ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ನೆಲ, ಜಲ, ಭಾಷೆ ವಿಚಾರ ಇಟ್ಟುಕೊಂಡು ಜಗಳ ಜೊತೆ ರಗಳೆ ತೆಗೆಯುವ ಪುಂಡರಿಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ. ಕರ್ನಾಟಕ ರಾಜ್ಯ ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರು ರಾಜಿ ಇಲ್ಲ.
ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿವರೆಗೆ ಮಾತ್ರ ಬಸ್ ಓಡಿಸಿ, ಅಲ್ಲಿಂದ ನಡೆದುಕೊಂಡು ಹೋಗಲಿ. ಹೆಚ್ಚುವರಿ ಬಸ್ ಇದ್ರೇ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯದ ಕಡೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಲಾಭ-ನಷ್ಟ ವಿಚಾರದಲ್ಲಿ ಸಾರಿಗೆ ಇಲಾಖೆ ತಲೆಕೆಡಿಸಿಕೊಳ್ಳಬಾರದು ಅವರಾಗಿವೆ ಬಸ್ ಬೇಕು,
ಬಸ್ ಬಿಡಿ ಅನ್ನುವರಿಗೂ ಮಹಾರಾಷ್ಟ್ರಕ್ಕೆ ಬಸ್ ಬಿಡಬಾರದು ಒಂದುವೇಳೆ ಬಸ್ ಬೇಕು ಅಂತ ಹೋರಾಟ ಮಾಡಲಿ ಆಗ ಬಸ್ ಬಿಡುವ ವಿಚಾರ ನೋಡೋಣ ಅನ್ನುವ ಮೂಲಕ ತಕ್ಕ ಪಾಠ ಕಲಿಸಬೇಕು. ಯಾವಾಗಲೂ ಬಸ್ ವಿಚಾರ ಇಟ್ಟಿಕೊಂಡೆ ರಗಳೆ ಎಬ್ಬಿಸುವ ಕೆಲಸವಾಗುತ್ತಿದೆ ಅದಕ್ಕೆ ಬಸ್ ಸಂಚಾರ ನಿಲ್ಲಿಸಿದ್ರೇ ಯಾವುದರ ಮೇಲೆ ರಗಳೆ ತೆಗೆಯಲು ಸಾಧ್ಯ. ಬಡಪಾಯಿ ಕಂಡಕ್ಟರ್ ಮೇಲೆ ಸುಳ್ಳು ಕೇಸ್ ಮತ್ತು ಹಲ್ಲೆ ಮಾಡಿದ್ದು ಖಂಡನೀಯ.
ಬಸ್ ಬಿಡಿ ಅನ್ನುವರಿಗೂ ಮಹಾರಾಷ್ಟ್ರಕ್ಕೆ ಬಸ್ ಬಿಡಬಾರದು ಒಂದುವೇಳೆ ಬಸ್ ಬೇಕು ಅಂತ ಹೋರಾಟ ಮಾಡಲಿ ಆಗ ಬಸ್ ಬಿಡುವ ವಿಚಾರ ನೋಡೋಣ ಅನ್ನುವ ಮೂಲಕ ತಕ್ಕ ಪಾಠ ಕಲಿಸಬೇಕು. ಯಾವಾಗಲೂ ಬಸ್ ವಿಚಾರ ಇಟ್ಟಿಕೊಂಡೆ ರಗಳೆ ಎಬ್ಬಿಸುವ ಕೆಲಸವಾಗುತ್ತಿದೆ ಅದಕ್ಕೆ ಬಸ್ ಸಂಚಾರ ನಿಲ್ಲಿಸಿದ್ರೇ ಯಾವುದರ ಮೇಲೆ ರಗಳೆ ತೆಗೆಯಲು ಸಾಧ್ಯ. ಬಡಪಾಯಿ ಕಂಡಕ್ಟರ್ ಮೇಲೆ ಸುಳ್ಳು ಕೇಸ್ ಮತ್ತು ಹಲ್ಲೆ ಮಾಡಿದ್ದು ಖಂಡನೀಯ.
ಮಹಾರಾಷ್ಟ್ರದ ಗಡಿ ಭಾಗದ ಅಭಿವೃದ್ಧಿ ನೋಡಿದ್ರೇ. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ವಿಷಯ ಇಟ್ಟುಕೊಂಡು ಅಲ್ಲಿನ ಗಡಿ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಇಂದಿಗೂ ಹಪಿಸುತ್ತಿವೆ. ಅಷ್ಟೇ ಯಾಕೆ ಕರ್ನಾಟಕ ಬಸ್ ಗಳು ಸೂಪರ್ ಸ್ಪೆಷಾಲಿಟಿ ಹೊಂದಿದೆ.
ಅಲ್ಲಿನ ಬಸ್ ಗಳನ್ನು ನೋಡಿದ್ರೆ ವಾಂತಿ, ವಾಕರಿಕೆ ಬರುತ್ತವು. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಒಮ್ಮೆ ಹೊರಡಿಸಿದ ಅಂತಿಮ ಆದೇಶ ಬದಲಾಗಲೂ ಸಾಧ್ಯವೇ ಇಲ್ಲ. ಮರಾಠಿ ಪುಂಡರು ಪದೇಪದೇ ಗಡಿ, ಭಾಷೆ ವಿವಾದ ಕೆಣಕುವ ಬದಲು ಯಾವುದಾದರು ಕೆಲಸ ಬಗಿಸು ಇದ್ರೇ ನೋಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡವೇ ಆಡಳಿತ ಭಾಷೆ.
ಅಲ್ಲಿನ ಬಸ್ ಗಳನ್ನು ನೋಡಿದ್ರೆ ವಾಂತಿ, ವಾಕರಿಕೆ ಬರುತ್ತವು. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಒಮ್ಮೆ ಹೊರಡಿಸಿದ ಅಂತಿಮ ಆದೇಶ ಬದಲಾಗಲೂ ಸಾಧ್ಯವೇ ಇಲ್ಲ. ಮರಾಠಿ ಪುಂಡರು ಪದೇಪದೇ ಗಡಿ, ಭಾಷೆ ವಿವಾದ ಕೆಣಕುವ ಬದಲು ಯಾವುದಾದರು ಕೆಲಸ ಬಗಿಸು ಇದ್ರೇ ನೋಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡವೇ ಆಡಳಿತ ಭಾಷೆ.
ಕನ್ನಡ ನೆಲದಲ್ಲಿ ಕನ್ನಡವೇ ಮಾತನಾಡಬೇಕು. ಭಾಷೆ ಗೊತ್ತಿಲ್ಲ ಅಂದ್ರೆ ಸೊನ್ನೆ ಮಾಡಿ, ಚಿತ್ರ ಬರೆದು ತೋರಿಸಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಕನ್ನಡಿಗರು ಮಾಡುತ್ತಾರೆ. ಒತ್ತಾಯಪೂರ್ವಕವಾಗಿ ಇದೆ, ಇಂಥದೇ ಭಾಷೆಯಲ್ಲಿ ಮಾತಾಡಿ ಎಂದು ತಾಕಿತ್ತು ಮಾಡುವ ಅಧಿಕಾರ ಯಾರಿಗೂ ಇಲ್ಲ. ರಾಜ್ಯ ಸರ್ಕಾರ ಮಾತ್ರ ಅವರಾಗಿವೆ ಬಸ್ ಬೇಕು ಅಂತ ಹೋರಾಟ ಮಾಡುವವರಿಗೂ ಬಸ್ ಬಿಡಬಾರದು ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಅಂತರರಾಜ್ಯ ಸಂಪರ್ಕ ಕಡಿತಗೊಳಿಸಿದಾಗ ಮಾತ್ರ ಕೆಲ ಮರಾಠಿ ಪುಂಡರು ಇಂತಹ ಹೀನಕೃತ್ಯ ನಿಲ್ಲಿಸಲು, ಬುದ್ದಿ ಬರಲು ಸಾಧ್ಯ.
ಎರಡು ನೂತನ ಜಿಲ್ಲಾ ರಚನೆ ಅಗತ್ಯ
ಅಖಂಡ ಧಾರವಾಡ ಜಿಲ್ಲೆ (ಈಗಿನ ಹಾವೇರಿ, ಗದಗ ಜಿಲ್ಲೆ ಒಳಗೊಂಡಂತೆ) ಒಟ್ಟು 24 ತಾಲ್ಲೂಕು, 17 ವಿಧಾನಸಭಾ ಕ್ಷೇತ್ರ ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 1997 ರಲ್ಲಿ ಅಂದಿನ ಸರ್ಕಾರ ಎರಡು ನೂತನ ಗದಗ, ಹಾವೇರಿ ಜಿಲ್ಲೆ ರಚನೆ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿತು. ಇದೇ ರೀತಿ ಬೆಳಗಾವಿ ಜಿಲ್ಲೆ 14 ತಾಲ್ಲೂಕು, 18 ವಿಧಾನಸಭಾ ಕ್ಷೇತ್ರಗಳು, 2 ಲೋಕಸಭಾ ಕ್ಷೇತ್ರಗಳು ಇವೆ.
ಎರಡು ನೂತನ ಜಿಲ್ಲಾ ರಚನೆ ಮಾಡಲು ಸಾಧ್ಯವಿದೆ. ನಾಲ್ಕು-ನಾಲ್ಕು ಐದು-ಐದು ಜಿಲ್ಲಾ ರಚನೆ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಕೇಂದ್ರದಿಂದ 80-100 ಕಿ.ಮೀ ಅಂತರದಲ್ಲಿರುವ ಯಾವುದಾದರೂ ಎರಡು ನಗರ ಜಿಲ್ಲಾ ಕೇಂದ್ರ ಮಾಡಬಹುದು. ಬೆಳಗಾವಿ ಮಂದಿ ಒಗ್ಗಟ್ಟಿನಿಂದ ಕುಳಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸದೇ.
ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಸಭೆ ಮಾಡಿ ಒಂದು ಸ್ಪಷ್ಟ ನಿರ್ಣಯಕ್ಕೆ ಬಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೇ, ಹೊಸ ಎರಡು ನೂತನ ಜಿಲ್ಲಾ ರಚನೆ ಆಗಲಿದೆ ಇದರಿಂದ 150-200 ಕಿ.ಮೀ ದೂರದಲ್ಲಿರುವ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಅಲ್ಲದೇ ದೊಡ್ಡ ಜಿಲ್ಲೆ ನಿರ್ವಹಣೆ ಮಾಡುವುದು ಅಧಿಕಾರಿಗಳಿಗೂ ತಲೆನೋವಿನ ಕೆಲಸ ಹಾಗಾಗಿ ಎರಡು ಜಿಲ್ಲಾ ರಚನೆ ಮಾಡಿದ್ರೇ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ.