ಸತ್ತು ಹೋದವರು ನಷ್ಟ ತುಂಬಿ ಕೊಡಲು ಸಾಧ್ಯವಿಲ್ಲ. ಈಗ ಸಿಟ್ಟು ವ್ಯಕ್ತಪಡಿಸಿದರು ಪ್ರಯೋಜನವಿಲ್ಲ. ಮನುಷ್ಯನ ಸಿಟ್ಟು ಅನ್ಯಾಯಕ್ಕೆ ಒಳಗಾದ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಇರುತ್ತದೆ. ಆ ಸಿಟ್ಟು ಪೂರ್ತಿ ಜಾತಿ, ಧರ್ಮ ಮೇಲೆ ಅಥವಾ ಜನ ಮೆಚ್ಚಿಗೆ ಪಡೆದ ನಿರ್ಜೀವ ವಸ್ತುವಿನ ಮೇಲೆ ರವಾನೆಯಾಗುತ್ತಿರುವುದು ತಪ್ಪು. ದ್ವೇಷ ಮಾಡಲು ಹಳೆ ತಲೆಮಾರಿನ ಜನ ಇಲ್ಲ. ಹಳೆ ತಲೆಮಾರಿನ ಬಹುತೇಕ ಜನರು ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನಡೆಯಿಂದಾಗಿ ಶೋಷಣೆಗೂ ಒಳಗಾಗಿರಬೇಕು. ಈಗಿರುವ ಜನ ಹೊಸ ಮುಖಗಳು ಇತಿಹಾಸ ಪುಟ ಓದಿ ತಿಳಿಯಬಹುದು ಹೊರತಾಗಿ ಅವುಗಳಿಗೆ ಕಾರಣರಲ್ಲ.
ಹಾಗಾಗಿ ಹಿಂದೆಲ್ಲ ನಡೆದ ಘಟನೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕಾರಣಗಳಿರಬಹುದು. ಮುಗಿದ ಹೋದ ಅಧ್ಯಾಯ ಭೂತಕಾಲವನ್ನು ಪದೇ ಪದೇ ಯೋಚಿಸುವ ಬದಲು ಭವಿಷ್ಯ, ವರ್ತಮಾನ ಕಾಲದ ಬಗ್ಗೆ ಚಿತ್ತ ಹರಿಸಬೇಕು. ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ದೇಶ, ರಾಜ್ಯಕ್ಕೆ ಶಾಂತಿ ವಾತಾವರಣ ನಿರ್ಮಾಣ ಮಾಡುವತ್ತ ಇಂದಿನ ಜನ ಸಮೂಹ ದಿಟ್ಟ ಹೆಜ್ಜೆ ಇಡುವತ್ತ ದಾಪುಗಾಲು ಇಡುವಂತಾಗಲಿ ಎನ್ನುವುದು ಆಶಯ.
Related Tags:-
ಇಂದಿನ ಹೊಸ ಮುಖಗಳು, ಇತಿಹಾಸ ಪುಟ ಸೇರಿರುವ ವ್ಯಕ್ತಿಗಳು, ಯುವ ನಾಯಕರು ಭಾರತ, ಹೊಸ ನಾಯಕತ್ವ ಉದಾಹರಣೆಗಳು, ಸಾಮಾಜಿಕ ಬದಲಾವಣೆ ಯುವ ಶಕ್ತಿ, ಇತಿಹಾಸ ನಿರ್ಮಾಣ ಯುವಕರು, ಪ್ರೇರಣಾದಾಯಕ ಯುವ ಮುಖಗಳು, ಇತ್ತೀಚಿನ ನಾಯಕತ್ವ ಕಥೆಗಳು, ಭಾರತದ ಹೊಸ ನಾಯಕತ್ವ, ಯುವಕರ ಇತಿಹಾಸಾತ್ಮಕ ಸಾಧನೆ
0 Comments:
Post a Comment
Thank you for taking the time to share your thoughts and feedback. We greatly appreciate your participation in the discussion and look forward to engaging with you. Please remember to be respectful and considerate towards others in the comments section. Keep your comments concise and on-topic to maintain a constructive and enriching environment for all readers. Let's continue to learn and grow together as a community!