"ಕೆಟ್ಟ ಘಳಿಗೆ – ಇದೊಂದು ಸಲ ಕ್ಷಮಿಸಿಬಿಡಿ…" 🙏💔

By







ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆ ಮೀರಿ, ಕ್ರೀಡಾಂಗಣದ ಸಾಮರ್ಥ್ಯ ಮೀರಿ ಆರ್.ಸಿ.ಬಿ ಅಭಿಮಾನಿಗಳು ಧಾವಿಸಿದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕ್ರೀಡಾಂಗಣ ಭರ್ತಿಯಾಗಿದೆ. ಮನೆಗೆ ಹೋಗಿ ಎಂದರು. ಯಾರು ಕೇಳೋರು, ಯಾರು ಕ್ಯಾರೇ ಎನ್ನದ ಸನ್ನಿವೇಶ ಸೃಷ್ಟಿಯಾಗಿತು. ಒಟ್ಟಾರೆ ಬೆಂಗಳೂರಿನಲ್ಲಿ ಅಲ್ಲಿಲ್ಲಿ ನಿಂತ ಅಭಿಮಾನಿಗಳು, ಕಾರ್ಯಕ್ರಮ ಮಧ್ಯದಲ್ಲಿ ಮನೆಗೆ ಹೋದ ಅಭಿಮಾನಿಗಳು ಸೇರಿದಂತೆ ಅಂದಾಜು ಸುಮಾರು ೨ ಕೋಟಿಗೂ ಅಧಿಕ ಆರ್.ಸಿ.ಬಿ ಅಭಿಮಾನಿಗಳು ಬೆಂಗಳೂರಿನಲ್ಲಿ ಇರಬಹುದು ಎಂಬ ನಂಬಿಕೆ. ಟಿವಿ ನ್ಯೂಸ್ ವಿಡಿಯೋಗಳಲ್ಲಿ ಅಭಿಮಾನಿಗಳ ಸಂಖ್ಯೆ ಸ್ಪಷ್ಟವಾಗಿ ಕಾಣದಿದ್ದರೂ, ಅಂದಾಜು ಅಭಿಮಾನಿಗಳ ಸಂಖ್ಯೆ ೨ ಕೋಟಿ ಇರಬಹುದು. ಆರ್.ಸಿ.ಬಿಗೆ ೧೮ ಆವೃತ್ತಿಗೆ ಕಪ್ ಗೆದ್ದಿದ್ದರಿಂದ ಇದೊಂದು ನಾಡಹಬ್ಬದ ವಾತಾವರಣ ಸೃಷ್ಟಿಸಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬಂದಿದ್ದರು. ಕ್ರೀಡಾಂಗಣದ ಸಾಮರ್ಥ್ಯ ಮೀರಿ ಜನ ಆಗಮಿಸಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಯಾರು ಬೇಕಾತಲೇ ಮಾಡಲು ಸಾಧ್ಯವೇ. ಯಾರನ್ನು ಹೊಣೆ ಮಾಡಿ ಏನು ಪ್ರಯೋಜನ. ತೆಲಂಗಾಣದಲ್ಲಿ ಆದಂತೆ ಇದು ವೈಯಕ್ತಿಕ ಹಿತಾಸಕ್ತಿಯ ಕಾಲ್ತುಳಿತ ಅಲ್ಲ. ನಾಡಹಬ್ಬದ ವಾತಾವರಣದ ಕಾಲ್ತುಳಿತ. ಏನೋ ಕೆಟ್ಟ ಘಳಿಗೆ ತಪ್ಪು ಆಗಿದೆ. ಇದೊಂದು ಸಲ ಕ್ಷಮಿಸಿಬಿಡಿ. ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಅವಶ್ಯಕ.

ರಾಜ್ಯದ ಕಾಳಜಿ ರಾಜಕಾರಣಿಗಳೇ ಬೆಳೆಸಿಕೊಳ್ಳಿ

ರಾಜಕಾರಣಿ ಹೇಗಿರಬೇಕು ರಾಜ್ಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ರಾಜ್ಯದ ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ಪ್ರಧಾನಮಂತ್ರಿ ಮಾಡಬೇಕಾದ ದೇಶದ ಕೆಲಸವನ್ನು ಇಲ್ಲಿನ ವಿರೋಧ ಪಕ್ಷಗಳು ಮಾಡುತ್ತಿವೆ. ರಾಜ್ಯದ ವಿಧಾನಸಭಾ, ವಿಧಾನ ಪರಿಷತ್ತಿನಿಂದ ಆಯ್ಕೆಯಾದವರು ರಾಜ್ಯದ ಬಗ್ಗೆ ಹೇಳಿಕೆ ನೀಡಿ. ದೇಶದ ಬಗ್ಗೆ ಅಲ್ಲ. ಆರ್.ಸಿ.ಬಿ ರಾಜ್ಯದ ತಂಡ ಎಂದಮೇಲೆ ಶುಭಾ ಹಾರೈಸಿ ಬೇಕು ಹೊರತಾಗಿ ಲೇವಡಿ ಮಾಡಬಾರದು. ದೇಶದ ಬಗ್ಗೆ ಹೇಳಿಕೆ ನೀಡಲು ಲೋಕಸಭಾ, ರಾಜ್ಯಸಭಾ ಸದಸ್ಯರು ಇರಬೇಕಾದರೆ, ರಾಜ್ಯದ ರಾಜಕಾರಣಿಗಳು ರಾಜ್ಯ ಹಿತ ಬಿಟ್ಟು ರಾಷ್ಟ್ರದ ಹಿತ ಮಾತಾಡುತ್ತಿರುವುದು ಕೇಂದ್ರದ ರಾಜಕಾರಣಿಗಳಿಗೆ ಹೊಡೆತ ಕೊಟ್ಟಂತೆ. ರಾಜ್ಯ ರಾಜಕಾರಣ ರಾಜ್ಯಕ್ಕೆ ಸೀಮಿತವಾಗಿರಲಿ


Related Tags:- ಕ್ಷಮೆ, Kannada Blog, Emotional Writing, Forgiveness Story Kannada, Heartfelt Post, Human Emotions , Relationship Healing, Mental Peace Kannada, Personal Blog, Manass, ina Maatu