ಜಂಗಮ ಪರಂಪರೆ: ಭಕ್ತಿಯ ಮೂಲ, ವಿಭಜನೆಯ ನವ ಚಿಂತನೆ? 🙏📜

By











ವೀರಶೈವ ಜಂಗಮರೇ ಬೇಡ 1935 ರ ಮಧ್ಯಂತರ ಭಾರತ ಸರ್ಕಾರ ಕಾಲಾವಧಿಯಲ್ಲಿ ಅಥವಾ ಬ್ರಿಟಿಷ್ ಇಂಡಿಯಾ ಕಾಲಾವಧಿಯಲ್ಲಿ ನಿಗದಿಪಡಿಸಿದ ವೃತ್ತಿ ಆಧಾರಿತ 101 ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಒಂದು. ಬೇರೆ-ಬೇರೆ ರಾಜ್ಯಗಳಲ್ಲಿ ಇಲ್ಲದ ಬೇಡ ಜಂಗಮರ ಪ್ರಮಾಣ ಪತ್ರ ನೀಡುವ ಸಮಸ್ಯೆ ಇಲ್ಲಿ ಯಾಕೆ ಇದೆ ಅಂದರೆ 224 ವಿಧಾನ ಕ್ಷೇತ್ರದಲ್ಲಿ 36 ಎಸ್ಸಿ ಮೀಸಲು ಕ್ಷೇತ್ರವಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ 5 ಎಸ್ಸಿ ಮೀಸಲು ಕ್ಷೇತ್ರವಿದೆ. ಒಂದು ವೇಳೆ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಿದರೆ. ಬೇಡ ಜಂಗಮರು ಚುನಾವಣೆಗೆ ಸ್ಪರ್ಧಿಸಿ ವೀರಶೈವ ಲಿಂಗಾಯತ ಪಂಥದ ಜಾತಿಗಳ ಕೃಪೆಯಿಂದ ಸರಳವಾಗಿ ಗೆಲ್ಲಬಹುದು ಇದರಿಂದ ರಾಜಕಾರಣಿಗಳಿಗೆ ರಾಜಕೀಯ ಹಿನ್ನೆಡೆ ಆಗುವುದಲ್ಲದೇ, ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿ ಇದೆ ಎಂಬ ಸಂಶಯ ಕಾಡುತ್ತಿದೆ. ಆದರೆ ಈ ತರ ಸಂಶಯ ತಪ್ಪಾಗಿದೆ, ಚುನಾವಣೆಯಲ್ಲಿ ಗೆಲ್ಲಲು ಹಣ ಬಲಬೇಕು, ಜನ ಬಲ ಬೇಕು, ಅಲ್ಲದೇ ಅದೃಷ್ಟ ಸೇರಿದಂತೆ ಪಕ್ಷದ ಚಿಹ್ನೆಯ ವರ್ಚಸ್ಸು ಬೇಕು ಅಂದಾಗ ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯ. ಇದರಿಂದಾಗಿ ಬೇಡ ಜಂಗಮರಿಗೆ ಪ್ರಮಾಣ ನೀಡಿದರೇ ರಾಜಕೀಯ ನೆಲೆ ಕಳೆದುಕೊಳ್ಳುವ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮೇಲ್ನೋಟ ಕಂಡು ಬರುತ್ತಿದೆ. ಆದರೆ ಇದು ಸುಳ್ಳಾಗಿದ್ದು, ಹಣ, ಜನ ಬಲ ಅದೃಷ್ಟ ಪಕ್ಷದ ಚಿಹ್ನೆಯ ವರ್ಚಸ್ಸಿನ ಮೇಲೆ ಚುನಾವಣೆ ಗೆಲುವು ಸಾಧ್ಯವಿದೆ ಮತ್ತು ವೀರಶೈವ ಲಿಂಗಾಯತ ಎನ್ನುವುದು ಪಂಥವಾಗಿದ್ದು, ಜಾತಿ ಅಲ್ಲ. ವೀರಶೈವ ಜಂಗಮರೇ ಬೇಡ ಜಂಗಮರಾಗಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಂಗಮರ ನೆಲೆ ಇದೆ. ಅಲ್ಲದೇ ರಾಜ್ಯದ ವಿವಿಧ ಮಠಾಧೀಶರರು ಜಂಗಮರೇ ಆಗಿದ್ದಾರೆ.

ಜಂಗಮರ ವೃತಿ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು. ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು, ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ. ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತಿ" ಪತ್ರಿ ಹಂಚುವವರು "ಪತ್ರಿ ಮಠದವರು" ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವುದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು. ಬೇಡ ಜಂಗಮರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದು ಬರಲು ರಾಜಕಾರಣಿಗಳು ಸಹಕರಿಸಬೇಕಿದೆ.

Related Tags:- ವೀರಶೈವ ಜಂಗಮರು, Lingayat, Dharma, Veerashaiva Tradition, Kannada Blog, Jangama Sampradaya, Sharana Sahitya, Religious Reform, Spiritual Debate Kannada, Community Discussion, Basavanna Teachings,