ಅಂತಾರಾಜ್ಯ ಜಲ ವಿವಾದಗಳು ಹೆಚ್ಚಾಗಿ ಕುಡಿಯುವ ನೀರಿಗೆ ಉಪಯೋಗ ಆಗಿದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ಹೆಚ್ಚಾಗಿ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಸಮುದ್ರದ ಪಾಲಾಗಿ ನಷ್ಟವಾಗಿರುವುದು ಸುಳ್ಳಲ್ಲ. ಸಮುದ್ರದ ನೀರು ಅನ್ನುವುದು ಉಪ್ಪು ನೀರು ಕುಡಿಯಲು ಯೋಗ್ಯವಲ್ಲ. ಸಮುದ್ರಕ್ಕೆ ತಳ್ಳುವ ನದಿಯ ನೀರಿನ ಜನರಿಗೆ ಕುಡಿಯಲು ಕೊಟ್ಟರೆ ಜೀವ ರಕ್ಷಕ. ಅಲ್ಲದೇ ರೈತರ ಜಮೀನಿಗೆ ನೀರು ಕೊಟ್ಟರೆ ಪುಣ್ಯದ ಕೆಲಸ. ನಾವು ಯಾವ ರಾಜ್ಯದ ನೀರನ್ನು ಕೇಳುತ್ತಿಲ್ಲ. ಬದಲಾಗಿ ನಮ್ಮ ರಾಜ್ಯದ ಗಡಿಯೊಳಗಿಂದ ಹರಿದು ಹೋಗುತ್ತಿರುವ ನೀರನ್ನ ಕೇಳುತ್ತಿರುವುದು. ಕೇವಲ 20 ಶಾಸಕರ ಮೇಲೆ ಸಿಎಂ ಅದ್ದವನಿಗೆ ಏನು ಗೊತ್ತಿದೆ ಎಂಬುದು ಪ್ರಜ್ಞಾವಂತರ ಕಿಡಿ ನುಡಿ. ಸಮುದ್ರಕ್ಕೆ ನದಿಯ ನೀರಿನ ತಳ್ಳುವ ಬದಲು ನದಿಯ ನೀರಿನ ತಿರುಗಿಸಿ ಜನರಿಗೆ, ರೈತರಿಗೆ ಕೊಟ್ಟರೆ ದೇವರ ಸಹ ಮೆಚ್ಚುತ್ತಾನೆ. ನದಿಯ ನೀರಿನ ಉಪಯೋಗಿಸಿಕೊಳ್ಳಿ ಎಂಬ ಕಾನೂನು ಇರಬೇಕಾದರೆ, ಇನ್ನೊಬ್ಬರ ವೈಯಕ್ತಿಕ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇರುವುದಿಲ್ಲ. ಒಳ್ಳೆಯ ಕೆಲಸಕ್ಕೆ ಜನ ಸದಾ ಬೆಂಬಲ ಕೊಡುತ್ತಾರೆ ಆದರೆ ಕೆಟ್ಟ ಮಂದಿ ಕೆಟ್ಟ ವಿಚಾರಗಳಿಂದ ದೇಶಕ್ಕೆ ಮಾರಕ.
ಪತ್ರಕರ್ತರಾಗಲೂ ಬೇಕು ಭಂಡ ಧೈರ್ಯ
ಒಬ್ಬ ಹುಡುಗ ಅಣ್ಣ ನಾನು ಜರ್ನಲಿಸಂ ಓದು ಬೇಕು. ಏನು ಮಾಡಲಿ ಎಂದು ಕೇಳಿದಾಗ, ಭಂಡ ಧೈರ್ಯ ಇದ್ರೆ ಮಾತ್ರ ಮಾಡು ಎಂದೆ ಆ ಹುಡುಗ ನನ್ನ ಮಾತಿಗೆ ಸ್ವಲ್ಪ ವಿಚಲಿತನಾಗಿ ಬೇಡ ಬಿಡು ಬೇರೆ ಕೋರ್ಸು ಓದುತ್ತೇನೆ ಎಂದುಬಿಟ್ಟ. ಸುಮ್ನೆ ತಮಾಷೆಗಾಗಿ ಅಲ್ಲ ಸಮಾಜ ಸೇವೆ ಮಾಡುವುದು ಅಂದರೆ ಸುಮ್ನೆ ಅಲ್ಲ, ನ್ಯಾಯ ಕೊಡಿಸುವುದೇ ಎಂದರೆ ದೊಡ್ಡ ಪಾತ್ರವನ್ನು ವಹಿಸಬೇಕಾಗುತ್ತದೆ. ಈ ಪಾತ್ರದಲ್ಲಿ ಅಡೆತಡೆ, ಸಂಕಷ್ಟಗಳು ಬರಬಹುದು. ಈ ವಿಷಯದಲ್ಲಿ ಬೆಂಗಳೂರಿನಲ್ಲಿರುವ ಪತ್ರಕರ್ತರು ಬಿಟ್ಟರೆ, ಬೇರೆ ಕಡೆ ಭಂಡ ಧೈರ್ಯದಿಂದ ಸರ್ಕಾರದ ನಡೆಯನ್ನು ಆಡಳಿತದ ವೈಖರಿಯನ್ನು ಕುಟುಕಿದು ನಾನು ನೋಡಿಲ್ಲ. ದೇಶದ ಮಾಧ್ಯಮದ ಬಗ್ಗೆ ಹೇಳುವುದು ಬೇಡ ತಮಗೂ ತಿಳಿದ ವಿಚಾರ, ದೇಶದ ಮಾಧ್ಯಮಗಳು ಕೇಂದ್ರ ಸರ್ಕಾರವನ್ನು ರುಬ್ಬಿ ಅಂತಾರಾಜ್ಯ ಜಲ ವಿವಾದ ಬಗೆಹರಿಸಿ ನೋಡೋಣ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ಸಾಧ್ಯವಾದಷ್ಟು ವೈಯಕ್ತಿಕ ಜೀವನದಲ್ಲಿ ಏನಾದ್ರೂ ಸುಳ್ಳು ಹೇಳಿಕೊಳ್ಳಿ, ಆದರೆ ಸಾರ್ವಜನಿಕ ಬದುಕಿನಲ್ಲಿ ಸತ್ಯವನ್ನೇ ಬರೆಯಿರಿ ಹೇಳಿ.
Keywords Tags:-
ನೀರಿನ ಸಂರಕ್ಷಣೆ
-
ರೈತ ಸಮಸ್ಯೆಗಳು
-
ಕರ್ನಾಟಕ ನದಿಗಳು
-
ಜಲ ಸಂಗ್ರಹಣೆ
-
ಪರಿಸರ ಸಂರಕ್ಷಣೆ