"ಕಿತ್ತೂರು ಕರ್ನಾಟಕ" ಭಾಗ ಈ ಹಿಂದೆ ಮುಂಬೈ ಕರ್ನಾಟಕ ಎಂದು ಗುರುತಿಸಿಕೊಂಡಿತು. ಕಿತ್ತೂರು ಕರ್ನಾಟಕದ ಏಳು ಜಿಲ್ಲೆಯ ಎಷ್ಟೋ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ನರಳಿತಿವೆ, ಗ್ರಾಮ ಸಂಪರ್ಕಿಸಲು ಸರಿಯಾದ ರಸ್ತೆಗಳಿಲ್ಲ. ಅಲ್ಲದೇ ಸ್ಥಳೀಯರು ಶಿಕ್ಷಣ ಮತ್ತು ಸರಕಾರಿ ಉದ್ಯೋಗ ಪಡೆಯಲು ಉದ್ಯೋಗಾವಕಾಶಿಗಳು ಹರಸಾಹಸ ಪಡಬೇಕಿದೆ. ಆದ್ದರಿಂದ ಕರ್ನಾಟಕ ರಾಜ್ಯದಿಂದ ಕೇಂದ್ರ, ರಾಜ್ಯ ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ನಿರ್ಮಲಾ ಸೀತಾರಾಮನ್, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಸಂಸದರು, ಶಾಸಕರು, ಅಧಿಕಾರಿಗಳು ಮುತುವರ್ಜಿವಹಿಸಿ ಕಿತ್ತೂರು ಕರ್ನಾಟಕಕ್ಕೆ
ಕಲ್ಯಾಣ ಕರ್ನಾಟಕ ಮಾದರಿ "ವಿಶೇಷ ಸ್ಥಾನಮಾನ" ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ. ಕಿತ್ತೂರು ಕರ್ನಾಟಕಕ್ಕೂ ವಿಶೇಷ ಸ್ಥಾನಮಾನ ಕಲ್ಪಿಸುವತ್ತ ಕೇಂದ್ರ ಸಚಿವರು ಚಿತ್ತ ಹರಿಸಬೇಕಿದೆ.
Kittur Karnataka Needs Special Status, Develop Kittur Karnataka, Inclusive Growth For All, Prioritize Rural Development, New Minister New Hope, Progressive Policies For Karnataka, Equitable Development, Rural Upliftment Matters, Kittur Karnataka First, Fight For Kittur, Special Status For Kittur, Infrastructure In Kittur, Health Education For Kittur, Empower Kittur Community, Transform Kittur Karnataka,