20 Feb 2025

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-04)

By
Click to Learn More 1.3 ಆಕಾಶವಾಣಿ ಹಾಗೂ ಸ್ವಾಯತ್ತತೆ

ಆಕಾಶವಾಣಿ, ಭಾರತ ಸರ್ಕಾರದ ಸಮಾಚಾರ ಹಾಗೂ ಪ್ರಸಾರ ಮಂತ್ರಾಲಯದ ಮಾಧ್ಯಮ ವಿಭಾಗದ ಒಂದು ಪ್ರಮುಖ ಭಾಗ, ಭಾರತೀಯ ಪ್ರಸಾರ ವ್ಯವಸ್ಥೆಯ ಯಾವುದೇ ನಿಯಮಗಳನ್ನು ರೂಪಿಸುವುದು ಈ ಮಂತ್ರಾಲಯವೇ. ಇದರಲ್ಲಿ ಕೇಂದ್ರ ಮಂತ್ರಿಗಳಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಕಾರ್ಯದರ್ಶಿಗಳಾಗಿಯೂ ಅವರಿಗೆ ಅಧೀನವಾಗಿ ಗಜಗಾತ್ತದ ಸೆಕಟೇರಿಯಟ್ ಒಂದು ಕಾರ್ಯ ನಿರ್ವಹಿಸುತ್ತದೆ. ಇದನ್ನು ಮೂರು ವಿಭಾಗಗಳಾಗಿ ರ್ಶಿಯೊಬ್ಬರು ವಿಂಗಡಿಸಲಾಗಿದೆ. ಪ್ರಸಾರ, ಮಾಹಿತಿ ಹಾಗೂ ನಿಯಮ ಮತ್ತು ಸಮನ್ವಯ ಈ ಮೂರು ವಿಭಾಗಗಳಲ್ಲಿ ಪ್ರತಿಯೊಂದಕ್ಕೂ ಜಂಟಿ ಕಾರ್ಯದರ್ಶಿ ಮುಖ್ಯಸ್ಥರಾಗಿರುತ್ತಾರೆ.

ಸಂವಿಧಾನದ 246ನೇ ವಿಧಿ(ಆರಿಕಲ್)ಯು ಕೇಂದ್ರ ಸರ್ಕಾರಕ್ಕೆ ಪ್ರಸಾರ ಕ್ಷೇತ್ರದ ಮೇಲಿನ ಹಿಡಿತವನ್ನು ನೀಡುತ್ತದೆ. ಇದರನ್ವಯ ಸಂವಿಧಾನದ 7ನೇ ಷೆಡ್ಯೂಲಿನ ಒಂದನೇ ಪಟ್ಟಿಯಲ್ಲಿ (ಲಿ) ನಮೂದಿತವಾಗಿರುವ ಯಾವುದೇ ವಿಷಯಕ್ಕೆ ಸಂಬAಧಿಸಿದAತೆ ಕಾನೂನನ್ನು ಮಾಡುವ ಪರಮಾಧಿಕಾರ ಲೋಕಸಭೆಗೆ ಇರುತ್ತದೆ. ಈ ಪಟ್ಟಿಯ 31 ನೇ ಭಾಗದಲ್ಲಿ ಅಂಚೆ ಮತ್ತು ತಂತಿ ಇಲಾಖೆ, ಟೆಲಿಫೋನ್, ವೈರ್‌ಲೆಸ್, ಪ್ರಸಾರ ಮತ್ತು ಸಂವಹನಕ್ಕೆ ಸಂಬAಧಿಸಿದ ವಿಷಯಗಳು' ಇವೆ. ಇವುಗಳಲ್ಲಿ ಬ್ರಿಟಿಷರಿಂದ ಜಾರಿಗೊಳಿಸಲ್ಪಟ್ಟಿದ್ದ 1885ರ 'ದ ಇಂಡಿಯನ್ ಟೆಲಿಗ್ರಾಫ್ ಆಕ್ಟ್' ಹಾಗೂ 1933ರ 'ಇಂಡಿಯನ್ ವೈರ್‌ಲೆಸ್ ಟೆಲಿಗ್ರಫಿ ಆಕ್ಷ ಗಳು ಈಗಲೂ ಚಾಲ್ತಿಯಲ್ಲಿವೆ.

ಇವುಗಳ ಮೂಲಕ ಸರ್ಕಾರ ಪ್ರಸಾರದ ಮೇಲೆ ಏಕಸ್ವಾಮ್ಯದ ಜೊತೆಗೆ ಸಂಪೂರ್ಣ ನಿಯಂತ್ರಣವನ್ನೂ ಸಾಧಿಸಿದೆ. 1970 ರ ಎಐಆರ್ ಕೋಡ್‌ನ (ಅಕಾಶವಾಣಿಯ ಮಾರ್ಗಸೂಚಿ) ಪ್ರಕಾರ ಕಾಗಿನ ವಾರ ನೀತಿಯು ಆಕಾಶವಾಣಿಯ ಪ್ರಕಾರದಲ್ಲಿ ಕೆಲವು ಅಂಶಗಳು ಇರಬಾರವೆಂದು ಹೇಳುತ್ತದೆ.

ರಾಷ್ಟ್ರಗಳ ಟೀಕೆ

ಧರ್ಮ ಅಥವಾ ಪಂಗಡಗಳ ಮೇಲೆ ದಾಳಿ ಅಲ ಹಾಗೂ ಉದ್ರೇಕಗೊಳಿಸಬಲ್ಲ
ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಿ ಹಿಂಸೆಗೆ ಪ್ರಚೋದಿಸುವ ನ್ಯಾಯಾಲಯದ ನಿಂದನೆ ಮಾಡುವ
ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ನ್ಯಾಯಾಲಯಗಳ ಐಕ್ಯತೆಗೆ ಭಂಗ ಉಂಟುಮಾಡುವ
ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸಿ ನಿಂದಿಸುವ ಯಾವುದೇ ರಾಜ್ಯ ಅಥವಾ ಕೇಂದ್ರದ ಬಗ್ಗೆ ಕಟುಟೀಕೆ ಸಂವಿಧಾನಕ್ಕೆ ಅಗೌರವ ಉಂಟುಮಾಡುವ ಅಥವಾ ಹಿಂಸಾತ್ಮಕವಾಗಿ ಸಂವಿಧಾನದಲ್ಲಿ ಬದಲಾವಣೆಯನ್ನು ಬಯಸುವ ವಸ್ತು, ವಿಷಯಗಳು
ಆದರೆ ಇವುಗಳ ಬಗ್ಗೆ ಆರೋಗ್ಯಕರ ಚರ್ಚೆಯನ್ನು ಈ ನೀತಿ ವಿರೋಧಿಸುವುದಿಲ್ಲ.

ಈ ನಿಯಮಗಳು ಸಂವಿಧಾನದ 19ನೇ ಪರಿಚ್ಛೇದದ 2ನೇ ವಿಧಿಯಲ್ಲಿ ಹೇಳಲ್ಪಟ್ಟಿವೆ. ಇವುಗಳೊಂದಿಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಂತಾದ ಕೆಲವು ಗಣ್ಯರ ಸಾವಿನ ಸುದ್ದಿಯನ್ನು ಗೃಹ ಮಂತ್ರಾಲಯದ ಪ್ರಕಟಣೆಯ ನಂತರವೇ ವಾರ್ತಾಸಂಚಿಕೆಗಳಲ್ಲಿ ಪ್ರಸಾರಿಸಬೇಕೆಂಬ ನಿಯಮವಿದೆ. 1975ರ ತುರ್ತುಪರಿಸ್ಥಿತಿಯ ಕಾಲದಲ್ಲಿ ಈ ಮಾರ್ಗಸೂಚಿ ಸ್ಥಗಿತಗೊಂಡಿತ್ತು. ಆನಂತರ 1977 ರ ಮಾರ್ಚನಲ್ಲಿ ಪುನಃ ಅದು ಜಾರಿಗೆ ಬಂದಿದೆ. ಆಕಾಶವಾಣಿ ಮಾಧ್ಯಮ ಭಾರತದಂತಹ ಬಹು ಸಂಸ್ಕೃತಿಯ, ಬಹು ಭಾಷೆಯ ದೇಶದಲ್ಲಿ ಉತ್ತಮ ಸಾಧನೆಗಳನ್ನು ಮಾಡಿರುವ ಅನೇಕ ಕ್ಷೇತ್ರಗಳವೆ. ಆದರೆ ವಿವಿಧ ಸಂಸ್ಕೃತಿ, ಪರಂಪರೆ, ರೂಢಿ-ನೀತಿ ಸಂಪ್ರದಾಯಗಳು,

ಅನಕ್ಷರತೆ ಮುಂತಾದ ಸಾಮಾಜಿಕ ತೊಡಕುಗಳ ನಡುವೆ ಆಕಾಶವಾಣಿ ಪ್ರಬಲವಾಗಿ ಹೊರಬರಲು ಅನೇಕ ಮಿತಿಗಳೂ ಇವೆ. ಸಾಮಾನ್ಯವಾಗಿ ಸಾರ್ವಜನಿಕರು ಮಾಡುವ ಟೀಕೆಯೆಂದರೆ ಆಕಾಶವಾಣಿ ಸರ್ಕಾರದ ಅಧೀನದಲ್ಲಿರುವುದರಿಂದ ಇತರ ಮಾಧ್ಯಮಗಳಷ್ಟು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು. ಇತರ ಟೀಕೆಗಳ ಕಾರಣದಿಂದಲೇ ಶ್ರೀಮತಿ ಇಂದಿರಾ ಗಾಂಧಿಯವರು ಸಮಾಚಾರ ಹಾಗೂ ಪ್ರಸಾರ ಖಾತೆಯ ಮಂತ್ರಿಗಳಾಗಿದ್ದಾಗ ಮಾಧ್ಯಮಗಳ ರ್ಕವನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಿದರು. ಎ.ಕೆ.ಚಂದ್ರ ಅವರು ಅಧ್ಯಕ್ಷರಾಗಿದ್ದ ಈ ಸಮಿತಿ ತನ್ನ ವರದಿಯಲ್ಲಿ ಆಕಾಶವಾಣಿಯ : ಕೇಳಿಬರುತ್ತಿದ್ದ ಟೀಕೆಗಳನ್ನು ದೀರ್ಘವಾಗಿ ಚರ್ಚಿಸಿದೆ.

ಆನಂತರದಲ್ಲಿ ಅ ಸಮಿತಿ 140 ಈ ವಿಷಯವಾಗಿ ಚರ್ಚಿಸಿವೆ. 1989ರ ಸಾರ್ವಜನಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮಾಧ್ಯಮದ ಮೇಲಿನ ಸರ್ಕಾರದ ಹಿಡಿತವನ್ನು ತೆಗೆದು ನೀಡಬೇಕೆಂದು ಬಹುತೇಕ ಪಕ್ಷಗಳು ಪ್ರತಿಪಾದಿಸಿದವು. ಬ್ರಿಟನ್ನಿನಂತೆಯೇ ಭಾರತದಲ್ಲೂ ಮೊದಲು ಈ ಮಾಧ್ಯಮ, ಖಾಸಗಿ ಒಡೆತನದಲ್ಲೇ ಇತ್ತು. ಹಣಕಾಸಿನ ಮುಗ್ಗಟ್ಟಿನಿಂದ ಖಾಸಗಿ ಕಂಪನಿಗಳು ಸೋತಾಗ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಅದನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿತ್ತು. 1925 ಮಾರ್ಚ 27ರಂದು 'ಬ್ರಿಟಿಷ್ ಇಂಡಿಯಾ'ದಲ್ಲಿ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಿ ಪ್ರಸಾರಕಾರ್ಯವನ್ನು ಮಾಡಲು ಖಾಸಗಿಯವರಿಗೆ ಪರವಾನಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂಬ ಪತ್ರಿಕಾ ಪ್ರಕಟಣೆಯನ್ನೂ ನೀಡಿತ್ತು.

ಇದರೊಂದಿಗೆ ಅಂತಹ ಕೇಂದ್ರಗಳ ಮೇಲೆ ತನ್ನ ನಿಯಂತ್ರಣದ ಸ್ಪಷ್ಟಿಕರಣವನ್ನೂ ನೀಡಿತು. ಅದರನ್ವಯ ಕೇಂದ್ರಗಳ ತಪಾಸಣೆ ಮಾಡುವ, ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ, ಅವುಗಳ ಮೇಲೆ ಸಂಪೂರ್ಣ ಅಥವಾ ಭಾಗಶಃ ನಿಷೇಧ ಹೇರುವ, ಯಾವ ಕಾರ್ಯಕ್ರಮಗಳ ಪ್ರಸಾರವಾಗಬೇಕು, ಯಾವುವು ಆಗಬಾರದು, ಯಾರ ಕಾರ್ಯಕ್ರಮ ಪ್ರಸಾರವಾಗಬಹುದು, ಯಾರದು ಆಗಬಾರದು, ಸುದ್ದಿಯ ಮೂಲಗಳನ್ನು ಬಹಿರಂಗಗೊಳಿಸುವ, ಅನುಚಿತ ಪ್ರಸಾರ ಕಂಡುಬAದಲ್ಲಿ ಪರವಾನಿಗೆಯನ್ನು ರದ್ದುಪಡಿಸುವ ಉಚಿತವಾಗಿ ಹವಾಮಾನ ವರದಿ, ಮುನ್ಸೂಚನೆ, ಸರ್ಕಾರಿ ಹಾಗೂ ಶೈಕ್ಷಣಿಕ ಪ್ರಕಟಣೆಗಳನ್ನು ಪ್ರಸಾರ ಮಾಡುವ ಹಾಗೂ ಒಟ್ಟೂ ಕಾರ್ಯಕ್ರಮದ 10% ಮೀರದಂತೆ ಸರ್ಕಾರಿ ಸುತ್ತೋಲೆಗಳನ್ನು ಪ್ರಸಾರಮಾಡುವ ಷರತ್ತನ್ನು ವಿಧಿಸಲಾಗಿತ್ತು.

1926 ಸಪ್ಟೆಂಬರ್ 13ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರ್ಕಾರದ ಪ್ರಥಮ ನಾಮಿನಿಯಾದ ಪಿ.ಜಿ.ಎಡ್ಕಂಡ್ ಅವರು 1927 ಮೇ 5 ರಂದು ನಿಷೇಧದ ಬಗ್ಗೆ ಮಾತಾಡುತ್ತ ಬ್ರಿಟನ್ನಿನಂತೆ ಇಲ್ಲೂ ಕೂಡ ಈ ಬ್ರಾಡ್ಯಾಸ್ಟಿಂಗ್ ಕಂಪನಿ ಸರ್ಕಾರದ ಮನಗೆದ್ದು ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವಂತಾಗಲಿ ಎಂದು ಆಶಿಸಿದರು. ಆದರೆ ಈ ಖಾಸಗಿ ಒಡೆತನ ಕಂಪನಿ ತನ್ನ ಪ್ರಸಾರಕಾರ್ಯವನ್ನು ಕಿರಕೂಗಿತಗೊಳಿಸುತ್ತಿರುವುದ ಭೋಷಿಸಿತು, ಆಗ ಸರ್ಕಾರದ ಮೇಲೆ ಪ್ರಸಾರಕಾರ್ಯವನ್ನು ನಿಲ್ಲಿಸದಿರಲು ರಾಜಕೀಯ ಪಕ್ಷಗಳು ಒತ್ತಡವನ್ನೂ ತಂದವು. ಬೇರೆ ದಾರಿಯಿಲ್ಲದಿದ್ದರೆ ಸರ್ಕಾರವೇ

ಆಕಾಶವಾಣಿಯ ರಚನಾ ವ್ಯವಸ್ಥೆ

ಆಲ್ ಇಂಡಿಯಾ ರೇಡಿಯೋ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದಡಿಯಲ್ಲಿ ಇರುವ ಅನೇಕ ವಿಭಾಗಗಳಲ್ಲಿ ಬಹುದೊಡ್ಡ ವಿಧಾಗ, ಸರ್ಕಾರದ ಮಟ್ಟದಲ್ಲಿ ಇದು ರಾಜ್ಯ ಸಚಿವರಿಂದ ನಿರ್ವಹಿಸಲ್ಪಡುತ್ತದೆ, ಅವರ ಸಹಾಯಕರಾಗಿ ಕಾರ್ಯದರ್ಶಿ ಹಾಗೂ ಇತರ ಸೆಟೆರಿಯಟ್ ಅಧಿಕಾರಿಗಳಿರುತ್ತಾರೆ. ವಿಭಾಗ ಮಟ್ಟದಲ್ಲಿ ಡೈರೆಕ್ಟರ್ ಜನರಲ್ ಮುಖ್ಯಸ್ಥರಾಗಿದ್ದು ಅವರಿಗೆ ಸಹಾಯಕರಾಗಿ ವಿವಿಧ ಅಧಿಕಾರಿಗಳಿರುತ್ತಾರೆ. ಭಾರತ ಸರ್ಕಾರವು ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂಬ ಸ್ವಾಯತ್ತ ಸಂಸ್ಥೆಯನ್ನು + ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಸರ್ಕಾರಿ ಹಿಡಿತದಿಂದ ಮುಕ್ತಗೊಳಿಸುವ ಸದುದ್ದೇಶದಿಂದ ಸ್ಥಾಪಿಸಿದೆ.

1997 ನವೆಂಬರ್ 23 ರಂದು ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಪ್ರಸಾರ ಭಾರತಿ, ಬೋರ್ಡಿನಿಂದ ನಿರ್ವಹಿಸಲ್ಪಡುತ್ತಿದೆ. ಮೋರ್ಡಿನ ಮೂಲ ಉದ್ದೇಶ ಮಾಹಿತಿ, ಶಿಕ್ಷಣ ಹಾಗೂ ಮನರಂಜನೆಯನ್ನು ಕಾರ್ಯಕ್ರಮಗಳ ಮೂಲಕ ನೀಡುತ್ತ ಜನಹಿತ ಸೇವೆಯನ್ನು ಮಾಡುವುದು. 1990 ರ ಪ್ರಸಾರ ಭಾರತಿ ಕಾಯಿದೆಯನ್ವಯ ಸಂಸ್ಥೆಯ ಕಾರ್ಯಯೋಜನೆಗಳನ್ನು ಸಿದ್ಧಪಡಿಸುವ ಹಾಗೂ ಕಾರ್ಯರೂಪಕ್ಕೆ ತರುವ ಗುರುತರವಾದ ಜವಾಬ್ದಾರಿ ಪ್ರಸಾರಭಾರತಿ ಬೋರ್ಡನ ಮೇಲಿದೆ. ಚೀಫ್ ಎಕ್ಸೆಕ್ಯುಟಿವ್ ಆಫೀಸರ್ (ಸಿಇಓ) ಪ್ರಸರ ಈರತಿ ಬೋರ್ಡಿನ ನಿಯಂತಣ ಹಾಗೂ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುವ ಅತ್ಯುಚ್ಛ ಅಧಿಕಾರಿ, ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರುವ ಪಿಟಿಐ ಕಟ್ಟಡದಲ್ಲಿ ಇರುವ ಪ್ರಸಾರ ಭಾರತಿ ಕೇಂದ್ರ ಕಾರ್ಯಾಲಯದಿಂದ ಸಿಇಓ, ಮೆಂಬರ್

ಪತ್ತೊನೆಲ್ ಹಾಗೂ ಮೆಂಬ ಫೈನಾನ್ಸ್ ಇವರು ಕಾರ್ಯನಿರ್ವಹಿಸುತ್ತಾರೆ, ಇವರಿಗೆ ಪ್ರಸಾರ ಭಾರತಿ ಸೆಕ್ರೆಟೇರಿಯಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಅಧಿಕಾರಿಗಳು ಕಾರ್ಯಯೋಜನೆ, ಅನುಷ್ಠಾನ ಮುಂತಾದ ಗುರುತರ ಜವಾಬ್ದಾರಿಗಳೊಂದಿಗೆ ಬಜೆಟ್, ಲೆಕ್ಕಪತ್ರ ಇನ್ನಿತರ ಆರ್ಥಿಕ ವಿಷಯಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಾರೆ. ಪ್ರಸಾರ ಭಾರತಿಯು ಮಾರ್ಕೆಟಿಂಗ್ ವಿಭಾಗವನ್ನು ಹೊಂದಿದ್ದು ಅವುಗಳ ಕಛೇರಿಗಳು ಮುಂಬೈ, ನವದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ತಿರುವನಂತಪುರ ಹಾಗೂ ಗೌಹಾತಿಗಳಲ್ಲಿವೆ. ಈ ವಿಭಾಗದ ಒಂದು ಶಾಖೆಯು ಕೊಚ್ಚಿಯಲ್ಲಿ ಇದೆ. ಈ ಕಛೇರಿಗಳು ಆಕಾಶವಾಣಿ ಹಾಗೂ ದೂರದರ್ಶನದ ಮಾರುಕಟ್ಟೆ ಕಾರ್ಯಗಳನ್ನು ನೋಡಿಕೊಳ್ಳುತ್ತವೆ.

ಆಕಾಶವಾಣಿ ಹಾಗೂ ದೂರದರ್ಶನದ ಡೈರೆಕ್ಟರೇಟ್‌ಗಳು ಪ್ರತ್ಯೇಕ ಡೈರೆಕ್ಟರ್ ಜನರಲ್‌ರನ್ನು ಮುಖ್ಯಸ್ಥರನ್ನಾಗಿ ಹೊಂದಿವೆ, ಅವರು ಸಿಇಓ, ಮೆಂಬರ್ ಫೈನಾನ್ಸ್ ಹಾಗೂ ಮೆಂಬ ಪರ್ಸೊನೆಲ್ ಅವರ ನಿಕಟ ಸಂಪರ್ಕದೊAದಿಗೆ ಆಕಾಶವಾಣಿ ಹಾಗೂ ದೂರದರ್ಶನದ ದಿನನಿತ್ಯದ ಕಾರ್ಯಕಲಾಪಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಪ್ರಮುಖವಾಗಿ ನಾಲ್ಕು ಕಾರ್ಯವಿಭಾಗಗಳಿವೆ. ಅವು ಕಾರ್ಯಕ್ರಮ ವಿಭಾಗ, ತಾಂತ್ರಿಕ ವಿಭಾಗ, ಆಡಳಿತ ಹಾಗೂ ಹಣಕಾಸಿನ ವಿಭಾಗ ಮತ್ತು ವಾರ್ತಾ ವಿಭಾಗ,

ಪ್ರಮುಖ ವಿಭಾಗಗಳು

ಅಡಿಷನಲ್ ಡೈರೆಕ್ಟರ್ ಜನರಲ್ (ಎಡಿಜಿ) ತಮ್ಮ ಕೇಂದ್ರ ಕಛೇರಿಯಲ್ಲಿ ಹಾಗೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರಾಂತೀಯ ಕೇಂದ್ರಗಳ ಕಾರ್ಯಕ್ರಮ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಇವರ ಪ್ರಾದೇಶಿಕ ಕಛೇರಿಗಳು ದೆಹಲಿ, ಚಂದೀಗಢ (ಉತ್ತರ ವಿಭಾಗ), ಮುಂಬೈ, ಅಹಮದಾಬಾದ್ (ಪಶ್ಚಿಮ ವಿಭಾಗ), ಲಖೋ, ಭೋಪಾಲ (ಕೇಂದ್ರ ವಿಭಾಗ) ಕೋಲ್ಕತ್ತಾ (ಪೂರ್ವ ವಿಭಾಗ) ಗೌಹಾತಿ (ಈಶಾನ್ಯ ವಿಭಾಗ) ಚೆನ್ನೈ (ದಕ್ಷಿಣ ವಿಭಾಗ) ಹಾಗೂ ಬೆಂಗಳೂರು (ದಕ್ಷಿಣ ವಿಭಾಗ 2) ಎಂದು ವಿಭಾಗಿಸಲ್ಪಟ್ಟಿವೆ. ದೇಶದಾದ್ಯಂತ ಸ್ಥಾಪಿತವಾಗಿರುವ ಕೆಂದ್ರಗಳಲ್ಲಿ ಕಾರ್ಯಕ್ರಮ ವಿಭಾಗ, - ತಾಂತ್ರಿಕ ವಿಭಾಗ, ಸುದ್ದಿ ವಿಭಾಗ ಹಾಗೂ ಆಡಳಿತ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ.

ಉಪ ಮಹಾ ನಿರ್ದೇಶಕರು (ಕಾರ್ಯಕ್ರಮ) ಆಯಾ ಕೇಂದ್ರಗಳ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಅವರ ಮೇಲ್ವಿಚಾರಣೆಯಲ್ಲಿ ನಿಲಯ ನಿರ್ದೇಶಕರು, ಸಹಾಯಕ ನಿರ್ದೇಶಕರು (ಕಾರ್ಯಕ್ರಮ), ಕಾರ್ಯಕ್ರಮ ನಿರ್ವಾಹಕರು, ಪ್ರಸಾರ ನಿರ್ವಾಹಕರು ಹಾಗೂ ಉದ್ದೋಷರನ್ನೊಳಗೊಂಡ ದೊಡ್ಡ ತಂಡ ಕಾರ್ಯಕ್ರಮ ಯೋಜನೆ, ತಯಾರಿಕೆ ಹಾಗೂ ಪ್ರಸಾರದಲ್ಲಿ ಪಾಲ್ಗೊಳ್ಳುತ್ತದೆ ಉಪ ಮಹಾ ನಿರ್ದೇಶಕರು( ತಾಂತ್ರಿಕ) ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದು ಅವರ ನಿರ್ದೇಶನದಲ್ಲಿ ಉಪ ನಿರ್ದೇಶಕರು, ಸಹಾಯಕ ನಿಲಯ ಅಭಿಯಂತರರು, ಸಹಾಯಕ ಅಭಿಯಂತರರು, ತಾಂತ್ರಿಕ ಸಹಾಯಕರು, ಟೆಕ್ನಿಷಿಯನ್ ಮುಂತಾದವರ ತಂಡ ತಾಂತ್ರಿಕ ನಿರ್ವಹಣೆ, ಪ್ರಸಾರ ನಿರ್ವಹಣೆಗಳ ಕಾರ್ಯವನ್ನು ನಿರ್ವಹಿಸುತ್ತದೆ.

ಆಡಳಿತ ವಿಭಾಗವು ಆಡಳಿತಾಧಿಕಾರಿಗಳ ನೇತ್ರತ್ವದಲ್ಲಿ ಹಿರಿಯ ಲೆಕ್ಕಿಗರ, ಸಹಾಯಕ ಲೆಕ್ಕಿಗರ, ತಂಡದೊAದಿಗೆ ಕೆಲಸ ಮಾಡುತ್ತದೆ. ಈ ವಿಭಾಗವು ಖರ್ಚು-ವೆಚ್ಚಗಳ, ಲೆಕ್ಕ-ಪತ್ರಾದಿಗಳ ನಿರ್ವಹಣೆಯನ್ನು ಮಾಡುತ್ತದೆ. ಈ ಎಲ್ಲ ವಿಭಾಗಗಳ ಸಿಬ್ಬಂದಿ ಸಂಖ್ಯೆ ಹಿರಿಯ ಕೇಂದ್ರಗಳಲ್ಲಿ ಹೆಚ್ಚಿದ್ದರೆ ಸಣ್ಣ ಕೇಂದ್ರಗಳಲ್ಲಿ ಕಡಿಮೆಯಿರುತ್ತದೆ. ಈ ವಿಭಾಗಗಳಲ್ಲದೆ ಕೆಲವು ಹಿರಿಯ ಕೇಂದ್ರಗಳಲ್ಲಿ ವಾರ್ತಾ ವಿಭಾಗವಿದ್ದು ಸುದ್ದಿ ಸಂಪಾದಕರು ಮುಖ್ಯಸ್ಥರಾಗಿರುವ ಈ ವಿಭಾಗದಲ್ಲಿ ವಾರ್ತಾ ವಾಚಕರು, ಬಾತ್ಮೀದಾರರಲ್ಲದೆ ಅರೆಕಾಲಿಕ ವಾರ್ತಾ ವಾಚಕರ ತಂಡವಿರುತ್ತದೆ. ವಾರ್ತಾ ವಿಭಾಗವು ಇಂಡಿಯನ್ ಇನ್‌ಫಾರಮೇಷನ್ ಸರ್ವಿಸ್‌ನ ಅಧೀನಕ್ಕೊಳಪಟ್ಟಿರುತ್ತದೆ.

ಈ ಸೇವಾ ವ್ಯವಸ್ಥೆಯಡಿ ಬರುವ ಇತರ ಶಾಖೆಗಳು ಪ್ರೆಸ್ ಇನ್‌ಫಾರ್ಮೆಷನ್ ಬ್ಯೂರೊ, ಡೈರೆಕ್ಟರೇಟ್ ಆಫ್ ಆಡಿಯೊ ವಿರುಅಲ್ ಪಬ್ಲಿಸಿಟಿ (ಡಿಎವಿಪಿ), ಕ್ಷೇತ್ರ ಪ್ರಚಾರ ಇಲಾಖೆ, ಫಿಲ್ಡ್ ಡಿವಿಶನ್ ಮುಂತಾದವು. ಆಕಾಶವಾಣಿಯ ಸೇವೆಯಲ್ಲಿರುವ ವಿಭಾಗಗಳು ಒಂದೇ ಉದ್ದೇಶ ಅಂದರೆ ದಿನದ ಕಾರ್ಯಕ್ರಮ ಪ್ರಸಾರಕ್ಕಾಗಿ ದುಡಿಯುತ್ತವೆ. ಈ ಪ್ರಸಾರ ಕಾರ್ಯ ನಿರಂತರ. ಸಮಯ ಪರಿಪಾಲನೆ ಹಾಗೂ ಸಮಯದ ಮಹತ್ವ ಆಕಾಶವಾಣಿಯ ಜೀವಾಳ. 'ಬಹುಜನ ಹಿತಾಯ ಬಹುಜನ ಸುಖಾಯ' ಎಂಬ ಘೋಷವಾಕ್ಯದಂತೆ ಆಕಾಶವಾಣಿ ಕೃಷಿ, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಯುವಜನತೆ ಮುಂತಾದ ಬೇರೆ ಬೇರೆ ಆಸಕ್ತಿಯ ಜನಸಮುದಾಯಕ್ಕೆ ಮಾಹಿತಿ,

ಮನರಂಜನೆಯನ್ನು ನೀಡುವ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತದೆ. ನಾಡಿನ ಸಂಸ್ಕೃತಿ, ಪರಂಪರೆಯ ಹಿರಿಮೆಯನ್ನು ಕಾರ್ಯಕ್ರಮಗಳ ಮೂಲಕ ಎತ್ತಿ ಹಿಡಿಯುವ ಹಾಗೂ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ಹೊತ್ತು ಪ್ರಸಾರ ಪ್ರಾರಂಭಿಸಿದ ಆಕಾಶವಾಣಿ ಇಂದಿಗೂ ಅದನ್ನು ಅನೂಚಾನವಾಗಿ ಮುಂದುವರೆಸಿಕೊAಡು ಬಂದಿದೆ. ಸಂಗೀತ, ನಾಟಕ ಮುಂತಾದ ಕಲೆ ಹಾಗೂ ಸಾಹಿತ್ಯ ಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತ ಅವುಗಳ ಮೂಲಕ ಮನೆಮಾತಾಗಿದ್ದಲ್ಲದೆ