೃಶ್ಯ, ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಗಡಿ ಸಮಸ್ಯೆ ಎಂಬ ಅಲೋಚನೆ ಅಷ್ಟೊಂದು ಕಂಡು ಬರಲಿಲ್ಲ. ನನಗೆ ಅನಿಸಿದ್ದು ಹೊರಗಿನ ಯಾವುದು ಒಂದು ಕೆಲಸಕ್ಕೆ ಬಾರದು ಟೀಮ್ ಬಂದು ಕಿರಿಕಿರಿ ಉಂಟು ಮಾಡುತ್ತಾರೆ. ಅದು ಬಿಟ್ಟರೆ ಬೇದ ಭಾವ ಇಲ್ಲವೆಂದು ಅನಿಸಿತು. ಇನ್ನು ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ ಹೊಸ ತಾಲ್ಲೂಕು ರಚನೆಯಾಗಿರುವುದರಿಂದ ಅಲ್ಲಿನ ಜನ ಖುಷಿಯಾಗಿದ್ದಾರೆ.

ಹೀಗೆ ಚಿಕ್ಕೋಡಿ ಜಿಲ್ಲಾ ಹೋರಾಟಗಾರರಿಗೆ ಮುದುಕರಾದ್ದೀವಿ ಹೊರತಾಗಿ ಚಿಕ್ಕೋಡಿ ಜಿಲ್ಲೆ ರಚನೆಯಾಗಲಿಲ್ಲ ಎಂಬ ಕೊರಗು ಇದೆ. ಅದೆಷ್ಟು ಬೇಗ ಶೈಕ್ಷಣಿಕ ಜಿಲ್ಲೆಯಾಗಿರುವ ಚಿಕ್ಕೋಡಿಯನ್ನು ರಾಜ್ಯ ಸರ್ಕಾರ ನೂತನ ಜಿಲ್ಲಾ ರಚನೆ ಮಾಡಬೇಕು. ಬಹುದಿನದ ಕನಸು ನನಸಾಗಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಸದ್ಯದ ಮಟ್ಟಿಗೆ ಒಂದೇ ಜಿಲ್ಲೆ ಸಾಕು. ಅದು ನೂತನ ಚಿಕ್ಕೋಡಿ ಜಿಲ್ಲೆ ಬೇಕು.

ವೀರೇಶ ಧೂಪದಮಠ

?utm_source=blogger&utm_medium=post&utm_campaign=chikkodi_necessary

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ