9 Jun 2025

ಕೆಟ್ಟ ಘಳಿಗೆ ಇದೊಂದು ಸಲ ಕ್ಷಮಿಸಿಬಿಡಿ

By

 ಕೆಟ್ಟ ಘಳಿಗೆ ಇದೊಂದು ಸಲ ಕ್ಷಮಿಸಿಬಿಡಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆ ಮೀರಿ, ಕ್ರೀಡಾಂಗಣದ ಸಾಮರ್ಥ್ಯ ಮೀರಿ ಆರ್.ಸಿ.ಬಿ ಅಭಿಮಾನಿಗಳು ಧಾವಿಸಿದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕ್ರೀಡಾಂಗಣ ಭರ್ತಿಯಾಗಿದೆ. ಮನೆಗೆ ಹೋಗಿ ಎಂದರು. ಯಾರು ಕೇಳೋರು, ಯಾರು ಕ್ಯಾರೇ ಎನ್ನದ ಸನ್ನಿವೇಶ ಸೃಷ್ಟಿಯಾಗಿತು. ಒಟ್ಟಾರೆ ಬೆಂಗಳೂರಿನಲ್ಲಿ ಅಲ್ಲಿಲ್ಲಿ ನಿಂತ ಅಭಿಮಾನಿಗಳು, ಕಾರ್ಯಕ್ರಮ ಮಧ್ಯದಲ್ಲಿ ಮನೆಗೆ ಹೋದ ಅಭಿಮಾನಿಗಳು ಸೇರಿದಂತೆ ಅಂದಾಜು ಸುಮಾರು ೨ ಕೋಟಿಗೂ ಅಧಿಕ ಆರ್.ಸಿ.ಬಿ ಅಭಿಮಾನಿಗಳು ಬೆಂಗಳೂರಿನಲ್ಲಿ ಇರಬಹುದು ಎಂಬ ನಂಬಿಕೆ. ಟಿವಿ ನ್ಯೂಸ್ ವಿಡಿಯೋಗಳಲ್ಲಿ ಅಭಿಮಾನಿಗಳ ಸಂಖ್ಯೆ ಸ್ಪಷ್ಟವಾಗಿ ಕಾಣದಿದ್ದರೂ, ಅಂದಾಜು ಅಭಿಮಾನಿಗಳ ಸಂಖ್ಯೆ ೨ ಕೋಟಿ ಇರಬಹುದು. ಆರ್.ಸಿ.ಬಿಗೆ ೧೮ ಆವೃತ್ತಿಗೆ ಕಪ್ ಗೆದ್ದಿದ್ದರಿಂದ ಇದೊಂದು ನಾಡಹಬ್ಬದ ವಾತಾವರಣ ಸೃಷ್ಟಿಸಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬಂದಿದ್ದರು. ಕ್ರೀಡಾಂಗಣದ ಸಾಮರ್ಥ್ಯ ಮೀರಿ ಜನ ಆಗಮಿಸಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಯಾರು ಬೇಕಾತಲೇ ಮಾಡಲು ಸಾಧ್ಯವೇ. ಯಾರನ್ನು ಹೊಣೆ ಮಾಡಿ ಏನು ಪ್ರಯೋಜನ. ತೆಲಂಗಾಣದಲ್ಲಿ ಆದಂತೆ ಇದು ವೈಯಕ್ತಿಕ ಹಿತಾಸಕ್ತಿಯ ಕಾಲ್ತುಳಿತ ಅಲ್ಲ. ನಾಡಹಬ್ಬದ ವಾತಾವರಣದ ಕಾಲ್ತುಳಿತ. ಏನೋ ಕೆಟ್ಟ ಘಳಿಗೆ ತಪ್ಪು ಆಗಿದೆ. ಇದೊಂದು ಸಲ ಕ್ಷಮಿಸಿಬಿಡಿ. ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಅವಶ್ಯಕ.

ರಾಜ್ಯದ ಕಾಳಜಿ ರಾಜಕಾರಣಿಗಳೇ ಬೆಳೆಸಿಕೊಳ್ಳಿ

ರಾಜಕಾರಣಿ ಹೇಗಿರಬೇಕು ರಾಜ್ಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ರಾಜ್ಯದ ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ಪ್ರಧಾನಮಂತ್ರಿ ಮಾಡಬೇಕಾದ ದೇಶದ ಕೆಲಸವನ್ನು ಇಲ್ಲಿನ ವಿರೋಧ ಪಕ್ಷಗಳು ಮಾಡುತ್ತಿವೆ. ರಾಜ್ಯದ ವಿಧಾನಸಭಾ, ವಿಧಾನ ಪರಿಷತ್ತಿನಿಂದ ಆಯ್ಕೆಯಾದವರು ರಾಜ್ಯದ ಬಗ್ಗೆ ಹೇಳಿಕೆ ನೀಡಿ. ದೇಶದ ಬಗ್ಗೆ ಅಲ್ಲ. ಆರ್.ಸಿ.ಬಿ ರಾಜ್ಯದ ತಂಡ ಎಂದಮೇಲೆ ಶುಭಾ ಹಾರೈಸಿ ಬೇಕು ಹೊರತಾಗಿ ಲೇವಡಿ ಮಾಡಬಾರದು. ದೇಶದ ಬಗ್ಗೆ ಹೇಳಿಕೆ ನೀಡಲು ಲೋಕಸಭಾ, ರಾಜ್ಯಸಭಾ ಸದಸ್ಯರು ಇರಬೇಕಾದರೆ, ರಾಜ್ಯದ ರಾಜಕಾರಣಿಗಳು ರಾಜ್ಯ ಹಿತ ಬಿಟ್ಟು ರಾಷ್ಟ್ರದ ಹಿತ ಮಾತಾಡುತ್ತಿರುವುದು ಕೇಂದ್ರದ ರಾಜಕಾರಣಿಗಳಿಗೆ ಹೊಡೆತ ಕೊಟ್ಟಂತೆ. ರಾಜ್ಯ ರಾಜಕಾರಣ ರಾಜ್ಯಕ್ಕೆ ಸೀಮಿತವಾಗಿರಲಿ

27 May 2025

ವೀರಶೈವ ಜಂಗಮರೇ ಬೇಡ ಜಂಗಮರು

By
ವೀರಶೈವ ಜಂಗಮರೇ ಬೇಡ 1935 ರ ಮಧ್ಯಂತರ ಭಾರತ ಸರ್ಕಾರ ಕಾಲಾವಧಿಯಲ್ಲಿ ಅಥವಾ ಬ್ರಿಟಿಷ್ ಇಂಡಿಯಾ ಕಾಲಾವಧಿಯಲ್ಲಿ ನಿಗದಿಪಡಿಸಿದ ವೃತ್ತಿ ಆಧಾರಿತ 101 ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಒಂದು. ಬೇರೆ-ಬೇರೆ ರಾಜ್ಯಗಳಲ್ಲಿ ಇಲ್ಲದ ಬೇಡ ಜಂಗಮರ ಪ್ರಮಾಣ ಪತ್ರ ನೀಡುವ ಸಮಸ್ಯೆ ಇಲ್ಲಿ ಯಾಕೆ ಇದೆ ಅಂದರೆ 224 ವಿಧಾನ ಕ್ಷೇತ್ರದಲ್ಲಿ 36 ಎಸ್ಸಿ ಮೀಸಲು ಕ್ಷೇತ್ರವಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ 5 ಎಸ್ಸಿ ಮೀಸಲು ಕ್ಷೇತ್ರವಿದೆ. ಒಂದು ವೇಳೆ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಿದರೆ. ಬೇಡ ಜಂಗಮರು ಚುನಾವಣೆಗೆ ಸ್ಪರ್ಧಿಸಿ ವೀರಶೈವ ಲಿಂಗಾಯತ ಪಂಥದ ಜಾತಿಗಳ ಕೃಪೆಯಿಂದ ಸರಳವಾಗಿ ಗೆಲ್ಲಬಹುದು ಇದರಿಂದ ರಾಜಕಾರಣಿಗಳಿಗೆ ರಾಜಕೀಯ ಹಿನ್ನೆಡೆ ಆಗುವುದಲ್ಲದೇ, ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿ ಇದೆ ಎಂಬ ಸಂಶಯ ಕಾಡುತ್ತಿದೆ. ಆದರೆ ಈ ತರ ಸಂಶಯ ತಪ್ಪಾಗಿದೆ, ಚುನಾವಣೆಯಲ್ಲಿ ಗೆಲ್ಲಲು ಹಣ ಬಲಬೇಕು, ಜನ ಬಲ ಬೇಕು, ಅಲ್ಲದೇ ಅದೃಷ್ಟ ಸೇರಿದಂತೆ ಪಕ್ಷದ ಚಿಹ್ನೆಯ ವರ್ಚಸ್ಸು ಬೇಕು ಅಂದಾಗ ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯ. ಇದರಿಂದಾಗಿ ಬೇಡ ಜಂಗಮರಿಗೆ ಪ್ರಮಾಣ ನೀಡಿದರೇ ರಾಜಕೀಯ ನೆಲೆ ಕಳೆದುಕೊಳ್ಳುವ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮೇಲ್ನೋಟ ಕಂಡು ಬರುತ್ತಿದೆ. ಆದರೆ ಇದು ಸುಳ್ಳಾಗಿದ್ದು, ಹಣ, ಜನ ಬಲ ಅದೃಷ್ಟ ಪಕ್ಷದ ಚಿಹ್ನೆಯ ವರ್ಚಸ್ಸಿನ ಮೇಲೆ ಚುನಾವಣೆ ಗೆಲುವು ಸಾಧ್ಯವಿದೆ ಮತ್ತು ವೀರಶೈವ ಲಿಂಗಾಯತ ಎನ್ನುವುದು ಪಂಥವಾಗಿದ್ದು, ಜಾತಿ ಅಲ್ಲ. ವೀರಶೈವ ಜಂಗಮರೇ ಬೇಡ ಜಂಗಮರಾಗಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಂಗಮರ ನೆಲೆ ಇದೆ. ಅಲ್ಲದೇ ರಾಜ್ಯದ ವಿವಿಧ ಮಠಾಧೀಶರರು ಜಂಗಮರೇ ಆಗಿದ್ದಾರೆ.

ಜಂಗಮರ ವೃತಿ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು. ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು, ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ. ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತಿ" ಪತ್ರಿ ಹಂಚುವವರು "ಪತ್ರಿ ಮಠದವರು" ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವುದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು. ಬೇಡ ಜಂಗಮರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದು ಬರಲು ರಾಜಕಾರಣಿಗಳು ಸಹಕರಿಸಬೇಕಿದೆ.

8 May 2025

ಇಂದಿನ ಹೊಸ ಮುಖಗಳು ಇತಿಹಾಸ ಪುಟ ಸೇರಿರುವ ಘಟನೆಗೆ ಕಾರಣರಲ್ಲ.

By
ಜಗತ್ತಿನಲ್ಲಿ ನಡೆದುಹೋದ ಘಟನೆಗಳು ಇತಿಹಾಸ ಪುಟ ಸೇರಿದರು ಕೂಡಾ ಇನ್ನು ನಮ್ಮ ದೇಶದಲ್ಲಿ ಕೆಲವರ ಸಿಟ್ಟು, ಆಕ್ರೋಶ ಹಾಗೆಯೇ ಇದೆ. ಆ ಸಿಟ್ಟು ಧರ್ಮ ಆಧಾರದ ದೇಶ ವಿಭಜನೆ ಮಾಡಿದ್ದು ಇರಬಹುದು. ಸ್ವಾತಂತ್ರ‍್ಯ ಪೂರ್ವದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಹಿಂಸೆ, ಶೋಷಣೆಯೊಳಗಾಗಿದ್ದು ಇರಬಹುದು. ವ್ಯಾಪಾರ ವಹಿವಾಟಿನಲ್ಲಿ ಪೈಪೋಟಿ ಸಲುವಾಗಿ ಇರಬಹುದು. ಲವ್ ಜಿಹಾದ್, ಅಶಾಂತಿಯ ವಾತಾವರಣ, ಕೋಮು ಗಲಭೆ, ಹಿಂಸಾಚಾರ ಸೇರಿದಂತೆ ಸಿಟ್ಟು, ಆಕ್ರೋಶಗಳಿಗೆ ಅನೇಕ ಅನೇಕ ಕಾರಣಗಳಿರಬಹುದು. ಆ ಎಲ್ಲ ಆಕ್ರೋಶ ವ್ಯಕ್ತಪಡಿಸಲು ಈ ಹಿಂದೆ ಶೋಷಣೆ ಮಾಡಿದವರು, ಶೋಷಣೆಗೆ ಒಳಗಾದ ಮೂರು-ನಾಲ್ಕನೆಯ ತಲೆಮಾರಿನ ಜನ ಈಗಿಲ್ಲ, ಸತ್ತು ಹೋಗಿದ್ದಾರೆ.


ಸತ್ತು ಹೋದವರು ನಷ್ಟ ತುಂಬಿ ಕೊಡಲು ಸಾಧ್ಯವಿಲ್ಲ. ಈಗ ಸಿಟ್ಟು ವ್ಯಕ್ತಪಡಿಸಿದರು ಪ್ರಯೋಜನವಿಲ್ಲ. ಮನುಷ್ಯನ ಸಿಟ್ಟು ಅನ್ಯಾಯಕ್ಕೆ ಒಳಗಾದ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಇರುತ್ತದೆ. ಆ ಸಿಟ್ಟು ಪೂರ್ತಿ ಜಾತಿ, ಧರ್ಮ ಮೇಲೆ ಅಥವಾ ಜನ ಮೆಚ್ಚಿಗೆ ಪಡೆದ ನಿರ್ಜೀವ ವಸ್ತುವಿನ ಮೇಲೆ ರವಾನೆಯಾಗುತ್ತಿರುವುದು ತಪ್ಪು. ದ್ವೇಷ ಮಾಡಲು ಹಳೆ ತಲೆಮಾರಿನ ಜನ ಇಲ್ಲ. ಹಳೆ ತಲೆಮಾರಿನ ಬಹುತೇಕ ಜನರು ಸ್ವಾತಂತ್ರ‍್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನಡೆಯಿಂದಾಗಿ ಶೋಷಣೆಗೂ ಒಳಗಾಗಿರಬೇಕು. ಈಗಿರುವ ಜನ ಹೊಸ ಮುಖಗಳು ಇತಿಹಾಸ ಪುಟ ಓದಿ ತಿಳಿಯಬಹುದು ಹೊರತಾಗಿ ಅವುಗಳಿಗೆ ಕಾರಣರಲ್ಲ.


ಹಾಗಾಗಿ ಹಿಂದೆಲ್ಲ ನಡೆದ ಘಟನೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕಾರಣಗಳಿರಬಹುದು. ಮುಗಿದ ಹೋದ ಅಧ್ಯಾಯ ಭೂತಕಾಲವನ್ನು ಪದೇ ಪದೇ ಯೋಚಿಸುವ ಬದಲು ಭವಿಷ್ಯ, ವರ್ತಮಾನ ಕಾಲದ ಬಗ್ಗೆ ಚಿತ್ತ ಹರಿಸಬೇಕು. ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ದೇಶ, ರಾಜ್ಯಕ್ಕೆ ಶಾಂತಿ ವಾತಾವರಣ ನಿರ್ಮಾಣ ಮಾಡುವತ್ತ ಇಂದಿನ ಜನ ಸಮೂಹ ದಿಟ್ಟ ಹೆಜ್ಜೆ ಇಡುವತ್ತ ದಾಪುಗಾಲು ಇಡುವಂತಾಗಲಿ ಎನ್ನುವುದು ಆಶಯ.

29 Mar 2025

ಕೂಡಿ ಬಾಳಿದರೆ ಜೀವನ | ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?

By
Who are minorities? Except Hinduism, all other religions are considered minorities. Generally speaking, if there is one person of another religion in 10 people, then they are minorities. Which caste and religion has a small population and community, it can be considered a minority. 



Which caste and religion has a large population and community, it can be considered a majority. Here, caste and religion can separate a person. But when it comes to profession, all castes and religions must work together.


ಅಲ್ಪಸಂಖ್ಯಾತರು ಅಂದ್ರೆ ಯಾರು? ಹಿಂದೂ ಧರ್ಮ ಹೊರತುಪಡಿಸಿ, ಇನ್ನುಳಿದ ಎಲ್ಲ ಧರ್ಮಗಳು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೇ 10 ಜನರಲ್ಲಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಕಂಡುಬಂದರೆ ಅಲ್ಪಸಂಖ್ಯಾತರು. ಯಾವ ಜಾತಿ, ಧರ್ಮಗಳು ಕಡಿಮೆ ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು. ಯಾವ ಜಾತಿ, ಧರ್ಮ ಹೆಚ್ಚು ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಬಹುಸಂಖ್ಯಾತರು ಎಂದು ಪರಿಗಣಿಸಬಹುದು. ಇಲ್ಲಿ ಜಾತಿ, ಧರ್ಮಗಳು ವ್ಯಕ್ತಿಯನ್ನು ಬೇರ್ಪಡಿಸಬಹುದು. ಆದರೆ ವೃತ್ತಿ ಅಂತ ಬಂದಾಗ ಎಲ್ಲ ಜಾತಿ, ಧರ್ಮಗಳು ಒಗ್ಗೂಡಿ ಕೆಲಸ ಮಾಡಲೇಬೇಕು.


ಉದಾ: ಪತ್ರಕರ್ತರು, ವಕೀಲರು, ಪೋಲಿಸರು, ವೈದ್ಯರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ. ಒಂದು ವೇಳೆ ಒಟ್ಟಿಗೆ ಕೆಲಸ ಮಾಡುವ ಸಂದರ್ಭ ಬಂದರೆ ಹೇಗೆ ಮಾಡ್ತೀರಿ?, ಆಗ ಕೂಡಿ ಮಾಡಲೇಬೇಕು. ಅದು ಬೇಡ ಆರೋಗ್ಯ ತುರ್ತು ಸಂದರ್ಭ ಬಂದಾಗ ಮನುಷ್ಯನ ಅಂಗಾಂಗಗಳು ಸೇರಿದಂತೆ ರಕ್ತ ಸಹ ಅವಶ್ಯಕತೆ ಬಿಳುತ್ತದೆ ಆಗ ಸಹ ಬೇಕೆ ಬೇಕು. ಯಾರು ಕೊನೆಯವರೆಗೆ ತಂದೆ-ತಾಯಿ ಒಡಹುಟ್ಟಿದವರ ಜೊತೆ ಬೆರೆತು ಜೀವನ ಸಾಗಿಸುತ್ತಾರೆ ಅವರೇ ನಿಜವಾದ ಒಗ್ಗಟ್ಟಿನ ವ್ಯಕ್ತಿ. ತಮ್ಮ ಮನೆಯಲ್ಲಿ ಎಲ್ಲರನ್ನೂ ಬೇರ್ಪಡಿಸಿ, ಸಮಾಜದ ಮುಂದೆ ಜಾತಿ, ಧರ್ಮ ಒಗ್ಗೂಡಿಸುವ ಕರೆ ನೀಡುವುದು ಹಾಸ್ಯಾಸ್ಪದ.

ಇಲ್ಲಿ ಜನರ ಬದುಕು ಇರುವುದೇ ಹೊಟ್ಟೆಪಾಡಿಗಾಗಿ, ವೃತ್ತಿ ಜೀವನ ಸಾಗಿಸುವುದಕ್ಕಾಗಿ ಎಲ್ಲೋ ನಡೆದ ಘಟನೆ ಎಲ್ಲೋ ನಡೆದಂತಹ ಘಟನೆಗೆ ಯಾರು ಹೊಣೆಗಾರರಲ್ಲ. ಆ ಘಟನೆಗೆ ಕಾರಣರಾದವರೇ, ಹೊಣೆಗಾರರು. ಯಾರು, ಯಾರಿಗೂ ಸಂಬಂಧವೇ ಇಲ್ಲ. ಯಾರು ತಮ್ಮ ವೃತ್ತಿ, ಕೆಲಸ ಬಿಟ್ಟು ಬರುವುದಿಲ್ಲ ಭಾಗಿಯಾಗಲ್ಲ ಇದೇ ಜೀವನದ ಸತ್ಯ ದರ್ಶನ.


ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?


ಪಂಚ ಗ್ಯಾರಂಟಿ ನೀಡಿ, ಬಡ, ಮಧ್ಯಮ ವರ್ಗದ ಜನರಿಗೆ ಸರ್ಕಾರ ಆಸರೆವಾಯಿತು, ಈ ಹಿಂದೆ ಬಂದಂತಹ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡಿರಲಿಲ್ಲ. ಅಂದಮೇಲೆ ಎಲ್ಲ ಗ್ರಾಮಗಳ ರಸ್ತೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದಬೇಕಿತ್ತು. ಆದರೂ ಏಕೆ ಅಭಿವೃದ್ಧಿ ಆಗಲಿಲ್ಲ. ಈ ಹಿಂದಿನ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡದೇ ಅಭಿವೃದ್ಧಿ ಮಾಡಿಲ್ಲ. ಈಗಿನ ಸರ್ಕಾರ ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುವುದು ಅಂದ್ರೇ ಸಾಮಾನ್ಯ ಕೆಲಸವಲ್ಲ. ಸಂಪನ್ಮೂಲ ಕ್ರೋಢೀಕರಿಸುವುದು ಸವಾಲಿನ ಕೆಲಸವಾಗಲಿದೆ. ಹಿಂದಿನ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿ, ಸರ್ಕಾರ ಕೆಡವಿ, ಹೊಸ ಸರ್ಕಾರ ರಚನೆ ಮಾಡುವ ಹುಮ್ಮಸ್ಸು ಬರುತ್ತದೆ.


ಅಭಿವೃದ್ಧಿ ವಿಷಯದಲ್ಲಿ ನಿರಾಸಕ್ತಿ ಬರುತ್ತದೆ. ಇಂತಹ ವಿಚಾರ ಬಿಟ್ಟರೇ, ಅಭಿವೃದ್ಧಿ ಆಗುತ್ತಿಲ್ಲ ಅನ್ನುವುದಕ್ಕೆ ಯಾವ ರಾಜಕಾರಣಿಗಳಿಗೆ ನೈತಿಕತೆ ಇದೆ. ಯಾವುದೇ ಗ್ಯಾರಂಟಿ ಇಲ್ಲದೇ ಸರ್ಕಾರ ನಡೆಸಿದರು, ಸಾಕಷ್ಟು ಗ್ರಾಮಗಳು ಅಭಿವೃದ್ಧಿ ಆಗಿಲ್ಲ. ಈಗ ಗ್ಯಾರಂಟಿ ಮುಂದೆ ಬಜೆಟ್ ಬಗ್ಗೆ ವರ್ಣನೆ ಪದಗಳು ಇಲ್ಲ. ಗ್ಯಾರಂಟಿಯಿಂದ ಜನರ ಜೀವನ ಅಲ್ಪ ಸ್ವಲ್ಪ ಸುಧಾರಣೆಯಾಗಿದೆ, ಗ್ಯಾರಂಟಿ ಯೋಜನೆ ಮುಂದೆ ಬಜೆಟ್ ಶೂನ್ಯ. ಗ್ಯಾರಂಟಿಗಳು ಜನರ ಕಷ್ಟಕ್ಕೆ ಆಸರೆಯಾಗಿದೆ. ಅರ್ಹರಿಗೆ ಗ್ಯಾರಂಟಿ ತಲುಪಿದರೇ ಇನ್ನು ಚಂದ. ಗ್ಯಾರಂಟಿ ನೆಪ ಹೇಳುವ ಮೂಲಕ ಅಭಿವೃದ್ಧಿ ಆಗಿಲ್ಲ ಅನ್ನುವ ರಾಜಕಾರಣಿ ನೈತಿಕತೆ ಮೌಲ್ಯ ಕುಸಿದಿದೆ.

23 Mar 2025

ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸಿ, ಬುದ್ದಿ ಬರಲಿ

By
Image is not loaded The state government should do the work of running buses only to the last village of the state bordering Maharashtra. It is imperative to teach a lesson to the thugs who are creating trouble by keeping land, water and language issues in mind. There is no compromise on the issue of land, water and language in Karnataka. Let the buses run only to the last village of the state bordering Maharashtra and walk from there. If there are additional buses, arrangements should be made to run buses towards Telangana, Andhra Pradesh, Tamil Nadu, Kerala and Goa. The transport department should not bother about the profit and loss issue, they are the ones who want buses,

ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ನೆಲ, ಜಲ, ಭಾಷೆ ವಿಚಾರ ಇಟ್ಟುಕೊಂಡು ಜಗಳ ಜೊತೆ ರಗಳೆ ತೆಗೆಯುವ ಪುಂಡರಿಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ. ಕರ್ನಾಟಕ ರಾಜ್ಯ ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರು ರಾಜಿ ಇಲ್ಲ. ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿವರೆಗೆ ಮಾತ್ರ ಬಸ್ ಓಡಿಸಿ, ಅಲ್ಲಿಂದ ನಡೆದುಕೊಂಡು ಹೋಗಲಿ. ಹೆಚ್ಚುವರಿ ಬಸ್ ಇದ್ರೇ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯದ ಕಡೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಲಾಭ-ನಷ್ಟ ವಿಚಾರದಲ್ಲಿ ಸಾರಿಗೆ ಇಲಾಖೆ ತಲೆಕೆಡಿಸಿಕೊಳ್ಳಬಾರದು ಅವರಾಗಿವೆ ಬಸ್ ಬೇಕು,

ಬಸ್ ಬಿಡಿ ಅನ್ನುವರಿಗೂ ಮಹಾರಾಷ್ಟ್ರಕ್ಕೆ ಬಸ್ ಬಿಡಬಾರದು ಒಂದುವೇಳೆ ಬಸ್ ಬೇಕು ಅಂತ ಹೋರಾಟ ಮಾಡಲಿ ಆಗ ಬಸ್ ಬಿಡುವ ವಿಚಾರ ನೋಡೋಣ ಅನ್ನುವ ಮೂಲಕ ತಕ್ಕ ಪಾಠ ಕಲಿಸಬೇಕು. ಯಾವಾಗಲೂ ಬಸ್ ವಿಚಾರ ಇಟ್ಟಿಕೊಂಡೆ ರಗಳೆ ಎಬ್ಬಿಸುವ ಕೆಲಸವಾಗುತ್ತಿದೆ ಅದಕ್ಕೆ ಬಸ್ ಸಂಚಾರ ನಿಲ್ಲಿಸಿದ್ರೇ ಯಾವುದರ ಮೇಲೆ ರಗಳೆ ತೆಗೆಯಲು ಸಾಧ್ಯ. ಬಡಪಾಯಿ ಕಂಡಕ್ಟರ್ ಮೇಲೆ ಸುಳ್ಳು ಕೇಸ್ ಮತ್ತು ಹಲ್ಲೆ ಮಾಡಿದ್ದು ಖಂಡನೀಯ. ಮಹಾರಾಷ್ಟ್ರದ ಗಡಿ ಭಾಗದ ಅಭಿವೃದ್ಧಿ ನೋಡಿದ್ರೇ. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ವಿಷಯ ಇಟ್ಟುಕೊಂಡು ಅಲ್ಲಿನ ಗಡಿ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಇಂದಿಗೂ ಹಪಿಸುತ್ತಿವೆ. ಅಷ್ಟೇ ಯಾಕೆ ಕರ್ನಾಟಕ ಬಸ್ ಗಳು ಸೂಪರ್ ಸ್ಪೆಷಾಲಿಟಿ ಹೊಂದಿದೆ.

ಅಲ್ಲಿನ ಬಸ್ ಗಳನ್ನು ನೋಡಿದ್ರೆ ವಾಂತಿ, ವಾಕರಿಕೆ ಬರುತ್ತವು. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಒಮ್ಮೆ ಹೊರಡಿಸಿದ ಅಂತಿಮ ಆದೇಶ ಬದಲಾಗಲೂ ಸಾಧ್ಯವೇ ಇಲ್ಲ. ಮರಾಠಿ ಪುಂಡರು ಪದೇಪದೇ ಗಡಿ, ಭಾಷೆ ವಿವಾದ ಕೆಣಕುವ ಬದಲು ಯಾವುದಾದರು ಕೆಲಸ ಬಗಿಸು ಇದ್ರೇ ನೋಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡವೇ ಆಡಳಿತ ಭಾಷೆ. ಕನ್ನಡ ನೆಲದಲ್ಲಿ ಕನ್ನಡವೇ ಮಾತನಾಡಬೇಕು. ಭಾಷೆ ಗೊತ್ತಿಲ್ಲ ಅಂದ್ರೆ ಸೊನ್ನೆ ಮಾಡಿ, ಚಿತ್ರ ಬರೆದು ತೋರಿಸಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಕನ್ನಡಿಗರು ಮಾಡುತ್ತಾರೆ. ಒತ್ತಾಯಪೂರ್ವಕವಾಗಿ ಇದೆ, ಇಂಥದೇ ಭಾಷೆಯಲ್ಲಿ ಮಾತಾಡಿ ಎಂದು ತಾಕಿತ್ತು ಮಾಡುವ ಅಧಿಕಾರ ಯಾರಿಗೂ ಇಲ್ಲ.

ರಾಜ್ಯ ಸರ್ಕಾರ ಮಾತ್ರ ಅವರಾಗಿವೆ ಬಸ್ ಬೇಕು ಅಂತ ಹೋರಾಟ ಮಾಡುವವರಿಗೂ ಬಸ್ ಬಿಡಬಾರದು ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಅಂತರರಾಜ್ಯ ಸಂಪರ್ಕ ಕಡಿತಗೊಳಿಸಿದಾಗ ಮಾತ್ರ ಕೆಲ ಮರಾಠಿ ಪುಂಡರು ಇಂತಹ ಹೀನಕೃತ್ಯ ನಿಲ್ಲಿಸಲು, ಬುದ್ದಿ ಬರಲು ಸಾಧ್ಯ.

ಎರಡು ನೂತನ ಜಿಲ್ಲಾ ರಚನೆ ಅಗತ್ಯ
ಅಖಂಡ ಧಾರವಾಡ ಜಿಲ್ಲೆ (ಈಗಿನ ಹಾವೇರಿ, ಗದಗ ಜಿಲ್ಲೆ ಒಳಗೊಂಡಂತೆ) ಒಟ್ಟು 23 ತಾಲ್ಲೂಕು, 17 ವಿಧಾನಸಭಾ ಕ್ಷೇತ್ರ ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 1997 ರಲ್ಲಿ ಅಂದಿನ ಸರ್ಕಾರ ಎರಡು ನೂತನ ಗದಗ, ಹಾವೇರಿ ಜಿಲ್ಲೆ ರಚನೆ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿತು. ಇದೇ ರೀತಿ ಬೆಳಗಾವಿ ಜಿಲ್ಲೆ 15 ತಾಲ್ಲೂಕು, 18 ವಿಧಾನಸಭಾ ಕ್ಷೇತ್ರಗಳು, 2 ಲೋಕಸಭಾ ಕ್ಷೇತ್ರಗಳು ಇವೆ ಎರಡು ನೂತನ ಜಿಲ್ಲಾ ರಚನೆ ಮಾಡಲು ಸಾಧ್ಯವಿದೆ. ನಾಲ್ಕು-ನಾಲ್ಕು ಐದು-ಐದು ಜಿಲ್ಲಾ ರಚನೆ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಕೇಂದ್ರದಿಂದ 80-100 ಕಿ.ಮೀ ಅಂತರದಲ್ಲಿರುವ ಯಾವುದಾದರೂ ಎರಡು ನಗರ ಜಿಲ್ಲಾ ಕೇಂದ್ರ ಮಾಡಬಹುದು. ಬೆಳಗಾವಿ ಮಂದಿ ಒಗ್ಗಟ್ಟಿನಿಂದ ಕುಳಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸದೇ.

ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಸಭೆ ಮಾಡಿ ಒಂದು ಸ್ಪಷ್ಟ ನಿರ್ಣಯಕ್ಕೆ ಬಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೇ, ಹೊಸ ಎರಡು ನೂತನ ಜಿಲ್ಲಾ ರಚನೆ ಆಗಲಿದೆ ಇದರಿಂದ 150-200 ಕಿ.ಮೀ ದೂರದಲ್ಲಿರುವ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಅಲ್ಲದೇ ದೊಡ್ಡ ಜಿಲ್ಲೆ ನಿರ್ವಹಣೆ ಮಾಡುವುದು ಅಧಿಕಾರಿಗಳಿಗೂ ತಲೆನೋವಿನ ಕೆಲಸ ಹಾಗಾಗಿ ಎರಡು ಜಿಲ್ಲಾ ರಚನೆ ಮಾಡಿದ್ರೇ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ.

23 Feb 2025

ಕರ್ನಾಟಕ ರಾಜ್ಯದ ಜಿಲ್ಲಾ ತಾಲ್ಲೂಕು ಕೇಂದ್ರಗಳು ಯಾವುವು?

By
Bagalkot, Bagalkot, Jamkhandi, Mudhol, Badami, Bilagi, Hunagund, Rabakavi Banahatti, Ilakalla, Guledagudda, Bangalore City, Bangalore, Yelahanka, Anekal, Kengeri, Krishnarajapura, Bangalore Rural, Doddaballapur, Devanahalli, Hoskote, Nelamangala, Dabaspet, Dodda Belavangala, Ramanagara, Ramanagara, Channapatna, Kanakapura, Magadi, Kunigal, Harohalli, Belgaum, Belgaum, Athani, Bailhongal, Chikkodi, Gokak, Mudalagi, Hukkeri, Khanapur, Rayabhaga, Kagawada, Ramadurga, Savadatti, Nippani, Kittur, Yaragati, Harugeri, Sadalga,

ಬಾಗಲಕೋಟೆ, ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ, ಬೀಳಗಿ, ಹುನಗುಂದ, ರಬಕವಿ ಬನಹಟ್ಟಿ, ಇಳಕಲ್ಲ, ಗುಳೇದಗುಡ್ಡ, ಬೆಂಗಳೂರು ನಗರ, ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜ ಪುರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದಾಬಸ್ ಪೇಟೆ, ದೊಡ್ಡ ಬೆಳವಂಗಲ, ರಾಮನಗರ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಹಾರೋಹಳ್ಳಿ, ಬೆಳಗಾವಿ, ಬೆಳಗಾವಿ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಮೂಡಲಗಿ, ಹುಕ್ಕೇರಿ, ಖಾನಾಪುರ, ರಾಯಭಾಗ, ಕಾಗವಾಡ, ರಾಮದುರ್ಗ, ಸವದತ್ತಿ, ನಿಪ್ಪಾಣಿ, ಕಿತ್ತೂರ, ಯರಗಟ್ಟಿ, ಹಾರೂಗೇರಿ, ಸದಲಗಾ,

ಬಳ್ಳಾರಿ, ಬಳ್ಳಾರಿ, ಕಂಪ್ಲಿ, ಸಂಡೂರು, ಶಿರುಗುಪ್ಪ, ಕುರುಗೋಡ, ಬೀದರ, ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮ್ನಾಬಾದ್, ಔರಾದ, ಚಿಟಗುಪ್ಪಾ, ಹುಲಸೂರ, ಕಮಲಾ ನಗರ, ವಿಜಯಪುರ, ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ, ಬಬಲೇಶ್ವರ, ತಿಕೋಟಾ, ಕೊಲ್ಹಾರ, ನಿಡಗುಂದಿ, ದೇವರ ಹಿಪ್ಪರಗಿ, ಚಡಚಣ, ಆಲಮೇಲ, ಚಾಮರಾಜ ನಗರ, ಚಾಮರಾಜ ನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹನೂರು, ಚಿಕ್ಕಮಗಳೂರು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆ, ಕಳಸ, ಅಜ್ಜಂಪುರ,

ಚಿತ್ರದುರ್ಗ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಪರಶುರಾಂಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರ, ದಕ್ಷಿಣ ಕನ್ನಡ, ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಕಡಬ, ದಾವಣಗೆರೆ, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಧಾರವಾಡ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ, ಅಣ್ಣಿಗೇರಿ, ಹುಬ್ಬಳ್ಳಿ ನಗರ, ಗದಗ, ಗದಗ-ಬೆಟಗೇರಿ, ನರಗುಂದ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ, ಕಲಬುರಗಿ, ಕಲಬುರಗಿ, ಆಳಂದ, ಸೇಡಂ, ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಜೀವರ್ಗಿ, ಕಾಳಗಿ, ಯಡ್ರಾಮಿ, ಶಹಾಬಾದ, ಕಮಲಾಪುರ,

ಯಾದಗಿರಿ, ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರ, ಹಾಸನ, ಹಾಸನ, ಅರಸಿಕೆರೆ, ಚೆನ್ನರಾಯಪಟ್ಟಣ, ಹೊಳೇನರಸೀಪುರ, ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು, ಹಾವೇರಿ, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಸವಣೂರ, ಹಿರೇಕೇರೂರು, ಶಿಗ್ಗಾಂವ, ಕೊಡಗು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ, ಕೋಲಾರ, ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಚೇಲೂರು,

ಕೊಪ್ಪಳ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬರ್ಗಾ, ಕುಕನೂರ, ಕಾರಟಗಿ, ಕನಕಗಿರಿ, ಮಂಡ್ಯ, ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೃಷ್ಣರಾಜ ಪೇಟೆ, ನಾಗಮಂಗಲ, ಪಾಂಡವಪುರ, ಮೈಸೂರು, ಮೈಸೂರು, ಹುಣಸೂರು, ಕೃಷ್ಣರಾಜನಗರ, ನಂಜನಗೂಡು, ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ, ಟಿನರಸೀಪುರ, ಸರಗೂರು, ಸಾಲಿಗ್ರಾಮ, ರಾಯಚೂರು, ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿ೦ಗಸೂಗೂರು, ಮಸ್ಕಿ, ಶಿರವಾರ, ಶಿವಮೊಗ್ಗ, ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ,

ತುಮಕೂರು, ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ, ಕೊರಟಗೆರೆ, ಪಾವಗಡ, ತುರುವೆಕೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರ, ಉಡುಪಿ, ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಉತ್ತರ ಕನ್ನಡ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ, ದಾಂಡೇಲಿ, ಹೊಸಪೇಟೆ, ಹೊಸಪೇಟೆ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ,

20 Feb 2025

ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ

By
A few days ago, there was a news. In it, there was news under the title of Vajastra against unnecessary RTI applications, restraining order against further applications and others. Whatever the news, some small work is being done by social workers and RTI activists and has improved. What is VIP? A very important person, a VIP, can disguise himself as a common person, go to any of the 45 government departments, submit an application, and if he comes back with a simple work, he can be paraded and honored,

ಕೆಲವು ದಿನಗಳ ಹಿಂದಷ್ಟೇ, ಒಂದು ಸುದ್ದಿ ಬಂದಿತ್ತು. ಅದರಲ್ಲಿ ಅನಗತ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಅರ್ಜಿಗಳ ವಿರುದ್ಧ ವಜಾಸ್ತ್ರ, ಇನ್ನುಮುಂದೆ ಅರ್ಜಿ ಹಾಕದಂತೆ ನಿರ್ಬಂಧ ಆದೇಶ ಇನ್ನಿತರ ಶೀರ್ಷಿಕೆಯಡಿ ಸುದ್ದಿಯಾಗಿತ್ತು. ಸುದ್ದಿ ಏನೇ ಇರಲಿ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರಿಂದ ಕೆಲವು ಅಲ್ಪ ಸ್ವಲ್ಪ ಕೆಲಸ ಕಾರ್ಯಗಳು ನಡೆಯುತ್ತಿವೆ ಮತ್ತು ಸುಧಾರಿಸಿವೆ. ವಿಐಪಿ ಅಂತ ಏನು ಕರೆಯಲ್ಪಡುವ ಅಂದರೆ ಬಹಳ ಮುಖ್ಯ ವ್ಯಕ್ತಿ ವಿಐಪಿ ಎಂಬ ವ್ಯಕ್ತಿ ಸಾಮಾನ್ಯ ವ್ಯಕ್ತಿ ತರ ವೇಷ ಧರಿಸಿ, 45 ಸರ್ಕಾರಿ ಇಲಾಖೆಯಲ್ಲಿ ಯಾವುದಾದರೂ ಒಂದು ಸರ್ಕಾರಿ ಇಲಾಖೆಗೆ ತೆರಳಿ, ಅರ್ಜಿ ಸಲ್ಲಿಸಿ, ತಮ್ಮ ಕೆಲಸ ಕಾರ್ಯ ಸರಳವಾಗಿ ಮಾಡಿಕೊಂಡು ಬಂದರೇ, ಅವರನ್ನು ಮೆರವಣಿಗೆ ಮಾಡಿ,

ಸನ್ಮಾನ ಮಾಡಬಹುದು ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲ್ಲಿಸಾಗಿ ದಕ್ಕುವುದಿಲ್ಲ ಸುದೀರ್ಘ, ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತದೆ ಇಲ್ಲವೇ ಲಂಚ ನೀಡಬೇಕು ಇವರೆಡು ಸಮಸ್ಯೆಗಳು ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಗೊತ್ತಿದೆ. ಅಧಿಕಾರಿಗಳು ಯಾವ ಕೆಲಸ ಅಷ್ಟು ಸರಳವಾಗಿ ಮಾಡಿಕೊಡುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕು ಹಾಕಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಅನ್ನುವುದು ಅವರ ಉದ್ದೇಶವಾಗಿರುತ್ತದೆ. ಅಧಿಕಾರಿಗಳು 30 ದಿನದಲ್ಲಿ ಮಾಹಿತಿ ಕೊಡಲು ಏನು ಸಮಸ್ಯೆ?. ಮಾಹಿತಿ ಕೇಳುವ ಹಕ್ಕು ಸಾರ್ವಜನಿಕರದ್ದು, ಮಾಹಿತಿ ಕೊಡುವ ಹಕ್ಕು ಅಧಿಕಾರಿಗಳದ್ದು ಅಲ್ಲವೇ. ಸರಿಯಾದ ಮಾಹಿತಿ ಒದಗಿಸಿದರೇ ಪ್ರಥಮ ಮೇಲ್ಮನವಿ,

ದ್ವಿತೀಯ ಮೇಲ್ಮನವಿ ಎಂಬ ಪ್ರಶ್ನೆಯೇ ಉದ್ಬವವಾಗಲ್ಲ. ಸಾರ್ವಜನಿಕರು ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಿದರೇ ಸರಿಯಾದ ಸ್ಪಂದನೆ ಅಧಿಕಾರಿಗಳು ಕೊಡಲ್ಲ. ಸ್ಪಂದನೆ ಕೊಟ್ಟರು ದಿಕ್ಕು ತಪ್ಪಿಸುವಂತಹ ತಪ್ಪು ಮಾಹಿತಿ ನೀಡುತ್ತಾರೆ. ಅಲ್ಲದೇ ಕೇಳಲು ಹೋದಲ್ಲಿ ರೌಡಿ, ಗುಂಡಾ ವರ್ತನೆ ಮಾಡ್ತಾರೆ ಅಂತ ಸಾರ್ವಜನಿಕರು ಸಾಕಷ್ಟು ಸಲ ಪತ್ರಿಕೆ, ದೃಶ್ಯ ಮಾಧ್ಯಮದ ಪತ್ರಕರ್ತರ ಮುಂದೆ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿ ಆರೋಪಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಅರ್ಜಿ ಹಾಕಿದ್ರೇ ಸ್ಪಂದನೆ ಕೊಡುತ್ತಾರ? ಇದಕ್ಕೂ ಅದೇ ರೀತಿ ಪ್ರಕ್ರಿಯೆ ನೀಡಿ ಕಚೇರಿಯಿಂದ ಸಾರ್ವಜನಿಕರನ್ನು ಆಚೆ ಕಳಿಸುವ ಮನಸ್ಥಿತಿ ಇದೆ. ಆದ್ದರಿಂದ ವ್ಯವಸ್ಥೆ ಬದಲಾಗಲ್ಲ. ಎಲ್ಲಿಯವರೆಗೆ ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೋ,

ಅಲ್ಲಿವರೆಗೆ ಸರ್ಕಾರ ಮರು ಆಯ್ಕೆಯಾಗಿ ಬರುತ್ತದೆ. ಉದಾಹರಣೆಯಾಗಿ ತೆಗೆದುಕೊಂಡರೇ ಬೊಮ್ಮಾಯಿ ಸರ್ಕಾರ ಬೀಳಲು ಇದು ಒಂದು ಕಾರಣವಾಯಿತು ಅಂತಲೂ ಹೇಳಬಹುದು. ಸರ್ಕಾರ ಬೀಳಬೇಕು ಎಂತಲೇ ಕೆಲ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡದೇ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡದೇ ಕಾಲಹರಣ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆಗಳು ತಲೆನೋವಿನ ಸಮಸ್ಯೆಯಾಗುದಲ್ಲದೇ ಸರ್ಕಾರಕ್ಕೂ ಮುಜುಗರವಾಗುತ್ತಿದೆ. ಆದರಿಂದ ವಿಐಪಿ ಎನ್ನುವುದು ಹೆಸರು ಮಾತ್ರ ಸಾಮಾಜಿಕ ಕಾರ್ಯಕರ್ತ, ಮಾಹಿತಿ ಕಾರ್ಯಕರ್ತ ಎನ್ನುವುದು ಉಸಿರು ಆಗಿದೆ. ಅವರನ್ನು ಹತ್ತಿಕ್ಕುವ ಪ್ರಯತ್ನ ಬೇಡ,

ಬಗೆಹರಿಯಲಾರದಂತ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರು ಬಗೆಹರಿಸಿದ್ದ ಉದಾಹರಣೆ ಸಾಕಷ್ಟಿವೆ. ಅಂತಹವರನ್ನು ಪ್ರೋತ್ಸಾಹಿಸುವ. ಸನ್ಮಾನಿಸುವ ಕಾರ್ಯವಾಗಲಿ.