20 Feb 2025

ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ

By
A few days ago, there was a news. In it, there was news under the title of Vajastra against unnecessary RTI applications, restraining order against further applications and others. Whatever the news, some small work is being done by social workers and RTI activists and has improved. What is VIP? A very important person, a VIP, can disguise himself as a common person, go to any of the 45 government departments, submit an application, and if he comes back with a simple work, he can be paraded and honored,

ಕೆಲವು ದಿನಗಳ ಹಿಂದಷ್ಟೇ, ಒಂದು ಸುದ್ದಿ ಬಂದಿತ್ತು. ಅದರಲ್ಲಿ ಅನಗತ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಅರ್ಜಿಗಳ ವಿರುದ್ಧ ವಜಾಸ್ತ್ರ, ಇನ್ನುಮುಂದೆ ಅರ್ಜಿ ಹಾಕದಂತೆ ನಿರ್ಬಂಧ ಆದೇಶ ಇನ್ನಿತರ ಶೀರ್ಷಿಕೆಯಡಿ ಸುದ್ದಿಯಾಗಿತ್ತು. ಸುದ್ದಿ ಏನೇ ಇರಲಿ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರಿಂದ ಕೆಲವು ಅಲ್ಪ ಸ್ವಲ್ಪ ಕೆಲಸ ಕಾರ್ಯಗಳು ನಡೆಯುತ್ತಿವೆ ಮತ್ತು ಸುಧಾರಿಸಿವೆ. ವಿಐಪಿ ಅಂತ ಏನು ಕರೆಯಲ್ಪಡುವ ಅಂದರೆ ಬಹಳ ಮುಖ್ಯ ವ್ಯಕ್ತಿ ವಿಐಪಿ ಎಂಬ ವ್ಯಕ್ತಿ ಸಾಮಾನ್ಯ ವ್ಯಕ್ತಿ ತರ ವೇಷ ಧರಿಸಿ, 45 ಸರ್ಕಾರಿ ಇಲಾಖೆಯಲ್ಲಿ ಯಾವುದಾದರೂ ಒಂದು ಸರ್ಕಾರಿ ಇಲಾಖೆಗೆ ತೆರಳಿ, ಅರ್ಜಿ ಸಲ್ಲಿಸಿ, ತಮ್ಮ ಕೆಲಸ ಕಾರ್ಯ ಸರಳವಾಗಿ ಮಾಡಿಕೊಂಡು ಬಂದರೇ, ಅವರನ್ನು ಮೆರವಣಿಗೆ ಮಾಡಿ,

ಸನ್ಮಾನ ಮಾಡಬಹುದು ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲ್ಲಿಸಾಗಿ ದಕ್ಕುವುದಿಲ್ಲ ಸುದೀರ್ಘ, ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತದೆ ಇಲ್ಲವೇ ಲಂಚ ನೀಡಬೇಕು ಇವರೆಡು ಸಮಸ್ಯೆಗಳು ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಗೊತ್ತಿದೆ. ಅಧಿಕಾರಿಗಳು ಯಾವ ಕೆಲಸ ಅಷ್ಟು ಸರಳವಾಗಿ ಮಾಡಿಕೊಡುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕು ಹಾಕಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಅನ್ನುವುದು ಅವರ ಉದ್ದೇಶವಾಗಿರುತ್ತದೆ. ಅಧಿಕಾರಿಗಳು 30 ದಿನದಲ್ಲಿ ಮಾಹಿತಿ ಕೊಡಲು ಏನು ಸಮಸ್ಯೆ?. ಮಾಹಿತಿ ಕೇಳುವ ಹಕ್ಕು ಸಾರ್ವಜನಿಕರದ್ದು, ಮಾಹಿತಿ ಕೊಡುವ ಹಕ್ಕು ಅಧಿಕಾರಿಗಳದ್ದು ಅಲ್ಲವೇ. ಸರಿಯಾದ ಮಾಹಿತಿ ಒದಗಿಸಿದರೇ ಪ್ರಥಮ ಮೇಲ್ಮನವಿ,

ದ್ವಿತೀಯ ಮೇಲ್ಮನವಿ ಎಂಬ ಪ್ರಶ್ನೆಯೇ ಉದ್ಬವವಾಗಲ್ಲ. ಸಾರ್ವಜನಿಕರು ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಿದರೇ ಸರಿಯಾದ ಸ್ಪಂದನೆ ಅಧಿಕಾರಿಗಳು ಕೊಡಲ್ಲ. ಸ್ಪಂದನೆ ಕೊಟ್ಟರು ದಿಕ್ಕು ತಪ್ಪಿಸುವಂತಹ ತಪ್ಪು ಮಾಹಿತಿ ನೀಡುತ್ತಾರೆ. ಅಲ್ಲದೇ ಕೇಳಲು ಹೋದಲ್ಲಿ ರೌಡಿ, ಗುಂಡಾ ವರ್ತನೆ ಮಾಡ್ತಾರೆ ಅಂತ ಸಾರ್ವಜನಿಕರು ಸಾಕಷ್ಟು ಸಲ ಪತ್ರಿಕೆ, ದೃಶ್ಯ ಮಾಧ್ಯಮದ ಪತ್ರಕರ್ತರ ಮುಂದೆ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿ ಆರೋಪಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಅರ್ಜಿ ಹಾಕಿದ್ರೇ ಸ್ಪಂದನೆ ಕೊಡುತ್ತಾರ? ಇದಕ್ಕೂ ಅದೇ ರೀತಿ ಪ್ರಕ್ರಿಯೆ ನೀಡಿ ಕಚೇರಿಯಿಂದ ಸಾರ್ವಜನಿಕರನ್ನು ಆಚೆ ಕಳಿಸುವ ಮನಸ್ಥಿತಿ ಇದೆ. ಆದ್ದರಿಂದ ವ್ಯವಸ್ಥೆ ಬದಲಾಗಲ್ಲ. ಎಲ್ಲಿಯವರೆಗೆ ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೋ,

ಅಲ್ಲಿವರೆಗೆ ಸರ್ಕಾರ ಮರು ಆಯ್ಕೆಯಾಗಿ ಬರುತ್ತದೆ. ಉದಾಹರಣೆಯಾಗಿ ತೆಗೆದುಕೊಂಡರೇ ಬೊಮ್ಮಾಯಿ ಸರ್ಕಾರ ಬೀಳಲು ಇದು ಒಂದು ಕಾರಣವಾಯಿತು ಅಂತಲೂ ಹೇಳಬಹುದು. ಸರ್ಕಾರ ಬೀಳಬೇಕು ಎಂತಲೇ ಕೆಲ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡದೇ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡದೇ ಕಾಲಹರಣ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆಗಳು ತಲೆನೋವಿನ ಸಮಸ್ಯೆಯಾಗುದಲ್ಲದೇ ಸರ್ಕಾರಕ್ಕೂ ಮುಜುಗರವಾಗುತ್ತಿದೆ. ಆದರಿಂದ ವಿಐಪಿ ಎನ್ನುವುದು ಹೆಸರು ಮಾತ್ರ ಸಾಮಾಜಿಕ ಕಾರ್ಯಕರ್ತ, ಮಾಹಿತಿ ಕಾರ್ಯಕರ್ತ ಎನ್ನುವುದು ಉಸಿರು ಆಗಿದೆ. ಅವರನ್ನು ಹತ್ತಿಕ್ಕುವ ಪ್ರಯತ್ನ ಬೇಡ,

ಬಗೆಹರಿಯಲಾರದಂತ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರು ಬಗೆಹರಿಸಿದ್ದ ಉದಾಹರಣೆ ಸಾಕಷ್ಟಿವೆ. ಅಂತಹವರನ್ನು ಪ್ರೋತ್ಸಾಹಿಸುವ. ಸನ್ಮಾನಿಸುವ ಕಾರ್ಯವಾಗಲಿ.